Asianet Suvarna News Asianet Suvarna News

ಮುಡಾ ಅಕ್ರಮ ಗಂಭೀರವಾಗುತ್ತಿದ್ದಂತೆ 1 ರೂಪಾಯಿ ಜಮೀನು ರಹಸ್ಯ ಬಿಚ್ಚಿಟ್ಟ ಸಿದ್ದರಾಮಯ್ಯ!

ಮಲದಳ ದೋಸ್ತಿ ನಾಯಕರ ಮುಡಾ ಮಹಾಯುದ್ಧಕ್ಕೆ ಸಿದ್ದರಾಮಯ್ಯ ಕೌಂಟರ್ ನೀಡಿದ್ದಾರೆ. ಇದರ ನಡುವೆ 89 ವರ್ಷಗಳ ಹಿಂದೆ ಲೆಕ್ಕವನ್ನೂ ಸಿದ್ದರಾಮಯ್ಯ ನೆನೆಪಿಸಿದ್ದಾರೆ. ಮುಡಾ ಅಕ್ರಮಕ್ಕೆ ಮತ್ತೊಂದು ಟ್ವಿಸ್ಟ್ ಸಿಗುವ ಸಾಧ್ಯತೆಗಳು ಗೋಚರಿಸುತ್ತಿದೆ
 

First Published Jul 27, 2024, 1:38 PM IST | Last Updated Jul 27, 2024, 1:38 PM IST

ಬೆಂಗಳೂರು(ಜು.27) ಮುಡಾ ಅಕ್ರಮ ಹಗರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಸತತ ಆರೋಪ ಮಾಡುತ್ತಿದ್ದರೆ, ಇತ್ತ ಕಾಂಗ್ರೆಸ್ ತಿರುಗೇಟು ನೀಡುತ್ತಿದ್ದಾರೆ. ಇದೀಗ ಸಿಎಂ ಸಿದ್ದರಾಮಯ್ಯ 1 ರೂಪಾಯಿ ಜಮೀನಿನ ರಹಸ್ಯ ಬಿಚ್ಚಿಟ್ಟಿದ್ದಾರೆ. 89 ವರ್ಷಗಳ ಹಿಂದಿನ ಲೆಕ್ಕವನ್ನು ನೆನಪಿಸಿದ ಸಿದ್ದರಾಮಯ್ಯ,  ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ. ತಮ್ಮ ವಿರುದ್ಧ ಕೇಳಿ ಬಂದ ಡಿನೋಟಿಫೈ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ಕೊಟ್ಟ ಉತ್ತರ ಏನು 
 

Video Top Stories