Asianet Suvarna News Asianet Suvarna News

ಸರ್ಕಾರಿ ಜಾಗ ಕಬಳಿಸಲು ಡಾ. ರಾಜ್ ಹೆಸರು ಬಳಸಿಕೊಂಡ್ರಾ ಮಾಜಿ ಕಾರ್ಪೋರೇಟರ್.?

ವಿದ್ಯಾರಣ್ಯಪುರದ ಇಂದಿರಾ‌ಕ್ಯಾಂಟಿನ್ ಬಳಿ ಅದ್ದೂರಿಯಾಗಿ ಪ್ರತಿಷ್ಠಾಪನೆಗೆ ಸಿದ್ದವಾಗಿದ್ದ ಡಾ.‌ರಾಜ್ ಪುತ್ಥಳಿಯನ್ನು ಕಿಡಿಗೇಡಿಗಳು ಧ್ವಂಸ ಮಾಡಿದ್ದಾರೆ. ಈ ಘಟನೆಯ ಹಿಂದಿನ ಅಸಲಿ ಕಹಾನಿ ಬೇರೆಯೇ ಆಗಿದೆ. 

ಬೆಂಗಳೂರು (ಫೆ. 13): ವಿದ್ಯಾರಣ್ಯಪುರದ ಇಂದಿರಾ‌ಕ್ಯಾಂಟಿನ್ ಬಳಿ ಅದ್ದೂರಿಯಾಗಿ ಪ್ರತಿಷ್ಠಾಪನೆಗೆ ಸಿದ್ದವಾಗಿದ್ದ ಡಾ.‌ರಾಜ್ ಪುತ್ಥಳಿಯನ್ನು ಕಿಡಿಗೇಡಿಗಳು ಧ್ವಂಸ ಮಾಡಿದ್ದಾರೆ. ಈ ಘಟನೆಯ ಹಿಂದಿನ ಅಸಲಿ ಕಹಾನಿ ಬೇರೆಯೇ ಆಗಿದೆ. 

ಮಾಜಿ ಕಾರ್ಪೋರೇಟರ್ ಪಿಳ್ಳಪ್ಪ ಭೂಕಬಳಿಕೆಗೆ ಸ್ಕೆಚ್ ಹಾಕಿದ್ದರು. ಸರ್ಕಾರಿ ಜಾಗದಲ್ಲಿ ಕಾರಂಜಿ ನಿರ್ಮಾಣಕ್ಕೆ ಪ್ಲ್ಯಾನ್ ಮಾಡಿ, ಆ ಜಾಗದಲ್ಲಿ ಅಣ್ಣಾವ್ರ ಪ್ರತಿಮೆ ಇಡುವುದಾಗಿ ಪ್ರಚಾರ ಮಾಡಿದರು. ಇದನ್ನು ಆರ್‌ಟಿಐ ಕಾರ್ಯಕರ್ತ ಚಂದ್ರಶೇಖರ್ ಪ್ರಶ್ನಿಸುತ್ತಾರೆ. ಹಾಗಾಗಿ ರಾಜ್ ಕುಮಾರ್ ಪುತ್ಥಳಿ ಧ್ವಂಸದ ನಾಟಕವಾಡಿದ್ದಾರೆ ಪಿಳ್ಳಪ್ಪ ಎನ್ನಲಾಗುತ್ತಿದೆ. 

ಬೆಂಗಳೂರು: ಕ್ರೂರ ಮನಸ್ಥಿತಿ.. ವರನಟ ಡಾ. ರಾಜ್ ಪುತ್ಥಳಿ ಮಂಟಪ ಧ್ವಂಸ

Video Top Stories