Asianet Suvarna News Asianet Suvarna News

Party Rounds: ಮಂಡ್ಯದಲ್ಲಿ ಯೋಗಿ ಪ್ರಚಾರದ ಹಿಂದಿದೆ ಭಾರಿ ಲೆಕ್ಕಾಚಾರ!

ಕರ್ನಾಟಕದಲ್ಲಿ ಜೆಡಿಎಸ್‌ ಭದ್ರಕೋಟೆಯಾಗಿರುವ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಪ್ರಚಾರ ಮಾಡಿರುವುದರ ಹಿಂದೆ ಭಾರಿ ಲೆಕ್ಕಾಚಾರವೇ ಅಡಗಿದೆ.

First Published Apr 26, 2023, 8:49 PM IST | Last Updated Apr 26, 2023, 8:49 PM IST

ಮಂಡ್ಯ(ಏ.26): ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Election 2023) ಹಿನ್ನೆಲೆಯಲ್ಲಿ ಬಿಜೆಪಿಯ ಘಟಾನುಘಟಿ ರಾಷ್ಟ್ರೀಯ ನಾಯಕರು ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಈಗ ಜೆಡಿಎಸ್‌ ಭದ್ರಕೋಟೆಯನ್ನು ಛಿದ್ರಗೊಳಿಸಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮಂಡ್ಯಕ್ಕೆ ಬಂದು ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದಾರೆ. ಆದರೆ, ಯೋಗಿ ಆದಿತ್ಯನಾಥ ಭೇಟಿಯ ಹಿಂದೆ ಇರುವ ಗುಟ್ಟು ಮಾತ್ರ ದಳಪತಿಗಳ ಕೋಟೆಯನ್ನೇ ಚಿತ್ರಗೊಳಿಸುವಂತಹದ್ದು ಎಂಬುದು ಎಲ್ಲರಿಗೂ ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. 

ಈಗಾಗಲೇ ಎಲ್ಲ ರಾಜಕೀಯ ಪಕ್ಷಗಳು ರಾಜ್ಯಾದ್ಯಂತ ಅಬ್ಬರದ ಪ್ರಚಾರ ನಡೆಸುತ್ತಾ, ಮತದಾರನ್ನ ಸೆಳೆಯಲು ನಾನಾ ತಂತ್ರಗಾರಿಗೆ ಹೆಣೆಯುತ್ತಿವೆ. ಆದರೆ, ಬುಧವಾರ ದೇಶದ ಪ್ರಭಾವಿ ಬಿಜೆಪಿಯ ನಾಯಕರ ದಂಡೇ ಬೀಡು ಬಿಟ್ಟಿತ್ತು. ಈಗಾಗಲೇ ಮಂಡ್ಯ ಕ್ಷೇತ್ರಕ್ಕೆ ಪ್ರಧಾನಮಂತರಿ ರೇಂದ್ರ ಮೋದಿ, ಬಿಜೆಪಿಯ ಚಾಣಕ್ಯ ಕೇಂದ್ರ ಸಚಿವ ಅಮಿತ್‌ ಶಾ ಬಂದು ಹೋಗಿದ್ದಾರೆ. ಈಗ ಉತ್ತರ ಪ್ರದೇಶದ ಸಿಡಿಲ ಗುಂಡು ಎಂದೇ ಖ್ಯಾತಿಯಾದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಬಂದು ಪ್ರಚಾರ ಮಾಡಿದ್ದಾರೆ. ಇದರ ಹಿಂದೆ ಭಾರಿ ದೊಡ್ಡ ಲೆಕ್ಕಾಚಾರ ಅಡಗಿದೆ.