Asianet Suvarna News Asianet Suvarna News

ರಾಜ್ಯದಲ್ಲಿ ಸಂಚಲನ ಮೂಡಿಸಿದ ನಾಯಿ ಮರಿ, ಸಿದ್ದು ಬೊಮ್ಮಾಯಿ ನಡುವೆ ಟಾಕ್ ವಾರ್!

ರಸ್ತೆ, ಚರಂಡಿ ವಿಚಾರ ಬಿಡಿ, ಲವ್ ಜಿಹಾದ್ ಗಮನಕೊಡಿ ಎಂದ ನಳೀನ್ ಕುಮಾರ್ ಕಟೀಲ್, ಸಿದ್ದೇಶ್ವರ ನೆನೆದು ಭಕ್ತರ ಕಣ್ಣೀರು, ಜ್ಞಾನಯೋಗಿ ಮಠದಲ್ಲಿ ಭಕ್ತ ಸಾಗರ, ಸಿಎಂ ಬೊಮ್ಮಾಯಿಯನ್ನು ನಾಯಿಗೆ ಹೋಲಿಸಿದ ಸಿದ್ದು, ಮತ್ತೆ ಸಮರ್ಥನೆ ಸೇರಿದಂತೆ ಇಂದಿನ ಇಡೀ ದಿನದ ಕಂಪ್ಲೀಟ್ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

ಸಿಎಂ ಬೊಮ್ಮಾಯಿ ಹಾಗೂ ರಾಜ್ಯ ಸರ್ಕಾರ ಟೀಕಿಸುವ ಭರದಲ್ಲಿ ಸಿದ್ದರಾಮಯ್ಯ ನಾಲಗೆ ಹರಿಬಿಟ್ಟಿದ್ದಾರೆ. ವೇದಿಕೆಯಲ್ಲಿ ನಿಂತು ಪ್ರಧಾನಿ ಮೋದಿ ಮುಂದೆ ಬೊಮ್ಮಾಯಿ ನಾಯಿ ರೀತಿ ನಿಂತಿರುತ್ತಾರೆ ಎಂದಿದ್ದಾರೆ. ಇದಕ್ಕೆ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ನಾವು ನಿಯತ್ತಿನ ನಾಯಿ, ಈ ದೇಶದ ಪರ, ನಮ್ಮ ಜನತೆಯ ಪರ  ಹಾಗೂ ಈ ನಾಡಿನ ಅಸ್ಮಿತೆಯ ಪರ ನಮ್ಮ ನಿಯತ್ತು ಸದಾ ಇದ್ದದ್ದೇ. ಆದರೆ ಕಾಂಗ್ರೆಸ್ಸಿಗರ ನಿಯತ್ತು ಸದಾ ಕಾಲ ಇಟಾಲಿಯನ್‌ ಗಾಂಧಿಗಳು, ಪಿಎಫ್‌ಐನಂಥ ಸಂಘಟನೆಗಳು ಮತ್ತು ಜಿಹಾದಿಗಳ ಪರ ಇರುವುದು ದುರಂತ ಎಂದು ಬಿಜೆಪಿ ತಿರುಗೇಟು ನೀಡಿದೆ. ಇದರ ಬೆನ್ನಲ್ಲೇ ಸಿದ್ದಾರಾಮಯ್ಯ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. 
 

Video Top Stories