ಹಿಂದುಳಿದ ವರ್ಗಕ್ಕೆ ನ್ಯಾಯ ಸಿಗಲು ಈಶ್ವರಪ್ಪ ಸಿಎಂ ಆಗಬೇಕು; ಎದ್ದಿದೆ ಹೊಸ ಕೂಗು..!
ಸಚಿವ ಕೆ.ಎಸ್.ಈಶ್ವರಪ್ಪ ಪರ ದಲಿತ, ಹಿಂದುಳಿದ ವರ್ಗಗಳ ಸ್ವಾಮೀಜಿಯವರಾದ ಪುರುಷೋತ್ತಮನಂದಪುರಿ ಸ್ಚಾಮೀಜಿ ಬ್ಯಾಟಿಂಗ್ ಮಾಡಿದ್ದಾರೆ.
ಬೆಂಗಳೂರು (ಫೆ. 11): ಸಚಿವ ಕೆ.ಎಸ್.ಈಶ್ವರಪ್ಪ ಪರ ದಲಿತ, ಹಿಂದುಳಿದ ವರ್ಗಗಳ ಸ್ವಾಮೀಜಿಯವರಾದ ಪುರುಷೋತ್ತಮನಂದಪುರಿ ಸ್ಚಾಮೀಜಿ ಬ್ಯಾಟಿಂಗ್ ಮಾಡಿದ್ದಾರೆ.
ದಲಿತ, ಹಿಂದುಳಿದ ಮಠಗಳ ಅಭಿವೃದ್ಧಿಯಲ್ಲಿ ಈಶ್ವರಪ್ಪನವರು ಪ್ರಮುಖ ಪಾತ್ರ ವಹಿಸಿದ್ಧಾರೆ. ಈಶ್ವರಪ್ಪ ಸಿಎಂ ಆದ್ರೆ ಹಿಂದುಳಿದ ವರ್ಗಗಳಿಗೆ ಶಕ್ತಿ ಬರಲಿದೆ. ಹಿಂದುಳಿದ ವರ್ಗಗಳಿಗೆ ನ್ಯಾಯ ಸಿಗಲು ಈಶ್ವರಪ್ಪ ಸಿಎಂ ಆಗಬೇಕು. ಈಶ್ವರಪ್ಪರನ್ನು ಸಿಎಂ ಮಾಡಿ ಎಂದು ಸ್ವಾಮೀಜಿ ಕರೆ ನೀಡಿದ್ದಾರೆ. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕು ಮಧುರೆ ಗ್ರಾಮದಲ್ಲಿ ನಡೆದ ಪೀಠಾರೋಹಣ ಕಾರ್ಯಕ್ರಮದಲ್ಲಿ ಈಶ್ವರಪ್ಪ, ಗೋಪಾಲಯ್ಯ ಭಾಗಿಯಾಗಿದ್ದರು.
ಪಂಚಮಸಾಲಿಗಳ ಪಂಚ್, ವಾಲ್ಮೀಕಿ ಸಮುದಾಯದ ವಾರ್, ಕುರುಬರ ಕಿಕ್; ಸಿಎಂಗೆ ಸವಾಲಾಗಿದೆ ಮೀಸಲಾತಿ ಹೋರಾಟ