'ಸಿದ್ದರಾಮೋತ್ಸವ'ದ ಬಗ್ಗೆ ನನಗೆ ಗೊತ್ತಿಲ್ಲ, ಕಾರ್ಯಕರ್ತರು, ಅಭಿಮಾನಿಗಳು ಮಾಡ್ತಿದ್ದಾರೆ: ಡಿಕೆಶಿ
'ಸಿದ್ದರಾಮೋತ್ಸವದ ಬಗ್ಗೆ ನನಗೆ ಹೊತ್ತಿಲ್ಲ. ಕಾರ್ಯಕರ್ತರು, ಅಭಿಮಾನಿಗಳು ಹುಟ್ಟುಹಬ್ಬ ಆಚರಿಸುತ್ತಿದ್ದಾರೆ, ಇದರ ಬಗ್ಗೆ ನನಗೆ ಗೊತ್ತಿಲ್ಲ. ಸಿದ್ದರಾಮಯ್ಯನವರು ನನ್ನನ್ನು ಕರೆದಿದ್ದಾರೆ. ನಾನು ಭಾಗಿಯಾಗುವೆ: ಡಿಕೆಶಿ
ದಾವಣಗೆರೆ (ಜು. 03): ಸಿದ್ದರಾಮೋತ್ಸವದ ಬಗ್ಗೆ ಡಿಕೆ ಶಿವಕುಮಾರ್ DK Shivakumar) ಅಸಮಾಧಾನದ ಮಾತುಗಳನ್ನಾಡಿದ್ದಾರೆ.
'ಸಿದ್ದರಾಮೋತ್ಸವದ ಬಗ್ಗೆ ನನಗೆ ಹೊತ್ತಿಲ್ಲ. ಕಾರ್ಯಕರ್ತರು, ಅಭಿಮಾನಿಗಳು ಹುಟ್ಟುಹಬ್ಬ ಆಚರಿಸುತ್ತಿದ್ದಾರೆ, ಇದರ ಬಗ್ಗೆ ನನಗೆ ಗೊತ್ತಿಲ್ಲ. ಸಿದ್ದರಾಮಯ್ಯನವರು ನನ್ನನ್ನು ಕರೆದಿದ್ದಾರೆ. ನಾನು ಭಾಗಿಯಾಗುವೆ. ರಾಹುಲ್ ಗಾಂಧಯವರನ್ನು ಕರೆದಿರಬಹುದು, ನನಗೆ ಗೊತ್ತಿಲ್ಲ. ನನ್ನ ಹುಟ್ಟುಹಬ್ಬವನ್ನು ಕೇದಾರನಾಥದಲ್ಲಿ ಆಚರಿಸಿಕೊಂಡೆ. ಒಬ್ಬೊಬ್ಬರದ್ದು ಒಂದೊಂದು ಆಸೆ ಇರುತ್ತೆ, ಅದು ತಪ್ಪಲ್ಲ ಎಂದಿದ್ದಾರೆ.
ಮಹಾರಾಷ್ಟ್ರ ಕ್ಷಿಪ್ರಕ್ರಾಂತಿಯ ನಾಯಕನ ಹಿಂದಿದೆ ದುರಂತದ ಕಥೆ..!
ನಾನು ಈವರೆಗೆ ನನ್ನ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ಆದರೆ ನಾನು 75ನೇ ವರ್ಷದ ಮೈಲುಗಲ್ಲು ಪೂರೈಸುತ್ತಿರುವುದರಿಂದ ಸ್ನೇಹಿತರು, ಹಿತೈಷಿಗಳ ಒತ್ತಾಯದ ಮೇರೆಗೆ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದೇನೆ
ಇದು ಶಕ್ತಿ ಪ್ರದರ್ಶನವೂ ಅಲ್ಲ ಏನೂ ಅಲ್ಲ, ನಾನು ಯಾರ ವಿರುದ್ಧ ಶಕ್ತಿ ಪ್ರದರ್ಶನ ಮಾಡಲಿ. ಈ ಸಮಾರಂಭಕ್ಕೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್ ಸೇರಿ ಎಲ್ಲರೂ ಆಗಮಿಸುತ್ತಿದ್ದಾರೆ. ಬಿಜೆಪಿಯವರೂ ಸೇರಿದಂತೆ ರಾಜ್ಯದ ಜನತೆಗೂ ಆಹ್ವಾನ ನೀಡುತ್ತಿದ್ದೇನೆ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.