Asianet Suvarna News Asianet Suvarna News

ಚುನಾವಣೆ ಗೆಲ್ಲಲು ಕುಮಾರಸ್ವಾಮಿ ಚಂಡಿಕಾ ಯಾಗ, ಲೋಕಾದಾಳಿಗೆ ತತ್ತರಿಸಿದ ಕರ್ನಾಟಕ!

ಬಿಜೆಪಿ ಸೇರ್ತಾರಾ ಮಂಡ್ಯ ಸಂಸದೆ ಸುಮಲತಾ, ಕೇಸರಿ ಪಡೆ ಕಾರ್ಯಕ್ರಮದಲ್ಲಿ ಸಸಂದೆ, ಡೀಲ್ ಬಯಲಾದ ಬೆನ್ನಲ್ಲೇ ಬಿಜೆಪಿ ಶಾಸಕ ವಿರೂಪಾಕ್ಷಪ್ಪ ನಾಪತ್ತೆ, ಚುನಾವಣೆ ಗೆಲ್ಲಲು ಕುಮಾರಸ್ವಾಮಿ ಚಂಡಿಕಾ ಯಾಗ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

First Published Mar 4, 2023, 11:57 PM IST | Last Updated Mar 4, 2023, 11:57 PM IST

ವಿಧನಾಸಭಾ ಚುನಾವಣೆ ಗೆಲ್ಲಲು ರಾಜಕೀಯ ಪಕ್ಷಗಳು ಒಂದೊಂದು ತಂತ್ರಗಾರಿಕೆ ಮಾಡುತ್ತಿದೆ. ಇತ್ತ ಹೆಚ್‌ಡಿ ಕುಮಾರಸ್ವಾಮಿ ಪಂಚರತ್ನ ಯಾತ್ರೆ ಜೊತೆಗೆ ಚಂಡಿಕಾಯಾಗ ಮಾಡಿ ಅಧಿಕಾರದ ಹಾಗೂ ಉತ್ತಮ ಆರೋಗ್ಯ ಕರುಣಿಸಲು ಬೇಡಿದ್ದಾರೆ. ಇದೀಗ ಹೆಚ್‌ಡಿಕೆ ಮಾಡಿಸಿದ ಶತಕಚಂಡಿಕಾ ಯಾಗದಿಂದ ಅಧಿಕಾರ ಸಿಗುತ್ತಾ ಅನ್ನೋ ಚರ್ಚೆ ಶುರುವಾಗಿದೆ. ಇತ್ತ, ಬಿಡೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳ್ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಬರೋಬ್ಬರಿ 8 ಕೋಟಿ ರೂಪಾಯಿ ಹಣವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದೀಗ ಪ್ರಸಾಂತ್ ಮಾಡಾಳ್ ಅರೆಸ್ಟ್ ಆಗಿದ್ದರೆ, ಅಪ್ಪ ವಿರೂಪಾಕ್ಷಪ್ಪ ಎಸ್ಕೇಪ್ ಆಗಿದ್ದಾರೆ.