Asianet Suvarna News Asianet Suvarna News

Party Rounds | ಬಿಜೆಪಿಯ ಮಾಜಿ ಮುಖಂಡರಿಗೆ ಆಪರೇಷನ್‌ ಹಸ್ತದ ಹೊಣೆ?

ಮಿಷನ್‌ 20 ಸಾಧನೆಗಾಗಿ ಕಾಂಗ್ರೆಸ್‌ ಆಪರೇಷನ್‌ಗೆ ಇಳೀತಾ ಎಂಬೆಲ್ಲ ಪ್ರಶ್ನೆಗಳು ಇದೀಗ ಉದ್ಭವವಾಗಿವೆ. ಜಗದೀಶ್‌ ಶೆಟ್ಟರ್‌, ಲಕ್ಷ್ಮಣ ಸವದಿ ಅವರಿಗೆ ಈ ಆಪರೇಷನ್‌ ಜವಾಬ್ದಾರಿ ವಹಿಸಲಾಗಿದೆ. 

ಬೆಂಗಳೂರು(ಆ.16):  ತುಂಬ ದಿನಗಳಿಂದ ಕರ್ನಾಟಕ ರಾಜಕಾರಣದಲ್ಲಿ ಒಂದು ವದಂತಿಯೊಂದು ಹರಿದಾಡುತ್ತಿತ್ತು. ಈ ವದಂತಿಗೆ ಸ್ಪಷ್ಟತೆ ಸಿಕ್ಕಿರಲಿಲ್ಲ. ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿಯ ಕೆಲ ಶಾಸಕರು, ಮಾಜಿ ಶಾಸಕರು ಕಾಂಗ್ರೆಸ್‌ಗೆ ಹೋಗ್ತಾರೆ ಅಂತ ವದಂತಿಯೊಂದು ಹರಿದಾಡುತ್ತಿತ್ತು. ಇದು ಆಪರೇಷನ್‌ ಕಮಲ ಅಲ್ಲ, ರಿವರ್ಸ್‌ ಆಪರೇಷನ್‌ ಆಗಿದೆ. ಮಿಷನ್‌ 20 ಸಾಧನೆಗಾಗಿ ಕಾಂಗ್ರೆಸ್‌ ಆಪರೇಷನ್‌ಗೆ ಇಳೀತಾ ಎಂಬೆಲ್ಲ ಪ್ರಶ್ನೆಗಳು ಇದೀಗ ಉದ್ಭವವಾಗಿವೆ. ಜಗದೀಶ್‌ ಶೆಟ್ಟರ್‌, ಲಕ್ಷ್ಮಣ ಸವದಿ ಅವರಿಗೆ ಈ ಆಪರೇಷನ್‌ ಜವಾಬ್ದಾರಿ ವಹಿಸಲಾಗಿದೆ. ನಿಮ್ಮ ಪಕ್ಷದಲ್ಲಿದವರು ನಿಮಗೆ ಗೊತ್ತಿರುತ್ತೆ ಹೀಗಾಗಿ ಮತನಾಡಿಕೊಂಡು ಕರೆದುಕೊಂಡು ಬನ್ನಿ ಅಂತ ಕಾಂಗ್ರೆಸ್‌ ಹೈಕಮಾಂಡ್‌ ಜಗದೀಶ್‌ ಶೆಟ್ಟರ್‌, ಲಕ್ಷ್ಮಣ ಸವದಿ ಅವರಿಗೆ ನೀಡಿದೆ ಅಂತ ಹೇಳಲಾಗುತ್ತಿದೆ. 

ಕೋಲಾರ: ಕಲುಷಿತ ಆಹಾರ ಸೇವನೆ ಮಾಡಿ 25 ವಿದ್ಯಾರ್ಥಿಗಳು ಅಸ್ವಸ್ಥ, 8 ಮಕ್ಕಳು ಗಂಭೀರ

Video Top Stories