Asianet Suvarna News Asianet Suvarna News

Panchanga: ಇಂದು ತಲಕಾವೇರಿಯಲ್ಲಿ ತೀರ್ಥೋದ್ಭವ, ಕಾವೇರಿ ಪೂಜೆ ಮಾಡಿ..

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಆಶ್ವೀಜ ಮಾಸ, ಕೃಷ್ಣ ಪಕ್ಷ, ಸೋಮವಾರ, ಸಪ್ತಮಿ ತಿಥಿ, ಪುನರ್ವಸು ನಕ್ಷತ್ರ.

First Published Oct 17, 2022, 9:25 AM IST | Last Updated Oct 17, 2022, 9:25 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಆಶ್ವೀಜ ಮಾಸ, ಕೃಷ್ಣ ಪಕ್ಷ, ಸೋಮವಾರ, ಸಪ್ತಮಿ ತಿಥಿ,ಪುನರ್ವಸು ನಕ್ಷತ್ರ.
ಕಾವೇರಿ ಉಗಮ ಸ್ಥಾನ ಭಾಗಮಂಡಲದಲ್ಲಿ ಈ ಮಾಸದಲ್ಲಿ ತೀರ್ಥೋದ್ಭವ ಆಗುವುದು. ಈ ದಿನ ರಾತ್ರಿ 7.22ರ ವೇಳೆ ಕಾವೇರಿ ತೀರ್ಥ ಉದ್ಭವವಾಗುತ್ತದೆ. ಬೆಂಗಳೂರು, ಮಂಡ್ಯ ಮುಂತಾದೆಡೆಯ ಜನತೆ ಕೂಡಾ ಕಾವೇರಿ ನೀರನ್ನೇ ಪ್ರತಿದಿನ ಬಳಸುವುದು.

ಅಕ್ಟೋಬರ್ 25ಕ್ಕೆ ಸೂರ್ಯಗ್ರಹಣ; ಸೂತಕ ಸಮಯವೇನು?

ಹೀಗಾಗಿ, ಕೋಟ್ಯಂತರ ಜನರ ಜೀವಜಲವಾಗಿರುವ ಕಾವೇರಿಯನ್ನು ಇಂದು ಪೂಜಿಸುವುದು, ಗಂಗಾಪೂಜೆ ಮಾಡುವುದು ಉತ್ತಮವಾಗಿದೆ. ಈ ಬಗ್ಗೆ ವಿವರ ತಿಳಿಸುತ್ತಾರೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು. ಜೊತೆಗೆ ಕಾವೇರಿ ನದಿಯ ಪೌರಾಣಿಕ ಉಲ್ಲೇಖಗಳು, ಇಂದಿನ ದ್ವಾದಶ ರಾಶಿಗಳ ಭವಿಷ್ಯವನ್ನೂ ತಿಳಿಸಿದ್ದಾರೆ.