Asianet Suvarna News Asianet Suvarna News

ಗರಿಗೆದರಿದ ರಾಜ್ಯ ರಾಜಕಾರಣ: SM ಕೃಷ್ಣ ನಿವಾಸದಲ್ಲಿ ಕಾಂಗ್ರೆಸ್ ಅತೃಪ್ತ ಶಾಸಕರು..!

ಎಸ್.ಎಂ.ಕೃಷ್ಣ ಸಾರಥ್ಯದಲ್ಲಿ ಬಿಜೆಪಿಯ ಮಾಸ್ಟರ್ ಪ್ಲಾನ್  ರೆಡಿಯಾಗ್ತಿದೆ. ಇಂದು ಸದಾಶಿವನಗರದ ಮನೆಯಲ್ಲಿ ಬಿಜೆಪಿ ನಾಯಕರು ಹಾಗೂ ಕಾಂಗ್ರೆಸ್ ಅತೃಪ್ತ ಶಾಸಕರು ಒಟ್ಟಾಗಿಕಾಣಿಸಿಕೊಂಡಿರುವುದು ಹಲವು ಕುತೂಹಲಗಳಿಗೆ ಎಡೆಮಾಡಿಕೊಟ್ಟಿದೆ.

ಲೋಕಸಭಾ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ರಾಜ್ಯ ರಾಜಕಾರಣ ಗರಿಗೆದರಿದೆ. ಅತ್ತ ಕೇಂದ್ರದಲ್ಲಿ ನರೇಂದ್ರ ಮೋದಿ ಪಟ್ಟಾಭಿಷೇಕಕ್ಕೆ ರೆಡಿಯಾಗುತ್ತಿದಂತೆಯೇ ಇತ್ತ ರಾಜ್ಯದಲ್ಲಿ ಸರ್ಕಾರ ರಚಿಸಲು ಬಿಜೆಪಿ ಕಸರತ್ತು ನಡೆಸಿದೆ. ಇದಕ್ಕೆ ಪೂರಕವೆಂಬಂತೆ  ಬಿಜೆಪಿ ಮುಂದಿನ ಹೆಜ್ಜೆ ಕುರಿತು ಮಾಜಿ ಸಿಎಂ ಎಸ್.ಎಂ. ಕೃಷ್ಣ ಮನೆಯಲ್ಲಿ ಬಿಸಿ-ಬಿಸಿ ಚರ್ಚೆಗಳು ನಡೆದಿವೆ. ಈ ವೇಳೆ ಕಾಂಗ್ರೆಸ್ ಶಾಸಕರು ಸಹ ಭಾಗಿಯಾಗಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಹಾಗಾದ್ರೆ ಕೃಷ್ಣದಲ್ಲಿ ನಿವಾಸದಲ್ಲಿ ಯಾರೆಲ್ಲ ಇದ್ರು..? ಏನೆಲ್ಲ ಬೆಳವಣಿಗೆಗಳು ನಡೆದವು....? ಬನ್ನಿ ನೋಡೋಣ.

Video Top Stories