ಇದು ಬರೀ 27 ಸೆಕೆಂಡಿನ ವಿಡಿಯೋ ಅಲ್ಲ, ಕರುಣೆ ಇಲ್ಲದ ಅಧಿಕಾರಿಗಳ ಕರ್ಮಕಾಂಡ!
27 ಸೆಕೆಂಡಿನ ಈ ವಿಡಿಯೋ ನೋಡಿದರೆ ಎದೆ ಝಲ್ ಅನ್ನುತ್ತೆ. ರೋಷ ಉಕ್ಕಿ ಬರುತ್ತೆ. ಬರೀ ಒಂದು ಸಣ್ಣ ವಿಡಿಯೋ ನೋಡಿದವರಿಗೆ ಹೀಗಾಗಬೇಕಾದರೆ, ಅದನ್ನು ಅನುಭವಿಸುವವರ ಸ್ಥಿತಿ ಹೇಗಾಗಬೇಡ?
27 ಸೆಕೆಂಡಿನ ಈ ವಿಡಿಯೋ ನೋಡಿದರೆ ಎದೆ ಝಲ್ ಅನ್ನುತ್ತೆ. ರೋಷ ಉಕ್ಕಿ ಬರುತ್ತೆ. ಬರೀ ಒಂದು ಸಣ್ಣ ವಿಡಿಯೋ ನೋಡಿದವರಿಗೆ ಹೀಗಾಗಬೇಕಾದರೆ, ಅದನ್ನು ಅನುಭವಿಸುವವರ ಸ್ಥಿತಿ ಹೇಗಾಗಬೇಡ?
ಹೌದು, ಇದು ‘ಸಿಲಿಕಾನ್ ಸಿಟಿ’ ಖ್ಯಾತಿಯ ಬೆಂಗಳೂರು ನಗರದ ಭೋವಿಪಾಳ್ಯ ಎಂಬ ಏರಿಯಾದ ನಿವಾಸಿಗಳ ವ್ಯಥೆ ಇದು. ಅಧಿಕಾರಿಗಳ ಅಸಡ್ಡೆಯ ಪರಮಾವಧಿಯ ಕಥೆ ಇದು. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಈಗಾಗಲೇ 15 ಜೀವಗಳು ಹೋಗಿವೆ.
ಆದಾಗ್ಯೂ, ಅಧಿಕಾರಿಗಳು ಗಾಢ ನಿದ್ರೆಯಲ್ಲಿದ್ದಾರೆ. ಅವರಿಗೆ ಇನ್ನೆಷ್ಟು ಬಲಿಗಳು ಬೇಕೋ ಗೊತ್ತಿಲ್ಲ. ಇನ್ನೊಂದೆಡೆ ಇನ್ನೆಷ್ಟು ಜೀವಗಳು ಹೋಗುತ್ತವೋ ಎಂಬ ಭಯದಿಂದ ಜನ ದಿನ ದೂಡುತ್ತಿದ್ದಾರೆ. ಜನರ ನೋವಿಗೆ, ಕಣ್ಣೀರಿಗೆ, ಜೀವಕ್ಕೆ ಕ್ಯಾರೇ ಮಾಡುವವರಿಲ್ಲ. ಹೀಗ್ಯಾಕೆ? BIG 3 ಈ ಸ್ಟೋರಿ ನೋಡಿ... ಎಲ್ಲಾ ಅರ್ಥವಾಗುತ್ತೆ...