ಉರಗ ರಕ್ಷಕರಿಗಿಂತಲೂ ಒಂದು ಕಡ್ಡಿಯಿಂದ ಸಲೀಸಾಗಿ ಹಾವು ಹಿಡಿದ ಪೇಜಾವರ ಶ್ರೀ, ವಿಡಿಯೋ ವೈರಲ್
ಸಾವಿರಾರು ಕಳ್ಳಸಾಗಣೆಯಾಗುತ್ತಿದ್ದ, ಅನಾಥ, ಗಾಯಗೊಂಡ, ವಯಸ್ಸಾದ ಗೋವುಗಳನ್ನು ಅತ್ಯಂತ ಪ್ರೀತಿಯಿಂದ ಸಾಕುತ್ತಿರುವ ಪೇಜಾವರ ಮಠದ ಯತಿ ಶ್ರೀ ವಿಶ್ವಪ್ರಸನ್ನ ತೀರ್ಥರು ಇದೀಗ ಹಾವನ್ನು ರಕ್ಷಣೆ ಮಾಡಿದ್ದಾರೆ.
ಉಡುಪಿ, (ಜುಲೈ.29): ಸಾವಿರಾರು ಕಳ್ಳಸಾಗಣೆಯಾಗುತ್ತಿದ್ದ, ಅನಾಥ, ಗಾಯಗೊಂಡ, ವಯಸ್ಸಾದ ಗೋವುಗಳನ್ನು ಅತ್ಯಂತ ಪ್ರೀತಿಯಿಂದ ಸಾಕುತ್ತಿರುವ ಪೇಜಾವರ ಮಠದ ಯತಿ ಶ್ರೀ ವಿಶ್ವಪ್ರಸನ್ನ ತೀರ್ಥರು ಇದೀಗ ಹಾವನ್ನು ರಕ್ಷಣೆ ಮಾಡಿದ್ದಾರೆ.
ಮಠದಲ್ಲಿ ಬಂದಿದ್ದ ಹಾವನ್ನು ಒಂದು ತೆಂಗಿನ ಮರದ ಒಂದು ಕಡ್ಡಿಯಲ್ಲಿ ಹಿಡಿದಿದ್ದಾರೆ. ಹೇಗೆ ಹಿಡಿಯಬೇಕೆಂದು ವಿವರಣೆ ನೀಡುತ್ತಾ ಹಾವನ್ನ ರಕ್ಷಣೆ ಮಾಡಿರುವ ವಿಡಿಯೋ ಫುಲ್ ವೈರಲ್ ಆಗಿದೆ.
ನಾಗರಪಂಚಮಿ ವಿಶೇಷ: 10 ಜೀವಂತ ಹಾವುಗಳಿಗೆ ವಿಶೇಷ ಪೂಜೆ
ವೃತ್ತಿಪರ ಹಾವು ಹಿಡಿಯುವವರಿಗಿಂತಲೂ ಸಲೀಸಾಗಿ ಮತ್ತು ಸರಳವಾಗಿ ಶ್ರೀಗಳು ಹಾವು ಹಿಡಿಯುವದರ ಜೊತೆಗೆ ಅವರ ಪ್ರತ್ಯಕ್ಷ ವಿವರಣೆಯನ್ನೂ ಕೊಟ್ಟಿದ್ದಾರೆ.