Asianet Suvarna News Asianet Suvarna News

ಕೃಷಿ, ನೀರಾವರಿ ಖಾತೆ ಮೇಲೆ ಶ್ರೀಮಂತ ಪಾಟೀಲ ಕಣ್ಣು!

ಮಂತ್ರಿ ಆಗ್ತೀನಿ ಅಂತ ನಂಬಿಕೆ ಇತ್ತು, ಇದೀಗ ಮಂತ್ರಿ ಆಗಿದ್ದೇನೆ|ಖಾತೆ ಹಂಚಿಕೆ ಯಾವಾಗ ಆಗುತ್ತೋ ಗೊತ್ತಿಲ್ಲ|ಸಚಿವ ಸಂಪುಟ ವಿಸ್ತರಣೆ ತಡ ಆಗಿದ್ದಕ್ಕೆ ಬೇಸರ ಇಲ್ಲ|

ಬೆಂಗಳೂರು(ಫೆ.06): ಮಂತ್ರಿ ಆಗ್ತೀನಿ ಅಂತ ನಂಬಿಕೆ ಇತ್ತು, ಇದೀಗ ಮಂತ್ರಿ ಆಗಿದ್ದೇನೆ. ಆದ್ರೆ ಖಾತೆ ಹಂಚಿಕೆ ಯಾವಾಗ ಆಗುತ್ತೋ ಗೊತ್ತಿಲ್ಲ. ಸಚಿವ ಸಂಪುಟ ವಿಸ್ತರಣೆ ತಡ ಆಗಿದ್ದಕ್ಕೆ ಬೇಸರ ಇಲ್ಲ ಎಂದು ಕಾಗವಾಡ ಶಾಸಕ ಹಾಗೂ ನೂತನ ಸಚಿವ ಶ್ರೀಮಂತ ಪಾಟೀಲ ಹೇಳಿದ್ದಾರೆ.

ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಅವರು, ನನಗೆ ಬೇಕಾದ ಖಾತೆ ಬಗ್ಗೆ ಸಿಎಂ ಯಡಿಯೂರಪ್ಪ ಜೊತೆ ಚರ್ಚಿಸಿದ್ದೇನೆ. ನಾನು ಗ್ರಾಮೀಣ ಭಾಗದವನಾಗಿದ್ದರಿಂದ ಕೃಷಿ ಖಾತೆ ಕೊಟ್ಟರೆ ಉತ್ತಮವಾಗಿ ಕೆಲಸ ಮಾಡುತ್ತೇನೆ. ಈ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿದ್ದೇನೆ ಎಂದು ಹೇಳಿದ್ದಾರೆ. 
 

Video Top Stories