Asianet Suvarna News Asianet Suvarna News

ಚಿತ್ರದುರ್ಗದಲ್ಲಿ ಕೊರೋನಾಗೆ ಡೋಂಟ್‌ಕೇರ್: ಯಾಮಾರಿದ್ರೆ ಹರೋಹರ..!

ಹಬ್ಬದ ಖರೀದಿಗಾಗಿ ಮಾರುಕಟ್ಟೆಯಲ್ಲಿ ಜನವೋ ಜನ| ಮಾಸ್ಕ್‌ ಧರಿಸಲದೇ ಬೇಕಾಬಿಟ್ಟಿ ಓಡಾಡುತ್ತಿರುವ ಜನರು| ಕೋವಿಡ್‌ ರೂಲ್ಸ್‌ಗೆ ಕ್ಯಾರೇ ಎನ್ನದ ಚಿತ್ರದುರ್ಗದ ಜನ| ರಾಜ್ಯದ ಪಾಲಿಗೆ ಮುಂದಿದೆ ಮತ್ತಷ್ಟು ಆಘಾತಕಾರಿ ದಿನಗಳು| 

ಚಿತ್ರದುರ್ಗ(ಏ.13): ಯುಗಾದಿ ಹಬ್ಬದಂದು ಮಾರುಕಟ್ಟೆಯಲ್ಲಿ ಜನರು ತುಂಬಿತುಳುಕುತ್ತಿದ್ದಾರೆ. ಯಾರೊಬ್ಬರಲ್ಲೂ ಕೊರೋನಾ ಭಯಾನೇ ಕಾಣಿಸುತ್ತಿಲ್ಲ. ಹೌದು, ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯ ಅಬ್ಬರ ಜೋರಾಗಿದೆ. ಆದಾಗ್ಯೂ ಕೂಡ ಜನರು ಸರ್ಕಾರದ ಆದೇಶಗಳಿಗೆ ಕವಡೆ ಕಾಸಿನ ಕಿಮ್ಮತ್ತೂ ನೀಡುತ್ತಿಲ್ಲ. ಮಾರುಕಟ್ಟೆಯಲ್ಲಿ ಜನರು ಸಾಮಾಜಿಕ ಅಂತರ ಕಾಪಾಡುತ್ತಿಲ್ಲ, ಮಾಸ್ಕ್‌ ಧರಿಸುತ್ತಿಲ್ಲ. ಏನಾದರೂ ಆಗ್ಲಿ ನಾವು ಹಬ್ಬ ಮಾಡೇ ತೀರುತ್ತೇವೆ ಎನ್ನುವಂತಿದೆ ಜನರ ನಡೆ. 
ಕೊರೊನಾ ಮರೆತು ಹಬ್ಬದ ಖರೀದಿಯಲ್ಲಿ ಜನ ಬ್ಯುಸಿ, ನಿಯಮಾವಳಿಗಳು ಲೆಕ್ಕಕ್ಕೇ ಇಲ್ಲ!

Video Top Stories