Asianet Suvarna News Asianet Suvarna News

News Hour: ಕೆಎಸ್ ಈಶ್ವರಪ್ಪ ಸುತ್ತಿಕೊಂಡ ಗುತ್ತಿಗೆದಾರನ ಸುಸೈಡ್ ಕೇಸ್!

* ಈಶ್ವರಪ್ಪ ವಿರುದ್ಧ ಆರೋಪ ಮಾಡಿದ್ದ ಗುತ್ತಿಗೆದಾರ ಸುಸೈಡ್
*ಈಶ್ವರಪ್ಪ ಬಂಧನವಾಗಬೇಕು?  ಕುಟುಂಬದ ಆಕ್ರೋಶ
* ರಾಹುಲ್ ಗಾಂಧಿ ಹೆಸರಿಲ್ಲಿ ಪೋರ್ಜರಿ ಮಾಡಿದ್ದ ಸಂತೋಷ್?
*ಸಂತೋಷ್ ಆತ್ಮಹತ್ಯೆ, ಈಶ್ವರಪ್ಪ ಪ್ರತಿಕ್ರಿಯೆ

First Published Apr 12, 2022, 11:49 PM IST | Last Updated Apr 12, 2022, 11:49 PM IST

ಬೆಂಗಳೂರು(ಏ. 12)  ಡೆತ್ ನೋಟ್ ಕಳಿಸಿ ಗುತ್ತಿಗೆದಾರ ಆತ್ಮಹತ್ಯೆಗೆ (Suicide) ಶರಣಾಗಿದ್ದಾರೆ.    ಸಚಿವ ಕೆ.ಎಸ್. ಈಶ್ವರಪ್ಪ(KS Eshwarappa) ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಬೆಳಗಾವಿ (Belagavi) ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಸಂತೋಷ್ ಪಾಟೀಲ್ ತಾನು ಆತ್ಮಹತ್ಯೆ ಮಾಡಿಕೊಂಡಿರುವುದು ದೊಡ್ಡ ಸುದ್ದಿಯಾಗಿದೆ. 'ಈಶ್ವರಪ್ಪ ತಪ್ಪು ಮಾಡಿದ್ದಾರೆ, ಶಿಕ್ಷೆಯಾಗಲೇ ಬೇಕು' ಸಂತೋಷ್ ಪಾಟೀಲ್ ಪತ್ನಿ ಜಯಶ್ರೀ ಒತ್ತಾಯಿಸಿದ್ದಾರೆ.

ಸಂತೋಷ್ ನನ್ನ ಮೇಲೆ ಆರೋಪ ಮಾಡಿದ್ದ ಕಾರಣಕ್ಕೆ ಮಾನನಷ್ಟ ಮೊಕದ್ದಮೆ ಹಾಕಿದ್ದೆವು. ಅವರು ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ನಾನು ಜವಾಬ್ದಾರಿ ಆಗಲ್ಲ ಎಂದು ಸಚಿವ ಕೆಎಸ್ ಈಶ್ವರಪ್ಪ ಹೇಳಿದ್ದಾರೆ.