Asianet Suvarna News Asianet Suvarna News

ಏಷ್ಯಾನೆಟ್ ಸುವರ್ಣನ್ಯೂಸ್ ಕವರ್ ಸ್ಟೋರಿ ತಂಡದ ತನಿಖೆಗೆ ಸರ್ಕಾರ ಅಲರ್ಟ್, ಭ್ರಷ್ಟರು ಅಮಾನತು!

ಏಷ್ಯಾನೆಟ್ ಸುವರ್ಣನ್ಯೂಸ್ ಕವರ್ ಸ್ಟೋರಿ ಇಂಪಾಕ್ಟ್, ಒಬ್ಬರಿಗೆ ಒಂದೇ ಟಿಕೆಟ್, ಡಿಕೆಶಿ ಘೋಷಣೆಯಿಂದ ಸಿದ್ದು ಕೆಂಡ, ಉಗ್ರ ಶಾರೀಖ್ ಮೊಬೈಲ್‌ನಲ್ಲಿ ಹಲವು ರಹಸ್ಯ, ಝಾಕೀರ್ ಪ್ರೇರಕ ಸೇರಿದಂತೆ ಇಡೀ ದಿನದ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

ಏಷ್ಯಾನೆಟ್ ಸುವರ್ಣನ್ಯೂಸ್ ಕವರ್ ಸ್ಟೋರಿ ತಂಡ ತನಿಖಾ ವರದಿ ರಾಜ್ಯದಲ್ಲಿ ಸಂಚನಲ ಸೃಷ್ಟಿಸಿದೆ. ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ನಡೆಯುತ್ತಿದ್ದ ಬ್ರಹ್ಮಾಂಡ ಭ್ರಷ್ಟಾಚಾರ ಕುರಿತು  ಕವರ್ ಸ್ಟೋರಿ ತಂಡ ಕವರ್ ಸ್ಟೋರಿ ತಂಡ ಸ್ಟಿಂಗ್ ಆಪರೇಶನ್ ನಡೆಸಿತ್ತು.  ಕವರ್ ಸ್ಟೋರಿ ತಂಡದ ನಿರಂತರ ಹೋರಾಟದ ಮೂಲಕ ಭ್ರಷ್ಟಾಚಾರ ಬಯಲು ಮಾಡಿತ್ತು. ಸಾವಿರಾರು ಕೋಟಿ ರೂಪಾಯಿ ಭ್ರಷ್ಟಾಚಾರ ಕುರಿತು ವರದಿಗೆ ರಾಜ್ಯ ಸರ್ಕಾರ ಅಲರ್ಟ್ ಆಗಿದೆ.   ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ನಡೆಯುತ್ತಿರುವ ಬ್ರಷ್ಟಾಚಾರ ಕುರಿತು  ವರದಿ ಬಳಿಕ ಎಚ್ಚೆತ್ತ ಸರ್ಕಾರ ಇದೀಗ 14 ಭ್ರಷ್ಟ ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ. ಸಿಎಂ ಬೊಮ್ಮಾಯಿ ಈ ಆದೇಶ ನೀಡಿದ್ದಾರೆ.

Video Top Stories