ಕುಜ-ಶನಿಯಿಂದ ಜನಾಂಗೀಯ ಕಲಹ: ಡಾ. ಹರೀಶ್ ಕಶ್ಯಪ್
ನವೆಂಬರ್ 4ರವರೆಗೂ ಶನಿ ಕುಂಭ ರಾಶಿಯಲ್ಲಿರುತ್ತಾನೆ. ವಕ್ರೀಗತಿಯಲ್ಲಿ ಇರುತ್ತಾನೆ. ಧನಿಷ್ಠ ನಕ್ಷತ್ರ ಬಿಟ್ಟು ಷತಾಭೀಷ ನಕ್ಷತ್ರಕ್ಕೆ ಹೋಗುವ ಸಮಯ ಇದೆ ಆಗಿರುತ್ತದೆ ಎಂದು ಆಧ್ಯಾತ್ಮಿಕ ಚಿಂತಕ ಡಾ. ಹರೀಶ್ ಕಶ್ಯಪ್ ತಿಳಿಸಿದ್ದಾರೆ.
ಸೆಪ್ಟೆಂಬರ್ 4ರಿಂದ ಡಿಸೆಂಬರ್ 30ರವರೆಗೂ ಗುರು ವಕ್ರೀಗತಿ ಆಗುತ್ತಾನೆ. ಅಗಸ್ಟ್ 23ರಿಂದ ಸೆಪ್ಟೆಂಬರ್ 15ರವರೆಗೂ ಈ ವರ್ಷದ ರಾಜ ಬುಧನು ವಕ್ರಿಯಾಗುತ್ತಾನೆ ಈ ರೀತಿಯಾಗಿ ಶನಿ ಗುರು ಬುಧ ವಕ್ರಿಯಾಗುತ್ತಾರೆ ಎಂದು ಡಾ. ಹರೀಶ್ ಕಶ್ಯಪ್ ತಿಳಿಸಿದ್ದಾರೆ. ಇದರಿಂದ ಜಗತ್ತಿನಲ್ಲಿ ಜನಾಂಗೀಯ ಕಲಹಗಳು ಉಂಟಾಗಲಿವೆ. ಎಂದು ಅವರು ತಿಳಿಸಿದ್ದಾರೆ.