11:54 PM (IST) Jul 24

Karnataka News Live 24th July:ರಂಬುಟಾನ್ ಹಣ್ಣು ತಿಂದು ಒಂದು ವರ್ಷದ ಮಗು ಸಾವು, ಪೋಷಕರ ಆಕ್ರಂದನ

ಒಂದು ವರ್ಷ ಮಗು ರಂಬುಟಾನ್ ಹಣ್ಣು ತಿಂದು ಮೃತಪಟ್ಟ ಘಟನೆ ನಡೆದಿದೆ. ಹಣ್ಣು ಗಂಟಲಿನಲ್ಲಿ ಸಿಲುಕಿದ ಮಗವನ್ನು ತಕ್ಷಣ ಆಸ್ಪತ್ರೆ ದಾಖಲಿಸಿದರೂ ಪ್ರಯೋಜನವಾಗಿಲ್ಲ.

Read Full Story
11:37 PM (IST) Jul 24

Karnataka News Live 24th July:ಕಲಬುರಗಿ - 2.15 ಕೋಟಿ ಚಿನ್ನ ದರೋಡೆ - ಪಾವ್‌ಭಜಿ ಆರ್ಡರ್ ಮಾಡಿ ಸಿಕ್ಕಿಬಿದ್ದ ಖದೀಮರು!

ಕಲಬುರಗಿಯಲ್ಲಿ ೨.೧೫ ಕೋಟಿ ರೂ. ಮೌಲ್ಯದ ಚಿನ್ನ ದರೋಡೆ ಮಾಡಿದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. PhonePe ಮೂಲಕ ಪಾವ್‌ಭಜಿ ತಿಂದಿದ್ದು ಸಿಕ್ಕಿಬೀಳಲು ಕಾರಣವಾಯಿತು. ನಾಲ್ಕನೇ ಆರೋಪಿಗಾಗಿ ಶೋಧ ಮುಂದುವರೆದಿದೆ.
Read Full Story
10:55 PM (IST) Jul 24

Karnataka News Live 24th July:ಕಾರವಾರ - ಪರೀಕ್ಷೆಯಲ್ಲಿ ಫೇಲ್‌ ಆಗಿದ್ದಕ್ಕೆ ವೈದ್ಯಾಧಿಕಾರಿ ಪುತ್ರಿ ನೇಣಿಗೆ ಶರಣು, ಫೈನಾನ್ಸ್ ಕಿರುಕುಳ, ಕೋಲಾರ ಹಮಾಲಿ ಸಂಘದ ಅಧ್ಯಕ್ಷ ನೇಣು

ಕಾರವಾರದಲ್ಲಿ ವಿದ್ಯಾರ್ಥಿನಿ ಪರೀಕ್ಷಾ ಒತ್ತಡದಿಂದ ಮಾಡಿಕೊಂಡರೆ, ಕೋಲಾರದಲ್ಲಿ ಫೈನಾನ್ಸ್ ಕಿರುಕುಳದಿಂದ ಹಮಾಲಿ ಸಂಘದ ಅಧ್ಯಕ್ಷರು ನೇಣಿಗೆ ಶರಣಾಗಿದ್ದಾರೆ.

Read Full Story
10:47 PM (IST) Jul 24

Karnataka News Live 24th July:SSLC ಪರೀಕ್ಷೆಯಲ್ಲಿ ಇನ್ಮುಂದೆ 35 ಅಲ್ಲ 30 ಅಂಕ ಪಡೆದರೆ ಪಾಸ್, ಸರ್ಕಾರದ ನಿರ್ಧಾರ

ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿ ಇದುವಗೆ ಪಾಸ್ ಆಗಲು ಪ್ರತಿ ವಿಷಯದಲ್ಲಿ ಕನಿಷ್ಠ 35 ಅಂಕ ಪಡೆಯಬೇಕಿತ್ತು. ಆದರೆ ಇದೀಗ ರಾಜ್ಯ ಸರ್ಕಾರ ಕೇವಲ 30 ಅಂಕ ಪಡೆದರೆ ಪಾಸ್ ಎಂದಿದೆ. ಸರ್ಕಾರ ಉತ್ತೀರ್ಣ ಅಂಕ ಕಡಿತಗೊಳಿಸಿದೆ.

Read Full Story
10:08 PM (IST) Jul 24

Karnataka News Live 24th July:ಹೃದಯಾಘಾತಕ್ಕೆ WWE ದಿಗ್ಗಜ ರಸ್ಲರ್ ಹಲ್ಕ್ ಹೋಗಾನ್ ನಿಧನ, ಗಣ್ಯರ ಸಂತಾಪ

WWE ಫಾಲೋ ಮಾಡುವ ಎಲ್ಲರಿಗೂ ಹಲ್ಕ್ ಹೋಗಾನ್ ಗೊತ್ತೇ ಇದೆ. ಅತ್ಯಂತ ಜನಪ್ರಿಯ ರಸ್ಲರ್ ಹಲ್ಕ್ ಹೋಗಾನ್ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.

Read Full Story
09:29 PM (IST) Jul 24

Karnataka News Live 24th July:ಅಮೆಜಾನ್ ಉದ್ಯೋಗಿಗಳ ಸ್ಯಾಲರಿ ಬಹಿರಂಗ,ಎಂಜಿನೀಯರ್ಸ್ ವೇತನ 2.3 ಕೋಟಿ ರೂ

ಅಮೆಜಾನ್ H1B ಉದ್ಯೋಗಿಗಳ ಸ್ಯಾಲರಿ ಬಹಿರಂಗವಾಗಿದೆ. ಇ ಕಾಮರ್ಸ್ ಕಂಪನಿಯಲ್ಲಿ ನೌಕರಿ ಗಿಟ್ಟಿಸಿಕೊಂಡ ಪ್ರತಿಯೊಬ್ಬ ಉದ್ಯೋಗಿೂ ಕೈ ತುಂಬ ಸಂಬಳ. ಸಾಫ್ಟ್‌ವೇರ್ ಎಂಜಿನೀಯರ್ಸ್‌ಗೆ 2.3 ಕೋಟಿ ರೂಪಾಯಿ ವೇತನ ನೀಡಲಾಗುತ್ತಿದೆ. ಅಮೆಜಾನ್ ಉದ್ಯೋಗಿಗಳ ಸ್ಯಾಲರಿ ಪಟ್ಟಿ ಇಲ್ಲಿದೆ.

Read Full Story
09:28 PM (IST) Jul 24

Karnataka News Live 24th July:ಬೆಂಗಳೂರು - ಹಾಡಹಗಲೇ ಮಹಿಳೆಯನ್ನ ಹಿಂಬಾಲಿಸಿ ಬಲವಂತವಾಗಿ ತುಟಿ ಕಚ್ಚಿದ ಕಾಮುಕ ಅರೆಸ್ಟ್

ಬೆಂಗಳೂರಿನಲ್ಲಿ ಹಾಡುಹಗಲೇ ಯುವತಿಯೊಬ್ಬಳ ಮೇಲೆ ಕಾಮುಕನೋರ್ವ ಅಸಭ್ಯವಾಗಿ ವರ್ತಿಸಿ, ಬಲವಂತವಾಗಿ ತಬ್ಬಿಕೊಂಡು ತುಟಿಗೆ ಕಚ್ಚಿದ ಘಟನೆ ನಡೆದಿದೆ. ಗೋವಿಂದಪುರದಲ್ಲಿ ನಡೆದ ಈ ಘಟನೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಮಹಿಳೆಯರ ಸುರಕ್ಷತೆಯ ಬಗ್ಗೆ ಮತ್ತೆ ಚರ್ಚೆ ಹುಟ್ಟಿಕೊಂಡಿದೆ.
Read Full Story
08:48 PM (IST) Jul 24

Karnataka News Live 24th July:ರಾಜ್ಯದ ಹಲವೆಡೆ ಭಾರಿ ಮಳೆ ಅಲರ್ಟ್, ನಾಳೆ 2 ಜಿಲ್ಲೆಯ ಶಾಲಾ ಕಾಲೇಜಿಗೆ ರಜೆ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ನಾಳೆ ಕೆಲ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಇದರ ಪರಿಣಾಮ ಎರಡು ಜಿಲ್ಲೆಯ ಶಾಲಾ ಕಾಲೇಜಿಗೆ ನಾಳೆ ರಜೆ ಘೋಷಿಸಲಾಗಿದೆ.

Read Full Story
08:44 PM (IST) Jul 24

Karnataka News Live 24th July:UPI Scam in Nelamangala - ಫೋನ್‌ಪೇ ಗೂಗಲ್ ಪೇ ಬಳಸುವ ಅಂಗಡಿ ಮಾಲಿಕರೇ ಎಚ್ಚರ! ಗ್ರಾಹಕರಂತೆ ಬಂದು ಹೇಗೆ ವಂಚಿಸ್ತಾರೆ ನೋಡಿ!

ನೆಲಮಂಗಲದಲ್ಲಿ ಡಿಜಿಟಲ್ ಪಾವತಿಯ ಮೂಲಕ ವಂಚನೆ ನಡೆದ ಘಟನೆ ಬೆಳಕಿಗೆ ಬಂದಿದೆ. UPI ಸ್ಕ್ಯಾನರ್ ಬಳಸುವ ಅಂಗಡಿ ಮಾಲೀಕರನ್ನು ಗುರಿಯಾಗಿಸಿಕೊಂಡು ಕಳ್ಳರು ಹೊಸ ತಂತ್ರ ರೂಪಿಸಿದ್ದಾರೆ. 75,000 ರೂ. ವಂಚಿಸಿದ ಘಟನೆ ನಡೆದಿದ್ದು, ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ.
Read Full Story
08:17 PM (IST) Jul 24

Karnataka News Live 24th July:ಮೈಸೂರು ದಸರಾ, ಆನೆ ಶಿಬಿರಗಳಿಂದ ಗಜ ಪಯಣಕ್ಕೆ ದಿನಾಂಕ ಘೋಷಿಸಿದ ಜಲ್ಲಾಡಳಿತ

ಮೈಸೂರಿನತ್ತ ದಸರಾ ಆನೆಗಳ ಪಯಣಕ್ಕೆ ಜಿಲ್ಲಾಡಳಿತ ದಿನಾಂಕ ಘೋಷಿಸಿದೆ. ಮೊದಲ ತಂಡದಲ್ಲಿ 9 ಆನೆಗಳು ಮೈಸೂರಿಗೆ ಆಗಮಿಸುತ್ತಿದೆ.

Read Full Story
08:08 PM (IST) Jul 24

Karnataka News Live 24th July:ಬೆಂಗಳೂರಲ್ಲಿ ಜುಲೈ 26-27ರಂದು ಕುಂದಾಪ್ರ ಕನ್ನಡ ಹಬ್ಬ, ಕಾರ್ಯಕ್ರಮದ ಸಂಪೂರ್ಣ ವಿವರ ಇಲ್ಲಿದೆ

ಜುಲೈ 26 ಮತ್ತು 27 ರಂದು ಬೆಂಗಳೂರಿನ ನಂದಿ ಲಿಂಕ್ ಗ್ರೌಂಡ್‌ನಲ್ಲಿ ಕುಂದಾಪ್ರ ಕನ್ನಡ ಹಬ್ಬವು ಅದ್ದೂರಿಯಾಗಿ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟಿಸಲಿದ್ದು, ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ. ಕುಂದಾಪ್ರ ಕನ್ನಡ ಅಧ್ಯಯನ ಪೀಠವನ್ನು ಲೋಕಾರ್ಪಣೆ ಮಾಡಲಾಗುವುದು.
Read Full Story
07:48 PM (IST) Jul 24

Karnataka News Live 24th July:ಭೀಮನ ಅಮವಾಸ್ಯೆ - ಪತ್ನಿಯೊಂದಿಗೆ ದೇಗುಲಕ್ಕೆ ಆಗಮನಿಸಿ ಮಂಡ್ಯ ಎಸ್‌ಪಿ ವಿಶೇಷ ಪೂಜೆ

ಮಂಡ್ಯದ ಕಾಳಿಕಾಂಭ ಮತ್ತು ಬಿಸಿಲು ಮಾರಮ್ಮ ದೇವಸ್ಥಾನಗಳಲ್ಲಿ ಭೀಮನ ಅಮವಾಸ್ಯೆ ನಿಮಿತ್ತ ವಿಶೇಷ ಪೂಜೆಗಳು ಜರುಗಿದವು. ಸಾವಿರಾರು ಭಕ್ತರು ದೇವರ ದರ್ಶನ ಪಡೆದು ತಡೆ ಒಡೆದರು. ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಪತ್ನಿಯೊಂದಿಗೆ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
Read Full Story
07:43 PM (IST) Jul 24

Karnataka News Live 24th July:ಸಾವಿರ ವರ್ಷದ ಶಿವನ ದೇಗುಲಕ್ಕಾಗಿ ಕಾಂಬೋಡಿಯಾ ಥಾಯ್ಲೆಂಡ್ ಯುದ್ಧ, 11 ಸಾವು

1,100 ವರ್ಷ ಹಳೇ ಹಿಂದೂ ಶಿವನ ದೇಗುಲಕ್ಕಾಗಿ ಇದೀಗ ಥಾಯ್ಲೆಂಡ್ ಹಾಗೂ ಕಾಂಬೋಡಿಯಾ ದೇಶಗಳು ಯುದ್ಧ ಆರಂಭಿಸಿದೆ. ಏಕಾಏಕಿ ಉಭಯ ದೇಶಗಳು ರಾಕೆಟ್, ಮಿಸೈಲ್ ಲಾಂಚ್ ಮಾಡಿದೆ. ಈ ದಾಳಿಯಲ್ಲಿ 11 ಮಂದಿ ಮೃತಪಟ್ಟಿದ್ದಾರೆ.

Read Full Story
06:59 PM (IST) Jul 24

Karnataka News Live 24th July:ರಾಮೇಶ್ವರಂ ಕೆಫೆ ತಿಂಡಿಯಲ್ಲಿ ಜಿರಳೆಯೇ ಸಿಕ್ಕಿಲ್ಲ; ಊಟದಲ್ಲಿ ಹುಳ ಹಾಕಿ ₹25 ಲಕ್ಷ ಹಣಕ್ಕಾಗಿಬ್ಲ್ಯಾಕ್‌ಮೇಲ್!

ಬೆಂಗಳೂರು ವಿಮಾನ ನಿಲ್ದಾಣದ ರಾಮೇಶ್ವರಂ ಕೆಫೆಯಲ್ಲಿ ಆಹಾರದಲ್ಲಿ ಕೀಟವಿದೆ ಎಂದು ಸುಳ್ಳು ಆರೋಪ ಮಾಡಿ ಹಣ ಸುಲಿಗೆ ಮಾಡಲು ಯತ್ನಿಸಿದ ಗುಂಪಿನ ವಿರುದ್ಧ ಪೊಲೀಸ್ ದೂರು ದಾಖಲು. ₹25 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪ.
Read Full Story
06:25 PM (IST) Jul 24

Karnataka News Live 24th July:ಚಿನ್ನಸ್ವಾಮಿ ದುರಂತ - ಶವಪರೀಕ್ಷೆ ನಂತರ ಚಿನ್ನದ ಕಿವಿಯೋಲೆ ಕಳ್ಳತನ, ಮೃತ ದಿವ್ಯಾಂಶಿ ತಾಯಿ ದೂರು

ಆರ್‌ಸಿಬಿ ವಿಜಯೋತ್ಸವದ ಕಾಲ್ತುಳಿತದಲ್ಲಿ ಮೃತಪಟ್ಟ ದಿವ್ಯಾಂಶಿ ಮರಣೋತ್ತರ ಪರೀಕ್ಷೆ ವೇಳೆ ಆಭರಣ ಕಾಣೆಯಾಗಿದೆ ಎಂದು ತಾಯಿ ಆರೋಪಿಸಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಭರವಸೆಯ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಮರ್ಷಿಯಲ್‌ ಸ್ಟ್ರೀಟ್‌ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
Read Full Story
06:18 PM (IST) Jul 24

Karnataka News Live 24th July:ವಿಮಾನ ನಿಲ್ದಾಣದಲ್ಲಿ ಸುಗಂಧದ ಸ್ಪರ್ಶ - ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹೊಸ ಅನುಭವ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪ್ರಯಾಣವನ್ನು ಇನ್ನಷ್ಟು ಮಧುರಗೊಳಿಸಲು 'ಡ್ಯಾನ್ಸಿಂಗ್ ಬ್ಯಾಂಬೂ' ಸುಗಂಧವನ್ನು ಪರಿಚಯಿಸಲಾಗಿದೆ. ಈ ಸುಗಂಧವು ಪ್ರಯಾಣಿಕರ ಒತ್ತಡವನ್ನು ಕಡಿಮೆ ಮಾಡಿ, ಶಾಂತ ಅನುಭವ ನೀಡುತ್ತದೆ.
Read Full Story
06:08 PM (IST) Jul 24

Karnataka News Live 24th July:ಸಿರಿಧಾನ್ಯ, ಮಾವು,ಮೀನು ಸೇರಿ ಉತ್ಪನ್ನಗಳ ರಫ್ತು, ಭಾರತ-ಯುಕೆ ಫ್ರೀ ಟ್ರೇಡ್‌ ಪ್ರಯೋಜನವೇನು?

ಭಾರತ ಯುಕೆ ಮುಕ್ತ ವ್ಯಾಪಾರ ಒಪ್ಪಂದದಿಂದ ಭಾರತದ ಮಾವು, ಮೀನು, ಸಿರಿಧಾನ್ಯ ಸೇರಿ ಕೃಷಿ ಉತ್ಪನ್ನ ಯಾವುದೇ ಅಡೆ ತಡೆ ಇಲ್ಲದೆ ರೈತರು ಯುಕೆಗೆ ರಫ್ತು ಮಾಡಬಹುದು. ಇನ್ನು ಯುಕೆ ವಿಸ್ಕಿ ಸೇರಿ ಹಲವು ಉತ್ಪನ್ನ ಅತೀ ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದೆ.

Read Full Story
06:04 PM (IST) Jul 24

Karnataka News Live 24th July:Bheemana Amavasye - ನೆನಪಿರಲಿ ಪ್ರೇಮ್​ಗೆ ಪತ್ನಿಯಿಂದ ಪಾದಪೂಜೆ - ಕ್ಯೂಟ್​ ವಿಡಿಯೋ ವೈರಲ್​

ಇಂದು ಭೀಮನ ಅವಮಾಸ್ಯೆ. ಈ ಹಿನ್ನೆಲೆಯಲ್ಲಿ ನೆನಪಿರಲಿ ಪ್ರೇಮ್​ ಅವರ ಪತ್ನಿ ಜ್ಯೋತಿ ಅವರು ಪತಿಗೆ ಪಾದಪೂಜೆ ಮಾಡಿದ್ದಾರೆ. ಅದರ ವಿಡಿಯೋ ಇದೀಗ ವೈರಲ್​ ಆಗಿದೆ.

Read Full Story
05:57 PM (IST) Jul 24

Karnataka News Live 24th July:ಮಾರುತಿ ಸುಜುಕಿಯಿಂದ ಈಗ 6 ಏರ್‌ಬ್ಯಾಗ್‌ನ XL6 ಕಾರು; ಸುರಕ್ಷತೆಗೆ ಹೆಚ್ಚಿನ ಆದ್ಯತೆ!

ಮಾರುತಿ ಸುಜುಕಿ XL6 ಪ್ರೀಮಿಯಂ 7-ಸೀಟರ್ MPV ಈಗ ಎಲ್ಲಾ ವೇರಿಯಂಟ್‌ಗಳಲ್ಲಿಯೂ ಆರು ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಹೊಂದಿದೆ.

Read Full Story
05:52 PM (IST) Jul 24

Karnataka News Live 24th July:ನಾಗಲಕ್ಷ್ಮೀ ಚೌಧರಿ ಭೇಟಿ ನೀಡಿದ ವೇಳೆ ಕೊಳ್ಳೇಗಾಲ ಆಸ್ಪತ್ರೆಯಲ್ಲಿ ಗೌಜು-ಗದ್ದಲ, ಸಕಾಲಕ್ಕೆ ಚಿಕಿತ್ಸೆ ಸಿಗದೇ ಪರದಾಡಿದ ರೋಗಿಗಳು?

ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರ ಭೇಟಿ ವೇಳೆ ಗದ್ದಲ ಉಂಟಾಗಿ ರೋಗಿಗಳಿಗೆ ತೊಂದರೆಯಾಗಿದೆ. ಅಭಿಮಾನಿಗಳ ಒಳನುಗ್ಗುವಿಕೆಯಿಂದ ಆಸ್ಪತ್ರೆಯ ವಾತಾವರಣ ಗದ್ದಲಮಯವಾಗಿತ್ತು.
Read Full Story