11:05 PM (IST) Aug 19

Karnataka News Live 19th August: ಎಸ್ಸಿ ಒಳಮೀಸಲಾತಿ - ಎಲ್ಲರಿಗೂ ಸಂತಸ, ಒಂದು ಸಮುದಾಯದಿಂದ ಭಾರೀ ಆಕ್ರೋಶ; ಯಾವ ಲೀಡರ್ ಏನಂದ್ರು ನೋಡಿ!

ದಲಿತ ಸಮುದಾಯಗಳಿಗೆ ಒಳಮೀಸಲಾತಿ ನೀಡುವ ಕುರಿತು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಎಡಗೈ ಮತ್ತು ಬಲಗೈ ಸಮುದಾಯಗಳಿಗೆ ತಲಾ 6% ಹಾಗೂ ಉಳಿದ ಸಮುದಾಯಗಳಿಗೆ 5% ಮೀಸಲಾತಿ ಹಂಚಿಕೆ ಮಾಡಲಾಗಿದೆ. ಈ ನಿರ್ಧಾರದಿಂದ ಅಲೆಮಾರಿ ಸಮುದಾಯದಿಂದ ಆಕ್ರೋಶ ವ್ಯಕ್ತವಾಗಿದೆ.
Read Full Story
10:46 PM (IST) Aug 19

Karnataka News Live 19th August: ರಾಹುಲ್ ಗಾಂಧಿ ಯಾತ್ರೆಯಲ್ಲಿ ಅವಘಡ, ಪೊಲೀಸ್‌ಗೆ ಡಿಕ್ಕಿಯಾದ ಕಾರು, ವಿಡಿಯೋ ಹಂಚಿಕೊಂಡ ಬಿಜೆಪಿ

ಮತಗಳ್ಳತನ ಆರೋಪದ ಬಳಿಕ ರಾಹುಲ್ ಗಾಂಧಿ ಬಿಹಾರದಲ್ಲಿ ವೋಟ್ ಅಧಿಕಾರಿ ಯಾತ್ರಾ ನಡೆಸುತ್ತಿದ್ದಾರೆ. ಆದರೆ ರಾಹುಲ್ ಗಾಂಧಿ ಯಾತ್ರೆಯಲ್ಲಿ ಅವಘಡ ನಡೆದಿದೆ. ರಾಹುಲ್ ಗಾಂಧಿ ಬೆಂಬಲಿಗರೊಂದಿಗೆ ತೆರಳುತ್ತಿದ್ದ ಕಾರು ಪೊಲೀಸ್ ಪೇದೆ ಕಾಲಿನ ಮೇಲೆ ಹತ್ತಿದ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

Read Full Story
10:21 PM (IST) Aug 19

Karnataka News Live 19th August: ಒಳ ಮೀಸಲಾತಿ ಕಗ್ಗಂಟು ಬಿಡಿಸಿದ ಸರ್ಕಾರ - ಎಡಗೈ, ಬಲಗೈ ಸಮುದಾಯಗಳಿಗೆ ತಲಾ ಶೇ.6ರಷ್ಟು ಮೀಸಲಾತಿ

ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿ ಒಳಮೀಸಲಾತಿ ವಿವಾದಕ್ಕೆ ಪರಿಹಾರ ಘೋಷಿಸಿದೆ. ಎಡಗೈ ಮತ್ತು ಬಲಗೈ ಸಮುದಾಯಗಳಿಗೆ ತಲಾ 6% ಮೀಸಲಾತಿ ನೀಡಲು ತೀರ್ಮಾನಿಸಲಾಗಿದೆ. ಈ ನಿರ್ಧಾರವನ್ನು ವಿಧಾನಸಭೆಯಲ್ಲಿ ಅಧಿಕೃತವಾಗಿ ಘೋಷಿಸುವ ಸಾಧ್ಯತೆಯಿದೆ.
Read Full Story
09:58 PM (IST) Aug 19

Karnataka News Live 19th August: ಭಾರಿ ಮಳೆಗೆ ರಾಜ್ಯದ 5 ಜಿಲ್ಲೆ, ಉತ್ತರ ಕನ್ನಡದ ಕೆಲ ತಾಲೂಕಿನ ಶಾಲಾ ಕಾಲೇಜಿಗೆ ನಾಳೆ ರಜೆ

ರಾಜ್ಯದ ಹಲವೆಡೆ ಭಾರಿ ಮಳೆ ಮುಂದುವರಿದಿದೆ. ಒಟ್ಟು ಐದು ಜಿಲ್ಲೆಯ ಶಾಲಾ ಕಾಲೇಜಿಗೆ ನಾಳೆ ರಜೆ ಘೋಷಿಸಲಾಗಿದೆ. ಈ ಪೈಕಿ ಉತ್ತರ ಕನ್ನಡದ ಕೆಲ ತಾಲೂಕುಗಳಿಗೆ ನಾಳೆ ರಜೆ ನೀಡಲಾಗಿದೆ. ಯಾವೆಲ್ಲಾ ಜಿಲ್ಲೆಯಲ್ಲಿ ನಾಳೆ ರಜೆ?

Read Full Story
09:48 PM (IST) Aug 19

Karnataka News Live 19th August: ವಕೀಲ ಜಗದೀಶ್ ವಿರುದ್ಧ ಎಫ್‌ಐಆರ್ ದಾಖಲು; ಸಾಮಾಜಿಕ ಜಾಲತಾಣದಲ್ಲಿ ಜಾತಿ ನಿಂದನೆ?

ವಕೀಲ ಜಗದೀಶ್ ವಿರುದ್ಧ ಕೊಡಿಗೆಹಳ್ಳಿ ಪೊಲೀಸರು ಜಾತಿ ನಿಂದನೆ ಹಾಗೂ ಸಾಮಾಜಿಕ ಅಶಾಂತಿ ಹುಟ್ಟುಹಾಕಿದ ಆರೋಪದಡಿ FIR ದಾಖಲಿಸಿದ್ದಾರೆ. ಮಂಜುನಾಥ್ ದೂರಿನ ಮೇರೆಗೆ ಐಪಿಸಿ ಸೆಕ್ಷನ್ 196 ಮತ್ತು 299ರ ಅಡಿ ಪ್ರಕರಣ ದಾಖಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ವಿಡಿಯೋ ಹರಿಬಿಟ್ಟಿರುವ ಆರೋಪಿ ಇದೆ.

Read Full Story
09:27 PM (IST) Aug 19

Karnataka News Live 19th August: ಮಂಗಳೂರು ವಿವಿ ವಿವಿಧ ವಿಭಾಗದ ಪಿಎಚ್‌ಡಿ ಪ್ರವೇಶಕ್ಕೆ ಅರ್ಜಿ ಆಹ್ವಾನ

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪಿಎಚ್.ಡಿ ಕಾರ್ಯಕ್ರಮಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ನಿಗದಿತ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾನಿಲಯದ ವೆಬ್‌ಸೈಟ್‌ಗೆ ಭೇಟಿ ನೀಡಿ.
Read Full Story
08:44 PM (IST) Aug 19

Karnataka News Live 19th August: ಆನ್‌ಲೈನ್ ಬೆಟ್ಟಿಂಗ್, ಹಣದ ಗೇಮಿಂಗ್ ಬ್ಯಾನ್, ಹೊಸ ಬಿಲ್‌ಗೆ ಕೇಂದ್ರ ಅನುಮೋದನೆ

ಹಲವು ವರ್ಷಗಳಿಂದ ಆಗ್ರಹಿಸಿದ ಮಹತ್ವದ ನಿಯಮ ಇದೀಗ ಜಾರಿಯಾಗುತ್ತಿದೆ. ಹಣ ಹಾಕಿ ಆಡುವ ಗೇಮಿಂಗ್, ಆನ್‌ಲೈನ್ ಬೆಟ್ಟಿಂಗ್ ಬ್ಯಾನ್ ಮಾಡಲು ಕೇಂದ್ರ ಸರ್ಕಾರ ಹೊಸ ಆನ್‌ಲೈನ್ ಗೇಮಿಂಗ್ ಬಿಲ್ ತರುತ್ತಿದೆ. ಈ ಬಿಲ್‌ಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ.

Read Full Story
08:31 PM (IST) Aug 19

Karnataka News Live 19th August: ಧಾರವಾಡ ಜಿಲ್ಲೆಯಲ್ಲಿ ಭಾರೀ ಮಳೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಕೊಟ್ಟ ಜಿಲ್ಲಾಧಿಕಾರಿ

ಭಾರೀ ಮಳೆಯಿಂದಾಗಿ ಧಾರವಾಡ ಜಿಲ್ಲೆಯಲ್ಲಿ ಆ. 20 ರಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ವಿದ್ಯಾರ್ಥಿಗಳ ಸುರಕ್ಷತೆಗಾಗಿ ಜಿಲ್ಲಾಧಿಕಾರಿಗಳು ಈ ಆದೇಶ ಹೊರಡಿಸಿದ್ದಾರೆ. ಹಾವೇರಿ ಮತ್ತು ಬೆಳಗಾವಿ ಜಿಲ್ಲೆಗಳಲ್ಲೂ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
Read Full Story
08:30 PM (IST) Aug 19

Karnataka News Live 19th August: ಅಮಿತ್ ಶಾಗೆ ತಲುಪಿದ ಧರ್ಮಸ್ಥಳ ಪ್ರಕರಣ, ಬಯಲಾಗುತ್ತಾ ತಮಿಳುನಾಡು ರಾಜಕಾರಣಿ ಮುಖವಾಡ?

ಧರ್ಮಸ್ಥಳ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ.ಆರೋಪಗಳು, ತನಿಖೆ,ವಿವಾದಗಳ ಬೆನ್ನಲ್ಲೇ ಇದೀಗ ಧರ್ಮಸ್ಥಳ ಪ್ರಕರಣ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ತಲುಪಿದೆ. ಈ ಮೂಲಕ ತಮಿಳುನಾಡು ರಾಜಕಾರಣಿಯ ಷಡ್ಯಂತ್ರ ಬಯಲಾಗುತ್ತಾ?

Read Full Story
08:03 PM (IST) Aug 19

Karnataka News Live 19th August: ಚಾಮರಾಜನಗರ ಶಾಲೆಯಲ್ಲಿ ಕುಸಿದುಬಿದ್ದು 1ನೇ ತರಗತಿ ವಿದ್ಯಾರ್ಥಿ ಸಾವು, ಮರಿಯಾನೆ ರಕ್ಷಣೆ

ಚಾಮರಾಜನಗರದಲ್ಲಿ ಹೃದಯ ಸಮಸ್ಯೆಯಿಂದ ಬನ್ನಿತಾಳಪುರದಲ್ಲಿ 6 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಕೇರಳದ ಪುಲುಪಳ್ಳಿ ಶಾಲೆಗೆ ತಾಯಿ ಬಿಟ್ಟು ಬಂದ ಮರಿಯಾನೆಯನ್ನು ಅರಣ್ಯ ಇಲಾಖೆ ರಕ್ಷಿಸಿದೆ. ಮಕ್ಕಳು ಆನೆ ಕಂಡು ಸಂಭ್ರಮಿಸಿದರು. ಅಧಿಕಾರಿಗಳು ಮರಿಯಾನೆಯನ್ನು ತಾಯಿಯೊಂದಿಗೆ ಸೇರಿಸಲು ಯತ್ನಿಸುತ್ತಿದ್ದಾರೆ.

Read Full Story
07:54 PM (IST) Aug 19

Karnataka News Live 19th August: Aiyyo Shraddha Shows - ಕನ್ನಡಿಗರನ್ನು ಕೆಣಕಿದ ಮಂಗಳೂರಿನ ಅಯ್ಯೋ ಶ್ರದ್ಧಾರ ಅದೊಂದು ಮಾತು! ಏನದು?

Aiyyo Shraddha controversy: ಅಯ್ಯೋ ಶ್ರದ್ಧಾ ಎಂದೇ ಫೇಮಸ್‌ ಆಗಿರೋ ಶ್ರದ್ಧಾ ಜೈನ್‌ರ ಸ್ಟ್ಯಾಂಡಪ್‌ ಕಾಮಿಡಿಯೊಂದು ಈಗ ಕನ್ನಡಿಗರನ್ನು ಕೆಣಕಿದೆ. ಹಾಗಾದರೆ ಅಂತ ಮಾತು ಏನಿದೆ?

Read Full Story
07:29 PM (IST) Aug 19

Karnataka News Live 19th August: ಒಳಮೀಸಲಾತಿ ಕಗ್ಗಂಟು - ಎಡಗೈ, ಬಲಗೈ ಸಮುದಾಯಗಳಿಂದ ಸರ್ಕಾರಕ್ಕೆ ಸವಾಲ್

ಎಡಗೈ ಸಮುದಾಯಕ್ಕೆ 6% ಮತ್ತು ಬಲಗೈ ಸಮುದಾಯಕ್ಕೆ 5% ಮೀಸಲಾತಿ ನೀಡಲು ನಾಗಮೋಹನ್ ದಾಸ್ ಸಮಿತಿ ಶಿಫಾರಸು ಮಾಡಿದೆ. ಈ ಶಿಫಾರಸು ಜಾರಿಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಸರ್ಕಾರಕ್ಕೆ ಒತ್ತಡ ಹೆಚ್ಚಾಗಿದೆ. ಇಂದು ಸಂಜೆ ವಿಶೇಷ ಸಚಿವ ಸಂಪುಟ ಸಭೆ ನಡೆಯಲಿದ್ದು, ಒಳಮೀಸಲಾತಿ ಕುರಿತು ಚರ್ಚಿಸಲಾಗುವುದು.
Read Full Story
07:29 PM (IST) Aug 19

Karnataka News Live 19th August: ಕೆಎಸ್ಆರ್ ಬೆಂಗಳೂರು–ಮಂಡ್ಯ ನಡುವೆ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕರಿಂದ ವಿಂಡೋ-ಟ್ರೈಲಿಂಗ್ ತಪಾಸಣೆ

ನೈಋತ್ಯ ರೈಲ್ವೆಯ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಕೆ.ಎಸ್. ಜೈನ್ ಅವರು ಬೆಂಗಳೂರು-ಮಂಡ್ಯ ಮಾರ್ಗದಲ್ಲಿ ವಿಂಡೋ-ಟ್ರೈಲಿಂಗ್ ತಪಾಸಣೆ ನಡೆಸಿ, ನಿಲ್ದಾಣಗಳ ಪುನರಾಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು. ಅಮೃತ ಭಾರತ ನಿಲ್ದಾಣ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳನ್ನು ವೀಕ್ಷಿಸಿದರು.

Read Full Story
07:07 PM (IST) Aug 19

Karnataka News Live 19th August: ಇನ್ಮುಂದೆ ಬೆಂಗಳೂರಿನಲ್ಲಿ ಮೀಟರ್ ಆಧಾರದ ಮೇಲೆ ಓಡಲಿವೆ ಆಟೋಗಳು!

Bengaluru News: ಬೆಂಗಳೂರಿನಲ್ಲಿ ಆಟೋಗಳು ಮತ್ತೆ ಮೀಟರ್ ಆಧಾರದಲ್ಲಿ ಓಡಲಿವೆ. ಈ ಉಪಕ್ರಮವು ಮೆಟ್ರೋ ನಿಲ್ದಾಣಗಳಿಗೆ ಸಂಪರ್ಕವನ್ನು ಸುಧಾರಿಸಲು ಸಹಾಯಕವಾಗಲಿದೆ.

Read Full Story
07:07 PM (IST) Aug 19

Karnataka News Live 19th August: ತೆರಿಗೆ ಸಲ್ಲಿಕೆಯ ಫಾರ್ಮ್ 16 ಡೌನ್ಲೋಡ್ ಹೇಗೆ? ಸ್ಯಾಲರಿ ಉದ್ಯೋಗಿಗಳ ಸುಲಭ ಗೈಡ್

3 ಲಕ್ಷ ರೂಪಾಯಿಗಿಂತ ಮೇಲ್ಪಟ್ಟ ವೇತನ ಪಡೆಯುವ ಪ್ರತಿಯೊಬ್ಬ ಉದ್ಯೋಗಿಗಳು ಆದಾಯ ತೆರಿಗೆ ರಿಟರ್ನ್ (ಐಟಿಆರ್ ) ಫೈಲ್ ಮಾಡಬೇಕು. ತೆರಿಗೆ ಶೂನ್ಯವಾಗಿದ್ದರೂ ಸಲ್ಲಿಕೆ ಮಾಡಬೇಕು. ಆದರೆ ಈ ಟಿಡಿಎಸ್ ಫೈಲ್ ಮಾಡಲು ಫಾರ್ಮ್ 16 ಡೌನ್ಲೋಡ್ ಮಾಡುವುದು ಹೇಗೆ?

Read Full Story
06:54 PM (IST) Aug 19

Karnataka News Live 19th August: ಕರ್ನಾಟಕದಲ್ಲಿ ಮುಂದುವರೆದ ಮಳೆ ಅಬ್ಬರ; ನಾಳೆಯೂ ಎರಡು ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ರಜೆ!

ಬಂಗಾಳ ಕೊಲ್ಲಿಯ ವಾಯುಭಾರ ಕುಸಿತದಿಂದಾಗಿ ಬೆಳಗಾವಿ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಮಕ್ಕಳ ಸುರಕ್ಷತೆಗಾಗಿ ಆಗಸ್ಟ್ 20 ರಂದು ಎರಡೂ ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕರಾವಳಿ, ಮಲೆನಾಡು ಮತ್ತು ಉತ್ತರ ಒಳನಾಡಿನಲ್ಲಿ ಮುಂದಿನ 7 ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ.

Read Full Story
06:26 PM (IST) Aug 19

Karnataka News Live 19th August: ಧರ್ಮಸ್ಥಳ ಪ್ರಕರಣಕ್ಕೆ ಎಂಟ್ರಿ ಕೊಡುವ ಮುನ್ನ ಜ್ಯೂಸ್, ಕಷಾಯ ಮಾರುತ್ತಿದ್ದ ಸುಜಾತಾ ಭಟ್

ಧರ್ಮಸ್ಥಳ ಪ್ರಕರಣದಲ್ಲಿ ಸುಜಾತ್ ಭಟ್ ಕೇಸ್ ಇದೀಗ ಹಲವು ತಿರುವು ಪಡೆದುಕೊಂಡಿದೆ. ಬುರುಡೆ ಪ್ರಕರಣದ ಬೆನ್ನಲ್ಲೇ ಧರ್ಮಸ್ಥಳದಲ್ಲಿ ಮಗಳ ಮಿಸ್ಸಿಂಗ್ ದೂರು ದಾಖಲಿಸುವ ಮೊದಲು ಸುಜಾತಾ ಭಟ್, ಬೆಂಗಳೂರಲ್ಲಿ ಜ್ಯೂಸ್, ಕಷಾಯ ಮಾರುತ್ತಿದ್ದ ವಿವರ ಬಹಿರಂಗವಾಗಿದೆ.

Read Full Story
06:21 PM (IST) Aug 19

Karnataka News Live 19th August: ಸುಜಾತಾ ಭಟ್ ಸ್ಪಷ್ಟನೆ - ನಾನು ಕೊಟ್ಟಿರುವ ಫೋಟೋ ನನ್ನ ಮಗಳು ಅನನ್ಯಾಳದ್ದೇ, ವಾಸಂತಿ ಯಾರೆಂದೇ ಗೊತ್ತಿಲ್ಲ!

ಧರ್ಮಸ್ಥಳದಲ್ಲಿ ನಾಪತ್ತೆಯಾದ ಅನನ್ಯಾ ಭಟ್ ಫೋಟೋ ವಿವಾದಕ್ಕೆ ಸುಜಾತಾ ಭಟ್ ಸ್ಪಷ್ಟನೆ. ಫೋಟೋದಲ್ಲಿರುವ ವ್ಯಕ್ತಿ ರಂಗಪ್ರಸಾದ್ ಅವರ ಸೊಸೆ ವಾಸಂತಿ ಎಂಬ ಆರೋಪವನ್ನು ಅವರು ನಿರಾಕರಿಸಿದ್ದಾರೆ. ಅನನ್ಯಾ ಅಸ್ತಿತ್ವದ ಬಗ್ಗೆಯೇ ಅನುಮಾನಗಳು ವ್ಯಕ್ತವಾಗುತ್ತಿವೆ.
Read Full Story
05:40 PM (IST) Aug 19

Karnataka News Live 19th August: ನಾಳೆ ಬೆಂಗಳೂರಿನ ಈ ಭಾಗದಲ್ಲಿ ಬೆಳಗ್ಗೆ 11 ರಿಂದ ಸಂಜೆ 5ರವರೆಗೆ ಪವರ್ ಕಟ್

ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಎಚ್‌ಬಿಆರ್ ಲೇಔಟ್, ನಾಗವಾರ, ಕಮ್ಮನಹಳ್ಳಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಬೆಳಿಗ್ಗೆ 11 ರಿಂದ ಸಂಜೆ 5 ರವರೆಗೆ ವಿದ್ಯುತ್ ಇರುವುದಿಲ್ಲ.
Read Full Story
05:32 PM (IST) Aug 19

Karnataka News Live 19th August: ಸುಳ್ಳು ಆರೋಪ,ಅಪಪ್ರಚಾರದಿಂದ ನೋವಾಗಿದೆ, ಧರ್ಮಸ್ಥಳ ಪ್ರಕರಣ ಕುರಿತು ವೀರೇಂದ್ರ ಹೆಗ್ಗಡೆ ಪ್ರತಿಕ್ರಿಯೆ

ಧರ್ಮಸ್ಥಳ ಪ್ರಕರಣ ಭಾರಿ ಕೋಲಾಹಲ ಸೃಷ್ಟಿಸಿದೆ. ಆರೋಪಗಳು, ಎಸ್ಐಟಿ ತನಿಖೆ ತೀವ್ರಗೊಂಡಿದೆ. ಇತ್ತ ಸದನದಲ್ಲೂ ಧರ್ಮಸ್ಥಳ ಪ್ರಕರಣ ಭಾರಿ ಚರ್ಚೆಯಾಗಿದೆ. ಈ ಬೆಳವಣಿಗೆ ನಡುವೆ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಪ್ರಕರಣ ಕುರಿತು ಪಿಟಿಐಗೆ ನೀಡಿದ ಸಂದರ್ಶನ ಇಲ್ಲಿದೆ.

Read Full Story