Bigg Boss Kannada Season 12 Show: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಸ್ಪಂದನಾ ಸೋಮಣ್ಣ ಅವರು ಫೈನಲಿಸ್ಟ್ ಆಗಿದ್ದರು. ಇದನ್ನು ಆ ಮನೆಯಲ್ಲಿದ್ದ ಕೆಲವರು ವಿರೋಧಿಸಿದ್ದರು. ಈಗ ಅವರಿಗೆ ಸಿಕ್ಕ ಅದೃಷ್ಟ ಈಗ ಬೇರೆಯವರ ಪಾಲಾಗಿದೆ. ಯಾಕೆ ಹೀಗಾಯ್ತು?
- Home
- News
- State
- Karnataka News Live: BBK 12 - ಎಂಥ ದೃಷ್ಟಿ ಹಾಕಿದ್ರಪ್ಪಾ.. ಸ್ಪಂದನಾ ಸೋಮಣ್ಣಗೆ ಸಿಕ್ಕ ಅದೃಷ್ಟ ಬೇರೆಯವರ ಪಾಲಾಯ್ತು!
Karnataka News Live: BBK 12 - ಎಂಥ ದೃಷ್ಟಿ ಹಾಕಿದ್ರಪ್ಪಾ.. ಸ್ಪಂದನಾ ಸೋಮಣ್ಣಗೆ ಸಿಕ್ಕ ಅದೃಷ್ಟ ಬೇರೆಯವರ ಪಾಲಾಯ್ತು!

ಬೆಂಗಳೂರು: ನಟ ದರ್ಶನ್ ಅವರ ಮನವಿ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಬಿ. ವರದರಾಜು ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಕಾರಾಗೃಹಕ್ಕೆ ಭೇಟಿ ನೀಡಿದ್ದ ಅವರು ವಿಶೇಷ ಭದ್ರತಾ ವಿಭಾಗದಲ್ಲಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಅವರ ಸೆಲ್ಗೆ ತೆರಳಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಅವರಿಗೆ ಕಾರಾಗೃಹ ನಿಯಾಮಾವಳಿ ಅನುಸಾರ ಕಲ್ಪಿಸಿರುವ ಸೌಲಭ್ಯಗಳ ಕುರಿತು ಮಾಹಿತಿ ಪಡೆದಿದ್ದಾರೆ. ಅಲ್ಲದೆ, ದರ್ಶನ್ ಅವರಿಂದ ಕೂಡ ವಿಚಾರಣೆ ನಡೆಸಿ ಹೇಳಿಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಎಸಿಎಂಎಂ ನ್ಯಾಯಾಲಯಕ್ಕೆ ಬುಧವಾರ ಕಾನೂನು ಸೇವೆಗಳ ಪ್ರಾಧಿಕಾರ ವರದಿ ಸಲ್ಲಿಸುವ ಸಾಧ್ಯತೆಗಳಿವೆ.
Karnataka News Live 15 October 2025BBK 12 - ಎಂಥ ದೃಷ್ಟಿ ಹಾಕಿದ್ರಪ್ಪಾ.. ಸ್ಪಂದನಾ ಸೋಮಣ್ಣಗೆ ಸಿಕ್ಕ ಅದೃಷ್ಟ ಬೇರೆಯವರ ಪಾಲಾಯ್ತು!
Karnataka News Live 15 October 202531ರ ಹುಡುಗಿ, 62ರ ಬಾಯ್ಫ್ರೆಂಡ್, 350 ಡೇಟ್ಸ್.. ಈ ಲವ್ ಸ್ಟೋರಿ ಕೇಳಿದ್ರೆ ಶಾಕ್ ಆಗ್ತೀರಾ!
Unique British couple love story: ವಿಶಿಷ್ಟ ವಯಸ್ಸಿನ ಅಂತರದ ಪ್ರೇಮಕಥೆ: ಬ್ರಿಟನ್ ನಿವಾಸಿ ಗೀಗಿಗೆ 62 ವರ್ಷದ ವ್ಯಕ್ತಿಯ ಮೇಲೆ ಪ್ರೀತಿಯಾಗಿದೆ. ಈ ಪ್ರೀತಿಗೆ ಆಕೆ ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಯಿತು. ಆದರೂ ಅವಳು ಖುಷಿಯಾಗಿದ್ದಾಳೆ. ಕಳೆದ 15 ತಿಂಗಳಿಂದ ಟಿಮ್ ಜೊತೆ ಸಂಬಂಧದಲ್ಲಿದ್ದಾಳೆ.
Karnataka News Live 15 October 2025Karna Serial - ಕರ್ಣ, ನಿತ್ಯಾ ಮದುವೆ ಆಗೋಯ್ತು! ಮದುವೆಗೂ ಮುನ್ನ ಇಂಥ ಕೆಲಸ ಮಾಡಿದಳಾ ನಿಧಿ ಅಕ್ಕ, ಛೇ..!
Karna Kannada Serial Today Episode: ಕರ್ಣ ಧಾರಾವಾಹಿಯಲ್ಲಿ ವೀಕ್ಷಕರು ಬಯಸಿದಂತೆ ಕರ್ಣ ಹಾಗೂ ನಿಧಿ ಒಂದಾಗುತ್ತಿಲ್ಲ, ಇದರ ಬದಲಿಗೆ ಕರ್ಣ, ನಿತ್ಯಾ ಮದುವೆ ಆಗಿದ್ದಾರೆ. ಮದುವೆ ಆಗುತ್ತಿದ್ದಂತೆ ಅವನಿಗೆ ಇನ್ನೊಂದು ಶಾಕಿಂಗ್ ವಿಷಯ ಸಿಕ್ಕಿದೆ. ಏನದು?
Karnataka News Live 15 October 2025ಒಬ್ಬ ಪ್ರಧಾನಿ ಜನ್ರಿಗೆ 10 ಸಾವಿರ ಕೊಟ್ಟು ಓಟು ಕೇಳುವ ನಿದರ್ಶನ ಇದೆಯೇನ್ರಿ? ಮೋದಿ ವಿರುದ್ಧ ಲಾಡ್ ವಾಗ್ದಾಳಿ
ರಾಯಚೂರಿನಲ್ಲಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ಸಂತೋಷ್ ಲಾಡ್, ಬಿಹಾರ ಚುನಾವಣೆಯಲ್ಲಿ 10 ಸಾವಿರ ರೂಪಾಯಿ ನೀಡಿ ಮತ ಕೇಳುತ್ತಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದಿದ್ದಾರೆ. ಬಿಹಾರವನ್ನು ಅಭಿವೃದ್ಧಿ ಮಾಡಲು ವಿಫಲರಾದ ಮೋದಿ ಈಗ ಹಣದ ಆಮಿಷವೊಡ್ಡುತ್ತಿದ್ದಾರೆ, ಎಂದು ಟೀಕಿಸಿದರು.
Karnataka News Live 15 October 2025Amruthadhaare Serial - ಆ ಪುಟಾಣಿ ಮಾತಿಗೆ ಬೆಚ್ಚಿಬಿದ್ದ ಗೌತಮ್; ಅದೃಷ್ಟದೇವತೆ ಪವಾಡದಿಂದ ದಿಗ್ಭ್ರಮೆ
Amruthadhaare Kannada Tv Serial Today Episode: ಅಮೃತಧಾರೆ ಧಾರಾವಾಹಿಯಲ್ಲಿ ಮತ್ತೊಮ್ಮೆ ಭೂಮಿಕಾ ಹಾಗೂ ಗೌತಮ್ ಭೇಟಿಯಾಗಿದೆ. ಇದನ್ನೇ ಅವನು ಬಯಸುತ್ತಿದ್ದನು. ಈಗ ಆ ಹುಡುಗಿ ಕೂಡ ಅವನಿಗೆ ಶಾಕ್ ನೀಡುವ ಮಾತು ಆಡಿದ್ದಾಳೆ. ಹಾಗಾದರೆ ಏನದು?
Karnataka News Live 15 October 20255 ಕೋಟಿಗೆ ಟಿಕೆಟ್ ಮಾರಾಟ, ಕಾಂಗ್ರೆಸ್ ರಾಜ್ಯಾಧ್ಯಕ್ಷನ ಎದುರಲ್ಲೇ ಪಾಟ್ನಾ ಏರ್ಪೋರ್ಟ್ನಲ್ಲಿ ಕಾರ್ಯಕರ್ತರ ಹೊಡೆದಾಟ!
Congress Workers Clash with Leaders at Patna Airport ಬಿಹಾರ ಚುನಾವಣೆಗೆ ಮಹಾಮೈತ್ರಿಕೂಟದೊಳಗಿನ ಸೀಟು ಹಂಚಿಕೆ ವಿವಾದ ಹಿಂಸಾತ್ಮಕ ರೂಪಕ್ಕೆ ತಿರುಗಿದೆ. ಬುಧವಾರ ದೆಹಲಿಯಿಂದ ಪಾಟ್ನಾಗೆ ಹಿಂತಿರುಗುತ್ತಿದ್ದ ಕಾಂಗ್ರೆಸ್ ನಾಯಕರ ಮೇಲೆ ವಿಮಾನ ನಿಲ್ದಾಣದಲ್ಲಿ ಕಾರ್ಯಕರ್ತರೇ ಹಲ್ಲೆ ನಡೆಸಿದ್ದಾರೆ.
Karnataka News Live 15 October 2025ಸೊಸಿ ಚೆಂದ ಇರೋದು ಬೇಡ್ರಿ ಎಂದ Bigg Boss ಮಲ್ಲಮ್ಮ! ಕಾರಣ ಕೇಳಿ, ನಿಮ್ ಲೆವೆಲ್ಲೇ ಬೇರೆ ಬಿಡಿ ಎಂದ ಫ್ಯಾನ್ಸ್
ಬಿಗ್ ಬಾಸ್ ಸ್ಪರ್ಧಿ ಮಲ್ಲಮ್ಮ ತಮ್ಮ ಮುಗ್ಧ ಮಾತುಗಳಿಂದ ಸದ್ದು ಮಾಡುತ್ತಿದ್ದಾರೆ. ಇದೀಗ ತಮ್ಮ ಭಾವಿ ಸೊಸೆ ಹೇಗಿರಬೇಕು ಎಂಬುದರ ಬಗ್ಗೆ ಮಾತನಾಡಿದ್ದು, ಅದನ್ನು ಕೇಳಿ ಅವರ ಅಭಿಮಾನಿಗಳು ಬಿದ್ದೂ ಬಿದ್ದೂ ನಗ್ತಿದ್ದಾರೆ. ನಿಮ್ಮ ಲೆವೆಲ್ಲೇ ಬೇರೆ ಬಿಡಿ ಅಂತಿದ್ದಾರೆ. ಅಷ್ಟಕ್ಕೂ ಮಲ್ಲಮ್ಮ ಹೇಳಿದ್ದೇನು?
Karnataka News Live 15 October 2025ವಿಜಯಪುರ - ಮದ್ಯ ಸೇವಿಸಿದ ಬಳಿಕ ಮೂವರ ನಡುವೆ ಜಗಳ - ಇಬ್ಬರು ಸೇರಿ ಓರ್ವನ ಹತ್ಯೆ!
Sindagi Road murder incident: ವಿಜಯಪುರದ ಸಿಂದಗಿ ರಸ್ತೆಯಲ್ಲಿ ಕುಡಿದ ಮತ್ತಿನಲ್ಲಿದ್ದ ಮೂವರು ಯುವಕರ ನಡುವೆ ಜಗಳ ಉಂಟಾಗಿ, ಇಬ್ಬರು ಸೇರಿ ಒಬ್ಬನನ್ನು ಇಟ್ಟಿಗೆಯಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿದ್ದಾರೆ. ಘಟನೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.
Karnataka News Live 15 October 2025ಈ ಆತ್ಮ ಪದೇ ಪದೇ ಬೆಡ್ರೂಮ್ಗೇ ಯಾಕೆ ಬರತ್ತೆ? ಗಂಡ- ಹೆಂಡತಿ ಸಂಸಾರ ಮಾಡೋದಾದ್ರೂ ಹೇಗಪ್ಪಾ? ಫ್ಯಾನ್ಸ್ ಚಿಂತೆ
ಜೀ ಕನ್ನಡದ 'ನಾ ನಿನ್ನ ಬಿಡಲಾರೆ' ಸೀರಿಯಲ್ನಲ್ಲಿ, ಅಂಬಿಕಾ ಆತ್ಮವು ತನ್ನ ತಂಗಿ ದುರ್ಗಾ ಮತ್ತು ಗಂಡ ಶರತ್ರನ್ನು ಒಂದು ಮಾಡಲು ಪ್ರಯತ್ನಿಸುತ್ತಿದೆ. ಆದ್ರೆ ಈ ಆತ್ಮ ಗಂಡ-ಹೆಂಡತಿ ಎಲ್ಲಿ ಹೋದ್ರೂ ಹಿಂಬಾಲಿಸತ್ತೆ, ಬೆಡ್ರೂಮ್ಗೂ ಹೋಗತ್ತೆ ಎನ್ನೋ ಬೇಸರ ಸೀರಿಯಲ್ ಫ್ಯಾನ್ಸ್ಗೆ.
Karnataka News Live 15 October 2025ಬಾಲಿವುಡ್ ಸಿನಿಮಾ ರೇಂಜಲ್ಲಿತ್ತು ಕೃತಿಕಾ-ಮಹೇಂದ್ರ ರೆಡ್ಡಿ ಪ್ರೀ ವೆಡ್ಡಿಂಗ್ ಫೋಟೋಶೂಟ್, ಗಂಡನ ಮಸಲತ್ತು ಆಕೆಗೆ ತಿಳಿಯಲೇ ಇಲ್ಲ!
Kashmir Pre Wedding Shoot Surfaces After Mahendra Reddy Arrest ಬೆಂಗಳೂರಿನ ವೈದ್ಯೆ ಕೃತಿಕಾ ರೆಡ್ಡಿ ಅವರದ್ದು ಅಸಹಜ ಸಾವಲ್ಲ, ಬದಲಾಗಿ ಕೊಲೆ ಎಂದು ಮರಣೋತ್ತರ ಪರೀಕ್ಷೆಯಿಂದ ದೃಢಪಟ್ಟಿದೆ. ಈ ನಡುವೆ, ಕಾಶ್ಮೀರದಲ್ಲಿ ನಡೆದಿದ್ದ ಈ ಜೋಡಿಯ ಅದ್ದೂರಿ ಪ್ರೀ ವೆಡ್ಡಿಂಗ್ ಫೋಟೋಶೂಟ್ ವೈರಲ್ ಆಗಿದೆ.
Karnataka News Live 15 October 2025ಚಿತ್ರದುರ್ಗ - ಜಾತಿ ಗಣತಿಗೆ ತೆರಳಿದ್ದ ಶಿಕ್ಷಕರಿಬ್ಬರು ಅಪಘಾತದಲ್ಲಿ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು
Teachers injured during survey duty: ರಾಜ್ಯ ಸರ್ಕಾರದ ವಿವಾದಾತ್ಮಕ ಸಾಮಾಜಿಕ ಸಮೀಕ್ಷೆಯು ಶಿಕ್ಷಕರಿಗೆ ಅಪಾಯಕಾರಿಯಾಗಿದ್ದು, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಗಣತಿ ಕಾರ್ಯ ಮುಗಿಸಿ ಹಿಂದಿರುಗುತ್ತಿದ್ದ ಇಬ್ಬರು ಶಿಕ್ಷಕರು ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ.
Karnataka News Live 15 October 2025ಸೀರಿಯಲ್ ಬಿಟ್ಟು ಹೋಗ್ತಿರೋ Bhagyalakshmi ಪೂಜಾಗೆ ಆ್ಯಕ್ಸಿಡೆಂಟ್ ಆಗೋಯ್ತು! ಇದ್ಯಾವ ನ್ಯಾಯ?
Karnataka News Live 15 October 2025ತಾಲಿಬಾನ್ಗೆ ಮಂಡಿಯೂರಿದ ಮುನೀರ್ ಸೈನ್ಯ, ಕದನ ವಿರಾಮಕ್ಕೆ ಪಾಕಿಸ್ತಾನ ಮನವಿ
Pak Afghan temporary ceasefire: ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವಿನ ತೀವ್ರ ಗಡಿ ಘರ್ಷಣೆಗಳ ನಂತರ, ಪಾಕಿಸ್ತಾನದ ಕೋರಿಕೆಯ ಮೇರೆಗೆ 48 ಗಂಟೆಗಳ ತಾತ್ಕಾಲಿಕ ಕದನ ವಿರಾಮವನ್ನು ಘೋಷಿಸಲಾಗಿದೆ. ಈ ನಿರ್ಧಾರವು ಪಾಕಿಸ್ತಾನವು ತಾಲಿಬಾನ್ ನೆಲೆಗಳ ಮೇಲೆ ವಾಯುದಾಳಿ ನಡೆಸಿದ ನಂತರ ಬಂದಿದೆ.
Karnataka News Live 15 October 2025ಮಗಳು ಕೃತಿಕಾ ರೆಡ್ಡಿಯನ್ನು ಅಳಿಯ ಕೊಂದಿದ್ದು ಹೇಗೆ? ಪಿನ್ ಟು ಪಿನ್ ಮಾಹಿತಿ ನೀಡಿದ ಅಪ್ಪ ಮುನಿರೆಡ್ಡಿ
Kritika Reddy Murder Father Munireddy Details How Son-in-Law Killed Her with IV/Cannula ವೈದ್ಯೆ ಕೃತಿಕಾ ರೆಡ್ಡಿ ಅವರ ತಂದೆ ಮುನಿರೆಡ್ಡಿ, ತಮ್ಮ ಅಳಿಯ ಮಹೇಂದ್ರ ರೆಡ್ಡಿ ಇಂಜೆಕ್ಷನ್ ನೀಡಿ ಮಗಳನ್ನು ಕೊಂದಿರುವ ಇಂಚಿಂಚು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
Karnataka News Live 15 October 2025108 ಆಂಬುಲೆನ್ಸ್ ಸೇವೆ ಸರ್ಕಾರದ ನಿಯಂತ್ರಣಕ್ಕೆ - ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಹತ್ವದ ಹೇಳಿಕೆ!
Dinesh Gundu Rao on ambulance service: ಖಾಸಗಿ ಏಜೆನ್ಸಿಗಳ ಗೊಂದಲಗಳನ್ನು ನಿವಾರಿಸಲು ಕರ್ನಾಟಕದ 108 ಆಂಬುಲೆನ್ಸ್ ಸೇವೆಯನ್ನು ಎರಡು ತಿಂಗಳೊಳಗೆ ಸಂಪೂರ್ಣವಾಗಿ ಸರ್ಕಾರದ ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
Karnataka News Live 15 October 2025ಆಳಂದ ಮತಗಳ್ಳತನ ಪ್ರಕರಣ - ಕಲ್ಬುರ್ಗಿ ನಗರದ 5 ಕಡೆ SIT ದಾಳಿ, ಹಲವರು ವಶಕ್ಕೆ!
SIT Raids 5 Locations in Kalaburagi Over Aland Vote Theft Case: ಕಲ್ಬುರ್ಗಿ ಜಿಲ್ಲೆ ಆಳಂದ ಕ್ಷೇತ್ರದ ಮತಗಳ್ಳತನ ಪ್ರಕರಣಕ್ಕೆ ಸಂಬಂಧ ಎಸ್ಐಟಿ ತನಿಖೆ ಚುರುಕುಗೊಳಿಸಿದೆ. ರಾಜ್ಯ ಸರ್ಕಾರದ ಆದೇಶದ ಮೇರೆಗೆ, ಕಲ್ಬುರ್ಗಿ ನಗರದ 5 ಕಡೆ ದಾಳಿ ನಡೆಸಿ, ಹಲವರನ್ನು ವಶಕ್ಕೆ ಪಡೆದಿದೆ.
Karnataka News Live 15 October 2025ಗುಡ್ಡದ ಮೇಲೆ ಹಾಕುವ ವಿಂಡ್ ಫ್ಯಾನ್ ರೆಕ್ಕೆ-ಕಂಬ ಕೊಪ್ಪಳದಲ್ಲಿಯೇ ಉತ್ಪಾದನೆ; ₹400 ಕೋಟಿ ಹೂಡಿಕೆ!
Karnataka News Live 15 October 2025ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿ ಬಂಪರ್ ಗಿಫ್ಟ್; ಶೇ.2 ತುಟ್ಟಿ ಭತ್ಯೆ ಹೆಚ್ಚಳ! ಜುಲೈನಿಂದ ಪೂರ್ವಾನ್ವಯ!
Karnataka News Live 15 October 2025ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಪ್ರಕರಣ, ಮಗಳಿದ್ದ ಮಾರತಹಳ್ಳಿಯ ಮನೆಯನ್ನು ಇಸ್ಕಾನ್ಗೆ ದಾನ ಮಾಡಿದ ತಂದೆ!
Doctor Kritika Reddy Murder Father Donates Marathahalli House to ISKCON After FSL Report ಮಗಳ ಸಾವಿನಿಂದ ನೊಂದ ತಂದೆ, ಆಕೆಯ ನೆನಪಿರುವ ಮನೆಯನ್ನು ಇಸ್ಕಾನ್ಗೆ ದಾನ ಮಾಡಲು ನಿರ್ಧರಿಸಿದ್ದಾರೆ.
Karnataka News Live 15 October 2025ದಲಿತರು ಬೌದ್ಧ ಧರ್ಮಕ್ಕೆ ಹೋದರೆ ಮತಾಂತರ ಅಲ್ಲ - ಹೆಚ್ಸಿ ಮಹದೇವಪ್ಪ ಭಾಷಣ
HC Mahadevappa speech on Dalits: ಮೈಸೂರಿನಲ್ಲಿ ನಡೆದ ಬೌದ್ಧ ಸಮಾವೇಶದಲ್ಲಿ ಮಾತನಾಡಿದ ಸಚಿವ ಹೆಚ್.ಸಿ. ಮಹದೇವಪ್ಪ, ದಲಿತರು ಬೌದ್ಧ ಧರ್ಮಕ್ಕೆ ಹೋಗುವುದು ಮತಾಂತರವಲ್ಲ, ಅದು ಸ್ವಾತಂತ್ರ್ಯದ ಸಂಕೇತ ಎಂದರು. ಹೊಲೆಯ, ಮಾದಿಗ ಪದ ಬಳಕೆಯನ್ನು ನಿಲ್ಲಿಸುವಂತೆ ಕರೆ ನೀಡಿದ