ರಾಯಚೂರಿನಲ್ಲಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ಸಂತೋಷ್ ಲಾಡ್, ಬಿಹಾರ ಚುನಾವಣೆಯಲ್ಲಿ 10 ಸಾವಿರ ರೂಪಾಯಿ ನೀಡಿ ಮತ ಕೇಳುತ್ತಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದಿದ್ದಾರೆ. ಬಿಹಾರವನ್ನು ಅಭಿವೃದ್ಧಿ ಮಾಡಲು ವಿಫಲರಾದ ಮೋದಿ ಈಗ ಹಣದ ಆಮಿಷವೊಡ್ಡುತ್ತಿದ್ದಾರೆ, ಎಂದು ಟೀಕಿಸಿದರು.
ರಾಯಚೂರು (ಅ.15): ಬಿಹಾರ ಚುನಾವಣೆಯಲ್ಲಿ ಮೋದಿ ಸಾಹೇಬರು 10 ಸಾವಿರ ಕೊಟ್ಟಿದ್ದಾರಲ್ಲ. ಒಬ್ಬ ಪ್ರಧಾನಿ 10 ಸಾವಿರ ರೂಪಾಯಿ ಹಾಕಿ ಓಟು ಕೇಳೋದು ನಿದರ್ಶನ ಇದೆ ಏನ್ರಿ? ಸ್ವಾತಂತ್ರ್ಯ ಸಿಕ್ಕಾಗಿನಿಂದ ಈ ದೇಶದಲ್ಲಿ ಇಂಥ ಕಾರ್ಯಕ್ರಮ ಯಾರಾದ್ರೂ ಮಾಡಿದ್ದಾರಾ? ಎಂದು ಪ್ರಧಾನಿ ಮೋದಿ ವಿರುದ್ಧ ಸಚಿವ ಸಂತೋಷ್ ಲಾಡ್ ವಾಗ್ದಾಳಿ ನಡೆಸಿದರು.
ಬಿಹಾರ ಚುನಾವಣೆ ವೇಳೆ ಬಿಜೆಪಿ ಜನ್ರಿಗೆ 10 ಸಾವಿರ ಹಣ ಗ್ಯಾರಂಟಿ ನೀಡಿರೊ ವಿಚಾರ ಸಂಬಂಧ ರಾಯಚೂರಿನಲ್ಲಿ ಪ್ರತಿಕ್ರಿಯಿಸಿದ ಸಚಿವರು, ನಮ್ಮ ಅಮ್ಮ,ಅಕ್ಕ-ತಂಗಿಯರಿಗೆ 10 ಸಾವಿರ ಕೊಟ್ಟಿದ್ದಾರಲ್ಲ ಆಲ್ರೇಡಿ ಬೋನಸ್ ಕೊಟ್ಟಿದ್ದಾರೆ. 11 ವರ್ಷ ಪ್ರಧಾನಿ ಆಗಿ, 20 ಬಿಜೆಪಿಯಲ್ಲಿ ಆಡಳಿತದಲ್ಲಿ ಇದ್ದು, 43-60 ಸಾವಿರ ಒಳಗೆ ಪರ್ ಕ್ಯಾಪಿಟಲ್ ಇನ್ ಕಂ ಇದೆ. ಬಿಹಾರ್ ಎಷ್ಟು ಅಭಿವೃದ್ಧಿ ಆಗಿದೆ ಅಂದ್ರೆ, ವರ್ಷಕ್ಕೆ ಆದಾಯ ಕೇವಲ 60 ಸಾವಿರ ಅಷ್ಟೇ. ಇಡೀ ಭಾರತ ದೇಶದಲ್ಲಿ ಬಿಹಾರ ಬಹಳ ಬಡ ರಾಜ್ಯ. ಅಭಿವೃದ್ಧಿ ಮಾಡಲಾಗಲಿಲ್ಲ. ಈಗ ಹತ್ತು ಸಾವಿರ ಕೊಟ್ಟು ಓಟು ಕೇಳಬೇಕು. ಚುನಾವಣೆಗಿನ್ನೂ ಎರಡೇ ತಿಂಗಳಿದೆ ಎನ್ನುವಾಗಲೇ 10 ಸಾವಿರ ಹಾಕಿ, ಭಾಷಣ ಮಾಡಿ ಈಗ ಓಟು ಕೇಳ್ತಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಟೀಕಿಸಿದರು.
ಪ್ರಧಾನಿ ಮೋದಿ ಸ್ಟ್ರಾಂಗ್ ಇಲ್ಲ, ವೀಕ್ ಆಗಿದ್ದಾರೆ. ಹೀಗಾಗಿ ಸೆಲೆಬ್ರಿಟಿ ಕರೆತಂದು ಹಾಡು ಹಾಡಿಸುತ್ತಿದ್ದಾರೆ. ಮೋದಿ ಹೈತೊ ಮುನ್ ಕಿನ್ ಹೈ.. ನಿಮಗ್ಯಾಕೆ ಬೇಕು ಇದು.. ನಿಮ್ಮ ಪರವಾಗಿ ಯಾಕೆ ಹಾಡು ಹಾಡಬೇಕು? ನೀವು ಕೆಲಸ ಸರಿಯಾಗಿ ಮಾಡಿದ್ರೆ ನಿಮಗೆ ಬೊಟ್ಟು ಒತ್ತಿದ್ರೆ ಓಟು ಬಿದ್ದುಬಿಡಬೇಕಲ್ವ? ಎಲೆಕ್ಷನ್ ಕಮಿಷನ್ ಕೂಡ ಇವರದ್ದೇ ಪಿಕ್ಚರ್ ನಡಿತಿದೆ ನಡೆಯಲಿ ಎಂದರು.
