Netanyahu Orders Powerful Attack on Gaza Hamas Violates Ceasefire by Firing ನೆತನ್ಯಾಹು ದಾಳಿಗೆ ಆದೇಶಿಸಿದ ಕೆಲವೇ ನಿಮಿಷಗಳಲ್ಲಿ, ಮಂಗಳವಾರ ಸಂಜೆ ನಿಗದಿಯಾಗಿದ್ದ ಮತ್ತೊಂದು ಒತ್ತೆಯಾಳು ಮೃತದೇಹದ ಹಸ್ತಾಂತರವನ್ನು ಮುಂದೂಡುತ್ತಿರುವುದಾಗಿ ಹಮಾಸ್ ಹೇಳಿದೆ.
- Home
- News
- State
- Karnataka Latest News Live: ಕದನ ವಿರಾಮ ಒಪ್ಪಂದ ಉಲ್ಲಂಘಿಸಿದ ಹಮಾಸ್, ಗಾಜಾ ಮೇಲೆ ತಕ್ಷಣದಿಂದಲೇ ಶಕ್ತಿಶಾಲಿ ದಾಳಿಗೆ ನಿರ್ಧರಿಸಿದ ಇಸ್ರೇಲ್!
Karnataka Latest News Live: ಕದನ ವಿರಾಮ ಒಪ್ಪಂದ ಉಲ್ಲಂಘಿಸಿದ ಹಮಾಸ್, ಗಾಜಾ ಮೇಲೆ ತಕ್ಷಣದಿಂದಲೇ ಶಕ್ತಿಶಾಲಿ ದಾಳಿಗೆ ನಿರ್ಧರಿಸಿದ ಇಸ್ರೇಲ್!

ವಿಜಯಪುರ: ತಮ್ಮನ್ನು ಟೀಕಿಸಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿರುದ್ಧ ಹರಿಹಾಯ್ದಿರುವ ಸಚಿವ ಎಂ.ಬಿ.ಪಾಟೀಲ ಅವರು, ಯತ್ನಾಳ್ ಈ ಹಿಂದೆ ನನ್ನ ಜೊತೆನೇ ಈದ್ಗಾ ಮೈದಾನಕ್ಕೆ ಪ್ರಾರ್ಥನೆಗೆ ಬಂದು ಅಲ್ಲಾಹು ಅಕ್ಟರ್ ಎಂದಿದ್ದರು. ಈಗ ಹಿಂದೂಗಳ ಬಗ್ಗೆ ಮಾತನಾಡುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಯತ್ನಾಳ್ ಬಗ್ಗೆ ಬಿಜೆಪಿಯ ಎಂ.ಪಿ.ರೇಣುಕಾಚಾರ್ಯ ಏನೇನು ಹೇಳಿದ್ದಾರೆ ಕೇಳಿ. ಈ ಹಿಂದೆ ನನ್ನ ಜೊತೆನೇ ಇವರು ಈದ್ಗಾ ಮೈದಾನಕ್ಕೆ ಪ್ರಾರ್ಥನೆಗೆ ಬಂದಿದ್ದರು. ಅಂದು ಅಲ್ಲಾಹು ಅಕ್ಟರ್ ಎಂದು ಇಂದು ಹಿಂದೂ ಬಗ್ಗೆ ಮಾತನಾಡುತ್ತಾರೆ. ಇವರು ನಾಲಿಗೆ ಹರಿಬಿಟ್ಟ ಕಾರಣವೇ ಇವರನ್ನು ಬಿಜೆಪಿಯಿಂದ ಹೊರ ಹಾಕಿದ್ದಾರೆ. ಉಚ್ಚಾಟಿತ ಹಿಂದೂ ಹುಲಿ ಇದು. ಬಸನಗೌಡರ ನಿಮ್ಮ ನಾಲಿಗೆಗೆ ಲಗಾಮು ಇರಲಿ ಎಂದು ಹೇಳಿದರು.
ಯತ್ನಾಳ ಮಾತು ಯಾರು ಸೀರಿಯಸ್ ಆಗಿ ತಗೋತಾರೆ? ನಾನು ಸೀರಿಯಸ್ ಆಗಿ ತಗೊಂಡ್ರೆ ಅದು ಸರಿ ಇರಲ್ಲ. ಯತ್ನಾಳ್ ಎಲ್ಲರಿಗೂ ಬಾಯಿ ಬಿಟ್ಟಿದ್ದಾರೆ, ಈಗ ನನಗೂ ಬಾಯಿ ಬಿಟ್ಟಿದ್ದಾರೆ. ಯತ್ನಾಳ್ ನೀವು ಯಾರಿಗಾದರೂ ಧಮ್ಮಿ ಹಾಕಿ, ನನ್ನೊಟ್ಟಿಗೆ ಇದು ನಡೆಯಲ್ಲ. ಯತ್ನಾಳ್ ಅವರಿಗೆ ಪ್ರತಿಕ್ರಿಯೆ ಕೊಡಲು ನಾನು ದಿನಕ್ಕೆ ನಾಲ್ಕು ಪ್ರೆಸ್ಮೀಟ್ ಮಾಡಬೇಕಾಗುತ್ತದೆ. ಇವರ ಹಾಗೆ ನಾನು ನಿರುದ್ಯೋಗಿ ಅಲ್ಲ ಎಂದು ಹೇಳಿದರು.
Karnataka Latest News Live 28 October 2025ಕದನ ವಿರಾಮ ಒಪ್ಪಂದ ಉಲ್ಲಂಘಿಸಿದ ಹಮಾಸ್, ಗಾಜಾ ಮೇಲೆ ತಕ್ಷಣದಿಂದಲೇ ಶಕ್ತಿಶಾಲಿ ದಾಳಿಗೆ ನಿರ್ಧರಿಸಿದ ಇಸ್ರೇಲ್!
Karnataka Latest News Live 28 October 2025ಸುರಂಗ ರಸ್ತೆ ಪ್ರಾಜೆಕ್ಟ್ ರದ್ದು ಮಾಡಿ ಎಂದ ತೇಜಸ್ವಿ ಸೂರ್ಯ,ಕೇಂದ್ರದಿಂದ ಹಣ ತನ್ನಿ ಎಂದ ಡಿಕೆ ಶಿವಕುಮಾರ್!
Tejasvi Surya Urges DK Shivakumar to Scrap Tunnel Road ಸಂಸದ ತೇಜಸ್ವಿ ಸೂರ್ಯ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ, ಬೆಂಗಳೂರಿನಲ್ಲಿ ಉದ್ದೇಶಿತ ಸುರಂಗ ರಸ್ತೆ ಯೋಜನೆಯನ್ನು ಕೈಬಿಟ್ಟು, ಮೆಟ್ರೋ ಮತ್ತು ಉಪನಗರ ರೈಲುಗಳಿಗೆ ಆದ್ಯತೆ ನೀಡುವಂತೆ ಒತ್ತಾಯಿಸಿದರು.
Karnataka Latest News Live 28 October 2025ಲಾಠಿ ಹಿಡಿದು RSS ಪಥಸಂಚಲನಕ್ಕೆ ಅವಕಾಶ ಕೊಡಲ್ಲ, ಚಿತ್ತಾಪುರ ಶಾಂತಿ ಸಭೆಯಲ್ಲಿ ಭೀಮ್ ಆರ್ಮಿ ಗದ್ದಲ
ಲಾಠಿ ಹಿಡಿದು RSS ಪಥಸಂಚಲನಕ್ಕೆ ಅವಕಾಶ ಕೊಡಲ್ಲ, ಚಿತ್ತಾಪುರ ಶಾಂತಿ ಸಭೆಯಲ್ಲಿ ಭೀಮ್ ಆರ್ಮಿ ಗದ್ದಲ ಎಬ್ಬಿಸಿದೆ. ಶಾಂತಿ ಸಭೆ ಅಶಾಂತಿಯಲ್ಲಿ ಅಂತ್ಯಗೊಂಡಿದೆ. ಕಿತ್ತಾಟದಿಂದ ಜಿಲ್ಲಾಧಿಕಾರಿ ಸಭೆಯಿಂದ ಹೊರನಡೆದ ಘಟನೆ ನಡೆದಿದೆ.
Karnataka Latest News Live 28 October 2025ಕನ್ನಡ ಮಿತ್ರರು UAE ಆಯೋಜನೆಯ ಕನ್ನಡ ಪಾಠ ಶಾಲೆ ದುಬೈಗೆ ಗಡಿನಾಡು ಸಾಧಕ ಅಂತಾರಾಷ್ಟ್ರೀಯ ಪುರಸ್ಕಾರ
Kannada Patha Shale Dubai Wins Gadinaadu Sadhaka International Award ದುಬೈ ಗಡಿನಾಡ ಉತ್ಸವದಲ್ಲಿ, ಅನಿವಾಸಿ ಮಕ್ಕಳಿಗೆ ಉಚಿತ ಕನ್ನಡ ಶಿಕ್ಷಣ ನೀಡುತ್ತಿರುವ ಕನ್ನಡ ಪಾಠ ಶಾಲೆ ದುಬೈಯ ಸಂಸ್ಥಾಪಕ ಶಶಿಧರ್ ನಾಗರಾಜಪ್ಪ ಮತ್ತು ಅವರ ತಂಡವನ್ನು 'ಕನ್ನಡ ಸಾಧಕ ಪುರಸ್ಕಾರ' ನೀಡಿ ಗೌರವಿಸಲಾಯಿತು.
Karnataka Latest News Live 28 October 2025ಬಸನಗೌಡಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಕೇಸರಿ ಸಮಿತಿ ಸಭೆ, ರಾಜ್ಯಾದ್ಯಂತ ಆಯೋಜನೆ
ಬಸನಗೌಡಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಕೇಸರಿ ಸಮಿತಿ ಸಭೆ, ರಾಜ್ಯಾದ್ಯಂತ ಆಯೋಜನೆ ಮಾಡಲಾಗುತ್ತಿದೆ. ಮೊದಲ ಸಭೆ ಮುಧೋಳದಲ್ಲಿ ನಡೆದಿದ್ದರೆ, ಶೀಘ್ರದಲ್ಲೇ ಬೆಂಗಳೂರಿನಲ್ಲಿ ಕೇಸರಿ ಸಮಿತಿ ಸಭೆ ನಡೆಯಲಿದೆ.
Karnataka Latest News Live 28 October 2025ಪ್ರಿಯಾಂಕ್ ಖರ್ಗೆಗೆ ಫರ್ಸ್ಟ್ ಕ್ಲಾಸ್ ಈಡಿಯಟ್ ಎಂದ ಅಸ್ಸಾಂ ಸಿಎಂ, ಬೇಷರತ್ ಕ್ಷಮೆ ಕೇಳುವಂತೆ ಪ್ರದೀಪ್ ಈಶ್ವರ್ ಆಗ್ರಹ!
Priyank Kharge First-Class Idiot Pradeep Eshwar Demands Unconditional Apology ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕರ್ನಾಟಕದ ಜನರ ಬಗ್ಗೆ ನೀಡಿದ ಹೇಳಿಕೆಗೆ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Karnataka Latest News Live 28 October 2025ಬಳ್ಳಾರಿ ಸ್ವಾಂಜ್ ಐರನ್ ಕಾರ್ಖಾನೆಯಲ್ಲಿ ಬೆಂಕಿ ಅವಘಡ, ಇಬ್ಬರಿಗೆ ಗಾಯ
ಬಳ್ಳಾರಿ ಸ್ವಾಂಜ್ ಐರನ್ ಕಾರ್ಖಾನೆಯಲ್ಲಿ ಬೆಂಕಿ ಅವಘಡ, ಇಬ್ಬರಿಗೆ ಗಾಯ, ಕಾರ್ಖಾನೆಯಲ್ಲಿ ದಟ್ಟವಾದ ಹೊಗೆ ಆವರಿಸಿಕೊಂಡಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಪ್ರಾಥಮಿಕ ವರದಿ ಹೇಳಿದೆ.
Karnataka Latest News Live 28 October 2025ಕನಸಿನ ಕಿರೀಟಕ್ಕೆ ಇನ್ನೊಂದೇ ಹೆಜ್ಜೆ - ಆಸೀಸ್ ಸವಾಲು ಮೆಟ್ಟಿ ನಿಲ್ಲುತ್ತಾ ಭಾರತ?
Karnataka Latest News Live 28 October 2025Bigg Bossನಲ್ಲಿ ರಕ್ಷಿತಾ ಶೆಟ್ಟಿ ಮಾತಾಡಿದ್ದೇ ಈಗ Rap Song! ಅಬ್ಬಬ್ಬಾ ಎನ್ನೋ ಪರ್ಫಾಮೆನ್ಸ್ ನೋಡಿ
Karnataka Latest News Live 28 October 2025ಸುಳ್ಳೆಂದು ಪ್ರೂವ್ ಮಾಡಿ 5 ಲಕ್ಷ ಪಡೆಯಿರಿ - ಜನರಿಗೆ ಬಿಗ್ ಆಫರ್ ಕೊಟ್ಟ Bigg Boss ಡಾಗ್ ಸತೀಶ್!
"ಡಾಗ್ ಸತೀಶ್" ಎಂದೇ ಖ್ಯಾತರಾದ, ನೂರಾರು ಕೋಟಿ ಮೌಲ್ಯದ ನಾಯಿಗಳ ಮಾಲೀಕ ಸತೀಶ್, ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಸುದ್ದಿಯಲ್ಲಿದ್ದಾರೆ. ತಾವು ಡಾ.ರಾಜ್ಕುಮಾರ್, ವಿಷ್ಣುವರ್ಧನ್ ಸೇರಿದಂತೆ ಹಲವು ಗಣ್ಯರಿಗೆ ನಾಯಿಗಳನ್ನು ನೀಡಿದ್ದು ಸುಳ್ಳು ಎಂದು ಸಾಬೀತಾದರೆ 5 ಲಕ್ಷ ನೀಡುವುದಾಗಿ ಹೇಳಿದ್ದಾರೆ.
Karnataka Latest News Live 28 October 2025ಕಾಂಗ್ರೆಸ್ ಶಾಸಕ ವಿನಯ್ ಕಲುಕರ್ಣಿಗೆ ಶಾಕ್, ಸಾಕ್ಷಿ ನಾಶ ಪ್ರಕರಣ ಎತ್ತಿಹಿಡಿದ ಸುಪ್ರೀಂ ಕೋರ್ಟ್
ಕಾಂಗ್ರೆಸ್ ಶಾಸಕ ವಿನಯ್ ಕಲುಕರ್ಣಿಗೆ ಶಾಕ್, ಸಾಕ್ಷಿ ನಾಶ ಪ್ರಕರಣ ಎತ್ತಿಹಿಡಿದ ಸುಪ್ರೀಂ ಕೋರ್ಟ್, ಯೋಗೇಶ್ ಗೌಡ ಕೊಲೆ ಪ್ರರಕರಣ ಸಂಬಂಧ ವಿನಯ್ ಕುಲಕರ್ಣಿ ಸಾಕ್ಷಿ ನಾಶ ಪ್ರಕರಣವನ್ನು ಹೈಕೋರ್ಟ್ ವಜಾ ಮಾಡಿತ್ತು.
Karnataka Latest News Live 28 October 2025Brahmagantu - ದೀಪಾ ರೂಮಿಗೆ ನುಗ್ಗಿದ ದಿಶಾ - ಚಿರು ಕೈಯಲ್ಲಿ ತಗ್ಲಾಕ್ಕೊಂಡ್ಲಲ್ಲಪ್ಪೋ- ಬೇಕಿತ್ತಾ ಇದೆಲ್ಲಾ?
Karnataka Latest News Live 28 October 2025ರಸ್ತೆಯಲ್ಲಿ 10 ಜನ ನಿಂತ್ರೂ ನಿಯಮ ಉಲ್ಲಂಘನೆ, ಸರ್ಕಾರ ಆದೇಶಕ್ಕೆ ತಡೆ ಕುರಿತು ವಕೀಲರ ಪ್ರತಿಕ್ರಿಯೆ
ರಸ್ತೆಯಲ್ಲಿ 10 ಜನ ನಿಂತ್ರೂ ನಿಯಮ ಉಲ್ಲಂಘನೆ, ಸರ್ಕಾರ ಆದೇಶಕ್ಕೆ ತಡೆಯಾಜ್ಞೆ ಕುರಿತು ವಕೀಲರ ಪ್ರತಿಕ್ರಿಯೆ ನೀಡಿದ್ದಾರೆ. ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಸಂಸ್ಥೆ, ಸಂಘಟನೆಗಳ ಕಾರ್ಯಾಚಟುವಟಿಕೆ ನಿರ್ಬಂಧ ಆದೇಶದಲ್ಲಿನ ಹುಳುಕುಗಳ ಕುರಿತು ಪ್ರತಿಕ್ರಿಯಿಸಿದ್ದಾರೆ.
Karnataka Latest News Live 28 October 2025ರೋಡ್ ರೋಮಿಯೋನಿಂದ ಅಪ್ರಾಪ್ತ ಬಾಲಕಿ ಸಾವು, ಬೈಕ್ನಲ್ಲಿ ಕರೆದೊಯ್ಯುವಾಗ ಅಪಘಾತ
ರೋಡ್ ರೋಮಿಯೋನಿಂದ ಅಪ್ರಾಪ್ತ ಬಾಲಕಿ ಸಾವು, ಬೈಕ್ನಲ್ಲಿ ಕರೆದೊಯ್ಯುವಾಗ ಅಪಘಾತ, ಬಲವಂತವಾಗಿ ಅಪ್ರಾಪ್ತೆಯನ್ನು ಲೈ0ಗಿಕವಾಗಿ ಬಳಸಿಕೊಳ್ಳಲು ಬೈಕ್ನಲ್ಲಿ ಕರೆದೊಯ್ಯುತ್ತಿರುವಾಗ ಅಪಘಾತ ಸಂಭವಿಸಿದೆ.
Karnataka Latest News Live 28 October 2025Mandya - ಪ್ರಿಯಕರನೊಂದಿಗೆ ದಿಂಬಿನಿಂದ ಗಂಡನ ಉಸಿರು ನಿಲ್ಲಿಸಿದ್ದ ಕೇಸ್; ಶಿಕ್ಷೆ ಪ್ರಕಟ
Mandya husband murder case: ಮಂಡ್ಯದಲ್ಲಿ, ಫೇಸ್ಬುಕ್ನಲ್ಲಿ ಪರಿಚಯವಾದ ಪ್ರಿಯಕರನೊಂದಿಗೆ ಸೇರಿ ಪತ್ನಿಯೊಬ್ಬಳು ತನ್ನ ಪತಿಯನ್ನು ಕೊಲೆ ಮಾಡಿದ್ದಳು. ಈ ಪ್ರಕರಣದಲ್ಲಿ, ನ್ಯಾಯಾಲಯವು ಇದೀಗ ಇಬ್ಬರೂ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ.
Karnataka Latest News Live 28 October 2025ಹೆರಿಗೆಯ ಬಳಿಕ ಲೈಂ*ಗಿಕ ಕ್ರಿಯೆಗೆ ಎಷ್ಟು ದಿನ ಗ್ಯಾಪ್ ಕೊಡಬೇಕು? ವೈದ್ಯೆಯ ಮಾತು ಕೇಳಿ
ಹೆರಿಗೆಯ ನಂತರ ದೈಹಿಕ ಸಂಪರ್ಕ ಯಾವಾಗ ಸೂಕ್ತ ಎಂಬ ಪ್ರಶ್ನೆಗೆ ಸ್ತ್ರೀರೋಗ ತಜ್ಞರಾದ ಡಾ. ದೀಪ್ತಿ ಉತ್ತರಿಸಿದ್ದಾರೆ. ಹೆರಿಗೆಯ ನಂತರದ ರಕ್ತಸ್ರಾವ ಮತ್ತು ಹೊಲಿಗೆಗಳ ಕಾರಣ ಕನಿಷ್ಠ 40 ದಿನಗಳ ಕಾಲ ಕಾಯುವುದು ಮುಖ್ಯವಾಗಿದ್ದು, ಪತ್ನಿಯ ದೈಹಿಕ ಹಾಗೂ ಮಾನಸಿಕ ಆರೋಗ್ಯ ಪರಿಗಣಿಸುವುದು ಅತ್ಯಗತ್ಯ ಎಂದಿದ್ದಾರೆ
Karnataka Latest News Live 28 October 2025RSS ಚಟುವಟಿಕೆ ನಿಷೇಧಕ್ಕೆ ಹೊರಟ ಸರ್ಕಾರಕ್ಕೆ ಹಿನ್ನಡೆ, ರಾಜ್ಯ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ
RSS ಚಟುವಟಿಕೆ ನಿಷೇಧಕ್ಕೆ ಹೊರಟ ಸರ್ಕಾರಕ್ಕೆ ಹಿನ್ನಡೆ, ರಾಜ್ಯ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಸರ್ಕಾರಿ ಶಾಲೆ, ಸರ್ಕಾರಿ ಸ್ಥಳಗಳಲ್ಲಿ ಆರ್ಎಸ್ಎಸ್ ಚಟುವಟಿಕೆ ಟಾರ್ಗೆಟ್ ಮಾಡಿ ನಿಷೇಧ ಆದೇಶ ಹೊರಡಿಸಿದ್ದ ರಾಜ್ಯ ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಲಾಗಿದೆ.
Karnataka Latest News Live 28 October 2025ಆ ವಿಷಯದಲ್ಲಿ ಜೂ.ಎನ್ಟಿಆರ್ಗೆ ಪತ್ನಿ ಪ್ರಣತಿ ವಾರ್ನಿಂಗ್.. ಮನೆಯ ಗುಟ್ಟು ಬಿಚ್ಚಿಟ್ಟ ರಾಜಮೌಳಿ
ಜೂ.ಎನ್ಟಿಆರ್ ಅವರ ವೀಕ್ನೆಸ್ಗಳ ಬಗ್ಗೆ ರಾಜಮೌಳಿ ಹಲವು ಬಾರಿ ಬಹಿರಂಗಪಡಿಸಿದ್ದಾರೆ. ಓಪನ್ ಆಗಿಯೇ ಕಾಮೆಂಟ್ ಮಾಡಿದ್ದಾರೆ. ಅದರ ಭಾಗವಾಗಿ, ತಾರಕ್ಗೆ ಅವರ ಪತ್ನಿ ಲಕ್ಷ್ಮಿ ಪ್ರಣತಿ ನೀಡಿದ ವಾರ್ನಿಂಗ್ ಬಗ್ಗೆಯೂ ರಾಜಮೌಳಿ ಹೇಳಿದ್ದಾರೆ.
Karnataka Latest News Live 28 October 2025ನೆಗೆಟಿವ್ ಟಾಕ್ ಬಂದರೂ ರಾಜಮೌಳಿ ಹಿಂಜರಿಯಲಿಲ್ಲ - ಬಾಹುಬಲಿ ಅನುಭವ ಹಂಚಿಕೊಂಡ ರಮ್ಯಾ ಕೃಷ್ಣನ್
ಬಾಹುಬಲಿ 1 ಚಿತ್ರಕ್ಕೆ ಮೊದಲ ದಿನ ಬಂದ ನೆಗೆಟಿವ್ ಟಾಕ್ ಬಗ್ಗೆ ರಮ್ಯಾ ಕೃಷ್ಣ ಮಾತನಾಡಿದ್ದಾರೆ. ಆ ದಿನ ಶೋಭು ಮತ್ತು ರಾಜಮೌಳಿ ಎಷ್ಟು ಸ್ಟ್ರಾಂಗ್ ಆಗಿ ನಿಂತಿದ್ದರು ಎಂಬುದನ್ನು ರಮ್ಯಾ ಕೃಷ್ಣನ್ ವಿವರಿಸಿದ್ದಾರೆ.
Karnataka Latest News Live 28 October 2025ಚಂಡಮಾರುತದಿಂದ ಕರ್ನಾಟಕದಲ್ಲಿ ಮುಂದಿನ 2 ದಿನ ಭಾರಿ ಮಳೆ, ನಾಲ್ಕು ಜಿಲ್ಲೆಗೆ ಯೆಲ್ಲೋ ಅಲರ್ಟ್
ಚಂಡಮಾರುತದಿಂದ ಕರ್ನಾಟಕದಲ್ಲಿ ಮುಂದಿನ 2 ದಿನ ಭಾರಿ ಮಳೆ, ನಾಲ್ಕು ಜಿಲ್ಲೆಗೆ ಯೆಲ್ಲೋ ಅಲರ್ಟ್, ಕರ್ನಾಟಕದ ಕರಾವಳಿ ಜಿಲ್ಲೆ ಸೇರಿದಂತೆ ಉತ್ತರದ ದಿಲ್ಲೆಗಳಲ್ಲಿ ಭಾರಿ ಮಳೆ ಸೂಚನೆ ನೀಡಲಾಗಿದೆ.