ಚಂದನವನದ(Sandalwood) ಖ್ಯಾತ ನಟ ಪುನೀತ್ ರಾಜಕುಮಾರ್(Puneeth Rajkumar) ಅಸುನೀಗಿದ ಬಳಿಕ ರಾಜ್ಯದ(Karnataka) ವಿವಿಧೆಡೆ ಹೆಚ್ಚಿನ ಸಂಖ್ಯೆಯ ಜನತೆ ಹೃದ್ರೋಗ ತಜ್ಞರನ್ನು ಭೇಟಿಯಾಗಿ ತಪಾಸಣೆ ಮಾಡಿಸಿಕೊಳ್ಳುತ್ತಿದ್ದಾರೆ. ಆದರೆ, ಅಪ್ಪು ಸಾವು ಈಗ ಬಾಲಕ-ಬಾಲಕಿಯರ ಹೃದಯಗಳಿಗೂ ಘಾಸಿ ತಂದಿದೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ.
Karnataka Districts Nov 10, 2021, 10:58 AM IST
ಪುನೀತ್ ಸಾವಿನಿಂದ ಶೋಕದಲ್ಲಿಯೇ ನಕ್ಕೀರನ್ ಗೋಪಾಲನ್(Nakkheeran Gopal) ಅವರು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಪು ಕುರಿತು, ರಾಜ್ ಕುರಿತು ಮಾತನಾಡಿದ್ದಾರೆ. ಪುನೀತ್ ಅವರ ಆದರ್ಶಗಳು, ರಾಜ್ ಅವರು ಮಗನ ಕುರಿತು ಹೇಳುತ್ತಿದ್ದ ಮಾತುಗಳನ್ನು ತಮಿಳು ಜನರ ಮುಂದೆ ಬಿಚ್ಚಿಟ್ಟಿದ್ದಾರೆ. ಅದೇನು ? ನಕ್ಕೀರನ್ ಬಿಚ್ಚಿಟ್ಟ ಸತ್ಯಗಳೇನು ?
Sandalwood Nov 9, 2021, 11:39 AM IST
ಪುನೀತ್ ರಾಜ್ಕುಮಾರ್ ಅಗಲಿಕೆ ನೋವಿನಿಂದ ದಕ್ಷಿಣ ಭಾರತವೇ ಚಡಪಡಿಸುತ್ತಿದೆ. ಪ್ರತಿ ದಿನ ಇತರ ರಾಜ್ಯಗಳ ಸೆಲೆಬ್ರೆಟಿಗಳು ಆಗಮಿಸಿ ಸಮಾಧಿ ದರ್ಶನ ಪಡೆಯುತ್ತಿದ್ದಾರೆ. ಇಂದು ಪುಣ್ಯತಿಥಿ ಕಾರ್ಯವನ್ನು ಕುಟುಂಬವನ್ನು ನೆರವೇರಿಸಿದೆ. ಇದೇ ವೇಳೆ ಪುನೀತ್ಗೆ ಪದ್ಮಶ್ರೀ ಪ್ರಶಸ್ತಿ ಒತ್ತಾಯಕ್ಕೆ ಶಿವರಾಜ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಅಪ್ಪು ಅಮರಶ್ರಿ ಎಂದಿದ್ದಾರೆ. ಇದೇ ವೇಳೆ ಅಭಿಮಾನಿಗಳು ದುಡುಕಿನ ನಿರ್ಧಾರ ತೆಗೆದುಕೊಳ್ಳಬಾರದು ಎಂದರು.
India Nov 9, 2021, 12:16 AM IST
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಿಧನರಾಗಿ 11 ದಿನಗಳು ಕಳೆದಿದೆ. ಅಪ್ಪು ಅಭಿಮಾನಿಗಳು ದಿನದಿನವೂ ತಮ್ಮ ವಿಭಿನ್ನ ರೀತಿಯ ಅಭಿಮಾನವನ್ನು ಮೆರೆಯುತ್ತಲೇ ಇರುತ್ತಾರೆ. ಕೆಲವರು ಮೈ ಮೇಲೆ ಅಪ್ಪುವಿನ ಹಚ್ಚೆ ಹಾಕಿಸಿಕೊಂಡರೆ ಇದೀಗ ಉಡುಪಿಯ ಕಲಾವಿದ ಮಹೇಶ್ ಮರ್ಣೆ ಅಶ್ವತ್ಥದ ಎಲೆಯಲ್ಲಿ ಅಪ್ಪುವಿನ ಅಪೂರ್ವ ಕಲಾಕೃತಿಯನ್ನು ರಚಿಸಿದ್ದಾರೆ.
ಅಶ್ವತ್ಥದ ಎಲೆಯಲ್ಲಿ ಅಪ್ಪುವನ್ನು ರಚಿಸಿದ್ದು ಆಗಸದ ಬೆಳಕಿಗೆ ಹಿಡಿದರೆ ಸುಂದರವಾದ ಅಪ್ಪುವಿನ ನಗುಮುಖ ಕಾಣಿಸುತ್ತದೆ. ಪುನೀತ್ ನಗು ಮುಖದ ಸಹಜತೆಯನ್ನು ಮೂಡಿಸಿದ್ದಾರೆ. ಅಪ್ಪುವಿನ ಅಶ್ವತ್ಥದ ಎಲೆಯ ಕಲಾಕೃತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಹಿಂದೆ ಹಲವು ಕಲಾಕೃತಿಗಳನ್ನು ಅಶ್ವತ್ಥದ ಎಲೆಯಲ್ಲಿ ಬಿಡಿಸಿದ್ದ ಮಹೇಶ್ ಇದೀಗ ಅಪ್ಪುವನ್ನು ಅರಳಿಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ, ಡಾ. ರಾಜ್ಕುಮಾರ್, ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವರನ್ನು ಅಶ್ವತ್ಥದ ಎಲೆಯಲ್ಲಿ ಅರಳಿಸಿದ್ದರು ಮಹೇಶ್.
Karnataka Districts Nov 8, 2021, 9:20 AM IST
* ಅಪ್ಪು ನಿಧನದ ಬಳಿಕ ಮೊದಲ ಹೇಳಿಕೆ ಕೊಟ್ಟ ಪತ್ನಿ ಅಶ್ವಿನಿ
* ಪತ್ರದ ಮೂಲಕ ಹೇಳಿಕೆ ನೀಡಿದ ಪುನೀತ್ ರಾಜ್ಕುಮಾರ್ ಪತ್ನಿ
* ತಮ್ಮ ಮೊದಲ ಪ್ರತಿಕ್ರಿಯೆಯಲ್ಲಿ ದೊಡ್ಡತನ ಮೆರೆದ ದೊಡ್ಮನೆ ಸೊಸೆ
state Nov 7, 2021, 11:24 PM IST
India Nov 7, 2021, 10:28 PM IST
ಅಪ್ಪು ನಿಧನದ ಶಾಕ್ನಿಂದ ನಾನು ಹೊರಗೇ ಬಂದಿಲ್ಲ. ಅವರ ಆಶೀರ್ವಾದ ಯಾವತ್ತೂ ನಮ್ಮ ಮೇಲೆ ಇದೆ. ನನ್ನ ಸಿನಿಮಾಗೆ ಪುನೀತ್ ಸರ್ ಹಾಡಬೇಕಿತ್ತು. ಲಾಸ್ಟ್ ಟೈಮ್ ಅದರ ಬಗ್ಗೆ ಮಾತನಾಡಬೇಕಿತ್ತು, ಆದರೆ ಆಗಲಿಲ್ಲ.
Sandalwood Nov 7, 2021, 1:36 PM IST
*ಭಾರತೀಯ ಕ್ರಿಕೆಟ್ಗೆ ಸಾಕಷ್ಟು ಪ್ರತಿಭೆಗಳನ್ನು ಕೊಡುಗೆಯಾಗಿ ನೀಡಿದ್ದ ದಿಗ್ಗಜ
*ತಾರಕ್ ಸಿನ್ಹಾ ಬಳಿ ತರಬೇತಿ ಪಡೆದಿದ್ದ ಶ್ರೇಷ್ಟ ಕ್ರಿಕೆಟಿಗರು
*ಕ್ರಿಕೆಟಿಗರಿಗೆ ಶಿಕ್ಷಣ ಕಡೆಯೂ ಗಮನ ಕೊಡುವಂತೆ ಆಗ್ರಹಸಿದ್ದ ಕೋಚ್
Cricket Nov 7, 2021, 8:35 AM IST
ಇಷ್ಟು ಚಿಕ್ಕವಯಸ್ಸಿನಲ್ಲಿ ಅಪ್ಪು ನಿಧನರಾಗಿರುವುದು ತೀವ್ರ ನೋವಿನ ಸಂಗತಿ. ಅವನನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಅವನ ನಿಧನದಿಂದ ದೊಡ್ಡ ನಷ್ಟ ಆಗಿದೆ. ಅವನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಜಯಪ್ರದಾ ಭಾವುಕರಾದರು.
Sandalwood Nov 6, 2021, 8:57 PM IST
International Nov 6, 2021, 6:09 PM IST
ಪುನೀತ್ ರಾಜಕ್ಕುಮಾರ್(Puneeth Rajkumar) ನಿಧನಕ್ಕೆ ನೊಂದು ಹೋರಿ ಬೆದರಿಸುವ ಹಬ್ಬವನ್ನೇ ಗ್ರಾಮಸ್ಥರು ಸ್ಥಗಿತ ಮಾಡಿದ ಘಟನೆ ಹಾವೇರಿ ತಾಲೂಕು ಕುಳೇನೂರು ಗ್ರಾಮದಲ್ಲಿ ಇಂದು(ಶನಿವಾರ) ನಡೆದಿದೆ.
Karnataka Districts Nov 6, 2021, 2:58 PM IST
* ಕರಾವಳಿಯ ಪ್ರಸಿದ್ಧ ಐಡಿಯಲ್ ಐಸ್ ಕ್ರೀಂ ಸಂಸ್ಥಾಪಕ ಪ್ರಭಾಕರ ಕಾಮತ್(79) ನಿಧನ
* ಕೆಲ ದಿನಗಳ ಹಿಂದೆ ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು
* ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಕಾಮತ್ ನಿಧನ
BUSINESS Nov 6, 2021, 10:43 AM IST
ಸ್ಯಾಂಡಲ್ವುಡ್ನ(Sandalwood) ಪವರ್ಸ್ಟಾರ್(Powerstar) ಪುನೀತ್ ರಾಜ್ಕುಮಾರ್ಗೆ ಕರ್ನಾಟಕ ಚಿತ್ರ ಪ್ರದರ್ಶಕರ ಸಂಘ(Karnataka Film Exhibitors Association) ನ.06ರಂದು (ಭಾನುವಾರ) ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ. ಹೌದು, ಭಾನುವಾರ ಸಂಜೆ 6 ಗಂಟೆಗೆ ರಾಜ್ಯದ ಎಲ್ಲಾ ಚಿತ್ರಮಂದಿರಗಳ ಮುಂದೆ ದೀಪ ಬೆಳಗಿಸುವ ಮೂಲಕ ಅಗಲಿದ ಪುನೀತ್ಗೆ ಶ್ರದ್ಧಾಂಜಲಿ ಅರ್ಪಿಸಲಿದ್ದಾರೆ.
Sandalwood Nov 6, 2021, 10:12 AM IST
ಪವರ್ ಸ್ಟಾರ್(Power Star) ಪುನೀತ್ ರಾಜ್ಕುಮಾರ್ ಅವರ ಅಕಾಲಿಕ ಸಾವು ಸಂಭವಿಸಲು ವೈದ್ಯ ಡಾ.ರಮಣರಾವ್ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ ಬೆಂಗಳೂರಿನಲ್ಲಿ(Bengaluru) ದೂರೊಂದು ದಾಖಲಾಗಿದೆ. ಏತನ್ಮಧ್ಯೆ ಶಿವರಾಜ್ಕುಮಾರ್ ಅವರ ಅಭಿಮಾನಿಗಳು ಕೂಡ ಪುನೀತ್ ಸಾವಿನ ಬಗ್ಗೆ ಡಾ.ರಮಣರಾವ್(Dr Ramana Rao) ಸುದ್ದಿಗೋಷ್ಟಿ ನಡೆಸಿ ಎಲ್ಲ ಗೊಂದಲಗಳನ್ನ ನಿವಾರಿಸಬೇಕು ಅಂತ ಸಾಮಾಜಿಕ ಜಾಲತಾಣದಲ್ಲಿ(Social Media) ಒತ್ತಾಯಿಸಿದ್ದಾರೆ.
Sandalwood Nov 6, 2021, 8:48 AM IST
ಕಳೆದ ಎರಡು ಮೂರು ವರ್ಷಗಳಲ್ಲಿ ಚಿತ್ರರಂಗದ ಅನೇಕ ಗಣ್ಯರು ನಮ್ಮನ್ನು ಅಗಲಿದ್ದಾರೆ. ಚಿಕ್ಕ ವಯಸ್ಸಿಗೆ ಈ ನಟರ ಅಗಲಿಕೆ ಕುಟುಂಬಸ್ಥರು ಹಾಗೂ ಅಭಿಮಾನಿಗಳನ್ನು ಅನಾಥರಾಗಿಸಿದೆ. ಈ ನೋವಿನಿಂದಲೂ ಹೊರ ಬರಲಾದೇ ಕನ್ನಡಿಗರು ಇರುವಾಗ, ಒಂದಾದ ಮೇಲೆ ಮತ್ತೊಂದು ಹೊಡೆತ ಬೀಳುತ್ತಲೇ ಇದೆ..
Sandalwood Nov 4, 2021, 2:07 PM IST