ಬಾದಾಮಿಯಲ್ಲಿ ಸಿಎಂಗೆ ಸಡ್ಡು ಹೊಡೆಯುವ ಬಿಜೆಪಿ ಅಭ್ಯರ್ಥಿ ಯಾರು?
ಬಾದಾಮಿಯಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಅಭ್ಯರ್ಥಿ ಯಾರು? ಎಂಬುದು ಕುತೂಹಲದ ಪ್ರಶ್ನೆಯಾಗಿದೆ.
ಬೆಂಗಳೂರು (ಏ. 13): ಬಾದಾಮಿಯಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಅಭ್ಯರ್ಥಿ ಯಾರು? ಎಂಬುದು ಕುತೂಹಲದ ಪ್ರಶ್ನೆಯಾಗಿದೆ.
ಸಿಎಂಗೆ ‘ಬಾದಾಮಿ’ ಸಿಗಬಾರದು. ಬಿಜೆಪಿಗೆ ಸಿಗಬೇಕು. ಈ ಬಾರಿ ಶತಾಯುಗತಾಯ ಬಿಜೆಪಿ ಗೆಲ್ಲಲೇಬೇಕು. ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡಿ, ಬಂಡಾಯ ಇರಬಾರದು ಎಂದು ಹುಬ್ಬಳ್ಳಿಯಲ್ಲಿ ಅಮಿತ್ ಷಾ ನೇತೃತ್ವದ ಸಭೆಯಲ್ಲಿ ಗಂಭೀರ ಚರ್ಚೆ ನಡೆದಿದೆ.
ಕಳೆದ ಬಾರಿ ಜೆಡಿಎಸ್ನಿಂದ ಸ್ಪರ್ಧೆ ಮಾಡಿದ್ದವರು ಈ ಬಾರಿ ಬಿಜೆಪಿ ಅಭ್ಯರ್ಥಿ ಎನ್ನಲಾಗುತ್ತಿದೆ. ಮಹಾಂತೇಶ್ ಗುರುಪಾದಪ್ಪ ಮಮಾದಪುರಗೆ ಬಾದಾಮಿ ಬಿಜೆಪಿ ಟಿಕೆಟ್ ? ಎನ್ನಲಾಗುತ್ತಿದೆ. ದೆಹಲಿಯಲ್ಲಿ 15ರಂದು ನಡೆಯುವ ಸಿಐಸಿ ಸಭೆಯಲ್ಲಿ ಅಂತಿಮವಾಗಲಿದೆ.
ಕಳೆದ ಬಾರಿ ಬಿಜೆಪಿ ಅಭ್ಯರ್ಥಿಯಾಗಿದ್ದ ಎಂ.ಕೆ.ಪಟ್ಟಣಶೆಟ್ಟಿಗೆ ಈ ಬಾರಿ ಟಿಕೆಟ್ ಇಲ್ಲ. ಮಮಾದಪುರ, ಎಂ.ಕೆ.ಪಟ್ಟಣಶೆಟ್ಟಿ ಇಬ್ಬರು ಸಂಬಂಧಿಗಳು. ಅಂತಿಮವಾಗಿ ಮಾವನನ್ನ ಮನವೊಲಿಸುವ ಕಾರ್ಯ ಅಳಿಯನಿಗೆ ವಹಿಸಿದೆ ಬಿಜೆಪಿ.
ಬಾದಾಮಿ ಮತ ಸಮೀಕರಣ :-
ಒಟ್ಟು ಮತದಾರರು 2.14 ಲಕ್ಷ
ಲಿಂಗಾಯತ (ಪಂಚಮಸಾಲಿ)- 32 ಸಾವಿರ
ಗಾಣಿಗ - 26 ಸಾವಿರ
ನೇಕಾರ - 16 ಸಾವಿರ
ರೆಡ್ಡಿ - 10 ಸಾವಿರ
ಕುರುಬ - 47 ಸಾವಿರ
ಎಸ್ ಸಿ - 25 ಸಾವಿರ
ಮುಸ್ಲಿಂ - 10 ಸಾವಿರ
ವಾಲ್ಮೀಕಿ - 13 ಸಾವಿರ
ಲಂಬಾಣಿ - 7 ಸಾವಿರ
ಇತರೆ - 15 ಸಾವಿರ