Asianet Suvarna News Asianet Suvarna News

ಬಾದಾಮಿಯಲ್ಲಿ ಸಿಎಂಗೆ ಸಡ್ಡು ಹೊಡೆಯುವ ಬಿಜೆಪಿ ಅಭ್ಯರ್ಥಿ ಯಾರು?

ಬಾದಾಮಿಯಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಅಭ್ಯರ್ಥಿ ಯಾರು? ಎಂಬುದು ಕುತೂಹಲದ ಪ್ರಶ್ನೆಯಾಗಿದೆ. 

Who is BJP Candidate against CM Siddaramaiah

ಬೆಂಗಳೂರು (ಏ. 13):  ಬಾದಾಮಿಯಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಅಭ್ಯರ್ಥಿ ಯಾರು? ಎಂಬುದು ಕುತೂಹಲದ ಪ್ರಶ್ನೆಯಾಗಿದೆ. 

ಸಿಎಂಗೆ ‘ಬಾದಾಮಿ’ ಸಿಗಬಾರದು.  ಬಿಜೆಪಿಗೆ ಸಿಗಬೇಕು.  ಈ ಬಾರಿ ಶತಾಯುಗತಾಯ ಬಿಜೆಪಿ ಗೆಲ್ಲಲೇಬೇಕು.  ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡಿ, ಬಂಡಾಯ ಇರಬಾರದು ಎಂದು  ಹುಬ್ಬಳ್ಳಿಯಲ್ಲಿ ಅಮಿತ್ ಷಾ ನೇತೃತ್ವದ ಸಭೆಯಲ್ಲಿ   ಗಂಭೀರ ಚರ್ಚೆ ನಡೆದಿದೆ. 

ಕಳೆದ ಬಾರಿ ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದ್ದವರು ಈ ಬಾರಿ ಬಿಜೆಪಿ ಅಭ್ಯರ್ಥಿ ಎನ್ನಲಾಗುತ್ತಿದೆ.  ಮಹಾಂತೇಶ್ ಗುರುಪಾದಪ್ಪ ಮಮಾದಪುರಗೆ ಬಾದಾಮಿ ಬಿಜೆಪಿ ಟಿಕೆಟ್ ? ಎನ್ನಲಾಗುತ್ತಿದೆ.  ದೆಹಲಿಯಲ್ಲಿ 15ರಂದು ನಡೆಯುವ ಸಿಐಸಿ ಸಭೆಯಲ್ಲಿ ಅಂತಿಮವಾಗಲಿದೆ. 

ಕಳೆದ ಬಾರಿ ಬಿಜೆಪಿ ಅಭ್ಯರ್ಥಿಯಾಗಿದ್ದ ಎಂ.ಕೆ.ಪಟ್ಟಣಶೆಟ್ಟಿಗೆ ಈ ಬಾರಿ ಟಿಕೆಟ್ ಇಲ್ಲ.  ಮಮಾದಪುರ, ಎಂ.ಕೆ.ಪಟ್ಟಣಶೆಟ್ಟಿ ಇಬ್ಬರು ಸಂಬಂಧಿಗಳು.   ಅಂತಿಮವಾಗಿ ಮಾವನನ್ನ ಮನವೊಲಿಸುವ ಕಾರ್ಯ ಅಳಿಯನಿಗೆ ವಹಿಸಿದೆ ಬಿಜೆಪಿ. 

ಬಾದಾಮಿ ಮತ ಸಮೀಕರಣ :-

ಒಟ್ಟು ಮತದಾರರು 2.14 ಲಕ್ಷ

ಲಿಂಗಾಯತ (ಪಂಚಮಸಾಲಿ)-  32 ಸಾವಿರ
ಗಾಣಿಗ - 26 ಸಾವಿರ
ನೇಕಾರ - 16 ಸಾವಿರ 
ರೆಡ್ಡಿ - 10 ಸಾವಿರ
ಕುರುಬ - 47 ಸಾವಿರ 
ಎಸ್ ಸಿ - 25 ಸಾವಿರ
ಮುಸ್ಲಿಂ - 10 ಸಾವಿರ
ವಾಲ್ಮೀಕಿ - 13 ಸಾವಿರ
ಲಂಬಾಣಿ - 7 ಸಾವಿರ
ಇತರೆ - 15 ಸಾವಿರ 
 

Follow Us:
Download App:
  • android
  • ios