ವಿಜಯಪುರ ಜಿಲ್ಲೆಯಲ್ಲಿ ಸಾಮೂಹಿಕ ಅತ್ಯಾಚಾರ: ಅಪ್ರಾಪ್ತೆ ಮೇಲೆರಗಿದ ಐವರು ಕಾಮುಕರು
ವಿಜಯಪುರ(ಸೆ.24): ವಿಜಯಪುರ ಜಿಲ್ಲೆಯಲ್ಲಿ ಅಪ್ರಾಪ್ತೆ ಮೇಲೆ ಸಾಮೂಹಿತ ಅತ್ಯಾಚಾರ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ. ಅಲಿಯಾಬಾದ್ ತಾಂಡಾದ ಅಪ್ರಾಪ್ತೆಯನ್ನು ಐವರು ದುರುಳರು ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆಂದು ಬಾಲಕಿಯ ಪೋಷಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಕಳೆದ ಬುಧವಾರ ತಮ್ಮ ಮಗಳನ್ನು ತಾಂಡಾದ ನಿವಾಸಿಗಳಾದ ಚಿಂತಾಮಣಿ, ಸುನೀಲ್, ರವಿ ಚವರ್ಯಾ ಹಾಗೂ ಅಮಿತ್ ಈ ಐವರು ನನ್ನ ಮಗಳನ್ನು ಅಪಹರಿಸಿ ಲಾಡ್ಜ್'ನಲ್ಲಿರಿಸಿ ಅಲ್ಲಿಯೇ ಒಂದು ವಾರಗಳಿಂದ ನಿರಂತರವಾಗಿ ಅತ್ಯಾಚಾರ ಮಾಡಿದ್ದಾರೆಂದು ಬಾಲಕಿಯ ಪೋಷಕರು ಆರೋಪಿಸುತ್ತಿದ್ದಾರೆ. ಇನ್ನು ಗ್ರಾಮೀಣ ಠಾಣೆ ಸಿಪಿಐ ಚೌದರಿಯರು ಕಳೆದ ರಾತ್ರಿಯಿಂದಲೂ ಪ್ರಕರಣ ದಾಖಲಿಸಿಕೊಳ್ಳದೇ ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಪೋಷಕರು ದೂರಿದ್ದಾರೆ.
ಅತ್ಯಾಚಾರ ಮಾಡಿದವರಲ್ಲಿ ಗ್ರಾಮ ಪಂಚಾಯತ್ ಸದಸ್ಯರ ಮಕ್ಕಳು, ತಾಂಡಾದ ಮುಖಂಡರ ಮಕ್ಕಳು ಆಗಿದ್ದರಿಂದ ಪೊಲೀಸರು ಪ್ರಕರಣವನ್ನು ಮುಚ್ಚಿ ಹಾಕುವ ಷಡ್ಯಂತ್ರ ನಡೆಸುತ್ತಿದ್ದಾರೆಂದು ಬಾಲಕಿಯ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಇತ್ತ ಪೊಲೀಸರು ಪಾದರ್ಶಕ ತನಿಖೆ ನಡೆಸುತ್ತಿಲ್ಲವೆಂದು ಆರೋಪಿಸಿ ಠಾಣೆ ಎದುರು ಕುಳಿತು ನ್ಯಾಯಕ್ಕೆ ಆಗ್ರಹಿಸಿ ಧರಣಿ ನಡೆಸುತ್ತಿದ್ದಾರೆ.
ಈ ಬಗ್ಗೆ ಎಸ್ಪಿ ಸಿದ್ದರಾಮಪ್ಪ ಅವರನ್ನು ಕೇಳಿದರೆ ಈಗಷ್ಟೇ ಮಾಹಿತಿ ಬಂದಿದೆ. ವಿಚಾರಣೆ ನಡೆಸುತ್ತೆವೆಂದಿದ್ದಾರೆ. ಆದ್ರೆ, ಯಾವಾಗ ಠಾಣೆಗೆಮಾಧ್ಯಮದವ್ರು ಹೋಗುತ್ತಿದ್ದಂತೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ವಶಕ್ಕೆ ಪಡೆದು ಪೊಲೀಸ್ರು ಕಾಟಾಚಾರಕ್ಕೆ ವಿಚಾರಣೆ ನಡೆಸುತ್ತಿದ್ದಾರೆ. ಮಹಿಳಾ ಸಾಂತ್ವಾನ ಕೇಂದ್ರದ ಪ್ರತಿನಿಧಿ ಸುನಂದಾ ತೋಳಬಂಧಿ ಕೂಡ ಠಾಣೆಯಲ್ಲಿ ಮುಕ್ಕಾಂ ಹೂಡಿದ್ದಾರೆ.