Asianet Suvarna News Asianet Suvarna News

ಬಿಜೆಪಿಯಲ್ಲಿ ಮತ್ತೆ ಶುರುವಾಯ್ತಾ ಬ್ರಿಗೇಡ್ ತಳಮಳ?

ಸಂಗೋಳ್ಳಿ ರಾಯಣ್ಣ ಬ್ರಿಗೇಡ್ ಸಭೆ ವಿಚಾರ

ಬಿಜೆಪಿಯಲ್ಲಿ ಮತ್ತೆ ಶುರುವಾಯ್ತು ತಳಮಳ

ಜೂ.25 ರ ಸಭೆಯಲ್ಲಿ ಈಶ್ವರಪ್ಪ ಭಾಗಿ?

ಸಭೆಯಲ್ಲಿ ಭಾಗವಹಿಸುತ್ತಿಲ್ಲ ಎಂದ ಈಶ್ವರಪ್ಪ

ಮದುವೆ ಸಮಾರಂಭಕ್ಕೆ ಇಳಕಲ್ ಹೋಗುತ್ತಿರುವುದಾಗಿ ಸ್ಪಷ್ಟನೆ

ಶಿವಮೊಗ್ಗ(ಜೂ.23): ಸಂಗೋಳ್ಳಿ ರಾಯಣ್ಣ ಬ್ರಿಗೇಡ್ ಕುರಿತು ಮತ್ತೆ ಬಿಜೆಪಿಯಲ್ಲಿ ತಳಮಳ ಶುರುವಾಗಿದೆ. ಬಾಗಲಕೋಟೆಯಲ್ಲಿ ಇದೇ ಜೂ.೨೫ ರಂದು ಬ್ರಿಗೇಡ್ ಸಭೆ ನಡೆಯುತ್ತಿದ್ದು, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಆ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂಬ ಗುಸುಗುಸು ಕೇಳಿ ಬರುತ್ತಿದೆ.

ಆದರೆ ಈ ಕುರಿತು ಸ್ಪಷ್ಟನೆ ನೀಡಿರುವ ಈಶ್ವರಪ್ಪ, ತಾವು ಯಾವುದೇ ಸಭೆಯಲ್ಲಿ ಭಾಗವಹಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜೂ.25ರಂದು ಇಳಕಲ್ ನಲ್ಲಿ ಮಾಜಿ ಬ್ರಿಗೇಡ್ ಅಧ್ಯಕ್ಷರ ಮಗನ ಮದುವೆಗೆ ತಾವು ಹೊಗುತ್ತಿರುವುದಾಗಿ ಅವರು ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..

Video Top Stories