ಗೋಣಿಕೊಪ್ಪ ಪ್ರೌಢಶಾಲೆ ವಿದ್ಯಾರ್ಥಿನಿ ಕಾವ್ಯ ಸೊಂಟಕ್ಕೆ ಪೆಟ್ಟಾಗಿದ್ದರೆ, ಮಹದೇವ ಕೈಗೆ ಗಾಯಗಳಾಗಿವೆ.

ವಿರಾಜಪೇಟೆ (ಫೆ.16): ಶಾಲೆಗೆ ತೆರಳುತ್ತಿದ್ದ ಅಣ್ಣ, ತಂಗಿ ಮೇಲೆ ಕಾಡಾನೆ ದಾಳಿ ನಡೆಸಿರುವ ಘಟನೆ ವಿರಾಜಪೇಟೆ ತಾಲೂಕಿನ ಪಡಿಕಲ್ ಬಳಿ ನಡೆದಿದೆ.

ಅಣ್ಣ ಮಹದೇವ್​ ಹಾಗೂ ತಂಗಿ ಕಾವ್ಯಾ ಬೈಕ್'ನಲ್ಲಿ ಶಾಲೆಗೆ ತೆರಳುತ್ತಿದ್ದಾಗ ಕಾಡಾನೆ ದಾಳಿ ನಡೆಸಿದೆ.

ಗೋಣಿಕೊಪ್ಪ ಪ್ರೌಢಶಾಲೆ ವಿದ್ಯಾರ್ಥಿನಿ ಕಾವ್ಯ ಸೊಂಟಕ್ಕೆ ಪೆಟ್ಟಾಗಿದ್ದರೆ, ಮಹದೇವ ಕೈಗೆ ಗಾಯಗಳಾಗಿವೆ.

ಅವರಿಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದು, ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.

(ಸಾಂದರ್ಭಿಕ ಚಿತ್ರ)