Asianet Suvarna News Asianet Suvarna News

JDS ಮುಖಂಡ ಹತ್ಯೆ: ಶೂಟೌಟ್ ಹೇಳಿಕೆಗೆ ಸಿಎಂ ಸ್ಪಷ್ಟೀಕರಣ

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ  ಜೆಡಿಎಸ್​ ಕಾರ್ಯಕರ್ತ ಪ್ರಕಾಶ್ ಕೊಲೆ ಆರೋಪಗಳನ್ನು ಶೂಟೌಟ್​ ಮಾಡಿ ಎಂಬ ತಮ್ಮ ಹೇಳಿಕೆಗೆ  ಸಿಎಂ ಕುಮಾರಸ್ವಾಮಿ ಸ್ಪಷ್ಟನೆ  ನೀಡಿದ್ದಾರೆ.

CM Kumaraswamy gives clarification About orders  to shootout who killed JDS worker
Author
Bengaluru, First Published Dec 24, 2018, 9:18 PM IST

ಬೆಂಗಳೂರು, [ಡಿ. 24]:  ಮದ್ದೂರು ತಾಲೂಕಿನ ಜೆಡಿಎಸ್ ಕಾರ್ಯಕರ್ತ ಹತ್ಯೆ ಆರೋಪಿಗಳನ್ನು ಶೂಟೌಟ್ ಮಾಡಿ ಎನ್ನುವ ಕುಮಾರಸ್ವಾಮಿ ಅವರ ಪದ ಬಳಕೆಗೆ ಮುಖ್ಯಮಂತ್ರಿಗಳ ಕಚೇರಿಯಿಂದ ಮಾಧ್ಯಮಗಳಿಗೆ ಸ್ಪಷ್ಟೀಕರಣ ಬಿಡುಗಡೆಯಾಗಿದೆ.

​ಮದ್ದೂರಿನಲ್ಲಿ ಇಂದು ಹಾಡುಹಗಲೇ ನಡೆದಿರುವ ಕೊಲೆ ನನಗೆ ತೀವ್ರ ಆಘಾತವಾಗಿದೆ. ಕೊಲೆಯಾದ ಪ್ರಕಾಶ್ ಅವರು ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದರು. 

ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಲು ಕಾನೂನು ಪ್ರಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದೇನೆ .

ಮಂಡ್ಯ JDS​ ಮುಖಂಡನ ಹತ್ಯೆ; ಆರೋಪಿಗಳನ್ನು ಶೂಟೌಟ್​ ಮಾಡಿ ಎಂದ ಸಿಎಂ

 ಈ ಪ್ರಕರಣ ಕುರಿತು ಮಾಹಿತಿ ಪಡೆಯುವ ಸಂದರ್ಭದಲ್ಲಿ ಬಳಸಿದ ಪದ ಭಾವನಾತ್ಮಕ ಪ್ರತಿಕ್ರಿಯೆಯೇ ಹೊರತು, ಆದೇಶವಲ್ಲ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಸ್ಪಷ್ಟ ಪಡಿಸಿದರು. 

ಅದು ನಾನು ಸಿಎಂ ಆಗಿ ಆಡಿದ ಮಾತಲ್ಲ. ಭಾವೋದ್ವೇಗದಲ್ಲಿ ನಾನು ಹಾಗೆ ಹೇಳಿದ್ದೇನೆ.  ನಾಳೆ [ಮಂಗಳವಾರ] ಮದ್ದೂರಿಗೆ ತೆರಳುತ್ತಿದ್ದೇನೆ ಎಂದರು.

Follow Us:
Download App:
  • android
  • ios