Asianet Suvarna News Asianet Suvarna News

ವಿಜಯಪುರ: ಸೀಲ್‌ ಇರುವ ಬಂಗಾ​ಳದ 14 ಜನ ಪ್ರತ್ಯಕ್ಷ, ಆತಂಕದಲ್ಲಿ ಜನತೆ

ಪಶ್ಚಿಮ ಬಂಗಾಳದಿಂದ ಮುಂಬೈ ಮಾರ್ಗವಾಗಿ ವಿಜಯಪುರಕ್ಕೆ ಬಂದಿ​ದ್ದ ಕಾರ್ಮಿಕರು| ವಿಜಯಪುರದ ಕೇಂದ್ರ ಬಸ್‌ ನಿಲ್ದಾಣದಲ್ಲಿ ಗುಂಪುಗೂಡಿ ನಿಂತಿದ್ದ ಕಾರ್ಮಿಕರು| 14 ಜನ ಕಾರ್ಮಿಕರನ್ನು ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾ​ಯಿತು|

People in anxiety for Quarantine People Came to Out Side in Vijayapura
Author
Bengaluru, First Published Jul 13, 2020, 10:36 AM IST

ವಿಜಯಪುರ(ಜು.13): ಸಂಡೇ ಲಾಕ್‌​ಡೌನ್‌ ಮಧ್ಯೆಯೇ ಕ್ವಾರಂಟೈನ್‌ ಸೀಲ್‌ ಹೊಂದಿರುವ ಪಶ್ಚಿಮ ಬಂಗಾಳದ 14 ಕಾರ್ಮಿಕರು ವಿಜಯಪುರ ನಗ​ರಕ್ಕೆ ಬಂದಿ​ದ್ದರಿಂದ ನಗರ ನಿವಾಸಿಗಳಿಗೆ ಆತಂಕ ಮೂಡಿಸಿದ ಘಟನೆ ನಡೆದಿದೆ. 

ಪಶ್ಚಿಮ ಬಂಗಾಳದಿಂದ ಮುಂಬೈ ಮಾರ್ಗವಾಗಿ ವಿಜಯಪುರಕ್ಕೆ ಬಂದಿ​ಳಿದ ಕಾರ್ಮಿಕರು ವಿಜಯಪುರದ ಕೇಂದ್ರ ಬಸ್‌ ನಿಲ್ದಾಣದಲ್ಲಿ ಗುಂಪುಗೂಡಿ ನಿಂತಿದ್ದರು. ಪೊಲೀಸರು ಸ್ಥಳಕ್ಕೆ ಧಾವಿಸಿ ವಿಚಾರಿಸಿ​ದಾಗ ವಿದ್ಯುತ್‌ ಕಾಮಗಾರಿಗಾಗಿ ಗುತ್ತಿಗೆದಾರರೊಬ್ಬರು ಇಲ್ಲಿಗೆ ಕರೆಸಿಕೊಂಡಿದ್ದಾರೆಂದು ತಿಳಿಸಿದ್ದಾರೆ. 

ಪಿಪಿಇ ಕಿಟ್ ಧರಿಸಿ ಓಡಾಡುತ್ತಿರುವ ಮಾನಸಿಕ ಅಸ್ವಸ್ಥ; ಸಾರ್ವಜನಿಕರಿಗೆ ಆತಂಕವೂ ಆತಂಕ..!

ನಂತರ ಗುತ್ತಿಗೆದಾರನನ್ನು ಪತ್ತೆ ಹಚ್ಚಿ ಅವರ ಉಸ್ತುವಾರಿಯಲ್ಲಿ 14 ಜನ ಕಾರ್ಮಿಕರನ್ನು ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾ​ಯಿತು. ಆರೋಗ್ಯ ಇಲಾಖೆ ಸಿಬ್ಬಂದಿ ಕಾರ್ಮಿಕರ ಆರೋಗ್ಯ ತಪಾಸಣೆ ನಡೆ​ಸಿ​ದರು.
 

Follow Us:
Download App:
  • android
  • ios