ಪಶ್ಚಿಮ ಬಂಗಾಳದಿಂದ ಮುಂಬೈ ಮಾರ್ಗವಾಗಿ ವಿಜಯಪುರಕ್ಕೆ ಬಂದಿದ್ದ ಕಾರ್ಮಿಕರು| ವಿಜಯಪುರದ ಕೇಂದ್ರ ಬಸ್ ನಿಲ್ದಾಣದಲ್ಲಿ ಗುಂಪುಗೂಡಿ ನಿಂತಿದ್ದ ಕಾರ್ಮಿಕರು| 14 ಜನ ಕಾರ್ಮಿಕರನ್ನು ಹೋಂ ಕ್ವಾರಂಟೈನ್ಗೆ ಒಳಪಡಿಸಲಾಯಿತು|
ವಿಜಯಪುರ(ಜು.13): ಸಂಡೇ ಲಾಕ್ಡೌನ್ ಮಧ್ಯೆಯೇ ಕ್ವಾರಂಟೈನ್ ಸೀಲ್ ಹೊಂದಿರುವ ಪಶ್ಚಿಮ ಬಂಗಾಳದ 14 ಕಾರ್ಮಿಕರು ವಿಜಯಪುರ ನಗರಕ್ಕೆ ಬಂದಿದ್ದರಿಂದ ನಗರ ನಿವಾಸಿಗಳಿಗೆ ಆತಂಕ ಮೂಡಿಸಿದ ಘಟನೆ ನಡೆದಿದೆ.
Add Asianetnews Kannada as a Preferred Source

ಪಶ್ಚಿಮ ಬಂಗಾಳದಿಂದ ಮುಂಬೈ ಮಾರ್ಗವಾಗಿ ವಿಜಯಪುರಕ್ಕೆ ಬಂದಿಳಿದ ಕಾರ್ಮಿಕರು ವಿಜಯಪುರದ ಕೇಂದ್ರ ಬಸ್ ನಿಲ್ದಾಣದಲ್ಲಿ ಗುಂಪುಗೂಡಿ ನಿಂತಿದ್ದರು. ಪೊಲೀಸರು ಸ್ಥಳಕ್ಕೆ ಧಾವಿಸಿ ವಿಚಾರಿಸಿದಾಗ ವಿದ್ಯುತ್ ಕಾಮಗಾರಿಗಾಗಿ ಗುತ್ತಿಗೆದಾರರೊಬ್ಬರು ಇಲ್ಲಿಗೆ ಕರೆಸಿಕೊಂಡಿದ್ದಾರೆಂದು ತಿಳಿಸಿದ್ದಾರೆ.
ಪಿಪಿಇ ಕಿಟ್ ಧರಿಸಿ ಓಡಾಡುತ್ತಿರುವ ಮಾನಸಿಕ ಅಸ್ವಸ್ಥ; ಸಾರ್ವಜನಿಕರಿಗೆ ಆತಂಕವೂ ಆತಂಕ..!
ನಂತರ ಗುತ್ತಿಗೆದಾರನನ್ನು ಪತ್ತೆ ಹಚ್ಚಿ ಅವರ ಉಸ್ತುವಾರಿಯಲ್ಲಿ 14 ಜನ ಕಾರ್ಮಿಕರನ್ನು ಹೋಂ ಕ್ವಾರಂಟೈನ್ಗೆ ಒಳಪಡಿಸಲಾಯಿತು. ಆರೋಗ್ಯ ಇಲಾಖೆ ಸಿಬ್ಬಂದಿ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಿದರು.
