Asianet Suvarna News Asianet Suvarna News

ಮುಳುಗಿದ್ದ ಮನೆಗಳಲ್ಲೀಗ ಹಾವುಗಳದ್ದೇ ಹಿಂಡು!

ಕರ್ನಾಟಕದ ಹಲವು ಜಿಲ್ಲೆಗಳು ಪ್ರವಾಹದಿಂದ ಸಂತ್ರಸ್ತರಾಗಿದ್ದು, ಇದೀಗ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಹಾವುಗಳ ಕಾಟ ಶುರುವಾಗಿದೆ. 

Karnataka floods Victims face snake menace
Author
Bengaluru, First Published Aug 18, 2019, 11:02 AM IST

ಅಥಣಿ [ಆ.18] :  ಕೃಷ್ಣಾ ತೀರದ ಗ್ರಾಮ​ಗ​ಳಲ್ಲಿ ಪ್ರವಾಹ ಇಳಿದ ಬಳಿಕ ಒಂದೊಂದೇ ಸಮಸ್ಯೆಗಳು ಉದ್ಭವಿಸುತ್ತಿವೆ. ನೆರೆ​ ಹಿನ್ನೆಲೆಯಲ್ಲಿ ಮನೆ, ಮಠಗಳನ್ನು ಬಿಟ್ಟು ಪರಿ​ಹಾರ ಕೇಂದ್ರದಲ್ಲಿ ಆಶ್ರ​ಯ​ ಪ​ಡೆ​ದಿದ್ದ ಕೃಷ್ಣಾ ​ತೀ​ರದ ಗ್ರಾಮ​ಸ್ಥರಿಗೆ ಈಗ ಹಾವು​ಗಳ ಕಾಟ ಶುರು​ವಾ​ಗಿದೆ.

ಜಲಾವೃತಗೊಂಡಿದ್ದ ಮನೆಗಳನ್ನೇ ಹಾವುಗಳು ತಮ್ಮ ಆವಾಸ ಸ್ಥಾನ ಮಾಡಿಕೊಂಡಿವೆ. ಪ್ರವಾಹ ತಗ್ಗಿದ ಬಳಿಕ ತಮ್ಮ ಮನೆಗಳತ್ತ ಮುಖ ಮಾಡಿದ ಮಂದಿ, ಮನೆಯಲ್ಲಿನ ದೃಶ್ಯಗಳನ್ನು ಕಂಡು ಹೌಹಾರಿದ್ದಾರೆ. ಬೆಳ​ಗಾವಿ ಜಿಲ್ಲೆಯ ಅಥಣಿ ತಾಲೂ​ಕಿನ ನಾಗ​ನೂರು, ಸತ್ತಿ, ಜನ​ವಾಡ ಗ್ರಾಮ​ಗಳ ಮಂದಿ ಪ್ರವಾಹ ಇಳಿಮುಖವಾಯಿತೆಂದು ನಿಟ್ಟುಸಿರು ಬಿಡುವ ಮುನ್ನವೇ, ಹಾವುಗಳ ಕಾಟ ಕಂಡು ಆತಂಕಕ್ಕೆ ಗುರಿಯಾಗಿದ್ದಾರೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನಾಗಪ್ಪನ ದರ್ಶ​ನ:  ಕೃಷ್ಣಾ ಪ್ರವಾ​ಹ​ದಿಂದ ಜಲಾ​ವೃ​ತ​ಗೊಂಡಿದ್ದ ನದಿ ತೀರದ ಗ್ರಾಮ​ಗಳ ಮನೆ​ಗ​ಳಲ್ಲಿ ಹಾವುಗಳದ್ದೇ ರಾಜ್ಯಭಾರವಾಗಿದೆ. ಮನೆಗಳ ಬಾಗಿಲು ತೆರೆಯುತ್ತಿದ್ದಂತೆ ನಾಗಪ್ಪ ದರ್ಶನ ಆಗುತ್ತಿದೆ. ನೆರೆ ಇಳಿಯಿತು ಮನೆ​ಯಲ್ಲಿ ವಾಸ​ ಮಾ​ಡ​ಬೇ​ಕೆಂಬ ಬಯಕೆಯೊಂದಿಗೆ ಬಂದ ನಿರಾ​ಶ್ರಿ​ತರು ತೀವ್ರ ಚಿಂತಾ​ಕ್ರಾಂತ​ರಾ​ಗು​ತ್ತಿ​ದ್ದಾರೆ. 

ಹಾವುಗಳನ್ನು ಕಂಡು ಮನೆಯೊಳಗೆ ಹೋಗಲು ಭಯ ಪಡುತ್ತಿ​ದ್ದಾರೆ. ಕೆಲವರು ಸಣ್ಣ-ಪುಟ್ಟಹಾವುಗಳನ್ನು ಹೊಡೆದು ಹಾಕುತ್ತಿ​ದ್ದರೆ, ದೊಡ್ಡ ಹಾವುಗಳು ತಾವಾಗಿಯೇ ಹೊರ ಹೋಗುವವರೆಗೆ ಕಾಯುತ್ತಿದ್ದಾರೆ. ಹಾವುಗಳು ಮನೆಯಲ್ಲಿ ಅವಿತುಕೊಂಡಿವೆ ಎಂಬ ಸುದ್ದಿ ತಿಳಿದ ಕೆಲ ಗ್ರಾಮಸ್ಥರಂತೂ ಮನೆಗಳತ್ತ ತಲೆ ಹಾಕು​ತ್ತಿಲ್ಲ. ಇತ್ತ ಪರಿಹಾರ ಕೇಂದ್ರದಲ್ಲಿಯೂ ಇರಲಾರದೆ, ಹಾವುಗಳನ್ನು ಎದುರಿಸಿ ಮನೆಗೂ ಹೋಗ​ಲಾ​ರ​ದಂತಹ ಇಕ್ಕ​ಟ್ಟಿನಲ್ಲಿ ಸಿಲುಕಿ ಒದ್ದಾ​ಡು​ತ್ತಿ​ದ್ದಾರೆ.

Follow Us:
Download App:
  • android
  • ios