Asianet Suvarna News Asianet Suvarna News

ಬೆಂಗಳೂರು ಗ್ರಾಮಾಂತರದಲ್ಲಿ ಡಮ್ ಡಮಾರ್!

ದರೋಡೆಕೋರರ ಮೇಲೆ ಗುಂಡಿನ ದಾಳಿ! ದೇವನಹಳ್ಳಿ ಸಮೀಪ ಪೊಲೀಸರಿಂದ ಗುಂಡಿನ ದಾಳಿ! ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ದರೋಡೆಕೋರರು! ಆತ್ಮ ರಕ್ಷಣೆಗಾಗಿ ಗುಂಡು ಹಾರಿಸಿದ ಪೊಲೀಸರು
 

ಬೆಂಗಳೂರು(ಆ.30): ದರೊಡೆಕೋರರನ್ನು ಬಂಧಿಸಲು ಪೊಲೀಸರು ಗುಂಡು ಹಾರಿಸಿದ್ದಾರೆ. ಯಲಹಂಕ ಇನ್ಸ್ಪೆಕ್ಟರ್ ಮಂಜೇಗೌಡ  ಹಾಗೂ ಅವರ ತಂಡ ಇಬ್ಬರು ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ. 

ನಿನ್ನೆ ಸಂಜೆ ದರೋಡೆಕೋರರು ಇರುವ ಸ್ಥಳದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ. ಈ ವೇಳೆ ದರೋಡೆಕೋರರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಬಳಿಕ ಅವರನ್ನು ಚೇಸ್ ಮಾಡಿದ ಪೊಲೀಸರು ದೇವನಹಳ್ಳಿ ಸಮೀಪದ ಅಕ್ಕುಪೇಟೆ ಬೊಮ್ಮವಾರ ಮೀಸಲು ಅರಣ್ಯ ಪ್ರದೇಶದಲ್ಲಿ ಬಂಧಿಸಿದ್ದಾರೆ. 

ಈ ವೇಳೆ ದರೋಡೆಕೋರರು ಪ್ರತಿರೋಧ ವ್ಯಕ್ತಪಡಿಸಿದ್ರು. ಅಲ್ಲದೆ ಪೊಲೀಸ್ ವ್ಯಾನಿನ ಮೇಲೆ ಕಲ್ಲು ತೂರಾಟ ಮಾಡಿದ್ರು. ಹೀಗಾಗಿ ಆತ್ಮ ರಕ್ಷಣೆಗೆ ಪೊಲೀಸರು ಗುಂಡು ಹಾರಿಸಿದ್ದಾರೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..
 

Video Top Stories