ಜಿಟಿಡಿಗೆ ಠಕ್ಕರ್: ಚಾಮುಂಡೇಶ್ವರಿಯಲ್ಲಿ ಸಿಎಂ ಪರ ಡಿಕೆಶಿ ಅಬ್ಬರದ ಪ್ರಚಾರ
- ಒಕ್ಕಲಿಗರ ಮತ ನಿರ್ಣಾಯಕವಾಗಿರುವ ಚಾಮುಂಡೆಶ್ವರಿ ಕ್ಷೇತ್ರ
- ಚಾಮುಂಡೇಶ್ವರಿಯಲ್ಲಿ ಡಿಕೆಶಿ ಮಿಂಚಿನ ಸಂಚಾರ; ಸಿಎಂ ಪರ ಅಬ್ಬರದ ಪ್ರಚಾರ
ಒಕ್ಕಲಿಗರ ಮತ ನಿರ್ಣಾಯಕವಾಗಿರುವ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿ.ಟಿ. ದೇವೇಗೌಡರಿಗೆ ಠಕ್ಕರ್ ನೀಡಲು ಸಿಎಂ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕನಾಗಿರುವ ಡಿ.ಕೆ. ಶಿವಕುಮಾರ್ ಅವರನ್ನು ಪ್ರಚಾರ ಕಣಕ್ಕೆ ಇಳಿಸಿದ್ದಾರೆ. ಇಂದು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸಿದ ಡಿಕೆಶಿ, ಸಿಎಂ ಪರ ಅಬ್ಬರದ ಪ್ರಚಾರ ನಡೆಸಿದ್ದಾರೆ.