ಕೇರಳದ ತಿರುವನಂತಪುರದ ಇಸ್ರೋ ಕೇಂದ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದು, ಇದೇ ವೇಳೆ ಬಾಹ್ಯಾಕಾಶ ಯಾನ ಕೈಗೊಳ್ಳಲಿರುವ ಗಗನಯಾನಿಗಳ ಹೆಸರನ್ನು ಪ್ರಧಾನಿ ಮೋದಿ ಬಿಡುಗಡೆಗೊಳಿಸಿದ್ದಾರೆ. 

ನವದೆಹಲಿ: ಕೇರಳದ ತಿರುವನಂತಪುರದ ಇಸ್ರೋ ಕೇಂದ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದು, ಇದೇ ವೇಳೆ ಬಾಹ್ಯಾಕಾಶ ಯಾನ ಕೈಗೊಳ್ಳಲಿರುವ ಗಗನಯಾನಿಗಳ ಹೆಸರನ್ನು ಪ್ರಧಾನಿ ಮೋದಿ ಬಿಡುಗಡೆಗೊಳಿಸಿದ್ದಾರೆ. 

ಭಾರತೀಯ ವಾಯುಸೇನೆಯಲ್ಲಿ ಕೆಲಸ ಮಾಡುವ ಕ್ಯಾ. ಪ್ರಶಾಂತ್​​ ನಾಯರ್​, ಕ್ಯಾ, ಅಜಿತ್​ ಕೃಷ್ಣನ್​​, ಕ್ಯಾ. ಅಂಗದ ಪ್ರತಾಪ್, ವಿಂಗ್​​ ಕಮ್ಯಾಂಡರ್​ ಶುಭಾಂಶು ಶುಕ್ಲಾ ಅವರು ಇಸ್ರೋದ ಗಗನಯಾತ್ರೆಗೆ ಸಜ್ಜಾಗಿದ್ದು, ಕಳೆದ 5 ವರ್ಷಗಳಿಂದ ಇಸ್ರೋ ಕೇಂದ್ರಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಕೇರಳದ ತಿರುವನಂತಪುರದ ಇಸ್ರೋ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಇಸ್ರೋ ಅಧ್ಯಕ್ಷ ಸೋಮನಾಥ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಗಗನಯಾತ್ರೆ ಕೈಗೊಳ್ಳುವ ಗಗನಯಾನಿಗಳ ಪರಿಚಯ ಮಾಡಿಕೊಟ್ಟಿದ್ದಾರೆ. 

Scroll to load tweet…


 ಗಗನಯಾತ್ರೆಗೆ ಸಿದ್ಧಗೊಳ್ಳುತ್ತಿರುವ ಈ ವಾಯುಸೇನಾ ಅಧಿಕಾರಿಗಳಿಗೆ ಭಾರತದ ವಿವಿಧ ಸೇನಾಪಡೆಗಳಲ್ಲಿ ನಿಯೋಜಿಸಿ ವಿವಿಧ ರೀತಿಯ ತರಬೇತಿ ನೀಡಲಾಗುತ್ತಿದೆ. ಇದರ ಜೊತೆಗೆ ರಷ್ಯಾದಲ್ಲೂ ಕಠಿಣ ತರಬೇತಿಯನ್ನು ಈ ಗಗನಯಾನಿಗಳು ಪಡೆದಿದ್ದಾರೆ. ಇಸ್ರೋ ಕೈಗೊಳ್ಳಲಿರುವ ಮಾನವ ಸಹಿತ ಬಾಹ್ಯಾಕಾಶ ಯೋಜನೆ ಗಗನಯಾನಕ್ಕೆ ಭಾರತೀಯ ವಾಯುಸೇಯ ಅಧಿಕಾರಿಗಳಾದ ಕ್ಯಾ. ಪ್ರಶಾಂತ್​​ ನಾಯರ್​, ಕ್ಯಾ, ಅಜಿತ್​ ಕೃಷ್ಣನ್​​, ಕ್ಯಾ. ಅಂಗದ ಪ್ರತಾಪ್, ವಿಂಗ್​​ ಕಮ್ಯಾಂಡರ್​ ಶುಭಾಂಶು ಶುಕ್ಲಾ ಅವರನ್ನು ಆಯ್ಕೆ ಮಾಡಿ ಕಠಿಣ ತರಬೇತಿ ನೀಡಲಾಗುತ್ತಿದೆ.