MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • ಮಗನ ಆತ್ಮಹತ್ಯೆ ವಿಷಯ ತಿಳಿದಿದ್ದರೂ ತಡೆಯಲಾಗಲಿಲ್ಲ; ಕೊರಗುತ್ತಿರುವ ಬಾಲಿವುಡ್‌ ನಟ

ಮಗನ ಆತ್ಮಹತ್ಯೆ ವಿಷಯ ತಿಳಿದಿದ್ದರೂ ತಡೆಯಲಾಗಲಿಲ್ಲ; ಕೊರಗುತ್ತಿರುವ ಬಾಲಿವುಡ್‌ ನಟ

ಬಾಲಿವುಡ್‌ ನಟ ಕಬೀರ್ ಬೇಡಿ (Kabir Bedi) ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅ  16 ಜನವರಿ 1946 ರಂದು ಪಾಕಿಸ್ತಾನದ ಲಾಹೋರ್‌ನಲ್ಲಿ ಜನಿಸಿದ ಕಬೀರ್ ಬೇಡಿ ತನ್ನ ಚುರುಕಾದ ವ್ಯಕ್ತಿತ್ವ ಮತ್ತು ಶಕ್ತಿಯುತ ಧ್ವನಿಯಿಂದಾಗಿ ಸಿನಿಮಾ ಉದ್ಯಮದಲ್ಲಿ ಸ್ಥಾನ ಗಳಿಸಿದ್ದಾರೆ. ಅದೇ ಸಮಯದಲ್ಲಿ, ಅವರ ವೈಯಕ್ತಿಕ ಜೀವನವು ಯಾವಾಗಲೂ ವಿವಾದಗಳಲ್ಲಿದೆ. ಕಬೀರ್ ಬೇಡಿ ಅವರ ಜೀವನಚರಿತ್ರೆ 'Stories I Must Tell: The Emotional Life of an Actor'ನಲ್ಲಿ ಮಗ ಸಿದ್ದಾರ್ಥ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದಿದ್ದರೂ ಆತನನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಅವರು ತಿಳಿಸಿದ್ದಾರೆ. ಕಬೀರ್ ಬೇಡಿ ಎಷ್ಟು ಅಸಹಾಯಕರಾಗಿದ್ದರು ಎಂದು ಹೇಳಿಕೊಂಡಿದ್ದಾರೆ.

2 Min read
Suvarna News
Published : Jan 16 2023, 06:20 PM IST
Share this Photo Gallery
  • FB
  • TW
  • Linkdin
  • Whatsapp
19

ಕಬೀರ್ ಬೇಡಿಯ ಬಹುದೊಡ್ಡ ದುಃಖವೆಂದರೆ ಅವರ ಮಗ  ಆತ್ಮಹತ್ಯೆ ಮಾಡಿಕೊಳ್ಳಬಹುದೆಂದು ತಿಳಿದಿದ್ದರೂ ಅವರಿಗೆ  ಮಗ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಯಲಾಗಲಿಲ್ಲ.

29

ವಾಸ್ತವವಾಗಿ, ಸಿದ್ಧಾರ್ಥ್ ಬೇಡಿ ಕೇವಲ 25 ನೇ ವಯಸ್ಸಿನಲ್ಲಿ ಸ್ಕಿಜೋಫ್ರೇನಿಯಾದಿಂದ ಬಳಲುತ್ತಿದ್ದರು, ಅವರು ಆತ್ಮಹತ್ಯೆಯ ಬಗ್ಗೆ ಯೋಚಿಸುತ್ತಿದ್ದರು.
 

39

ಲಾಕ್‌ಡೌನ್ ಸಮಯದಲ್ಲಿ, ಕಬೀರ್ ಬೇಡಿ ತಮ್ಮ ವೈಯಕ್ತಿಕ ಜೀವನದ ವಿವರಗಳನ್ನು ಅವರ ಜೀವನಚರಿತ್ರೆ ಲ್ಲಿ  Stories I Must Tell: The Emotional Life of an Actor ಹೊರತಂದರು. ಈ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಸಲ್ಮಾನ್ ಖಾನ್ ಕೂಡ ಭಾಗವಹಿಸಿದ್ದರು.


 

49

ಕಬೀರ್ ಬೇಡಿ ತನ್ನ ಮಗ ಸಿದ್ಧಾರ್ಥ್ ಬಗ್ಗೆ ಈ ಪುಸ್ತಕದಲ್ಲಿ ಹೇಳಿ ಕೊಂಡಿದ್ದಾರೆ.  ಅವನು ತುಂಬಾ ಪ್ರತಿಭಾವಂತ ಹುಡುಗ. ಅವರು ಅನೇಕ ವಿಶಿಷ್ಟ ಸಾಮರ್ಥ್ಯಗಳನ್ನು ಹೊಂದಿದ್ದ, ಇದ್ದಕ್ಕಿದ್ದಂತೆ ಅವರ ಆಲೋಚನೆ ನಿಂತುಹೋಯಿತು. ನಾವು ಅವನನ್ನು ಪ್ರೋತ್ಸಾಹಿಸಲು ಸಾಕಷ್ಟು ಪ್ರಯತ್ನಿಸಿದ್ದೇವೆ, ಆದರೆ ನಮಗೆ ಅವನನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ.
 


 

59

ಒಮ್ಮೆ ಸಿದ್ಧಾರ್ಥ್ ಕೆನಡಾದ ಮಾಂಟ್ರಿಯಲ್‌ನಲ್ಲಿ ಹಿಂಸಾತ್ಮಕವಾಗಿ ವರ್ತಿಸಿದ್ದ ಮತ್ತು  ಅವನನ್ನು ಪೊಲೀಸರು ಕಷ್ಟಪಟ್ಟು ನಿಯಂತ್ರಿಸಿದರು  ಎಂದು ಕಬೀರ್ ಬೇಡಿ ಈ ಪುಸ್ತಕದಲ್ಲಿ ಹೇಳಿದ್ದಾರೆ. ವೈದ್ಯರು ಆತನನ್ನು ಪರೀಕ್ಷಿಸಿದಾಗ, ಸಿದ್ಧಾರ್ಥ್ ಬೇಡಿ ಸ್ಕಿಜೋಫ್ರೇನಿಯಾಕ್ಕೆ ಬಲಿಯಾಗಿರುವುದು ಕಂಡುಬಂದಿತ್ತು.

69

ಕಬೀರ್ ಬೇಡಿ ಪ್ರಕಾರ, ಸಿದ್ಧಾರ್ಥ್ ತನ್ನ ಅನಾರೋಗ್ಯದ ಬಗ್ಗೆ ತಿಳಿದಿದ್ದರು. ಒಮ್ಮೆ ಅವನು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ತನ್ನ ಬಾಯಿಂದ ಹೇಳಿದ್ದ. ಇದಾದ ಬಳಿಕ ಕಬೀರ್ ಬೇಡಿ ಅವರನ್ನು ಖಿನ್ನತೆಯಿಂದ ಹೊರತರಲು ಸಾಕಷ್ಟು ಪ್ರಯತ್ನ ಮಾಡಿದರೂ ಅದರಲ್ಲಿ ಯಶಸ್ವಿಯಾಗಲಿಲ್ಲ.

79

ಕಬೀರ್ ಬೇಡಿ ಮಗನ  ಸಾಮಾಜಿಕ ಮಾಧ್ಯಮ ಖಾತೆಯನ್ನು ಒಮ್ಮೆ ನೋಡಿದಾಗ ಅವನ  ವಿದಾಯಕ್ಕಾಗಿ   ಸ್ನೇಹಿತರನ್ನು ಮೇಲ್ ಮೂಲಕ ಆಹ್ವಾನಿಸಿದ್ದ  ಮತ್ತು ಕೆಲವು ದಿನಗಳ ನಂತರ ಅವರು ಆತ್ಮಹತ್ಯೆ ಮಾಡಿಕೊಂಡ ಎಂದು ಹೇಳಿದ್ದರು. 

89

ಧಾರ್ಮಿಕ ಯಾತ್ರೆಯ ವೇಳೆ ಅಪಘಾತದಲ್ಲಿ ಸಾವನ್ನಪ್ಪಿದ ಸಂದರ್ಭದಲ್ಲಿ ಮಗನ ಸಾವಿನ ನಂತರ ಪತ್ನಿ ಪ್ರೋತಿಮಾ ಬೇಡಿ ಆಧ್ಯಾತ್ಮಿಕತೆಯತ್ತ ಮುಖ ಮಾಡಿದರು. ಮತ್ತೊಂದೆಡೆ, ಕಬೀರ್ ಬೇಡಿ ಇನ್ನೂ ತನ್ನ ಮಗನಸಾವಿನ ದು:ಖದಿಂದ ಹೊರಬರಲು  ಅಸಮರ್ಥರಾಗಿದ್ದಾರೆ.


 

99

ಕಬೀರ್ ಬೇಡಿ 1971 ರಲ್ಲಿ 'ಹಲ್ಚಲ್' ಚಿತ್ರದ ಮೂಲಕ ಬಾಲಿವುಡ್‌ನಲ್ಲಿ ತಮ್ಮ ಪ್ರಯಾಣ ಆರಂಭಿಸಿದರು. ಅವರು 'ಕುರ್ಬಾನ್', 'ದಿಲ್ ಆಶ್ನಾ ಹೈ', 'ಯಲ್ಗಾರ್', 'ನಾಗಿನ್', 'ಡಾಕು', 'ಅಶಾಂತಿ', 'ಖೂನ್ ಭಾರಿ ಮಾಂಗ್', 'ಪೊಲೀಸ್ ಪಬ್ಲಿಕ್' ಮುಂತಾದ ಹತ್ತಾರು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

About the Author

SN
Suvarna News
ಬಾಲಿವುಡ್
ಮಗ
ಆತ್ಮಹತ್ಯೆ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved