ಮ್ಯಾನ್ಮಾರ್​​ ಭೂಕಂಪ: ತಲೆ ಸುತ್ತಿದಂತಾಯಿತು, ಕನ್ನಡಿಗನ ಅನುಭವ

Published : Mar 29, 2025, 08:46 AM ISTUpdated : Mar 29, 2025, 09:08 AM IST
ಮ್ಯಾನ್ಮಾರ್​​ ಭೂಕಂಪ: ತಲೆ ಸುತ್ತಿದಂತಾಯಿತು, ಕನ್ನಡಿಗನ ಅನುಭವ

ಸಾರಾಂಶ

ಇದ್ದಕ್ಕಿದ್ದಂತೆ ಭೂಮಿ ಕಂಪಿಸಿದ್ದನ್ನು ಕಂಡು ದಂಗುಬಡಿದಿರುವ ಬ್ಯಾಂಕಾಕ್‌ ಜನ, ಭಯಾನಕ ಅನುಭವಗಳನ್ನು ಮಾಧ್ಯಮಗಳ ಜತೆ ಹಂಚಿಕೊಂಡಿದ್ದಾರೆ. ಇವರಲ್ಲಿ ಭಾರತೀಯರೂ ಉಂಟು. ಮೊದಮೊದಲು ನನ್ನ ತಲೆ ತಿರುಗುತ್ತಿದೆ ಎಂದುಕೊಂಡೆ. 

ಬ್ಯಾಂಕಾಕ್‌ (ಮಾ.29): ಇದ್ದಕ್ಕಿದ್ದಂತೆ ಭೂಮಿ ಕಂಪಿಸಿದ್ದನ್ನು ಕಂಡು ದಂಗುಬಡಿದಿರುವ ಬ್ಯಾಂಕಾಕ್‌ ಜನ, ಭಯಾನಕ ಅನುಭವಗಳನ್ನು ಮಾಧ್ಯಮಗಳ ಜತೆ ಹಂಚಿಕೊಂಡಿದ್ದಾರೆ. ಇವರಲ್ಲಿ ಭಾರತೀಯರೂ ಉಂಟು. ‘ಮೊದಮೊದಲು ನನ್ನ ತಲೆ ತಿರುಗುತ್ತಿದೆ ಎಂದುಕೊಂಡೆ. ಆದರೆ ಕೂಡಲೇ ಸಹೋದ್ಯೋಗಿಗಳೊಂದಿಗೆ 10ನೇ ಮಹಡಿಯಿಂದ ಕೆಳಗೆ ಓಡಿದೆ. ನೋಡನೋಡುತ್ತಿದ್ದಂತೆ ಇಡೀ ಕಟ್ಟಡವೇ ಅಲುಗಾಡತೊಡಗಿತು’ ಎಂದು ಕನಿಛಾವಾನಾಕುಲ್‌ ಎಂಬಾಕೆ ಹೇಳಿದ್ದಾರೆ. ವಕೀಲೆಯೊಬ್ಬರು ಮಾತನಾಡಿ, ‘ಮೊದಲು ವಿದ್ಯುದ್ದೀಪ ತೂಗಾಡತೊಡಗಿತು. ಮೆಲ್ಲನೆ ಕಟ್ಟಡದಲ್ಲಿ ಸೀಳು ಬಿಟ್ಟ ಸದ್ದೂ ಕೇಳಿಸತೊಡಗಿದ್ದು, ಅದೂ ಅಲುಗತೊಡಗಿತು. ಜೀವಮಾನದಲ್ಲಿ ಬ್ಯಾಂಕಾಕ್‌ನಲ್ಲಿ ಇಂತಹ ಭೂಕಂಪ ನೋಡಿರಲಿಲ್ಲ’ ಎಂದರು. ಜನ ಜೀವಭಯದಿಂದ ಚೆಲ್ಲಾಪಿಲ್ಲಿಯಾಗಿ ಓಡುತ್ತಿದ್ದು, ಪ್ರೀತಿಪಾತ್ರರನ್ನು ಸಂಪರ್ಕಿಸಲು ಯತ್ನಿಸುತ್ತಿದ್ದ ದೃಷ್ಯಗಳು ಸಾಮಾನ್ಯವಾಗಿತ್ತು.

ಬಂಗಾಳ, ಈಶಾನ್ಯ ಭಾರತದಲ್ಲೂ ಕಂಪನದ ಅನುಭವ: ಥಾಯ್ಲೆಂಡ್‌ ರಾಜಧಾನಿ ಬ್ಯಾಂಕಾಕ್‌ನಲ್ಲಿ ಸಂಭವಿಸಿದ 7.7 ತೀವ್ರತೆಯ ಭೂಕಂಪದ ಪರಿಣಾಮ, ಪ.ಬಂಗಾಳ ರಾಜಧಾನಿ ಕೋಲ್ಕತಾ, ಈಶಾನ್ಯ ಭಾರತದ ನಗರಗಳಾದ ಇಂಫಾಲ್‌ ಮತ್ತು ಮೇಘಾಲಯದ ಪೂರ್ವಾ ಗಾರೋ ಪ್ರದೇಶದಲ್ಲಿಯೂ ಭೂಮಿ ಕಂಪಿಸಿದ ಅನುಭವವಾಗಿದೆ. ಸುದೈವವಶಾತ್‌ ಕಂಪನದಿಂದ ಯಾವುದೇ ಆಸ್ತಿ ಅಥವಾ ಜೀವಹಾನಿಯಾಗಿಲ್ಲ.ಪುರಾತನ ಬಹುಮಹಡಿ ಕಟ್ಟಡಗಳಿರುವ ಮಣಿಪುರದ ಇಂಫಾಲ್‌ನ ಥಂಗಲ್‌ ಬಜಾರ್‌ನಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ ಯಾವುದೇ ದುರ್ಘಟನೆ ವರದಿಯಾಗಿಲ್ಲ. ರಾಜ್ಯದ ಉಖ್ರುಲ್‌ ಜಿಲ್ಲೆಯಲ್ಲೂ ಮಧ್ಯಾಹ್ನದ ವೇಳೆ 2.5 ತೀವ್ರತೆಯ ಭೂಕಂಪವಾಗಿದೆ ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

10 ಸೆಕೆಂಡ್‌ಗಳಲ್ಲಿ ವಿನಾಶ! ಮ್ಯಾನ್ಮಾರ್-ಥೈಲ್ಯಾಂಡ್ ಭೂಕಂಪದ ಭಯಾನಕ ವಿಡಿಯೋಗಳಿವು

ಕಂಪನಕ್ಕೆ ಏನು ಕಾರಣ?: ಮ್ಯಾನ್ಮಾರ್‌ ದೇಶವು ಸದಾ ಭೂಕಂಪನದ ಅಪಾಯ ಎದುರಿಸುವ ದೇಶಗಳಲ್ಲೊಂದು. ಭೂಕಂಪನದ ಅಪಾಯಯಾರಿ ದೇಶಗಳ ಭೂಪಟದಲ್ಲಿ ಮ್ಯಾನ್ಮಾರ್‌ ಡೇಂಜರ್‌ ಝೋನ್‌ನಲ್ಲಿದೆ. ಮ್ಯಾನ್ಯಾರ್‌ನಲ್ಲಿ ಸಗೈಂಗ್‌ ಫಾಲ್ಟ್‌ ಎಂಬ ಭೂರೇಖೆ ಹಾದು ಹೋಗಿರುವುದರಿಂದ ಭೂಕಂಪನದ ಅಪಾಯ ಹೆಚ್ಚು. ಸಗೈಂಗ್ ಎಂಬುದು ಮ್ಯಾನ್ಮಾರ್‌ನ ನಗರ ಆಗಿರುವ ಕಾರಣ ಅದಕ್ಕೆ ಆ ನಗರದ ಹೆಸರನ್ನೇ ಇಡಲಾಗಿದೆ., ‘ಸಾಗೈಂಗ್ ಫಾಲ್ಟ್’ ಎಂಬುದು ಭೂಮಿಯಲ್ಲಿನ ಪ್ರಮುಖ ದೋಷವಾಗಿದ್ದು, ಇದರ ರೇಖೆಯು ಮಧ್ಯ ಮ್ಯಾನ್ಮಾರ್‌ನಿಂದ ಉತ್ತರ ಮ್ಯಾನ್ಮಾರ್‌ವರೆಗೆ ವ್ಯಾಪಿಸಿದೆ. ಈ ದೋಷವು ಭೂಮಿಯ ಭಾರತೀಯ ಮತ್ತು ಯುರೇಷಿಯನ್ ಫಲಕಗಳ ಚಲನೆಯಿಂದ ಉಂಟಾಗುತ್ತದೆ. ಚಲನೆಯ ದರಗಳು ವಾರ್ಷಿಕವಾಗಿ 11 ಮಿಮೀ ಮತ್ತು 18 ಮಿಮೀ ನಡುವೆ ಇರುತ್ತದೆ. ಇದು ಚಲಿಸುವ ವೇಳೆ ಕೆಲವೊಮ್ಮೆ ಭೂಮಿಯ ಅಂತರ್ಯದಲ್ಲಿ ಒತ್ತಡ ಸೃಷ್ಟಿಯಾಗಿ ಭೂಕಂಪವಾಗುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ