ಕಾರ್ಪೋರೇಟರ್‌ ಗೆಲ್ಲಿಸುವ ಸಾಮರ್ಥ್ಯ ಇಲ್ಲದವರೂ ಮಾತನಾಡುತ್ತಾರೆ: ಸ್ವಪಕ್ಷದವರ ಬಗ್ಗೆ ಖರ್ಗೆ ಅಸಮಾಧಾನ

Nov 19, 2020, 4:08 PM IST

ಬೆಂಗಳೂರು (ನ. 19): ಕೆಪಿಸಿಸಿಯಲ್ಲೂ ಅಸಮಾಧಾನ ಶುರುವಾಗಿದೆ. ಹಿರಿಯ ನಾಯಕರ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. 

'ನಮ್ಮವರೇ ನಮ್ಮ ನಾಯಕರ ವಿರುದ್ಧ ಮಾತನಾಡುತ್ತಾರೆ. ಅವರವರ ಕ್ಷೇತ್ರದಲ್ಲಿ ಕಾರ್ಪೋರೇಟರ್‌ ಗೆಲ್ಲಿಸುವ ಸಾಮರ್ಥ್ಯ ಇಲ್ಲದವರೂ ಮಾತನಾಡುತ್ತಾರೆ. ನಾವು ಒಗ್ಗಟ್ಟಿನಲ್ಲಿ ಇಲ್ಲದಿದ್ರೆ ಅಧಿಕಾರ ನಡೆಸೋದು ಹೇಗೆ? ನಮ್ಮವರ ಬಗ್ಗೆ ನಾವೇ ಅಸಮಾಧಾನದ ಬಗ್ಗೆ ಮಾತನಾಡಿದ್ರೆ ಹೇಗೆ? ಎಂದು ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ತಲೆಮರೆಸಿಕೊಂಡಿದ್ದ ಸಂಪತ್ ರಾಜ್ ಫೋನ್, ದುಡ್ಡಿಗಾಗಿ ಮಾಡಿದ ಟ್ರಿಕ್ಸ್ ಇದು!