May 19, 2021, 3:46 PM IST
ಬೆಂಗಳೂರು (ಮೇ. 19): ಸರ್ಕಾರದ ಆರ್ಥಿಕ ಪ್ಯಾಕೇಜ್ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ಇದೊಂದು ನಾಟಕೀಯ ಪ್ಯಾಕೇಜ್. ಎಕರೆಗೆ ಮೂರು ಸಾವಿರ ಎಲ್ಲಿಗೆ ಸಾಕಾಗುತ್ತೆ.? ಇನ್ನು ಆಟೋ ಚಾಲಕರಿಗೂ ಟೋಪಿ ಹಾಕಿದ್ದಾರೆ. ಈ ಪ್ಯಾಕೇಜ್ ನಿರಾಶದಾಯಕವಾಗಿದೆ' ಎಂದಿದ್ದಾರೆ.
ರೈತರಿಗೆ ಬೆಂಬಲ ಬೆಲೆಯಿಲ್ಲ, ಬಡವರ ಬಗ್ಗೆ ಚಿಂತನೆಯಿಲ್ಲ, ಇದ್ಯಾವ ಸೀಮೆ ಪ್ಯಾಕೇಜ್ರಿ.?
'ಸರ್ಕಾರದ ಬೇಜವಾಬ್ದಾರಿಯಿಂದ ಜನ ಸಂಕಷ್ಟದಲ್ಲಿದ್ದಾರೆ. ನಾಡಿನ ಜನತೆ ಮೇಲೆ ಗೌರವ ಇದ್ದಿದ್ದರೆ, ಕನಿಷ್ಠ 10 ಸಾವಿರ ಹಣ ನೀಡುತ್ತಿದ್ರಿ. ಈ ಹಣ ಜನರಿಗೆ ಎಷ್ಟರ ಮಟ್ಟಿಗೆ ತಲುಪುತ್ತದೋ ಗೊತ್ತಿಲ್ಲ. ಹಣ ತಲುಪಲು ಸೂಕ್ತ ವ್ಯವಸ್ಥೆ ಮಾಡಬೇಕು' ಎಂದು ಒತ್ತಾಯಿಸಿದ್ಧಾರೆ.