Mar 26, 2021, 3:45 PM IST
ಬೆಂಗಳೂರು (ಮಾ. 26): ಮಾಜಿ ಸಚಿವರ ಸಿ.ಡಿ. ಪ್ರಕರಣದ ವಿವಾದಿತ ಯುವತಿಗೆ ಗೋವಾದಲ್ಲಿ ಆರು ತಿಂಗಳು ವಾಸ್ತವ್ಯ ಕಲ್ಪಿಸಲು ಸಿ.ಡಿ. ಸ್ಫೋಟದ ಗುಂಪು ಯೋಜಿಸಿತ್ತು ಎಂದು ತಿಳಿದು ಬಂದಿದೆ.
ಕನಕಪುರ ತಾಲೂಕಿನ ಗ್ರಾನೈಟ್ ಉದ್ಯಮಿ ಶಿವಕುಮಾರ್, ತನ್ನ ಮೇಲೆ ಪೊಲೀಸರಿಗೆ ಅನುಮಾನ ಬಾರದಂತೆ ಯುವತಿಯ ಆತಿಥ್ಯದ ಹೊಣೆಗಾರಿಕೆಯನ್ನು ಹೊತ್ತಿದ್ದ. ಹೀಗಾಗಿ ಯುವತಿಯ ಸ್ನೇಹಿತೆ ಹೆಸರಿನಲ್ಲಿ ಗೋವಾದ ಹೋಟೆಲ್ವೊಂದರಲ್ಲಿ ಕೊಠಡಿಯನ್ನು ಉದ್ಯಮಿ ಕಾಯ್ದಿರಿಸಿದ್ದ. ಆದರೆ ಗೋವಾದಲ್ಲಿ ಯುವತಿ ತಂಗಿರುವ ವಿಚಾರ ತಿಳಿದು ಎಸ್ಐಟಿ ಕಾರ್ಯಾಚರಣೆ ಶುರು ಮಾಡಿದ ಮಾಹಿತಿ ಪಡೆದ ಸಿ.ಡಿ. ಸ್ಫೋಟದ ಗುಂಪು, ರಾತ್ರೋರಾತ್ರಿ ಆಕೆಯನ್ನು ಅಲ್ಲಿಂದ ಬೇರೆಡೆ ಕರೆದೊಯ್ದಿದೆ ಎನ್ನಲಾಗಿದೆ.
ಕೆಲಸದ ಆಮೀಷವೊಡ್ಡಿ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡ್ರು ಎಂದು ಸೀಡಿ ಲೇಡಿ ದೂರು