ರಾಮೇಶ್ವರಂ ಸ್ಫೋಟದ ತನಿಖೆ ಹಾದಿ ತಪ್ಪಿಸಲು ನಡೆದಿತ್ತು ಪ್ಲಾನ್, ಶಂಕಿತನ ಹೆಜ್ಜೆ ಗುರುತು ಪತ್ತೆ!

Mar 7, 2024, 10:50 PM IST

ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ತನಿಖೆ ತೀವ್ರಗೊಂಡಿದೆ. ಶಂಕಿತನ ಮತ್ತಷ್ಟು ಸಿಸಿಟಿವಿ ದೃಶ್ಯಗಳು ಪತ್ತೆಯಾಗಿದೆ. ಹೊಟೆಲ್‌ನಲ್ಲಿ ಈತ ತನಿಖಾ ಅಧಿಕಾರಿಗಳ ದಿಕ್ಕು ತಪ್ಪಿಸಲು ಮಾಡಿದ ನಾಟಕಗಳು ಒಂದೊಂದಾಗಿ ಬಯಲಾಗುತ್ತಿದೆ. ಇತ್ತ ಸ್ಫೋಟದ ಬಳಿಕ ಮಸೀದಿಗೆ ತೆರಳಿ ವೇಷ ಬದಲಿಸಿರುವ ಅನುಮಾನಗಳನ್ನು ತನಿಖಾ ತಂಡ ವ್ಯಕ್ತಪಡಿಸಿದೆ. ಬಾಂಬ್ ಇಟ್ಟು ಬೆಂಗಳೂರಿನಿಂದ ಬಳ್ಳಾರಿಗೆ ತೆರಳಿರುವ ಕುರಿತು ಅಧಿಕಾರಿಗಳ ತನಿಖೆ ನಡೆಸುತ್ತಿದ್ದಾರೆ. ಶಂಕಿತನ ಕುರಿತ ಮತ್ತಷ್ಟು ವಿವರ ಇಲ್ಲಿದೆ.