ಸಂಪುಟ ವಿಸ್ತರಣೆ: RSS ಮೊರೆ ಹೋದ ಸಚಿವಾಕಾಂಕ್ಷಿಗಳು

Jan 29, 2020, 7:24 PM IST

ಬೆಂಗಳೂರು, (ಜ.29): ರಾಜ್ಯ ಸಂಪುಟ ವಿಸ್ತರಣೆ ಈ ವಾರ ಮುಂದಿನ ವಾರ ಅಂತೆಲ್ಲಾ ಹೇಳಲಾಗುತ್ತಿದೆ ವಿನಃ ಇದುವರೆಗೂ ಯಾವುದೇ ದಿನಾಂಕ ಫಿಕ್ಸ್ ಆಗಿಲ್ಲ. ಮತ್ತೊಂದೆಡೆ ಬಿಜೆಪಿ ಶಾಸಕರು ಸಚಿವ ಸ್ಥಾನಕ್ಕೆ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.

ಸಂಪುಟ ವಿಸ್ತರಣೆ: ಸಂಭಾವ್ಯ ಪಟ್ಟಿ ರೆಡಿ, ಬಿಎಸ್‌ವೈ ಲೀಸ್ಟ್‌ನಲ್ಲಿ ಯಾರೆಗೆಲ್ಲ ಸ್ಥಾನ.?

ಕೆಲವರು ಹೈಕಮಾಂಡ್‌ನಲ್ಲಿ ಲಾಬಿ ನಡೆಸಿದ್ರೆ, ಇನ್ನು ಕೆಲ ಶಾಸಕರು ರಾಜ್ಯ ಪ್ರಭಾವಿ ನಾಯಕ ಮೊರೆ ಹೋಗಿದ್ದಾರೆ. ಸಾಲದಕ್ಕೆ ಕೆಲವರು ಆರ್‌ಎಸ್‌ಎಸ್‌ ಮುಖ ಮಾಡಿದ್ದು, ಸಂಘಪರಿವಾರದಿಂದ ಸಚಿವ ಸ್ಥಾನಕ್ಕೆ ಒತ್ತಡ ಹಾಕಿಸುತ್ತಿದ್ದಾರೆ.

ಸಂಪುಟ ವಿಸ್ತರಣೆ: ಕೆಲ ಸಂಭಾವ್ಯ ಸಚಿವರ ಹೆಸರು ಘೋಷಿಸಿದ ಯಡಿಯೂರಪ್ಪ