ದರ್ಶನ್​ ನನಗಾಗಿ ಡೇಟ್​ ಅಡ್ಜೆಸ್ಟ್​ ಮಾಡ್ಕೋತಿದ್ರು: ಅಂಥ ನಟನನ್ನು ನೋಡೇ ಇಲ್ಲ ಎಂದು ಹೊಗಳಿದ ಆ್ಯಂಕರ್​ ಶ್ವೇತಾ

By Suchethana DFirst Published Oct 2, 2024, 11:09 PM IST
Highlights

ಆ್ಯಂಕರ್​ ಶ್ವೇತಾ ಚೆಂಗಪ್ಪ ಅವರು ರ‍್ಯಾಪಿಡ್ ರಶ್ಮಿ ಷೋನಲ್ಲಿ ನಟ ದರ್ಶನ್​ ಕುರಿತು ಮಾತನಾಡಿದ್ದಾರೆ. ಅವರು ಹೇಳಿದ್ದೇನು?
 

ಖ್ಯಾತ ಕಿರುತೆರೆ ನಟಿ,  ನಿರೂಪಕಿ ಶ್ವೇಗಾ ಚಂಗಪ್ಪ ಸದ್ಯ ಕಿರುತೆರೆಯಲ್ಲಿ ಸಕತ್​ ಬಿಜಿಯಾಗಿದ್ದಾರೆ. ಕಳೆದ 20 ವರ್ಷಗಳಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ತೊಡಗಿಸಿಕೊಂಡಿರುವ ಶ್ವೇತಾ,  ಎಸ್. ನಾರಾಯಣ ನಿರ್ದೇಶನದ ಸುಮತಿ  ಧಾರಾವಾಹಿಯ ಮೂಲಕ ಕಿರುತೆರೆ ಎಂಟ್ರಿ ಕೊಟ್ಟವರು.  2006 ರಲ್ಲಿ ಉದಯ ಟಿವಿಯಲ್ಲಿ ಪ್ರಸಾರವಾದ ಕಾದಂಬರಿ ಸೀರಿಯಲ್ ಮೂಲಕ ಜನಪ್ರಿಯತೆ ಪಡೆದರು. ಅಲ್ಲಿಂದ ಅನೇಕ ಸೀರಿಯಲ್​ಗಳಲ್ಲಿ ನಟಿಸಿ ಫೇಮಸ್​ ಆಗಿದ್ದಾರೆ. ‘ಸುಮತಿ’, ‘ಕಾದಂಬರಿ’, ‘ಸುಕನ್ಯಾ’, ‘ಅರುಂಧತಿ’, ‘ಸಂಗೀತಾ’ ಮುಂತಾದ ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಶ್ವೇತಾ ಚಂಗಪ್ಪ ಅವರು ವೀಕ್ಷಕರನ್ನು ರಂಜಿಸಿದ್ದಾರೆ.  ಇದೀಗ ತಮ್ಮ ಸಿನಿ ಪಯಣ ಹಾಗೂ ಕಿರುತೆರೆಯ ಪ್ರವೇಶ ಸೇರಿದಂತೆ ಜೀವನದ ಹಲವು ವಿಷಯಗಳನ್ನು ರ್ಯಾಪಿಡ್​ ರಶ್ಮಿ ಷೋನಲ್ಲಿ ತೆರೆದಿಟ್ಟಿದ್ದಾರೆ.

ಈ ಸಂದರ್ಭದಲ್ಲಿ ಅವರು ನಟ ದರ್ಶನ್​ ಜೊತೆಗಿನ ಚಿತ್ರದ ಮೆಲುಕು ಹಾಕಿದ್ದಾರೆ. ಅದು ಕಾದಂಬರಿ ಸೀರಿಯಲ್​ನಲ್ಲಿ ಮೇನ್​ ರೋಲ್​ ಮಾಡುತ್ತಿದ್ದ ಸಮಯ. ಆ ಸಮಯದಲ್ಲಿ, ತಂಗಿಗಾಗಿ ಚಿತ್ರಕ್ಕೆ ಅವರಿಗೆ ನಿರ್ದೇಶಕರು ಕಾಲ್​  ಮಾಡಿದ್ರಂತೆ. ಆದರೆ ಕಾದಂಬರಿ ಸೇರಿದಂತೆ ಇತರ ಕೆಲಸಗಳಲ್ಲಿ ಬಿಜಿ ಇದ್ದುದರಿಂದ ನನಗೆ ಸಮಯವೇ ಇರಲಿಲ್ಲ. ಸಿನಿಮಾ ಒಪ್ಪಿಕೊಂಡರೂ ಬಿಜಿ ಷೆಡ್ಯೂಲ್​ನಿಂದ ನನಗೆ ಈ ರೀತಿ ಕಷ್ಟ ಆಗುತ್ತಿದೆ ಎಂದೆ. ಆಗ ನಿರ್ದೇಶಕರು ಪರವಾಗಿಲ್ಲಮ್ಮ, ಯಾವಾಗ ಡೇಟ್ಸ್​ ಇರುತ್ತೆ ಹೇಳಿ, ನಾವೇ ಅಡ್ಜಸ್ಟ್​ ಮಾಡಿಕೊಳ್ತೇವೆ ಎಂದರು ಎಂದು ಅಂದಿನ ದಿನಗಳನ್ನು ಶ್ವೇತಾ ನೆನಪಿಸಿಕೊಂಡಿದ್ದಾರೆ. ಈ ವಿಷಯವನ್ನು ಕೇಳಿ ನನಗೆ ತುಂಬಾ ಆಶ್ಚರ್ಯವಾಯಿತು. ನನ್ನದೇ ಮೇನ್​ ಕ್ಯಾರೆಕ್ಟರ್​, ನಾಯಕ ದರ್ಶನ್​. ಅವರ ತಂಗಿಯ ಪಾತ್ರ ನನ್ನದಾಗಿತ್ತು. ಆದರೆ ಅದೆಷ್ಟು ವಿಚಿತ್ರ ಎಂದರೆ, ದರ್ಶನ್​ ಅವರಂಥ ನಟನೇ ನನ್ನ ಟೈಮ್​ ಗೆ ಅಡ್ಜಸ್ಟ್​ ಮಾಡಿಕೊಳ್ಳುತ್ತಿದ್ದರು. ಇದು ನನಗೆ ನಿಜಕ್ಕೂ ಅಚ್ಚರಿ ತಂದ ವಿಷಯ ಎಂದು ಶ್ವೇತಾ ಹೇಳಿದ್ದಾರೆ. ಅಂಥ ಮೇರುನಟನನ್ನು ನಾನು ನೋಡಿದ್ದೇ ಇಲ್ಲ. ಅವರು ಸೂಪರ್​ಸ್ಟಾರ್​. ನನಗಾಗಿ ತಮ್ಮ ಟೈಮ್​ ಅಡ್ಜಸ್ಟ್​ ಮಾಡಿಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ. 

Latest Videos

ಇದೇ ವೇಳೆ, ಈ ಸಿನಿಮಾದ ಬಳಿಕ ತಮಗೆ ಸಿನಿಮಾದಲ್ಲಿ ಅವಕಾಶಗಳು ಬಂದರೂ, ಸೀರಿಯಲ್​ಗಳ ಟೈಟ್​ ಷೆಡ್ಯೂಲ್​ನಿಂದ ಹೋಗಲು ಆಗಲಿಲ್ಲ. ಸೀರಿಯಲ್​ನಲ್ಲಿ ಮುಖ್ಯ ರೋಲ್​  ಇರುವಾಗ, ಅದನ್ನು ಬಿಟ್ಟು ಹೋಗುವ ಜಾಯಮಾನ ನನ್ನದಲ್ಲ. ನಮ್ಮನ್ನೇ ನಂಬಿ ಸೀರಿಯಲ್​ಗಳಲ್ಲಿ ಎಷ್ಟೋ ಜನ ಕೆಲಸ ಮಾಡುತ್ತಿರುತ್ತಾರೆ. ಕಾದಂಬರಿ ಸಮಯದಲ್ಲಿಯೂ ಹೀಗೆಯೇ ಆಯ್ತು. ಬಾಲಾಜಿ ಅವರೇ ನನ್ನನ್ನು ಕರೆದು ನೋಡಮ್ಮಾ ನಿಮ್ಮ ಮೇಲೆ ಇಷ್ಟು ಜನರ ಜವಾಬ್ದಾರಿ ಇದೆ. ಯಾವತ್ತಿಗೂ ಸೀರಿಯಲ್​ ಬಿಡಬೇಡಿ ಎಂದಿದ್ದರು. ಅದನ್ನೇ ಪಾಲನೆ ಮಾಡುತ್ತಾ ಬಂದವಳು ನಾನು ಎಂದಿದ್ದಾರೆ. ಇದೇ ಕಾರಣಕ್ಕೆ ಹಲವು ಸಿನಿಮಾಗಳಲ್ಲಿ ಛಾನ್ಸ್ ಮಿಸ್ ಮಾಡಿಕೊಂಡೆ ಎಂದಿದ್ದಾರೆ. ಅಂದಹಾಗೆ,  20 ವರ್ಷಗಳ ಜರ್ನಿಯಲ್ಲಿ ಶ್ವೇತಾ ಕೇವಲ ನಟಿಯಾಗಿ ಮಾತ್ರವಲ್ಲದೇ, ಖ್ಯಾತ ನಿರೂಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಧಾರಾವಾಹಿ ಮಾತ್ರವಲ್ಲದೇ ಅನೇಕ ರಿಯಾಲಿಟಿ ಶೋಗಳಲ್ಲೂ ಅವರು ಭಾಗವಹಿಸಿದ್ದಾರೆ. ‘ಬಿಗ್​ ಬಾಸ್​ ಕನ್ನಡ ಸೀಸನ್​ 2’, ‘ಹಾಕು ಹೆಜ್ಜೆ ಹಾಕು’, ‘ಕುಣಿಯೋಣು ಬಾರ’, ‘ಡಾನ್ಸಿಂಗ್ ಸ್ಟಾರ್​’, ‘ಮಜಾ ಟಾಕೀಸ್​’ ಮುಂತಾದ ಕಾರ್ಯಕ್ರಮಗಳಿಂದ ಅವರು ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ.   ಕನ್ನಡ ಬಿಗ್ ಬಾಸ್ 2 ನೇ ಸೀಸನ್ ನಲ್ಲಿ ಸ್ಪರ್ಧಿಯಾಗಿ ಶ್ವೇತಾ ಚಂಗಪ್ಪ ಭಾಗವಹಿಸಿದ್ದರು. ಇವರು ನಾಲ್ಕನೇ ಸ್ಥಾನಗಳಿಸಿದರು. ನಂತರ ಮಜಾ ಟಾಕೀಸ್ ರಾಣಿಯಾಗಿ ಎಲ್ಲರಿಗೂ ಇಷ್ಟವಾಗಿದ್ದರು. ಮೂರು ಬಾರಿ ಜೀ ಕನ್ನಡದ ಬೆಸ್ಟ್ ಆ್ಯಂಕರ್ ಪ್ರಶಸ್ತಿ ಪಡೆದಿದ್ದಾರೆ. 

5 ವರ್ಷದೊಳಗೇ ಚಿಕಿತ್ಸೆ ಕೊಟ್ರೆ ಜಗತ್ತಲ್ಲಿ ಮೂಕರೇ ಇರಲ್ಲ: ಪುನೀತ್​ ರಾಜ್​ರನ್ನು​ ನೆನೆದ ಡಾ.ದೀಪಕ್​ ಹೇಳಿದ್ದೇನು?


ಇನ್ನು ಚಿತ್ರರಂಗದಲ್ಲಿಯೂ ಶ್ವೇತಾ ಸಾಕಷ್ಟು ಹೆಸರು ಮಾಡಿದ್ದಾರೆ. ತಂಗಿಗಾಗಿ ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದ ನಟಿ,   ವಿಷ್ಣುವರ್ಧನ ಅವರ ಅಭಿನಯದ ವರ್ಷ ಚಿತ್ರದಲ್ಲಿಯೂ ಬಣ್ಣ ಹಚ್ಚಿದ್ದಾರೆ.  ಕೃಷ್ಣನ್ ಮ್ಯಾರೇಜ್ ಸ್ಟೋರಿ, ಗನ್ ಮುಂತಾದ ಚಿತ್ರಗಳಲ್ಲಿ ಕಂಠದಾನ ಕಲಾವಿದೆಯಾಗಿಯೂ ವಿಶೇಷ ಮನ್ನಣೆ ಗಿಟ್ಟಿಸಿಕೊಂಡಿದ್ದಾರೆ.  ಇಷ್ಟೇ ಅಲ್ಲದೇ ಶಿವರಾಜ್​ ಕುಮಾರ್​  ಅವರ 125ನೇ ಸಿನಿಮಾ ವೇದಾದಲ್ಲಿಯೂ ನಟಿಸಿರೋ ಶ್ವೇತಾ ಅವರು ಅಲ್ಲಿ ಪಾರಿ ಆಗಿ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ.   ಅರುಂಧತಿ ಧಾರಾವಾಹಿಯ ನಟನೆಗೆ ಶ್ವೇತಾ ಅವರಿ,  ಕರ್ನಾಟಕ ಸರಕಾರದ ಮಧ್ಯಂಸನ್ಮಾನ ಪ್ರಶಸ್ತಿ ಲಭಿಸಿದೆ.
 
ಶ್ವೇತಾ ಅವರು ಈ ಎಲ್ಲಾ ಕಾರ್ಯಕ್ರಮಗಳ ನಡುವೆಯೂ ತಮ್ಮ ಮಗ ಜಿಯಾನ್​ ಜೊತೆ ಕಾಲ ಕಳೆಯುತ್ತಿದ್ದಾರೆ. ನನ್ನ ಜೀವನದಲ್ಲಿ ಮೊದಲ ಪ್ರಾಮುಖ್ಯತೆ ಪಡೆಯುವುದು ನನ್ನ ಮಗ ಜಿಯಾನ್. ನನ್ನ ಜೀವನದಲ್ಲಿ ಯಾವುದೇ ಕೆಲಸ ಮುಂದೆ ಬಂದರೂ ನನ್ನ ಮಗನ ಮುಂದೆ ಯಾವುದೂ ಇಲ್ಲ. ಅವನಿಗಾಗಿ ಯಾವ ರೀತಿ ತ್ಯಾಗ ಬೇಕಿದ್ದರೂ ಮಾಡುತ್ತೀನಿ. ದೇವರ ಆಶೀರ್ವಾದದಿಂದ ನನಗೆ ದೊಡ್ಡ ಸಪೋರ್ಟ್ ಅಂದ್ರೆ ಅಮ್ಮ ಮತ್ತು ಗಂಡ. ಕೆಲಸ ಅಂತ ನಾನು ಬ್ಯುಸಿಯಾಗಿರುವಾಗ ನನ್ನ ಮಗನನ್ನು ಇಬ್ಬರೂ ನೋಡಿಕೊಳ್ಳುತ್ತಾರೆ. ನನ್ನ ವೃತ್ತಿ ಬದುಕಿನಲ್ಲಿರುವ ಹಲವು ಕಮಿಟ್ಮೆಂಟ್ ಬ್ಯುಸಿಯಲ್ಲಿ ನಾನಿರುತ್ತೀನಿ ಅದನ್ನು ಅರ್ಥ ಮಾಡಿಕೊಂಡು ನನಗೆ ಸಪೋರ್ಟ್ ಮಾಡುತ್ತಾರೆ ಎಂದು ಶ್ವೇತಾ ಚಂಗಪ್ಪ ಟೈಮ್ಸ್ ಆಫ್‌ ಇಂಡಿಯಾ ಸಂದರ್ಶನದಲ್ಲಿ ಮಾತನಾಡಿದ್ದರು.  

ಚೈತ್ರಾ ಮಾಟಗಾತಿ ಅಂದ ಜಗದೀಶ್​! ಜೈಲಲ್ಲಿ ನಿಮ್ಮ ಸೀನಿಯರ್​ಗೆ ವಿಷ್​ ಮಾಡಿದ್ರಾ ಕೇಳಿದ ಸುದೀಪ್​!

 

click me!