ಇಡಿ ನಿಗೂಢ ನಡೆಗೆ ಸಿಎಂ ಸಿದ್ದರಾಮಯ್ಯಗೆ ಟೆನ್ಶನ್ ಜೋರು, ಪ್ರತಿತಂತ್ರಕ್ಕೆ ತಯಾರಿ!

Oct 2, 2024, 11:19 PM IST

ಸಿದ್ದರಾಮಯ್ಯ ವಿರುದ್ದ ಇಡಿ ಅಧಿಕಾರಿಗಳು ಇಸಿಐಆರ್ ದಾಖಲಿಸಿದ್ದಾರೆ. ಈ ಮಾಹಿತಿ ಪಡೆಯಲು ಸಿದ್ದರಾಮಯ್ಯ ಪಡೆ ಸತತ ಪ್ರಯತ್ನ ನಡೆಯುತ್ತಿದೆ ಅನ್ನೋ ಮಾಹಿತಿಗಳು ಕೇಳಿಬರುತ್ತಿದೆ. ಇತ್ತ ಇಡಿ ಅದಿಕಾರಿಗಳ ನಡೆ ನಿಗೂಢವಾಗಿದ್ದು, ಕಾಂಗ್ರೆಸ್ ತಲೆನೋವು ಹೆಚ್ಚಿಸಿದೆ. ಇಡಿ ಏಕಾಏಕಿ ಸಿದ್ದರಾಮಯ್ಯ ಹಾಗೂ ಆಪ್ತರ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ. ಮೈಸೂರು, ಬೆಂಗಳೂರು ಹಾಗೂ ಬಾದಾಮಿಯಲ್ಲೂ ದಾಳಿಯಾಗುವ ಸಾಧ್ಯತೆಗಳು ಕೇಳಿಬರುತ್ತಿದೆ. ಮುಡಾ ಕೇಸ್ ಸಂಬಂಧ ಕೆಲ ಮಹತ್ವದ ಬೆಳವಣಿಗೆಯಾಗಿದೆ.