Mar 28, 2023, 3:42 PM IST
ಮಾ 30ರಂದು ತೆರೆ ಮೆಲೆ ಬರಲು ಸಿದ್ದವಾಗಿರುವ 'ಗುರುದೇವ್ ಹೊಯ್ಸಳ' ತನ್ನ ಹಾಡಿನಿಂದ ಎಲ್ಲೆಡೆ ಸದ್ದು ಮಾಡುತ್ತಿದೆ. ಇದು ಧನಂಜಯ್ 25ನೇ ಸಿನಿಮಾ ಅನ್ನೋದು ವಿಶೇಷವಾಗಿದೆ. ಉತ್ತರ ಕರ್ನಾಟಕ ಭಾಗದಲ್ಲೇ ಹೆಚ್ಚಿನ ಚಿತ್ರೀಕರಣ ಮಾಡಿದ ಈ ಸಿನಿಮಾ ಮೂರನೇ ಹಾಡನ್ನು ಬಿಡುಗಡೆ ಮಾಡಿದೆ. ‘ಬ್ಯಾರೇನೇ ಐತಿ’ ಎನ್ನುವ ಈ ಹಾಡು ಬಿಡುಗಡೆ ಮಾಡಿದ್ದು, ಇದು ಉತ್ತರ ಕರ್ನಾಟಕ ಭಾಗದಲ್ಲಿ ವಾಸವಾಗಿರುವ ಅಲೆಮಾರಿಗಳ ಜೀವನ ಹೇಗಿರುತ್ತದೆ ಎಂದು ವರ್ಣನೆ ಮಾಡುತ್ತದೆ. ಅಲೆಮಾರಿಗಳ ಬಗ್ಗೆ ಇರುವ ಈ ಹಾಡಿಗೆ ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದು, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಸೊಗಸಾಗಿ ಹಾಡಿದ್ದಾರೆ.