ಸಿಎಂ ತವರು ಜಿಲ್ಲೆಯಲ್ಲಿ ಜೀವಂತವಾಗಿದೆ ಜೀತಪದ್ದತಿ‌!

Dec 17, 2018, 3:30 PM IST

ಹಾಸನ[ಡಿ.17]: ಸಿಎಂ ತವರು ಜಿಲ್ಲೆ ಹಾಸನದಲ್ಲೊಂದು ಅಮಾನವೀಯ ಜೀತಪದ್ದತಿ‌ ಬೆಳಕಿಗೆ ಬಂದಿದೆ. ಇಲ್ಲಿ ಜೀತದಾಳುಗಳಾಗಿ ದುಡಿಯುತ್ತಿದ್ದ 17 ಮಹಿಳೆಯರು, 4 ಮಕ್ಕಳು ಸೇರಿ ಒಟ್ಟು  52  ಜನರನ್ನ‌ ಪೊಲೀಸರು ಮುಕ್ತಗೊಳಿಸಿದ್ದಾರೆ. ಹಲವು ವರ್ಷಗಳಿಂದ ಕೂಲಿ ಮಾಡಿದ್ರೂ ಸಂಬಳವನ್ನೂ ನೀಡದೆ ಇಲ್ಲಿಂದ‌ ಹೋಗಲೂ ಬಿಡದಂತೆ ಬಂಧಿಸಿಟ್ಟಿದ್ದ ಆರೋಪ ಕೇಳಿ ಬಂದಿದ್ದು, ಇಲ್ಲಿಂದ ತಪ್ಪಿಸಿಕೊಂಡು ಹೋಗಿದ್ದ ಕೃಷ್ಣಪ್ಪ ಎಂಬುವವರಿಂದ ಜೀತದ ಬಗ್ಗೆ ಮಾಹಿತಿ ಲಭಿಸಿತ್ತು. ಸದ್ಯ ಆರೋಪಿ ಮುರುಳಿ ಪರಾರಿಯಾಗಿದ್ದಾರೆ.