Published : Apr 14, 2026, 07:30 AM ISTUpdated : Apr 14, 2026, 09:38 PM IST

State News Live: ಶೃಂಗೇರಿಗೆ ಹೆಚ್ಚುವರಿ ₹50 ಕೋಟಿ ಅನುದಾನ - ಸಚಿವ ಸತೀಶ್ ಜಾರಕಿಹೊಳಿ ಭರವಸೆ

ಸಾರಾಂಶ

ಬೆಂಗಳೂರು (ಏ.14): ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪ ಚುನಾವಣೆ ಬಳಿಕ ರಾಜ್ಯದಲ್ಲಿ ಸಂಪುಟ ಪುನರ್‌ರಚನೆ ಚರ್ಚೆ ಜೋರಾಗಿದ್ದು, ಸಚಿವ ಸ್ಥಾನ ಬಯಸಿ ದೆಹಲಿಗೆ ತೆರಳಿರುವ ಕಾಂಗ್ರೆಸ್ ಹಿರಿಯ ಶಾಸಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ತಮ್ಮ ಅಹವಾಲು ಮಂಡಿಸಿದ್ದಾರೆ. ರಾಷ್ಟ್ರ ರಾಜಧಾನಿಯ ರಾಜಾಜಿ ಮಾರ್ಗದಲ್ಲಿರುವ ಖರ್ಗೆ ಅವರ ಮನೆಗೆ ಸೋಮವಾರ 23 ಶಾಸಕರ ನಿಯೋಗ ತೆರಳಿದ್ದು, ರಾಜ್ಯ ರಾಜಕಾರಣದ ಕುರಿತು ಚರ್ಚೆ ನಡೆಸಿದ್ದಾರೆ. ಅದರೊಂದಿಗೆ ಇಂದಿನ ರಾಜ್ಯ ಸುದ್ದಿಗಳ ಅಪ್‌ಡೇಟ್‌ ಇಲ್ಲಿದೆ.

 

09:38 PM (IST) Apr 14

ಶೃಂಗೇರಿಗೆ ಹೆಚ್ಚುವರಿ ₹50 ಕೋಟಿ ಅನುದಾನ - ಸಚಿವ ಸತೀಶ್ ಜಾರಕಿಹೊಳಿ ಭರವಸೆ

ಹೆಬ್ಬೆ ಭವಾನಿ ಶಂಕರ ದೇವಸ್ಥಾನದ ಹತ್ತಿರದ ನದಿಗೆ ಸೇತುವೆ ನೀರ್ಮಾಣ ಸೇರಿದಂತೆ ಶೃಂಗೇರಿ ತಾಲೂಕಿನ ಅಭಿವೃದ್ಧಿಗೆ ಹೆಚ್ಚುವರಿ ₹50 ಕೋಟಿ ನೀಡಲಾಗುವುದು ಎಂದು ಸಚಿವ ಸತೀಶ್ ಜಾರಕಿಹೊಳಿ ಭರವಸೆ ನೀಡಿದರು.

Read Full Story

09:27 PM (IST) Apr 14

ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವಿಗೆ ಗ್ಯಾರಂಟಿ ಯೋಜನೆಗಳೇ ಶ್ರೀರಕ್ಷೆ - ಸಲೀಂ ಅಹಮದ್‌

ಐದು ನಗರ ಪಾಲಿಕೆಗಳ ಚುನಾವಣೆಗೆ ಕಾಂಗ್ರೆಸ್‌ ಕಾರ್ಯಕರ್ತರು ಸಿದ್ಧರಾಗಬೇಕು. ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆಗಳೇ ಪಕ್ಷದ ಅಭ್ಯರ್ಥಿಗಳಿಗೆ ಶ್ರೀರಕ್ಷೆಯಾಗಲಿದೆ ಎಂದು ಸಲೀಂ ಅಹಮದ್‌ ತಿಳಿಸಿದರು.

Read Full Story

08:46 PM (IST) Apr 14

ಚಿಕ್ಕಮಗಳೂರಲ್ಲೂ ಕೈ ಕಾರ್ಯಕರ್ತರ ಅಸಮಾಧಾನ - ಸಿಎಂ ಪ್ರತಿಮೆ ಅನಾವರಣ ಬೆನ್ನಲ್ಲೇ ಹೈಕಮಾಂಡ್‌ಗೆ ಸಚಿನ್ ಮೀಗಾ ಪತ್ರ!

ಚಿಕ್ಕಮಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯರ ಪ್ರತಿಮೆ ಅನಾವರಣ ಕಾರ್ಯಕ್ರ, ಕಾಂಗ್ರೆಸ್‌ನಲ್ಲಿ ಆಂತರಿಕ ಭಿನ್ನಮತಕ್ಕೆ ಕಾರಣವಾಗಿದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ಕೆಪಿಸಿಸಿ ಕಿಸಾನ್ ಘಟಕದ ರಾಜ್ಯಾಧ್ಯಕ್ಷ ಸಚಿನ್ ಮೀಗಾ, ಹೈಕಮಾಂಡ್‌ಗೆ ಪತ್ರ ಬರೆದಿದ್ದಾರೆ.

Read Full Story

08:23 PM (IST) Apr 14

Watermelon - ಬೇಸಿಗೆಯಲ್ಲಿ ಕಲ್ಲಂಗಡಿ ತಿಂತೀರಾ? ಈ ಸಮಯದಲ್ಲಿ ತಿಂದರೆ ಆರೋಗ್ಯಕ್ಕೆ ಡೇಂಜರ್!

ಬೇಸಿಗೆಯಲ್ಲಿ ಆರೋಗ್ಯವಾಗಿರಲು ಕಲ್ಲಂಗಡಿ ಹಣ್ಣು ತಿನ್ನುತ್ತಿದ್ದೀರಾ? ಆದರೆ, ಯಾವ ಸಮಯದಲ್ಲಿ ತಿನ್ನುತ್ತಿದ್ದೀರಿ ಎಂಬುದು ಮುಖ್ಯ. ಕಲ್ಲಂಗಡಿ ತಿನ್ನಲು ಸರಿಯಾದ ಸಮಯ ಯಾವುದು? ಯಾವ ಸಮಯದಲ್ಲಿ ತಿನ್ನಬಾರದು? ಇಲ್ಲಿದೆ ಮಾಹಿತಿ.

Read Full Story

08:05 PM (IST) Apr 14

ಎಆರ್‌ಎಐ ಪರೀಕ್ಷಾ ಕೇಂದ್ರಕ್ಕೆ 500 ಎಕರೆ ಬೇಕು - ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

ಎಆರ್‌ಎಐ ಪರೀಕ್ಷಾ ಕೇಂದ್ರ ಸ್ಥಾಪನೆಗೆ 500 ರಿಂದ 600 ಎಕರೆ ಭೂಮಿಯ ಅಗತ್ಯವಿದೆ. ಏ.30ರೊಳಗೆ ಜಾಗದ ಕುರಿತಾದ ಸಮಸ್ಯೆ ಬಗೆಹರಿಸಿಕೊಡುವಂತೆ ರಾಜ್ಯ ಕೈಗಾರಿಕಾ ಸಚಿವರಿಗೆ ಮನವಿ ಮಾಡಲಾಗಿದೆ ಎಂದು ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

Read Full Story

08:00 PM (IST) Apr 14

ಲವ್‌ ಮಾಡಿದ್ದೆ, ಆದ್ರೆ ಅದೆಲ್ಲಾ ಈಗ ಹೇಳಲ್ಲ ಎನ್ನುತ್ತಲೇ 'ಭಾಗ್ಯ'ಳ ಗುಟ್ಟು ಬಿಚ್ಚಿಟ್ಟ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಕಾಲೇಜು ದಿನಗಳ ಪ್ರೇಮಕಥೆಯನ್ನು ಬಹಿರಂಗಪಡಿಸಿದ್ದಾರೆ. ಜೊತೆಗೆ, ತಮ್ಮ ಪತ್ನಿಯ ಟೆಂಪಲ್ ರನ್ ಹಾಗೂ ತಮ್ಮ ಸರ್ಕಾರದ 'ಭಾಗ್ಯ' ಯೋಜನೆಗಳ ಹಿಂದಿನ ನಿಜವಾದ ಅರ್ಥವನ್ನು ಸಂದರ್ಶನವೊಂದರಲ್ಲಿ ವಿವರಿಸಿದ್ದಾರೆ.
Read Full Story

07:49 PM (IST) Apr 14

ಕುಂದಾಪುರ–ತೀರ್ಥಹಳ್ಳಿ ಸಂಪರ್ಕಿಸುವ ಬಾಳೆಬರೆ ಘಾಟಿ ಸಂಪೂರ್ಣ ಬಂದ್! ಪರ್ಯಾಯವಾಗಿ ಈ ಮಾರ್ಗ ಬಳಸಿ

ಉಡುಪಿಯ ಕುಂದಾಪುರ–ತೀರ್ಥಹಳ್ಳಿ ರಾಜ್ಯ ಹೆದ್ದಾರಿ 52ರಲ್ಲಿರುವ ಬಾಳೆಬರೆ ಘಾಟಿಯಲ್ಲಿ ಭೂಕುಸಿತ ಉಂಟಾದ ಕಾರಣ, ಸಾರ್ವಜನಿಕರ ಸುರಕ್ಷತೆಗಾಗಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಕಾಮಗಾರಿ ಪೂರ್ಣಗೊಳ್ಳುವವರೆಗೆ ಪ್ರಯಾಣಿಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
Read Full Story

07:20 PM (IST) Apr 14

ಚಿಕ್ಕಮಗಳೂರು - ಪೇಷಂಟ್ ನೋಡ್ರಿ ಅಂದ್ರೆ ಆಸ್ಪತ್ರೆ ಬೆಡ್‌ ಮೇಲೆ ಮಲಗಿ ರೀಲ್ಸ್ ನೋಡೋ ನರ್ಸ್‌ಗಳು! ವಿಡಿಯೋ ವೈರಲ್

ಚಿಕ್ಕಮಗಳೂರಿನ ಬಾಳೆಹೊನ್ನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನರ್ಸ್‌ಗಳು ಕರ್ತವ್ಯ ನಿರ್ಲಕ್ಷಿಸಿ ಆಸ್ಪತ್ರೆಯ ಬೆಡ್ ಮೇಲೆ ರೀಲ್ಸ್ ನೋಡುತ್ತಿರುವುದು ಬೆಳಕಿಗೆ ಬಂದಿದೆ. ವೈದ್ಯರು ಸಹ ಸಮಯಕ್ಕೆ ಸರಿಯಾಗಿ ಲಭ್ಯವಿಲ್ಲದ ಕಾರಣ ರೋಗಿಗಳು ತೊಂದರೆ ಅನುಭವಿಸುತ್ತಿದ್ದು, ನಿರ್ಲಕ್ಷ್ಯ ತೋರಿದ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
Read Full Story

06:45 PM (IST) Apr 14

ಬೆಂಗಳೂರಿನಿಂದ ಹುಬ್ಬಳ್ಳಿ ಮೂಲಕ ಪಶ್ಚಿಮ ಬಂಗಾಳಕ್ಕೆ ಬೇಸಿಗೆ ವಿಶೇಷ ಎಕ್ಸ್ ಪ್ರೆಸ್ ರೈಲು, ಎಷ್ಟು ದಿನ ಪ್ರಯಾಣ?

ಬೇಸಿಗೆ ರಜೆಯ ಪ್ರಯಾಣಿಕರ ಅನುಕೂಲಕ್ಕಾಗಿ, ನೈಋತ್ಯ ರೈಲ್ವೆಯು ಹುಬ್ಬಳ್ಳಿ ಮತ್ತು ಪಶ್ಚಿಮ ಬಂಗಾಳದ ಅಲಿಪುರ್ ದ್ವಾರ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಘೋಷಿಸಿದೆ. ಈ ರೈಲು (07323/07324) ಬೆಂಗಳೂರಿನ ಎಸ್ಎಂವಿಟಿ ಮತ್ತು ಯಲಹಂಕ ಮೂಲಕ ಒಂದು ಟ್ರಿಪ್ ಮಾತ್ರ ಸಂಚರಿಸಲಿದೆ. ಏಪ್ರಿಲ್ 15 ರಂದು ಹುಬ್ಬಳ್ಳಿಯಿಂದ ಮತ್ತು ಏಪ್ರಿಲ್ 19 ರಂದು ಅಲಿಪುರ್ ದ್ವಾರ್‌ನಿಂದ ಈ ರೈಲು ಹೊರಡಲಿದೆ.
Read Full Story

06:39 PM (IST) Apr 14

Bael Juice Benefits - ಹೊಟ್ಟೆ ಉರಿ, ಸನ್‌ಸ್ಟ್ರೋಕ್‌ಗೆ ಬೇಸಿಗೆಯ ಬೆಸ್ಟ್ ಮದ್ದು ಬೇಲದ ಹಣ್ಣಿನ ಶರಬತ್ತು!

ಬೇಸಿಗೆ ಬಂತೆಂದರೆ ಸಾಕು, ಸುಡು ಬಿಸಿಲು, ಸನ್‌ಸ್ಟ್ರೋಕ್ ಭಯ ಹಾಗೂ ಹೊಟ್ಟೆ ಉರಿ ಶುರು. ಈ ಎಲ್ಲಾ ಸಮಸ್ಯೆಗಳಿಗೆ ಬೇಲದ ಹಣ್ಣಿನ ಶರಬತ್ತು ಒಂದು ಸೂಪರ್ ದೇಸಿ ಮದ್ದು. ಬೇಲದ ಹಣ್ಣಿನಲ್ಲಿ ದೇಹವನ್ನು ತಂಪಾಗಿಸುವ ಗುಣವಿದೆ.

Read Full Story

06:33 PM (IST) Apr 14

RSS ವಿಷಸರ್ಪ ಎಂದವರಿಗೆ ಶಾಕ್ ನೀಡಿದ ಸ್ವಪಕ್ಷೀಯರು - ಕಾಂಗ್ರೆಸ್ ಹುದ್ದೆಗೆ RSS ಮುಖಂಡರ ಎಂಟ್ರಿ

ಉತ್ತರಕನ್ನಡ ಜಿಲ್ಲಾ ಕಾಂಗ್ರೆಸ್‌ನಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತರಿಗೆ ಪದಾಧಿಕಾರಿಗಳ ಹುದ್ದೆ ನೀಡಿರುವುದು ಪಕ್ಷದ ಕಾರ್ಯಕರ್ತರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಂಬಂಧ ಕೆಪಿಸಿಸಿಗೆ ದೂರು ಸಲ್ಲಿಕೆಯಾದ ನಂತರ, ಜಿಲ್ಲಾ ಸಮಿತಿಯು ವಿವಾದಿತ ನೇಮಕಾತಿಗಳಿಗೆ ತಡೆ ನೀಡಿದೆ. 

Read Full Story

06:14 PM (IST) Apr 14

ಬೆಂಗಳೂರಲ್ಲಿ ಸರಣಿ ಕಳ್ಳತನ - 27 ಲಕ್ಷ ಮೌಲ್ಯದ ಚಿನ್ನ ಸಹಿತ ಬೆಲೆಬಾಳುವ ಹಲವು ವಸ್ತುಗಳು ಸಹಿತ ಆರೋಪಿಗಳು ವಶಕ್ಕೆ!

ಬೆಂಗಳೂರು ನಗರದಲ್ಲಿ ನಡೆದ ಸರಣಿ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಹಲವು ಆರೋಪಿಗಳನ್ನು ಬಂಧಿಸಿದ್ದಾರೆ. ಆರ್‌ಟಿ ನಗರ, ಬಸವೇಶ್ವರ ನಗರ ಮತ್ತು ಕೈಗಾರಿಕಾ ಪ್ರದೇಶಗಳಲ್ಲಿ ನಡೆದ ಕಾರ್ಯಾಚರಣೆಗಳಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು ಹಾಗೂ ಕೈಗಾರಿಕಾ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಮೂಲಕ ನಗರದಲ್ಲಿ ಆತಂಕ ಸೃಷ್ಟಿಸಿದ್ದ ಕಳ್ಳತನದ ಜಾಲವನ್ನು ಪೊಲೀಸರು ಭೇದಿಸಿದ್ದಾರೆ.
Read Full Story

06:12 PM (IST) Apr 14

ಶಿವಮೊಗ್ಗದಲ್ಲಿ ಪಶುವೈದ್ಯೆ ಸಮೀಕ್ಷಾ ರೆಡ್ಡಿಯನ್ನ ಬಲಿ ಪಡೆದಿದ್ದ ನೀರಾನೆ 'ಹಂಸಿನಿ'ಯೂ ಸಾವು! ಕಾರಣವೇನು ಗೊತ್ತಾ?

ಶಿವಮೊಗ್ಗದ ತಾವರೆಕೊಪ್ಪ ಸಫಾರಿಯಲ್ಲಿ ಪಶುವೈದ್ಯೆ ಸಮೀಕ್ಷಾ ರೆಡ್ಡಿಯನ್ನು ಬಲಿ ಪಡೆದಿದ್ದ 12 ವರ್ಷದ ಹಂಸಿನಿ ಎಂಬ ನೀರಾನೆ ಸಾವನ್ನಪ್ಪಿದೆ. ಈ ಹಿಂದೆ ಎರಡು ಬಾರಿ ಮರಿಗಳನ್ನು ಕಳೆದುಕೊಂಡಿದ್ದ ಹಂಸಿನಿಯ ಸಾವು ಮೃಗಾಲಯಕ್ಕೆ ನಷ್ಟವಾಗಿದೆ.

Read Full Story

05:47 PM (IST) Apr 14

ಬಾಬಾ ಸಾಹೇಬರು ವಿಶ್ವ ಮೆಚ್ಚುವಂತಹ ಮಹಾನಾಯಕ - ನಟ ದುನಿಯಾ ವಿಜಯ್

ಬಾಬಾ ಸಾಹೇಬರು ವಿಶ್ವ ಮೆಚ್ಚುವಂತಹ ಮಹಾನಾಯಕ. ಅವರು ಹಾಕಿಕೊಟ್ಟಿರುವ ಮಾರ್ಗದಲ್ಲಿ ನಾವು ನಡೆದಾಗ ಮಾತ್ರ ಇಂಥ ಕಾರ್ಯಕ್ರಮಗಳಿಗೆ ಅರ್ಥ ಸಿಗುತ್ತದೆ ಎಂದು ನಟ ದುನಿಯಾ ವಿಜಯ್ ಹೇಳಿದರು.

Read Full Story

05:33 PM (IST) Apr 14

ಹಿರಿಯ ಶಾಸಕರು ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ - ಗೃಹ ಸಚಿವ ಪರಮೇಶ್ವರ್‌

ಹಿರಿಯ ಶಾಸಕರು ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ. ಹೈಕಮಾಂಡ್‌ ಹಿರಿಯ ಸಚಿವರು ರಾಜೀನಾಮೆ ನೀಡಬೇಕೆಂದು ತೀರ್ಮಾನ ತೆಗೆದುಕೊಂಡರೆ ಅದನ್ನು ಪ್ರಶ್ನಿಸದೆ ಒಪ್ಪಿಕೊಳ್ಳಲೇ ಬೇಕಾಗುತ್ತದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

Read Full Story

05:24 PM (IST) Apr 14

ವಿಜಯಪುರದಲ್ಲಿ ಮತ್ತೆ ಮೊಳಗಿದ ಗುಂಡಿನ ಸದ್ದು - ಗ್ರಾಮ ಪಂಚಾಯತ್ ಸದಸ್ಯನ ಭೀಕರ ಹತ್ಯೆ

ವಿಜಯಪುರದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿ ಬಂದಿದೆ. ಗುಂಡು ಹಾರಿಸಿ ಗ್ರಾಮ ಪಂಚಾಯತ್ ಸದಸ್ಯನ ಕೊಲೆ ಮಾಡಲಾಗಿದೆ. ವಿಜಯಪುರ ನಗರದ ಹೊರವಲಯದ ಅಲಿಯಾಬಾದ್ ಬಳಿ ಘಟನೆ ನಡೆದಿದೆ.

Read Full Story

05:18 PM (IST) Apr 14

ಮೋದಿ ರಾಜಕೀಯದಲ್ಲೂ ಮಹಿಳೆಯರಿಗೆ ಅವಕಾಶ ನೀಡ್ತಿದ್ದಾರೆ - ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಮಹಿಳಾ ಮೀಸಲಾತಿಯು ಒಂದು ಚರಿತ್ರಾರ್ಹ ನಿರ್ಣಯವಾಗಿದ್ದು, ಮಹಿಳೆಯರ ಜವಾಬ್ದಾರಿ ಹೆಚ್ಚಾಗುತ್ತಿದೆ ಎಂದು ಕೇಂದ್ರ ಉದ್ಯೋಗ ಮತ್ತು ಕಾರ್ಮಿಕ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

Read Full Story

05:07 PM (IST) Apr 14

ಎರಡು ತಿಂಗಳಲ್ಲಿ ರಾಜ್ಯ ರಾಜಕೀಯದಲ್ಲಿ ಭಾರಿ ಬದಲಾವಣೆ - ಕೆ.ಎಸ್.ಈಶ್ವರಪ್ಪ ಭವಿಷ್ಯ

ಅಧಿಕಾರ ದಾಹ ಚಟುವಟಿಕೆಗಳಿಂದ ಬಳಲುತ್ತಿರುವ ರಾಜ್ಯ ಕಾಂಗ್ರೆಸ್‌ ಮುಖಂಡರ ನಡೆಯಿಂದಾಗಿ ರಾಜ್ಯ ರಾಜಕಾರಣದಲ್ಲಿ ಎರಡು ತಿಂಗಳ ಒಳಗಾಗಿ ಸಾಕಷ್ಟು ಬದಲಾವಣೆಗಳಾಗಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದರು.

Read Full Story

04:57 PM (IST) Apr 14

Bengaluru ಪತಿ ಸಾವು,ನಾನು ಮುಟ್ಟೇ ಇಲ್ಲ ಅಂತಿರೋ ಪತ್ನಿ, ಆತ್ಮ*ಹ*ತ್ಯೆಯೋ, ಕೊ*ಲೆಯೋ? ಸತ್ಯ ಹೇಳಲಿದೆ ಆ ಪರೀಕ್ಷೆ!

ಬೆಂಗಳೂರಿನ ಮಾರತಹಳ್ಳಿಯಲ್ಲಿ ನಡೆದ ತೌಸಿಬ್ ಪಾಷ ಅವರ ಸಾವಿನ ಪ್ರಕರಣವು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಗೊಂದಲ ಸೃಷ್ಟಿಸಿದೆ. ಪತ್ನಿ ಸೋಹನಾ ತಾನೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಹೇಳಿದರೆ, ಮೃತನ ದೇಹದಲ್ಲಿ ಚಾಕು ಇರಿತದ ಗುರುತುಗಳಿರುವುದರಿಂದ ಪೊಲೀಸರು ಸತ್ಯಾಸತ್ಯತೆ ತಿಳಿಯಲು ಆಕೆಯನ್ನು ಪಾಲಿಗ್ರಾಫ್ ಪರೀಕ್ಷೆಗೆ ಒಳಪಡಿಸಲು ಮುಂದಾಗಿದ್ದಾರೆ.
Read Full Story

04:42 PM (IST) Apr 14

ಪೋಷಕರೇ ಮಕ್ಕಳಲ್ಲಿ 'ಪಂಚ' ಗುಣಗಳಿದ್ದರೆ, ನೀವು ಸೂಪರ್ ಕಿಡ್‌ ಹೊಂದಿದ್ದೀರಿ ಎಂದರ್ಥ

ಪ್ರತಿಯೊಬ್ಬ ಪೋಷಕರಿಗೂ ತಮ್ಮ ಮಕ್ಕಳು ವಿಶೇಷವಾಗಿರಬೇಕು, ಜೀವನದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆಯಬೇಕು ಎಂಬ ಆಸೆ ಇರುವುದು ಸಹಜ. ಆದರೆ, ಬಾಲ್ಯದಿಂದಲೇ ಮಕ್ಕಳಲ್ಲಿ ಕಾಣಿಸುವ ಕೆಲವು ಗುಣಗಳು ಅವರ ಭವಿಷ್ಯದ ಪ್ರತಿಭೆಗೆ ಸಂಕೇತ ಎಂದು ಮನಃಶಾಸ್ತ್ರಜ್ಞರು ಹೇಳುತ್ತಾರೆ. ಆ ಗುಣಗಳು ಯಾವುವು ನೋಡೋಣ ಬನ್ನಿ.
Read Full Story

04:39 PM (IST) Apr 14

ಅಲ್ಪ ಕಾಲದಲ್ಲೇ ಮುರಿದುಬಿದ್ದ ದಾಂಪತ್ಯ - ಇತ್ತೀಚೆಗೆ ಡಿವೋರ್ಸ್‌ ಪಡೆದ ಕನ್ನಡ ಕಿರುತೆರೆ ನಟಿಯರಿವರು!

Kannada Actress Divorce: ಇತ್ತೀಚೆಗೆ ಡಿವೋರ್ಸ್‌ ಆಗುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. ಕನ್ನಡ ಕಿರುತೆರೆ ನಟಿಯರಲ್ಲಿ ಕೆಲವರು ಕೆಲವೇ ಕೆಲವು ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ. ಹಾಗಾದರೆ ಯಾರು ಡಿವೋರ್ಸ್‌ ಪಡೆದಿದ್ದಾರೆ? ಏನಾಗಿತ್ತು? ಈ ಬಗ್ಗೆ ಮಾಹಿತಿ ಇಲ್ಲಿದೆ.

 

Read Full Story

03:56 PM (IST) Apr 14

ವಿದ್ಯಾರ್ಥಿಗಳಿಗಾಗಿ ಕೇವಲ 10 ರೂ.ಯಲ್ಲಿ ತಿಂಡಿ ನೀಡುವ ತಿಪ್ಪಣ್ಣ ಹೋಟೆಲ್‌; ಪ್ರೇಮಾ ಅಜ್ಜಿ ಅಂದ್ರೆ ಫೇಮಸ್

ಕೊಟ್ಟೂರಿನಲ್ಲಿರುವ ತಿಪ್ಪಣ್ಣ ಹೋಟೆಲ್ ಕಳೆದ 10 ವರ್ಷಗಳಿಂದ ವಿದ್ಯಾರ್ಥಿಗಳಿಗೆ ಕೇವಲ 10 ರೂಪಾಯಿಗೆ ಉಪಹಾರ ನೀಡುತ್ತಿದೆ. ತಾವು ಓದಲಿಲ್ಲವಾದರೂ, ಓದುವ ಮಕ್ಕಳಿಗೆ ಸಹಾಯವಾಗಲಿ ಎಂಬ ಸದುದ್ದೇಶದಿಂದ ಹೋಟೆಲ್ ಮಾಲೀಕರು ಈ ಸಮಾಜಮುಖಿ ಕಾರ್ಯ ಮಾಡುತ್ತಿದ್ದಾರೆ.
Read Full Story

03:22 PM (IST) Apr 14

ಸಿನಿಮಾ ಮಾಡದಿದ್ರೂ ವರ್ಷಕ್ಕೆ 10 ಕೋಟಿ ರೂ ಆದಾಯ ಪಡೆಯೋ ನಟ ನಾಗ ಚೈತನ್ಯ ಪತ್ನಿ Sobhita Dhulipala, ಹೇಗೆ?

Sobhita Dhulipala: ನಾಗ ಚೈತನ್ಯ ಜೊತೆ ಮದುವೆಯಾದ ಬಳಿಕ ಶೋಭಿತಾ ಧೂಳಿಪಾಲ ಬ್ರ್ಯಾಂಡ್ ವ್ಯಾಲ್ಯೂ ಹೆಚ್ಚಾಗಿದೆ. ಸಿನಿಮಾಗಳಿಗಿಂತ ಹೆಚ್ಚಾಗಿ ಬ್ರ್ಯಾಂಡ್ ಪ್ರಚಾರಗಳಿಂದಲೇ ಕೋಟಿ ಸಂಪಾದಿಸುತ್ತಿದ್ದಾರೆ. ವರ್ಷಕ್ಕೆ ಬರೀ ಬ್ರ್ಯಾಂಡ್ ಪ್ರಮೋಷನ್‌ಗಳಿಂದಲೇ ಶೋಭಿತಾ ಕೋಟಿಗಟ್ಟಲೆ ಗಳಿಸುತ್ತಿದ್ದಾರೆ.

 

Read Full Story

03:16 PM (IST) Apr 14

ಸುಡು ಬಿಸಿಲಿಗೆ ಬೆಂದ ಕರ್ನಾಟಕ - ದಾಖಲೆ ಬರೆದ ತಾಪಮಾನ, ಕಲಬುರಗಿಯಲ್ಲಿ 42 ಡಿಗ್ರಿ ಸೆಲ್ಸಿಯಸ್!

ರಾಜ್ಯಾದ್ಯಂತ ಬಿಸಿಲಿನ ತೀವ್ರತೆ ಹೆಚ್ಚಾಗಿದ್ದು, ಕಲಬುರಗಿಯಲ್ಲಿ 42 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಬೆಂಗಳೂರಿನಲ್ಲೂ ದಾಖಲೆ ಬಿಸಿಲು ಕಂಡುಬಂದಿದ್ದು, ಹವಾಮಾನ ಇಲಾಖೆಯು ಹಲವು ಜಿಲ್ಲೆಗಳಿಗೆ ಉಷ್ಣ ಅಲೆಯ ಎಚ್ಚರಿಕೆ ನೀಡಿದೆ. ಸಾರ್ವಜನಿಕರು ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ.
Read Full Story

02:59 PM (IST) Apr 14

ಬೆಂಗಳೂರಲ್ಲಿ ತೆಂಗಿನಕಾಯಿ ಕಳ್ಳಿಯ ಕಾಟ! 1 ವಾರ ಆಕೆಯನ್ನು ಹಿಡಿಯಲು ಕಾದಿದ್ದ ಅಂಗಡಿ ಮಾಲೀಕ, ಕೊನೆಗೂ ಸಿಕ್ಕಿಬಿದ್ಲು

ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿ ಮಹಿಳೆಯೊಬ್ಬಳು ರಾತ್ರಿ ವೇಳೆ ಅಂಗಡಿಯಿಂದ ಪದೇ ಪದೇ ತೆಂಗಿನಕಾಯಿಗಳನ್ನು ಕದಿಯುತ್ತಿರುವ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇತ್ತೀಚೆಗೆ ಸುಮಾರು 15 ತೆಂಗಿನಕಾಯಿಗಳನ್ನು ಕದ್ದೊಯ್ದಿದ್ದು, ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read Full Story

02:53 PM (IST) Apr 14

ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಸಂಚರಿಸುವ ಮಾರ್ಗ ಅಂತಿಮ

ಬಹುನಿರೀಕ್ಷಿತ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಕಲ್ಯಾಣ ಕರ್ನಾಟಕದ ಕಲಬುರಗಿ, ಸೊಲ್ಲಾಪುರ ಮಾರ್ಗವಾಗಿ ಸಂಚರಿಸಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಖಚಿತಪಡಿಸಿದ್ದಾರೆ.

Read Full Story

02:51 PM (IST) Apr 14

Train Ticket Booking - ಟ್ರೇನ್‌ ಟಿಕೆಟ್‌ ಬುಕ್‌ ಮಾಡ್ಬೇಕಾ? ಹೀಗೆ ಮಾಡಿದ್ರೆ ಪಕ್ಕಾ ಡಿಸ್ಕೌಂಟ್‌ ಸಿಗುತ್ತೆ!

Train Ticket Booking: ಭಾರತೀಯ ರೈಲ್ವೆಯು ಕಾಯ್ದಿರಿಸದ ಟಿಕೆಟ್‌ಗಳ ಮೇಲೆ 3% ರಿಯಾಯಿತಿ ನೀಡುತ್ತಿದೆ. ಈ ಕೊಡುಗೆಯು ಜುಲೈ 14, 2026ರ ವರೆಗೆ ಲಭ್ಯವಿರಲಿದೆ. ಪ್ರತಿದಿನ ಪ್ರಯಾಣಿಸುವವರಿಗೆ ಈ ಸಣ್ಣ ರಿಯಾಯಿತಿಯು ದೊಡ್ಡ ಉಳಿತಾಯಕ್ಕೆ ಕಾರಣವಾಗಬಹುದು. ಇದರ ಸಂಪೂರ್ಣ ವಿವರ ಇಲ್ಲಿದೆ.

 

Read Full Story

01:45 PM (IST) Apr 14

ವೈಭವ್ ಸೂರ್ಯವಂಶಿ ಎಂಬ ಬಿರುಗಾಳಿಗೆ ಬ್ರೇಕ್ ಹಾಕಿದ Praful Hinge ಯಾರು?; SRH ಹುಡುಕಿದ ರಿಯಲ್ ಡೈಮಂಡ್ ಹಿನ್ನಲೆ ಏನು?

Who is Praful Hinge: ಇತ್ತೀಚೆಗೆ ಮ್ಯಾನಿಫೆಸ್ಟೇಶನ್‌ ಬಗ್ಗೆ ಸಿಕ್ಕಾಪಟ್ಟೆ ಮಾತು ಕೇಳಿ ಬರುತ್ತಿದೆ. ಐಪಿಎಲ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ ಟೀಂನ ವೈಭವ್‌ ಸೂರ್ಯವಂಶಿಯನ್ನು ಮೊದಲ ಬಾಲ್‌ನಲ್ಲೇ ಔಟ್‌ ಮಾಡ್ತೀನಿ ಎಂದು ಹೇಳಿದ್ದ ಪ್ರಫುಲ್‌ ಹಿಂಗೆ ಅವರು ಅದೇ ಥರ ನಡೆದುಕೊಂಡರು. 

 

Read Full Story

01:29 PM (IST) Apr 14

ದಾವಣಗೆರೆ ಹರಿಹರ ಪೀಠ ಸಮರ - ವಚನಾನಂದ ಶ್ರೀಗಳ ವಿರುದ್ಧ 'ಮಸಾಜ್‌ ಪ್ರಿಯ' ಆರೋಪ; ಪೊಕ್ಸೊ ಕೇಸ್‌ ಭೀತಿ!

ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳ ವಿರುದ್ಧ ಟ್ರಸ್ಟಿ ಚಂದ್ರಶೇಖರ ಪೂಜಾರ್ ಗಂಭೀರ ಆರೋಪ ಮಾಡಿದ್ದಾರೆ. ಶ್ರೀಗಳು ಮಕ್ಕಳಿಂದ ಮಸಾಜ್ ಮಾಡಿಸಿಕೊಳ್ಳುತ್ತಿದ್ದರು ಮತ್ತು ಅವರಿಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದರು ಎಂದು ಆರೋಪಿಸಿ, ಶ್ರೀಗಳು ತಕ್ಷಣವೇ ಮಠವನ್ನು ತೊರೆಯಬೇಕೆಂದು ಆಗ್ರಹಿಸಿದ್ದಾರೆ.

Read Full Story

12:45 PM (IST) Apr 14

Kannada Actress - ಗಡಿ ದಾಟಿದ ಪ್ರೇಮ; ಪರರಾಜ್ಯದವರನ್ನು ಮದುವೆಯಾದ ಕನ್ನಡದ ಕಿರುತೆರೆ ನಟಿಯರಿವರು!

Kannada Tv Actress: ಕನ್ನಡದ ಕೆಲ ನಟಿಯರು ಬೇರೆ ಬೇರೆ ಭಾಷೆಯ ಧಾರಾವಾಹಿಗಳಲ್ಲಿ ನಟಿಸಿ ಕೂಡ ಹೆಸರು ಮಾಡಿದ್ದಾರೆ. ಇನ್ನೂ ಕೆಲ ನಟಿಯರು ಸಹನಟರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಹಾಗಾದರೆ ಅವರು ಯಾರು? ಯಾರು? ಈ ಆರ್ಟಿಕಲ್‌ ನೋಡಿ. ಒಟ್ಟಿನಲ್ಲಿ ಪ್ರೀತಿ ಮುಖ್ಯ ಅಲ್ವೇ? 

Read Full Story

12:22 PM (IST) Apr 14

ಸುಣ್ಣ ಹೊಡೆಯುವ ವೇಳೆ ಕೆಳಗೆ ಬಿದ್ದವನಿಗೆ ಚಿಕಿತ್ಸೆ ನೀಡದೇ ಬೀಮ್ಸ್ ಆಸ್ಪತ್ರೆ ನಿರ್ಲಕ್ಷ್ಯ - 22 ವರ್ಷದ ಯುವಕ ಸಾವು

ಬೆಳಗಾವಿಯಲ್ಲಿ ಕಟ್ಟಡದಿಂದ ಬಿದ್ದು ಗಾಯಗೊಂಡಿದ್ದ ಯುವಕನೋರ್ವ ಬೀಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ವೈದ್ಯರ ನಿರ್ಲಕ್ಷ್ಯದಿಂದಲೇ ಸಾವು ಸಂಭವಿಸಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

Read Full Story

11:48 AM (IST) Apr 14

ದಾವಣಗೆರೆ ದಂಗಲ್ - ಸಿಎಂ ಭೇಟಿಯಾದ ಜಮೀರ್, ನಾನು ಯಾವುದೇ ವಿಷಯದಲ್ಲಿ ಮುಚ್ಚುಮರೆ ಮಾಡಿಲ್ಲವೆಂದು ಸ್ಪಷ್ಟನೆ

ಮುಖ್ಯಮಂತ್ರಿ ನಿವಾಸಕ್ಕೆ ಭೇಟಿ ನೀಡಿದ ಸಚಿವ ಜಮೀರ್ ಅಹ್ಮದ್ ಖಾನ್, ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ಹಂಚಿಕೆ ಕುರಿತು ತಮ್ಮ ಮೇಲಿನ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಕೆಪಿಸಿಸಿ ಸಭೆಯಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ಬಹಿರಂಗವಾಗಿ ಮನವಿ ಮಾಡಿದ್ದಾಗಿ ಸ್ಪಷ್ಟಪಡಿಸಿದ ಅವರು, ಪಕ್ಷದ ಅಭ್ಯರ್ಥಿಯ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.
Read Full Story

11:43 AM (IST) Apr 14

ಗ್ಯಾಸ್‌ಗಾಗಿ ಸಾಲು ನಿಂತ ಚಾಲಕರಿಗೆ 'ಕಿರಣ್' ಆಸರೆ - ಮೈಸೂರಿನಲ್ಲಿ 5 ಲಕ್ಷ ರೂ. ಹಂಚಿದ ದಾನಿ!

ಮೈಸೂರಿನಲ್ಲಿ ಆಟೋ ಗ್ಯಾಸ್ ಕೊರತೆಯಿಂದ ಚಾಲಕರು ಗಂಟೆಗಟ್ಟಲೆ ಸಾಲುಗಟ್ಟಿ ನಿಂತು ಪರದಾಡುತ್ತಿದ್ದಾರೆ. ಈ ಸಂಕಷ್ಟದ ಸಮಯದಲ್ಲಿ, ಕಿರಣ್ ಎಂಬ ಫೈನಾನ್ಷಿಯರ್ ನೂರಾರು ಚಾಲಕರಿಗೆ ತಲಾ 200 ರೂಪಾಯಿ ನೀಡಿ ಮಾನವೀಯತೆ ಮೆರೆದಿದ್ದಾರೆ. 

Read Full Story

11:41 AM (IST) Apr 14

ಹಾವೇರಿ ಪ್ರಯಾಣಿಕರಿಗೆ ಸಿಹಿಸುದ್ದಿ - ಬೆಂಗಳೂರು, ಪಣಜಿ, ಹುಬ್ಬಳಿಗೆ ಹೊಸ ಬಸ್ ಸಂಚಾರ ಆರಂಭ

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹಾವೇರಿ ವಿಭಾಗವು ಹಾವೇರಿ-ಬೆಂಗಳೂರು, ಹುಬ್ಬಳ್ಳಿ-ಹಾವೇರಿ-ಬೆಂಗಳೂರು ಹಾಗೂ ದಾವಣಗೆರೆ-ಹಾವೇರಿ-ಪಣಜಿ ಸೇರಿದಂತೆ ವಿವಿಧ ಮಾರ್ಗಗಳಲ್ಲಿ ಹೊಸ ಬಸ್ಸುಗಳ ಸಂಚಾರವನ್ನು ಆರಂಭಿಸಿದೆ. ಉಪ ಸಭಾಪತಿ ಹಾಗೂ ಶಾಸಕ ರುದ್ರಪ್ಪ ಲಮಾಣಿ ಅವರು ಈ ನೂತನ ಸಾರಿಗೆ ಸೇವೆಗೆ ಚಾಲನೆ ನೀಡಿದರು.

Read Full Story

11:40 AM (IST) Apr 14

ನನ್ನ ಥರ ಯೋಚನೆ ಮಾಡೋರು ಸಿಕ್ಕಿಲ್ಲ ಅಂದ್ರೆ ಮದುವೆ ಬೇಡ ಹೇಳಿದ್ದೆ - Puttakkana Makkalu Serial ಸಂಜನಾ ಬುರ್ಲಿ

Actress Sanjana Burli: ಪುಟ್ಟಕ್ಕನ ಮಕ್ಕಳು, ಶ್ರೀಗಂಧದ ಗುಡಿ ಧಾರಾವಾಹಿ ನಟಿ ಸಂಜನಾ ಬುರ್ಲಿ ಅವರು ಡಾಕ್ಟರ್‌ ಸಮರ್ಥ್‌ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರ ಮದುವೆ ಸ್ಟೋರಿ, ಹೇಗೆ ಪರಿಚಯ ಆಯ್ತು ಎಂಬುದನ್ನು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಡಿಜಿಟಲ್‌ ಜೊತೆ ಬಿಚ್ಚಿಟ್ಟಿದ್ದಾರೆ.

 

Read Full Story

11:33 AM (IST) Apr 14

ಅಂಬೇಡ್ಕರ್ ಜಯಂತಿಯಂದೇ ಬೀದಿಗೆ ಇಳಿದ ಯುವಶಕ್ತಿ; 2.84 ಲಕ್ಷ ಸರ್ಕಾರಿ ಹುದ್ದೆ ಭರ್ತಿಗೆ ಆಗ್ರಹಿಸಿ ಪ್ರತಿಭಟನೆಗೆ ಸಜ್ಜು

ಧಾರವಾಡದಲ್ಲಿ ಖಾಲಿ ಇರುವ 2.84 ಲಕ್ಷ ಸರ್ಕಾರಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಉದ್ಯೋಗಾಕಾಂಕ್ಷಿಗಳು ಬೃಹತ್ ಪ್ರತಿಭಟನೆಗೆ ಮುಂದಾಗಿದ್ದಾರೆ. ಪ್ರತಿಭಟನೆಗೆ ಮುನ್ನವೇ ಪೊಲೀಸರು ವಿದ್ಯಾರ್ಥಿ ಮುಖಂಡರಿಗೆ ನೋಟಿಸ್ ನೀಡಿದ್ದು, ಕೆಲವರನ್ನು ವಶಕ್ಕೆ ಪಡೆದಿದ್ದರೂ ಹೋರಾಟ ಮುಂದುವರಿಸಲು ಯುವಕರು ಸಜ್ಜಾಗಿದ್ದಾರೆ.

Read Full Story

11:16 AM (IST) Apr 14

Koppal - ಮುಸ್ತಾಫಾನ ಮೊಬೈಲ್ ರೀಸೆಟ್ ಮಾಡಿದ್ಯಾರು? ಕಡು ಬಡವನಾಗಿದ್ರೂ ಹೈಫೈ ಜೀವನಶೈಲಿ

ಕೊಪ್ಪಳದಲ್ಲಿ ಲವ್ ಜಿಹಾದ್ ಆರೋಪ ಎದುರಿಸುತ್ತಿರುವ ಮುಸ್ತಾಫಾ ಖಾದ್ರಿಗೆ ಅಂತರ ರಾಜ್ಯ ಸಂಪರ್ಕದ ಶಂಕೆ ವ್ಯಕ್ತವಾಗಿದೆ. ಯುವತಿಯರ ಖಾಸಗಿ ವೀಡಿಯೋ, ಫೋಟೋಗಳಿರುವ ಆತನ ಮೊಬೈಲ್‌ಗಳನ್ನು ಪೊಲೀಸರು ವಶಕ್ಕೆ ಪಡೆದು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದು, ವರದಿಗಾಗಿ ಕಾಯುತ್ತಿದ್ದಾರೆ.

Read Full Story

11:06 AM (IST) Apr 14

ಬೆಂಗಳೂರು - ಯಾರೂ ಊಹಿಸದ ವಿಚಿತ್ರ ಘಟನೆ, ಶಿಕ್ಷಕಿ ಜತೆ ಸ್ನೇಹ, ಕ್ಯಾನ್ಸರ್ ನಾಟಕ, ಕೊನೆಯ ಆಸೆ ದೈಹಿಕ ಸಂಪರ್ಕ!

ಬೆಂಗಳೂರಿನ ಶಿಕ್ಷಕಿಯೊಬ್ಬರಿಗೆ ಕ್ಯಾನ್ಸರ್ ರೋಗಿ ಎಂದು ನಂಬಿಸಿ, ನಗ್ನ ವಿಡಿಯೋ ಪಡೆದು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಯುವಕನನ್ನು ಶಿಕ್ಷಕಿ ಮತ್ತು ಆಕೆಯ ಸ್ನೇಹಿತರು ಬಲೆಗೆ ಬೀಳಿಸಿದ್ದಾರೆ. ಪೊಲೀಸರಿಗೆ ಒಪ್ಪಿಸುವ ವೇಳೆ ಆರೋಪಿ ಆತ್ಮಹತ್ಯೆಗೆ ಯತ್ನಿಸಿದ್ದು, ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Read Full Story

11:00 AM (IST) Apr 14

ಕರ್ಣ ಧಾರಾವಾಹಿಯಲ್ಲಿ ಮುಂದೆ ಟ್ವಿಸ್ಟ್‌ ಇದೆ; 200 ಖುಷೀಲಿ ಸೀಕ್ರೆಟ್‌ ರಿವೀಲ್‌ ಮಾಡಿದ ನಟಿ ಭವ್ಯಾ ಗೌಡ!

karna serial: ಕರ್ಣ ಧಾರಾವಾಹಿ ಆರಂಭವಾಗಿ 200 ಸಂಚಿಕೆಗಳು ಪ್ರಸಾರ ಆಗಿವೆ. ಕರ್ಣ, ನಿತ್ಯಾ, ನಿಧಿ ಪಾತ್ರದ ಸುತ್ತವೇ ಈ ಸೀರಿಯಲ್‌ ಕತೆ ಸಾಗುತ್ತಿದೆ. ನಿಧಿ ಪಾತ್ರದಲ್ಲಿ ಭವ್ಯಾ ಗೌಡ ಅವರು ನಟಿಸುತ್ತಿದ್ದಾರೆ. ಈಗ ಸೀರಿಯಲ್‌ ಬಗ್ಗೆ ಭವ್ಯಾ ಗೌಡ ಅವರು ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದಾರೆ.

 

Read Full Story

10:56 AM (IST) Apr 14

ಇಳಕಲ್ ನಿವಾಸಿ ಭಕ್ತ ಮಹಮ್ಮದ್‌ ಮನೆಗೆ ಭೇಟಿ ನೀಡಿದ ಕೊಪ್ಪಳ ಗವಿಸಿದ್ದೇಶ್ವರ ಶ್ರೀಗಳು

ಕೊಪ್ಪಳ ಗವಿಸಿದ್ದೇಶ್ವರ ಶ್ರೀಗಳು ಇಳಕಲ್ಲ ನಗರದ ಮುಸ್ಲಿಂ ಭಕ್ತ ರಾಜ ಮಹಮ್ಮದ್‌ ಅವರ ಮನೆಗೆ ಅನಿರೀಕ್ಷಿತ ಭೇಟಿ ನೀಡಿ ಸೌಹಾರ್ದತೆ ಮೆರೆದರು. ಈ ಸಂದರ್ಭದಲ್ಲಿ ಸಮಾಜವನ್ನು ಜಾತಿಯ ಬದಲಿಗೆ ನೀತಿಯ ಮೇಲೆ ಕಟ್ಟಬೇಕು ಎಂದು ಅವರು ಕರೆ ನೀಡಿದರು.
Read Full Story

More Trending News