LIVE NOW
Published : Apr 14, 2026, 07:30 AM ISTUpdated : Apr 14, 2026, 11:48 AM IST

State News Live: ದಾವಣಗೆರೆ ದಂಗಲ್ - ಸಿಎಂ ಭೇಟಿಯಾದ ಜಮೀರ್, ನಾನು ಯಾವುದೇ ವಿಷಯದಲ್ಲಿ ಮುಚ್ಚುಮರೆ ಮಾಡಿಲ್ಲವೆಂದು ಸ್ಪಷ್ಟನೆ

ಸಾರಾಂಶ

ಬೆಂಗಳೂರು (ಏ.14): ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪ ಚುನಾವಣೆ ಬಳಿಕ ರಾಜ್ಯದಲ್ಲಿ ಸಂಪುಟ ಪುನರ್‌ರಚನೆ ಚರ್ಚೆ ಜೋರಾಗಿದ್ದು, ಸಚಿವ ಸ್ಥಾನ ಬಯಸಿ ದೆಹಲಿಗೆ ತೆರಳಿರುವ ಕಾಂಗ್ರೆಸ್ ಹಿರಿಯ ಶಾಸಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ತಮ್ಮ ಅಹವಾಲು ಮಂಡಿಸಿದ್ದಾರೆ. ರಾಷ್ಟ್ರ ರಾಜಧಾನಿಯ ರಾಜಾಜಿ ಮಾರ್ಗದಲ್ಲಿರುವ ಖರ್ಗೆ ಅವರ ಮನೆಗೆ ಸೋಮವಾರ 23 ಶಾಸಕರ ನಿಯೋಗ ತೆರಳಿದ್ದು, ರಾಜ್ಯ ರಾಜಕಾರಣದ ಕುರಿತು ಚರ್ಚೆ ನಡೆಸಿದ್ದಾರೆ. ಅದರೊಂದಿಗೆ ಇಂದಿನ ರಾಜ್ಯ ಸುದ್ದಿಗಳ ಅಪ್‌ಡೇಟ್‌ ಇಲ್ಲಿದೆ.

 

11:48 AM (IST) Apr 14

ದಾವಣಗೆರೆ ದಂಗಲ್ - ಸಿಎಂ ಭೇಟಿಯಾದ ಜಮೀರ್, ನಾನು ಯಾವುದೇ ವಿಷಯದಲ್ಲಿ ಮುಚ್ಚುಮರೆ ಮಾಡಿಲ್ಲವೆಂದು ಸ್ಪಷ್ಟನೆ

ಮುಖ್ಯಮಂತ್ರಿ ನಿವಾಸಕ್ಕೆ ಭೇಟಿ ನೀಡಿದ ಸಚಿವ ಜಮೀರ್ ಅಹ್ಮದ್ ಖಾನ್, ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ಹಂಚಿಕೆ ಕುರಿತು ತಮ್ಮ ಮೇಲಿನ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಕೆಪಿಸಿಸಿ ಸಭೆಯಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ಬಹಿರಂಗವಾಗಿ ಮನವಿ ಮಾಡಿದ್ದಾಗಿ ಸ್ಪಷ್ಟಪಡಿಸಿದ ಅವರು, ಪಕ್ಷದ ಅಭ್ಯರ್ಥಿಯ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.
Read Full Story

11:43 AM (IST) Apr 14

ಗ್ಯಾಸ್‌ಗಾಗಿ ಸಾಲು ನಿಂತ ಚಾಲಕರಿಗೆ 'ಕಿರಣ್' ಆಸರೆ - ಮೈಸೂರಿನಲ್ಲಿ 5 ಲಕ್ಷ ರೂ. ಹಂಚಿದ ದಾನಿ!

ಮೈಸೂರಿನಲ್ಲಿ ಆಟೋ ಗ್ಯಾಸ್ ಕೊರತೆಯಿಂದ ಚಾಲಕರು ಗಂಟೆಗಟ್ಟಲೆ ಸಾಲುಗಟ್ಟಿ ನಿಂತು ಪರದಾಡುತ್ತಿದ್ದಾರೆ. ಈ ಸಂಕಷ್ಟದ ಸಮಯದಲ್ಲಿ, ಕಿರಣ್ ಎಂಬ ಫೈನಾನ್ಷಿಯರ್ ನೂರಾರು ಚಾಲಕರಿಗೆ ತಲಾ 200 ರೂಪಾಯಿ ನೀಡಿ ಮಾನವೀಯತೆ ಮೆರೆದಿದ್ದಾರೆ. 

Read Full Story

11:41 AM (IST) Apr 14

ಹಾವೇರಿ ಪ್ರಯಾಣಿಕರಿಗೆ ಸಿಹಿಸುದ್ದಿ - ಬೆಂಗಳೂರು, ಪಣಜಿ, ಹುಬ್ಬಳಿಗೆ ಹೊಸ ಬಸ್ ಸಂಚಾರ ಆರಂಭ

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹಾವೇರಿ ವಿಭಾಗವು ಹಾವೇರಿ-ಬೆಂಗಳೂರು, ಹುಬ್ಬಳ್ಳಿ-ಹಾವೇರಿ-ಬೆಂಗಳೂರು ಹಾಗೂ ದಾವಣಗೆರೆ-ಹಾವೇರಿ-ಪಣಜಿ ಸೇರಿದಂತೆ ವಿವಿಧ ಮಾರ್ಗಗಳಲ್ಲಿ ಹೊಸ ಬಸ್ಸುಗಳ ಸಂಚಾರವನ್ನು ಆರಂಭಿಸಿದೆ. ಉಪ ಸಭಾಪತಿ ಹಾಗೂ ಶಾಸಕ ರುದ್ರಪ್ಪ ಲಮಾಣಿ ಅವರು ಈ ನೂತನ ಸಾರಿಗೆ ಸೇವೆಗೆ ಚಾಲನೆ ನೀಡಿದರು.

Read Full Story

11:40 AM (IST) Apr 14

ನನ್ನ ಥರ ಯೋಚನೆ ಮಾಡೋರು ಸಿಕ್ಕಿಲ್ಲ ಅಂದ್ರೆ ಮದುವೆ ಬೇಡ ಹೇಳಿದ್ದೆ - Puttakkana Makkalu Serial ಸಂಜನಾ ಬುರ್ಲಿ

Actress Sanjana Burli: ಪುಟ್ಟಕ್ಕನ ಮಕ್ಕಳು, ಶ್ರೀಗಂಧದ ಗುಡಿ ಧಾರಾವಾಹಿ ನಟಿ ಸಂಜನಾ ಬುರ್ಲಿ ಅವರು ಡಾಕ್ಟರ್‌ ಸಮರ್ಥ್‌ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರ ಮದುವೆ ಸ್ಟೋರಿ, ಹೇಗೆ ಪರಿಚಯ ಆಯ್ತು ಎಂಬುದನ್ನು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಡಿಜಿಟಲ್‌ ಜೊತೆ ಬಿಚ್ಚಿಟ್ಟಿದ್ದಾರೆ.

 

Read Full Story

11:33 AM (IST) Apr 14

ಅಂಬೇಡ್ಕರ್ ಜಯಂತಿಯಂದೇ ಬೀದಿಗೆ ಇಳಿದ ಯುವಶಕ್ತಿ; 2.84 ಲಕ್ಷ ಸರ್ಕಾರಿ ಹುದ್ದೆ ಭರ್ತಿಗೆ ಆಗ್ರಹಿಸಿ ಪ್ರತಿಭಟನೆಗೆ ಸಜ್ಜು

ಧಾರವಾಡದಲ್ಲಿ ಖಾಲಿ ಇರುವ 2.84 ಲಕ್ಷ ಸರ್ಕಾರಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಉದ್ಯೋಗಾಕಾಂಕ್ಷಿಗಳು ಬೃಹತ್ ಪ್ರತಿಭಟನೆಗೆ ಮುಂದಾಗಿದ್ದಾರೆ. ಪ್ರತಿಭಟನೆಗೆ ಮುನ್ನವೇ ಪೊಲೀಸರು ವಿದ್ಯಾರ್ಥಿ ಮುಖಂಡರಿಗೆ ನೋಟಿಸ್ ನೀಡಿದ್ದು, ಕೆಲವರನ್ನು ವಶಕ್ಕೆ ಪಡೆದಿದ್ದರೂ ಹೋರಾಟ ಮುಂದುವರಿಸಲು ಯುವಕರು ಸಜ್ಜಾಗಿದ್ದಾರೆ.

Read Full Story

11:16 AM (IST) Apr 14

Koppal - ಮುಸ್ತಾಫಾನ ಮೊಬೈಲ್ ರೀಸೆಟ್ ಮಾಡಿದ್ಯಾರು? ಕಡು ಬಡವನಾಗಿದ್ರೂ ಹೈಫೈ ಜೀವನಶೈಲಿ

ಕೊಪ್ಪಳದಲ್ಲಿ ಲವ್ ಜಿಹಾದ್ ಆರೋಪ ಎದುರಿಸುತ್ತಿರುವ ಮುಸ್ತಾಫಾ ಖಾದ್ರಿಗೆ ಅಂತರ ರಾಜ್ಯ ಸಂಪರ್ಕದ ಶಂಕೆ ವ್ಯಕ್ತವಾಗಿದೆ. ಯುವತಿಯರ ಖಾಸಗಿ ವೀಡಿಯೋ, ಫೋಟೋಗಳಿರುವ ಆತನ ಮೊಬೈಲ್‌ಗಳನ್ನು ಪೊಲೀಸರು ವಶಕ್ಕೆ ಪಡೆದು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದು, ವರದಿಗಾಗಿ ಕಾಯುತ್ತಿದ್ದಾರೆ.

Read Full Story

11:06 AM (IST) Apr 14

ಬೆಂಗಳೂರು - ಯಾರೂ ಊಹಿಸದ ವಿಚಿತ್ರ ಘಟನೆ, ಶಿಕ್ಷಕಿ ಜತೆ ಸ್ನೇಹ, ಕ್ಯಾನ್ಸರ್ ನಾಟಕ, ಕೊನೆಯ ಆಸೆ ದೈಹಿಕ ಸಂಪರ್ಕ!

ಬೆಂಗಳೂರಿನ ಶಿಕ್ಷಕಿಯೊಬ್ಬರಿಗೆ ಕ್ಯಾನ್ಸರ್ ರೋಗಿ ಎಂದು ನಂಬಿಸಿ, ನಗ್ನ ವಿಡಿಯೋ ಪಡೆದು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಯುವಕನನ್ನು ಶಿಕ್ಷಕಿ ಮತ್ತು ಆಕೆಯ ಸ್ನೇಹಿತರು ಬಲೆಗೆ ಬೀಳಿಸಿದ್ದಾರೆ. ಪೊಲೀಸರಿಗೆ ಒಪ್ಪಿಸುವ ವೇಳೆ ಆರೋಪಿ ಆತ್ಮಹತ್ಯೆಗೆ ಯತ್ನಿಸಿದ್ದು, ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Read Full Story

11:00 AM (IST) Apr 14

ಕರ್ಣ ಧಾರಾವಾಹಿಯಲ್ಲಿ ಮುಂದೆ ಟ್ವಿಸ್ಟ್‌ ಇದೆ; 200 ಖುಷೀಲಿ ಸೀಕ್ರೆಟ್‌ ರಿವೀಲ್‌ ಮಾಡಿದ ನಟಿ ಭವ್ಯಾ ಗೌಡ!

karna serial: ಕರ್ಣ ಧಾರಾವಾಹಿ ಆರಂಭವಾಗಿ 200 ಸಂಚಿಕೆಗಳು ಪ್ರಸಾರ ಆಗಿವೆ. ಕರ್ಣ, ನಿತ್ಯಾ, ನಿಧಿ ಪಾತ್ರದ ಸುತ್ತವೇ ಈ ಸೀರಿಯಲ್‌ ಕತೆ ಸಾಗುತ್ತಿದೆ. ನಿಧಿ ಪಾತ್ರದಲ್ಲಿ ಭವ್ಯಾ ಗೌಡ ಅವರು ನಟಿಸುತ್ತಿದ್ದಾರೆ. ಈಗ ಸೀರಿಯಲ್‌ ಬಗ್ಗೆ ಭವ್ಯಾ ಗೌಡ ಅವರು ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದಾರೆ.

 

Read Full Story

10:56 AM (IST) Apr 14

ಇಳಕಲ್ ನಿವಾಸಿ ಭಕ್ತ ಮಹಮ್ಮದ್‌ ಮನೆಗೆ ಭೇಟಿ ನೀಡಿದ ಕೊಪ್ಪಳ ಗವಿಸಿದ್ದೇಶ್ವರ ಶ್ರೀಗಳು

ಕೊಪ್ಪಳ ಗವಿಸಿದ್ದೇಶ್ವರ ಶ್ರೀಗಳು ಇಳಕಲ್ಲ ನಗರದ ಮುಸ್ಲಿಂ ಭಕ್ತ ರಾಜ ಮಹಮ್ಮದ್‌ ಅವರ ಮನೆಗೆ ಅನಿರೀಕ್ಷಿತ ಭೇಟಿ ನೀಡಿ ಸೌಹಾರ್ದತೆ ಮೆರೆದರು. ಈ ಸಂದರ್ಭದಲ್ಲಿ ಸಮಾಜವನ್ನು ಜಾತಿಯ ಬದಲಿಗೆ ನೀತಿಯ ಮೇಲೆ ಕಟ್ಟಬೇಕು ಎಂದು ಅವರು ಕರೆ ನೀಡಿದರು.
Read Full Story

10:42 AM (IST) Apr 14

ರಾಜ್ಯದ 11 ಜಲ್ಲೆಗಳಲ್ಲಿ 18 ಸಾವಿರ ಕೋಟಿ ಹೂಡಿಕೆಗೆ ಅನುಮೋದನೆ, 15 ಸಾವಿರ ಉದ್ಯೋಗ

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯ ರಾಜ್ಯ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ 18,430.44 ಕೋಟಿ ರೂ. ಬಂಡವಾಳ ಹೂಡಿಕೆಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಯಿಂದ ರಾಜ್ಯದ 11 ಜಿಲ್ಲೆಗಳಲ್ಲಿ ವಾಹನ, ಜವಳಿ, ಉಕ್ಕು, ಸೆಮಿಕಂಡಕ್ಟರ್‌ ಸೇರಿದಂತೆ ವಿವಿಧ ವಲಯಗಳಲ್ಲಿ 15 ಸಾವಿರ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ.
Read Full Story

10:26 AM (IST) Apr 14

Bengaluru - ಗ್ಯಾಸ್ ಸಂಕಷ್ಟಕ್ಕೆ ಹೋಟೆಲ್ ಮಾಲೀಕರ ಮಾಸ್ಟರ್ ಪ್ಲಾನ್! ಇದು ಸ್ವಾವಲಂಬಿ ಯೋಜನೆ

ಮಧ್ಯಪ್ರಾಚ್ಯ ಯುದ್ಧದಿಂದಾಗಿ ವಾಣಿಜ್ಯ ಸಿಲಿಂಡರ್‌ಗಳ ಅಭಾವ ಎದುರಿಸುತ್ತಿರುವ ಹೋಟೆಲ್‌ ಉದ್ಯಮ, ಭವಿಷ್ಯದ ಸಂಕಷ್ಟವನ್ನು ತಪ್ಪಿಸಲು ಪರ್ಯಾಯ ಮಾರ್ಗ ಕಂಡುಕೊಂಡಿದೆ. ಯುದ್ಧದ ಕಾರ್ಮೋಡ ಕವಿದಿರುವುದರಿಂದ ಪರ್ಯಾಯ ಮೂಲದತ್ತ ಹೆಜ್ಜೆ ಇಡಲಿದೆ.

Read Full Story

10:23 AM (IST) Apr 14

ಜಿಬಿಎ ಯಡವಟ್ಟಿನ ನಿರ್ಧಾರಕ್ಕೆ ಕಂಗಲಾದ ಬೆಂಗಳೂರು ನಿವಾಸಿಗಳು, ಟ್ಯಾಕ್ಸ್ ಕಟ್ಟಬೇಕು ಅಂದ್ರೆ ಕಸದ ಲೆಕ್ಕ ಕೊಡಬೇಕಂತೆ!

ಬೆಂಗಳೂರಿನ ಅಪಾರ್ಟ್‌ಮೆಂಟ್ ನಿವಾಸಿಗಳು ಪ್ರಾಪರ್ಟಿ ಟ್ಯಾಕ್ಸ್ ಪಾವತಿಸಲು ಕಸದ ವಿವರಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕೆಂಬ ಹೊಸ ನಿಯಮದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆನ್‌ಲೈನ್ ಪೋರ್ಟಲ್‌ನಲ್ಲಿನ ತಾಂತ್ರಿಕ ದೋಷಗಳು ಮತ್ತು ಅವೈಜ್ಞಾನಿಕ ನಿಯಮಗಳಿಂದಾಗಿ ಸಾವಿರಾರು ಜನರು ತೆರಿಗೆ ಪಾವತಿಸಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ.
Read Full Story

10:12 AM (IST) Apr 14

Ambedkar Jayanti 2026 - ಮನುಕುಲದ ಒಳಿತಿಗಾಗಿ ಸಂವಿಧಾನದಲ್ಲಿ ಬುದ್ಧನ ತತ್ವ ಅಳವಡಿಸಿದ ಅಂಬೇಡ್ಕರ್

Ambedkar Jayanti 2026 ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ 'ಬೋಧಿಸತ್ವ' ಬಿರುದು ಹೇಗೆ ಬಂತು ಮತ್ತು ಅವರ ಚಿಂತನೆಗಳು, ಸಂವಿಧಾನ ರಚನೆಯಲ್ಲಿ ಗೌತಮ ಬುದ್ಧನ ಧಮ್ಮದ ಬೋಧನೆಗಳು ಹೇಗೆ ಆಳವಾಗಿ ಪ್ರಭಾವ ಬೀರಿದವು ಎಂಬುದನ್ನು ಈ ಲೇಖನ ವಿವರಿಸುತ್ತದೆ. 

Read Full Story

09:50 AM (IST) Apr 14

ಪತಿ ಬಿಟ್ಟು ಯುವಕನ ಜೊತೆ ಓಡಿ ಹೋಗಿದ್ದಕ್ಕೆ ಮರ್ಯಾದೆ ತೆಗೆದಳೆಂದು ಯುವತಿಯನ್ನ ಕೊಂದು ಸುಟ್ಟುಹಾಕಿದ್ರು ಕುಟುಂಬ!

ತನ್ನ ಪತಿಯೊಂದಿಗೆ ಜೀವನ ನಡೆಸದೆ, ಪ್ರಿಯಕರನೊಂದಿಗೆ ಓಡಿಹೋಗಿ ಕುಟುಂಬದ ಮಾನವನ್ನು ಹರಾಜು ಹಾಕಿದಳು ಎಂಬ ಕಾರಣಕ್ಕೆ ಯುವತಿಯನ್ನು ಕುಟುಂಬಸ್ಥರೇ ಹತ್ಯೆ ಮಾಡಿ, ನಂತರ ಸಾಕ್ಷಿ ನಾಶಕ್ಕಾಗಿ ಶವ ಸುಟ್ಟುಹಾಕಿದ ಘಟನೆ ಮಾ.13ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

Read Full Story

08:31 AM (IST) Apr 14

ಸಿಎಂ ಅಂಕಣ | ಲೋಕಸಭಾ ಕ್ಷೇತ್ರ ಹೆಚ್ಚಳ ಉತ್ತರ ಭಾರತಕ್ಕಷ್ಟೇ ಲಾಭ - ಕೇಂದ್ರದ ತರಾತುರಿ ಹಿಂದೆ ರಾಜಕೀಯ - ಸಿಎಂ

ಮಹಿಳಾ ಮೀಸಲಾತಿ ಹೆಸರಿನಲ್ಲಿ ಕೇಂದ್ರ ಸರ್ಕಾರವು ಕ್ಷೇತ್ರ ಮರುವಿಂಗಡಣೆಗೆ ಮುಂದಾಗಿದ್ದು, ಇದು ರಾಜಕೀಯ ಪ್ರೇರಿತವಾಗಿದೆ. ಜನಸಂಖ್ಯೆ ಆಧಾರಿತ ಈ ಮರುವಿಂಗಡಣೆಯು, ಉತ್ತಮ ಪ್ರಗತಿ ಸಾಧಿಸಿರುವ ದಕ್ಷಿಣದ ರಾಜ್ಯಗಳ ಸಂಸದೀಯ ಪ್ರಾತಿನಿಧ್ಯವನ್ನು ಕುಗ್ಗಿಸಿ, ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರಲಿದೆ ಎಂದರು.

Read Full Story

08:11 AM (IST) Apr 14

ಆರ್ ಅಶೋಕ್ ಅಂಕಣ | ದಕ್ಷಿಣ ರಾಜ್ಯಗಳಿಗೆ ಅನ್ಯಾಯ ಎಂಬುದಕ್ಕೆ ಅರ್ಥವೇ ಇಲ್ಲ

ಕ್ಷೇತ್ರ ಮರುವಿಂಗಡಣೆಯು 'ಒಂದು ಮತ-ಒಂದು ಮೌಲ್ಯ' ತತ್ವವನ್ನು ಖಚಿತಪಡಿಸಲು ಅಗತ್ಯವಾದ ಸಾಂವಿಧಾನಿಕ ಸುಧಾರಣೆಯಾಗಿದೆ. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಇದನ್ನು ಉತ್ತರ-ದಕ್ಷಿಣ ವಿವಾದವಾಗಿ ಬಿಂಬಿಸುತ್ತಿರುವುದು ರಾಜಕೀಯ ದ್ವಂದ್ವ ನಿಲುವು? ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದೇನು? ಮುಂದೆ ಓದಿ

Read Full Story

07:54 AM (IST) Apr 14

Adichunchanagiri - ನಾಳೆ ಆದಿಚುಂಚನಗಿರಿಗೆ ಪ್ರಧಾನಿ ಮೋದಿ, ₹100 ಕೋಟಿಯ ಭೈರವೈಕ್ಯ ಮಂದಿರ ಲೋಕಾರ್ಪಣೆ

ಪ್ರಧಾನಿ ನರೇಂದ್ರ ಮೋದಿಯವರು ಏ.15 ರಂದು ಆದಿಚುಂಚನಗಿರಿಯಲ್ಲಿ ₹100 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ದ್ರಾವಿಡ ಶೈಲಿಯ ಶ್ರೀಗುರು ಭೈರವೈಕ್ಯ ಮಂದಿರ ಲೋಕಾರ್ಪಣೆ ಮಾಡಲಿದ್ದಾರೆ. ಈ ದೇಗುಲವು ಹೊಯ್ಸಳ, ಚೋಳ, ಚಾಲುಕ್ಯ ಹಾಗೂ ಗಂಗ ವಾಸ್ತುಶಿಲ್ಪದ ಸಮ್ಮಿಶ್ರಣವಾಗಿದ್ದು, ಇದೊಂದು ಜೀವಂತ ಆಧ್ಯಾತ್ಮ ಧಾಮವಾಗಿದೆ 

Read Full Story

07:31 AM (IST) Apr 14

ಗ್ಯಾರಂಟಿ ನಡುವೆಯೂ ರಾಜ್ಯದ ಆರ್ಥಿಕ ಸ್ಥಿತಿ ಕೇಂದ್ರಕ್ಕಿಂತ ಉತ್ತಮ: ಸಿಎಂ ಸಿದ್ದರಾಮಯ್ಯ

ಸರ್ಕಾರದ ಗ್ಯಾರಂಟಿ ಯೋಜನೆಗಳೂ ಒಂದು ವಿಧದ ಅಭಿವೃದ್ಧಿಯಾಗಿದ್ದು, ಗ್ಯಾರಂಟಿ ನಡುವೆಯೂ ರಾಜ್ಯದ ಆರ್ಥಿಕ ಸ್ಥಿತಿ ಕೇಂದ್ರಕ್ಕಿಂತ ಉತ್ತಮವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

 

Read Full Story

07:31 AM (IST) Apr 14

ಸಚಿವ ಸ್ಥಾನಕ್ಕಾಗಿ ಖರ್ಗೆ ಭೇಟಿಯಾಗಿ 23 ಶಾಸಕರ ಪಟ್ಟು, ಡಿಕೆಶಿ ಎಚ್ಚರಿಕೆಗೆ ಹೇಳಿದ್ದೇನು?

ಸಚಿವ ಸ್ಥಾನದ ಆಕಾಂಕ್ಷೆಯಲ್ಲಿರುವ ಕಾಂಗ್ರೆಸ್‌ನ ಹಿರಿಯ ಶಾಸಕರು ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕार्जुन ಖರ್ಗೆ ಅವರನ್ನು ಭೇಟಿಯಾಗಿದ್ದಾರೆ. ರಾಜ್ಯದಲ್ಲಿ ಸಂಪುಟ ಪುನರ್ ರಚನೆ ಮಾಡುವಂತೆ ಆಗ್ರಹಿಸಿದ್ದು, ನಿಷ್ಕ್ರಿಯ ಸಚಿವರನ್ನು ಕೈಬಿಟ್ಟು ಹಿರಿಯರಿಗೆ ಅವಕಾಶ ನೀಡಬೇಕೆಂದು ಮನವಿ ಮಾಡಿದ್ದಾರೆ.

 

Read Full Story

More Trending News