ರಾಜಕೀಯ ಪಕ್ಷಗಳು ಎಷ್ಟೇ ವಿರೋಧಿಸಿದರೂ ಟನಲ್ ರಸ್ತೆ ಮಾಡೇ ಮಾಡುತ್ತೇನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ನಮ್ಮದು ನುಡಿದಂತೆ ನಡೆವ ಸರ್ಕಾರ. ಟನಲ್ ರಸ್ತೆ, ಬ್ಯೂಸಿನೆಸ್ ಕಾರಿಡಾರ್, ಡಬಲ್ ಡೆಕ್ಕರ್ ರಸ್ತೆ ಸೇರಿದಂತೆ ಪ್ರಮುಖ ಯೋಜನೆಗಳು ನನ್ನ ಅವಧಿಯಲ್ಲಿ ನಡೆಯಲಿದೆ. ನ್ಯಾಯಾಲಯದಿಂದ ಯಾವುದೇ ಕಾನೂನಾತ್ಮಕ ತೊಡಕು ಬರದಿದ್ದರೆ ಎಲ್ಲಾ ಯೋಜನೆಗಳು ಕಾರ್ಯಾರಂಭಗೊಳ್ಳಲಿದೆ ಎಂದಿದ್ದಾರೆ. ರಾಜ್ಯದ ಕ್ಷಣ ಕ್ಷಣದ ಅಪ್ಡೇಟ್ ಸುದ್ದಿ ಇಲ್ಲಿದೆ

07:00 AM (IST) Sep 11
ನಾನು ಇತಿಹಾಸ ಒದುವ ಬದಲು, ಸೃಷ್ಟಿಸುವುದರಲ್ಲಿ ನಂಬಿಕೆ ಇಟ್ಟಿದ್ದೇನೆ. ನನ್ನ ಯೋಜನೆಗಳು ಕಾರ್ಯರೂಪಕ್ಕೆ ತರುತ್ತೇನೆ. ಸಾರ್ವಜನಿಕ ಸಾರಿಗೆ ಬಗ್ಗೆ ಮಾತನಾಡುವ ಸಂಸದ ತೇಜಸ್ವಿ ಸೂರ್ಯ ಬಸ್ನಲ್ಲಿ ಓಡಾಡುತ್ತಾರಾ ಎಂದು ಡಿಕೆ ಶಿವಕುಮಾರ್ ಟನಲ್ ರಸ್ತೆ ವಿರೋಧವನ್ನು ಪ್ರಶ್ನಿಸಿದ್ದಾರೆ.