LIVE NOW
Published : Sep 10, 2026, 05:29 AM ISTUpdated : Sep 10, 2026, 06:05 AM IST

Karnataka News Live: ರಾಜ್ಯಕ್ಕೆ ಮೋದಿ ಗಿಫ್ಟ್ - ಕರ್ನಾಟಕ ಸೇರಿ 4 ರಾಜ್ಯಗಳಲ್ಲಿ ₹10,021 ಕೋಟಿ ವೆಚ್ಚದ 5 ರೈಲ್ವೆ ಯೋಜನೆಗಳಿಗೆ ಅಸ್ತು!

ಸಾರಾಂಶ

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೇತೃತ್ವದ ಆಡಳಿತ 100 ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ 10 ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ‘ದೃಢ ಕರ್ನಾಟಕದ ಸಂಕಲ್ಪ-ಶತಕದ ಪಥ, ಪ್ರಗತಿಯ ರಥ’ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಗ್ಯಾರಂಟಿ ಫಲಾನುಭವಿಗಳ ಜತೆ ಸಂವಾದ ನಡೆಸಲಿದ್ದಾರೆ.

ಸಹನೆ, ಛಲ ಹಾಗೂ ಹೋರಾಟದ ಮೂಲಕ ತಮ್ಮ ಕನಸಿನ ಹುದ್ದೆಗೇರಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕೇವಲ 100 ದಿನಗಳಲ್ಲೇ ತಮ್ಮ ಪರಿಶ್ರಮದ ಉದ್ದೇಶ ಹಾಗೂ ಗುರಿಯೇನಾಗಿತ್ತು ಎಂಬುದನ್ನು ಸಾಬೀತುಪಡಿಸುವೆಡೆಗೆ ದಾಪುಗಾಲು ಹಾಕಿದ್ದಾರೆ.

ಕಾಂಗ್ರೆಸ್‌ ಪಕ್ಷವನ್ನು ಕಟ್ಟಿಹಾಕಲು ಪ್ರತಿಪಕ್ಷ ಬಳಸುವ ಹಿಂದು ಮಂತ್ರಕ್ಕೆ ಮೃದು ಹಿಂದುತ್ವದ ತಿರುಮಂತ್ರ, ಅಹಿಂದ ವರ್ಗವನ್ನು ಜತೆಗೆ ಒಯ್ಯುವ ಜೊತೆಗೆ ಮೇಲ್ವರ್ಗವನ್ನು ಸಂತೃಪ್ತಿಗೊಳಿಸುವ ಪ್ರಯತ್ನ, ಜೆನ್‌-ಝೀಗೆ ಅತಿ ಹೆಚ್ಚಿನ ಆದ್ಯತೆ ಹಾಗೂ ಕೇಂದ್ರ ಹಾಗೂ ನೆರೆಯ ರಾಜ್ಯ ಸರ್ಕಾರಗಳ ಜತೆಗೆ ಸಂಘರ್ಷಕ್ಕಿಂತ ಸಹಕಾರ ತಮ್ಮ ಆಡಳಿತದ ಮೂಲ ತತ್ವ ಎಂಬುದನ್ನು ನಿರೂಪಿಸುವ ಪ್ರಯತ್ನ ನಡೆಸಿದ್ದಾರೆ.

ಇನ್ನು ತಾವು ಆಡಳಿತದಲ್ಲೂ ಹಿಂದೆ ಬಿದ್ದಿಲ್ಲ ಎಂಬುದನ್ನು ನಿರೂಪಿಸಲು ಪ್ರತಿಯೊಂದು ವಿಚಾರದಲ್ಲೂ ವೇಗ ಹಾಗೂ ದೃಢ ನಿರ್ಧಾರಗಳ ಮೂಲಕ ಭರವಸೆ ಮೂಡಿಸಿದ್ದಾರೆ

06:06 AM (IST) Sep 10

ರಾಜ್ಯಕ್ಕೆ ಮೋದಿ ಗಿಫ್ಟ್ - ಕರ್ನಾಟಕ ಸೇರಿ 4 ರಾಜ್ಯಗಳಲ್ಲಿ ₹10,021 ಕೋಟಿ ವೆಚ್ಚದ 5 ರೈಲ್ವೆ ಯೋಜನೆಗಳಿಗೆ ಅಸ್ತು!

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕರ್ನಾಟಕ ಸೇರಿದಂತೆ ದಕ್ಷಿಣದ ನಾಲ್ಕು ರಾಜ್ಯಗಳಿಗೆ ₹10,021 ಕೋಟಿ ವೆಚ್ಚದ ಐದು ರೈಲ್ವೆ ಯೋಜನೆಗಳಿಗೆ ಅನುಮೋದನೆ ನೀಡಿದೆ. ಈ ಯೋಜನೆಗಳಲ್ಲಿ ವೈಟ್‌ಫೀಲ್ಡ್-ಬಂಗಾರಪೇಟೆ ಮಾರ್ಗದ ವಿಸ್ತರಣೆಯೂ ಸೇರಿದ್ದು, ಇದು ಕೆಜಿಎಫ್ ಮತ್ತು ಹೋಗೇನಕಲ್‌ನಂತಹ ಪ್ರವಾಸಿ ತಾಣಗಳಿಗೆ ಸಂಪರ್ಕವನ್ನು ಸುಧಾರಿಸಲಿದೆ.
Read Full Story

05:40 AM (IST) Sep 10

ಸಹನೆ, ಛಲ, ಹೋರಾಟದಿಂದ ಕನಸಿನ ಪಟ್ಟಕ್ಕೇರಿದ ನಾಯಕ ಡಿ.ಕೆ. ಶಿವಕುಮಾರ್ ಸರ್ಕಾರಕ್ಕಿಂದು 100 ದಿನ; ಸಿಎಂ ಹಾದಿ ಭಿನ್ನ!

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ 100 ದಿನಗಳ ಆಡಳಿತದಲ್ಲಿ, ಅವರು ಸಹಕಾರ ತತ್ವ, ಯುವಜನತೆಗೆ ಆದ್ಯತೆ ಮತ್ತು ತಂತ್ರಜ್ಞಾನದ ಮೇಲೆ ಗಮನಹರಿಸಿದ್ದಾರೆ. ಪ್ರಜಾಸೇವೆ, ಉದ್ಯೋಗ ಸೃಷ್ಟಿ, ಮತ್ತು ಬ್ರ್ಯಾಂಡ್ ಬೆಂಗಳೂರಿನಂತಹ ಯೋಜನೆಗಳ ಮೂಲಕ ತಮ್ಮ ಆಡಳಿತದ ದಿಕ್ಕನ್ನು ಸ್ಪಷ್ಟಪಡಿಸಿದ್ದಾರೆ.
Read Full Story

More Trending News