Published : Aug 05, 2025, 07:10 AM ISTUpdated : Aug 05, 2025, 11:37 PM IST

Karnataka News Live: ಸಿನಿಮಾ ಮಾಡ್ತಿದ್ದಾರಾ ನಟಿ ರಮ್ಯಾ? ಸ್ಟೈಲೀಶ್ ಫೋಟೋ ಪೋಸ್ಟ್ ಮಾಡಿ ಕಮೆಂಟ್ ಆಫ್

ಸಾರಾಂಶ

ಧರ್ಮಸ್ಥಳ: ಬಂಗ್ಲೆಗುಡ್ಡೆ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯ ವೇಳೆ ಭೂಮಿಯ ಮೇಲ್ಮೈಯಲ್ಲಿ ಒಂದು ಸಂಪೂರ್ಣ ಅಸ್ಥಿಪಂಜರ ಪತ್ತೆಯಾಗಿದೆ. ಈ ಅಸ್ಥಿಪಂಜರವು ದೂರುದಾರ ಅನಾಮಿಕ ವ್ಯಕ್ತಿ ತೋರಿಸಿದ ಸ್ಥಳದಲ್ಲಿ ಸಿಗದೆ ಬೇರೆ ಪಾಯಿಂಟ್‌ನಲ್ಲಿ ಪತ್ತೆಯಾಗಿದೆ. ಈ ಅಸ್ಥಿಪಂಜರದ ಬಳಿಯಲ್ಲಿ ಗಂಡಸಿನ ಉಡುಪುಗಳು ಮತ್ತು ಹಗ್ಗವೂ ಪತ್ತೆಯಾದ ಹಿನ್ನೆಲೆಯಲ್ಲಿ, ವ್ಯಕ್ತಿಯೊಬ್ಬ ಆತ್ಮ*ಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

Actress Ramya

11:37 PM (IST) Aug 05

ಸಿನಿಮಾ ಮಾಡ್ತಿದ್ದಾರಾ ನಟಿ ರಮ್ಯಾ? ಸ್ಟೈಲೀಶ್ ಫೋಟೋ ಪೋಸ್ಟ್ ಮಾಡಿ ಕಮೆಂಟ್ ಆಫ್

ಸೋಶಿಯಲ್ ಮೀಡಿಯಾದಲ್ಲಿ ಕೊಳಕು ಕಮೆಂಟ್ ಮಾಡುತ್ತಿರುವವರ ವಿರುದ್ಧ ಸಮರ ಸಾರಿರುವ ನಟಿ ರಮ್ಯಾಗೆ ಭಾರಿ ಬೆಂಬಲ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ನಟಿ ರಮ್ಯಾ ಸಿನಿಮಾ ಮಾಡುತ್ತಿದ್ದೀರಾ? ಸ್ಟೈಲಿಶ್ ಫೋಟೋ ಹಂಚಿಕೊಂಡಿರುವ ರಮ್ಯಾ ಕಮೆಂಟ್ ನಿರ್ಬಂಧಿಸಿದ್ದಾರೆ.

Read Full Story

11:14 PM (IST) Aug 05

ಮಳೆ, ಹವಾಮಾನ ವೈಪರಿತ್ಯದಿಂದ ಸಿಎಂ ಸಿದ್ದರಾಮಯ್ಯ ಕೊಪ್ಪಳ- ರಾಯಚೂರು ಪ್ರವಾಸ ರದ್ದು

ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ಕೈಗೊಳ್ಳಬೇಕಿದ್ದ ಕೊಪ್ಪಳ ಹಾಗೂ ರಾಯಚೂರು ಪ್ರವಾಸ ರದ್ದಾಗಿದೆ.

Read Full Story

10:40 PM (IST) Aug 05

ರಾಜ್ಯದ ಕೆಲವೆಡೆ ಭಾರಿ ಮಳೆ, ಕೊಡುಗು ಜಿಲ್ಲಾ ಶಾಲಾ ಕಾಲೇಜಿಗೆ ಬುಧವಾರ ರಜೆ

ರಾಜ್ಯದ ಕೆಲೆವೆಡೆ ಭಾರಿ ಮಳೆಯಾಗುತ್ತಿದೆ. ಇತ್ತ ಕೊಡಗು ಜಿಲ್ಲೆಯಲ್ಲಿ ಆರೇಂಜ್ ಅಲರ್ಟ್ ಘೋಷಿಸಲಾಗಿದ್ದು, ನಾಳೆ (ಆ.06) ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ.

Read Full Story

10:02 PM (IST) Aug 05

ಮೃತ ತಾಯಿ ಖಾತೆಗೆ 1.13 ಲಕ್ಷ ಕೋಟಿ ರೂ ಜಮೆ, ಬೆಚ್ಚಿ ಬಿದ್ದ ಮಗನ ಫೋನ್ ಸ್ವಿಚ್ ಆಫ್

ತಾಯಿ ಮೃತಪಟ್ಟ 2 ತಿಂಗಳಿಗೆ ಖಾತೆಗೆ ಬಂತು 1.13 ಲಕ್ಷ ಕೋಟಿ ರೂಪಾಯಿ. ಮೆಸೇಜ್ ನೋಡಿದ ಮಗ ಬೆಚ್ಚಿ ಬಿದ್ದಿದ್ದಾನೆ. ಕೆಲವೇ ಹೊತ್ತಲ್ಲಿ ಮಗನ ಫೋನ್ ಸ್ವಿಚ್ ಆಫ್ ಆಗಿದ್ದರೆ, ಇತ್ತ ಆದಾಯ ತೆರಿಗೆ ಇಲಾಖೆ ತನಿಖೆ ಆರಂಭಿಸಿದೆ.

Read Full Story

08:57 PM (IST) Aug 05

ಉತ್ತರಖಂಡ ಮೇಘಸ್ಫೋಟದಲ್ಲಿ 8 ರಿಂದ 10 ಯೋಧರು ನಾಪತ್ತೆಯಾದ್ರೂ ಇತರರ ರಕ್ಷಣೆಯಲ್ಲಿ ಸೇನೆ

ಉತ್ತರಖಂಡದ ಭೀಕರ ಮೇಘಸ್ಪೋಟದಲ್ಲಿ ಇಡೀ ಗ್ರಾಮವೇ ಕೊಚ್ಚಿಹೋಗಿದೆ ಹಲವರು ಪ್ರವಾಹದಲ್ಲಿ ಸಿಲುಕಿದ್ದಾರೆ. ಮೃತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಮೇಘಸ್ಫೋಟದಲ್ಲಿ 8 ರಿಂದ 10 ಭಾರತೀಯ ಯೋಧರು ನಾಪತ್ತೆಯಾಗಿದ್ದಾರೆ.

 

Read Full Story

08:29 PM (IST) Aug 05

ನಕಲಿ ಭೂ ದಾಖಲೆಗಳ ಸೃಷ್ಟಿಗೆ 'ಭೂ ಸುರಕ್ಷಾ' ಯೋಜನೆ - ಕಂದಾಯ ಸಚಿವ ಕೃಷ್ಣಭೈರೇಗೌಡ ಚಾಲನೆ

ಭೂ ದಾಖಲೆಗಳಲ್ಲಿ ನಕಲಿ ಎಂಟ್ರಿ ಮತ್ತು ಸುಳ್ಳು ದಾಖಲೆಗಳನ್ನು ತಡೆಯಲು ಡಿಜಿಟಲೀಕರಣ ಮಹತ್ವದ ಹೆಜ್ಜೆಯಾಗಿದೆ. ಈ ಯೋಜನೆಯು ಸಾರ್ವಜನಿಕರಿಗೆ ತಮ್ಮ ಭೂ ದಾಖಲಾತಿಗಳನ್ನು ಸುಲಭವಾಗಿ ಪಡೆಯಲು ಸಹಕಾರಿಯಾಗಿದೆ. ಹಳೆಯ ದಾಖಲಾತಿಗಳನ್ನು ಡಿಜಿಟಲೀಕರಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗುವುದು.
Read Full Story

08:18 PM (IST) Aug 05

ಟಿಸಿಎಸ್ ಬೆನ್ನಲ್ಲೇ ಉದ್ಯೋಗ ಕಡಿತಕ್ಕೆ ಮುಂದಾದ ಅಮೇಜಾನ್, ಶೀಘ್ರ WPB ಸಿಇಒ ರಾಜೀನಾಮೆ

ಟಿಸಿಎಸ್ 12000 ಉದ್ಯೋಗ ಕಡಿತಕ್ಕೆ ಮುಂದಾದ ಬೆನ್ನಲ್ಲೇ ಮಾರುಕಟ್ಟೆಯಲ್ಲಿ ಅಲ್ಲೋಕಲ್ಲೋ ಆರಂಭಗೊಂಡಿದೆ. ಇದರ ಬೆನ್ನಲ್ಲೇ ಇದೀಗ ಅಮೇಜಾನ್ ಉದ್ಯೋಗ ಕಡಿತ ಮಾಡುತ್ತಿದೆ. ಇದರ ಪರಿಣಾಮ ಸಿಇಒ ಶೀಘ್ರದಲ್ಲೇ ರಾಜೀನಾಮೆ ನೀಡಲಿದ್ದಾರೆ.

Read Full Story

08:06 PM (IST) Aug 05

ಮೂರಂತಸ್ತಿನ ಕಟ್ಟಡದಿಂದ ಬಿದ್ದು ಯುವತಿ ಅನುಮಾನಾಸ್ಪದ ಸಾವು!

ಬೆಂಗಳೂರಿನ ಫಿಟ್ನೆಸ್ ಸೆಂಟರ್‌ನ ಮೂರನೇ ಮಹಡಿಯಿಂದ ಬಿದ್ದು 20 ವರ್ಷದ ಯುವತಿ ರಕ್ಷಿತಾ ಸಾವನ್ನಪ್ಪಿದ್ದಾರೆ. ಕಡಬಗೆರೆಯ ಜುನಿಫರ್ ಫಿಟ್ನೆಸ್ ಸೆಂಟರ್‌ನಲ್ಲಿ ಈ ಘಟನೆ ನಡೆದಿದ್ದು, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read Full Story

07:51 PM (IST) Aug 05

ಚಿನ್ನಸ್ವಾಮಿ ಕಾಲ್ತುಳಿತ ವರದಿ ವಿವಾದ, ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲು ಹೈಕೋರ್ಟ್ ಸೂಚನೆ

ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ಘಟನೆ ಕುರಿತ ನ್ಯಾಯಮೂರ್ತಿ ಕುನ್ಹಾ ವರದಿಯನ್ನು ಡಿಎನ್ಎ ಪ್ರಶ್ನಿಸಿದೆ. ಸಾಕ್ಷಿಗಳ ಹೇಳಿಕೆಗಳನ್ನು ನೀಡದೆ ವರದಿ ಸಲ್ಲಿಸಿರುವುದನ್ನು ಡಿಎನ್ಎ ಆಕ್ಷೇಪಿಸಿದೆ. ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲು ಹೈಕೋರ್ಟ್ ಸೂಚಿಸಿದೆ.
Read Full Story

07:40 PM (IST) Aug 05

ಸಾರಿಗೆ ನೌಕರರ ಮುಷ್ಕರ ಬೆಂಬಲಿಸಿದ ಆರ್. ಅಶೋಕ್‌ಗೆ ಬೆಂಡೆತ್ತಿ ಬ್ರೇಕ್ ಹಾಕಿದ ಸಿಎಂ ಸಿದ್ದರಾಮಯ್ಯ!

ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರಿಗೆ ತಿರುಗೇಟು ನೀಡಿದ್ದಾರೆ. ಅಶೋಕ್ ಅವರ ಅಧಿಕಾರಾವಧಿಯಲ್ಲಿನ ಸಾರಿಗೆ ನೌಕರರ ಸಮಸ್ಯೆಗಳನ್ನು ಪ್ರಸ್ತಾಪಿಸಿ, ಅವರ 'ಆತ್ಮವಂಚಕ ವ್ಯಕ್ತಿತ್ವ' ವನ್ನು ಟೀಕಿಸಿದ್ದಾರೆ.
Read Full Story

07:39 PM (IST) Aug 05

ಶ್ಯಾಡೋ ಪ್ರೈಮ್‌ ಮಿನಿಸ್ಟರ್‌ ರಾಹುಲ್‌ ಗಾಂಧಿಗೆ ಕೋರ್ಟ್‌ ಮಾಡಿದ ಅಪಮಾನ - ಬಿಕೆ ಹರಿಪ್ರಸಾದ್‌

ರಾಹುಲ್ ಗಾಂಧಿಯವರ ಹೇಳಿಕೆ ಕುರಿತು ಸುಪ್ರೀಂ ಕೋರ್ಟ್‌ನ ಪ್ರಶ್ನೆ ಕಾಂಗ್ರೆಸ್‌ನ ಆಕ್ರೋಶಕ್ಕೆ ಕಾರಣವಾಗಿದೆ. ನ್ಯಾಯಾಂಗ ವ್ಯವಸ್ಥೆಯ ಅಧಃಪತನಕ್ಕೆ ಸಾಕ್ಷಿ ಎಂದು ಬಿಕೆ ಹರಿಪ್ರಸಾದ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Read Full Story

07:16 PM (IST) Aug 05

ಸದಾಶಿವನಗರ ಮೈಸೂರು ರಾಜಮನೆತನದ ಭೂ ವಿವಾದ - ಬಿಡಿಎ ಹಕ್ಕು ಸಾಬೀತುಪಡಿಸಲು ಹೈಕೋರ್ಟ್ ಮಹತ್ವದ ತೀರ್ಪು

ಬೆಂಗಳೂರಿನ ಸದಾಶಿವನಗರದಲ್ಲಿರುವ ಒಂದು ಎಕರೆ ಜಮೀನಿನ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಭೂಮಿಯ ಮಾಲೀಕತ್ವ ಮತ್ತು ಬಳಕೆಯ ಕುರಿತು ನಡೆಯುತ್ತಿರುವ ಕಾನೂನು ಹೋರಾಟದಲ್ಲಿ ಈ ತೀರ್ಪು ಮಹತ್ವದ ತಿರುವು ನೀಡಿದೆ.  

Read Full Story

07:16 PM (IST) Aug 05

ಚಿತ್ರದುರ್ಗ ಭೀಕರ ಅಪಘಾತ - ಆಟೋ ಅಪ್ಪಚ್ಚಿಯಾದ್ರೂ ಬದುಕುಳಿದ 5 ಪ್ರಯಾಣಿಕರು!

ಚಿತ್ರದುರ್ಗದ ಬಸ್ ನಿಲ್ದಾಣದ ಬಳಿ ಭಾನುವಾರ ಮಧ್ಯಾಹ್ನ ಸಂಭವಿಸಿದ ಭೀಕರ ಅಪಘಾತದಲ್ಲಿ ಖಾಸಗಿ ಬಸ್ ಮತ್ತು ಸರ್ಕಾರಿ ಬಸ್ ನಡುವೆ ಸಿಲುಕಿದ ಆಟೋ ನಜ್ಜುಗುಜ್ಜಾಗಿದೆ. ಐವರು ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Read Full Story

07:12 PM (IST) Aug 05

ಧಾರಾಲಿ ಬಳಿಕ ಇದೀಗ ಸುಖಿಯಲ್ಲಿ ಮೇಘಸ್ಫೋಟ, ಇಲ್ಲಿದೆ ಉತ್ತರಖಂಡದ ಭೀಕರತೆ ಚಿತ್ರಣ

ಉತ್ತರಖಂಡದ ಧಾರಾಲಿ ಗ್ರಾಮ ಮೇಘಸ್ಫೋಟಕ್ಕೆ ಕೊಚ್ಚಿ ಹೋಗಿದೆ. ಇದರ ಬೆನ್ನಲ್ಲೇ ಸುಖಿ ಬೆಟ್ಟದಲ್ಲಿ ಮೇಘಸ್ಫೋಟಗೊಂಡಿದೆ. ಹಲವರು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ. ಕಟ್ಟಡಗಳು, ಮನೆಗಳು ನೆಲೆಸಮಗೊಂಡಿದೆ.

Read Full Story

06:34 PM (IST) Aug 05

ಬೆಂಗಳೂರಿನಲ್ಲಿ ಪಿಓಪಿ ಗಣೇಶ ಮೂರ್ತಿ ತಯಾರಕರ ಮೇಲೆ ಕೇಸ್; ಬಿಬಿಎಂಪಿ ಮುಖ್ಯ ಆಯುಕ್ತರ ಎಚ್ಚರಿಕೆ!

ಬೆಂಗಳೂರು ನಗರದಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಬಿಬಿಎಂಪಿ ಒತ್ತು ನೀಡಿದೆ. ಪಿಓಪಿ ಗಣೇಶ ಮೂರ್ತಿಗಳನ್ನು ನಿಷೇಧಿಸಲಾಗಿದ್ದು, ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ವಿಸರ್ಜನೆಗೆ ಕಲ್ಯಾಣಿಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.
Read Full Story

06:14 PM (IST) Aug 05

ಬಾಗಲಕೋಟೆ ಬಾಲಕಿಯ ವಿದ್ಯಾಭ್ಯಾಸಕ್ಕೆ ನೆರವಾದ ಟೀಮ್ ಇಂಡಿಯಾ ಕ್ರಿಕೆಟಿಗ ರಿಷಬ್‌ ಪಂತ್‌!

ಬಾಗಲಕೋಟೆಯ ಬಡ ವಿದ್ಯಾರ್ಥಿನಿ ಜ್ಯೋತಿ ಕಣಬೂರ್‌ಗೆ ಭಾರತೀಯ ಕ್ರಿಕೆಟಿಗ ರಿಷಭ್ ಪಂತ್ 40,000 ರೂ.ಗಳ ಆರ್ಥಿಕ ನೆರವು ನೀಡಿದ್ದಾರೆ. ಬಿಸಿಎ ಪದವಿಗೆ ಸೇರ್ಪಡೆಗೊಳ್ಳಲು ಜ್ಯೋತಿಗೆ ಸಹಾಯವಾಗಲು ಪಂತ್ ಮುಂದೆ ಬಂದಿದ್ದಾರೆ. ಈ ಮೂಲಕ ಕ್ರಿಕೆಟ್ ಜೊತೆಗೆ ಮಾನವೀಯತೆ ಮೆರೆದಿದ್ದಾರೆ.
Read Full Story

06:12 PM (IST) Aug 05

ಬೆಂಗಳೂರಿಗೆ 2ನೇ ಸುರಂಗ ಮಾರ್ಗ, ಪ್ರತೀ ಮೆಟ್ರೋ ಮಾರ್ಗವೂ ಡಬಲ್ ಡೆಕ್ಕರ್ - ಡಿಕೆಶಿ

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹಳದಿ ಮಾರ್ಗ ಮೆಟ್ರೋ ಉದ್ಘಾಟನೆ, ಮುಂದಿನ ಮೆಟ್ರೋ ಯೋಜನೆಗಳು, ಡಬಲ್ ಡೆಕ್ಕರ್ ಮೆಟ್ರೋ ಯೋಜನೆ ಮತ್ತು ಹೊಸ ಟನಲ್‌ ರಸ್ತೆ ಕುರಿತು ಮಾಹಿತಿ ನೀಡಿದರು. ಹಳದಿ ಮಾರ್ಗವು 19.5 ಕಿ.ಮೀ ಉದ್ದವಿದ್ದು, 16 ನಿಲ್ದಾಣಗಳನ್ನು ಹೊಂದಿದೆ.  

Read Full Story

05:51 PM (IST) Aug 05

ಪ್ರಾಣ ಉಳಿಸಿಕೊಳ್ಳಲು ಓಡುತ್ತಿದ್ದ ಜನರ ಮೇಲೆ ಅಪ್ಫಳಿಸಿದ ಪ್ರವಾಹ, ಉತ್ತರಖಂಡ ಭೀಕರ ವಿಡಿಯೋ

ಉತ್ತರಖಂಡ ಮೇಘಸ್ಫೋಟದ ವಿಡಿಯೋ ಬಹಿರಂಗವಾಗಿದೆ. ಕೆಲವೇ ಸೆಕೆಂಡ್ ಅಂತರದಲ್ಲಿ ಪ್ರವಾಹ ಇಡೀ ಗ್ರಾಮವನ್ನೇ ಮುಗಿಸಿಬಿಟ್ಟಿದೆ ಜನರು ದಿಕ್ಕಾಪಾಲಾಗಿ ಓಡುತ್ತಿದ್ದಂತೆ ಪ್ರವಾಹ ಅಪ್ಪಳಿಸಿ ಸಮಾಧಿಯಾಗಿರುವ ಭೀಕರ ವಿಡಿಯೋ ಹೊರಬಂದಿದೆ.

 

Read Full Story

05:07 PM (IST) Aug 05

ಸಾರಿಗೆ ನೌಕರರ ಮುಷ್ಕರ ವಾಪಸ್ - ಹೈಕೋರ್ಟ್ ಬಂಧನದ ಆದೇಶದ ಬಳಿಕ ಡ್ಯೂಟಿಗೆ ಹಾಜರ್!

ಎಸ್ಮಾ ಜಾರಿಯಾದರೂ ಕರ್ತವ್ಯಕ್ಕೆ ಹಾಜರಾಗದೇ ಮುಷ್ಕರ ಮಾಡುತ್ತಿದ್ದ ನೌಕರರನ್ನು ಬಂಧಿಸುವಂತೆ ಹೈಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ಸಾರಿಗೆ ನೌಕರರು ಮುಷ್ಕರ ವಾಪಸ್ ಪಡೆದಿದ್ದಾರೆ. ಮುಂದಿನ ಹೋರಾಟದ ಬಗ್ಗೆ ಜಂಟಿ ಕ್ರಿಯಾ ಸಮಿತಿ ಚಿಂತನೆ ನಡೆಸುತ್ತಿದೆ. ನೌಕರರು ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.

Read Full Story

04:39 PM (IST) Aug 05

ಹುಬ್ಬಳ್ಳಿಯಲ್ಲಿ ತಾಯಿ ಎದೆ ಹಾಲಿನ ಜೀವಾಮೃತ ಬ್ಯಾಂಕ್‌, ಒಟ್ಟು 785 ಲೀಟರ್ ಎದೆ ಹಾಲು ದಾನ

ಕೆಎಂಸಿ-ಆರ್‌ಐನ 'ಜೀವಾಮೃತ' ಹಾಲು ಬ್ಯಾಂಕ್ 3,746 ತಾಯಂದಿರಿಂದ 785 ಲೀಟರ್ ಹಾಲು ಸಂಗ್ರಹಿಸಿ 1,106 ಶಿಶುಗಳಿಗೆ ಪೌಷ್ಟಿಕ ಆಹಾರ ಒದಗಿಸಿದೆ. ಸ್ತನ್ಯಪಾನದ ಮಹತ್ವವನ್ನು ಈ ಉಪಕ್ರಮ ಎತ್ತಿ ತೋರಿಸುತ್ತದೆ, ಶಿಶುಗಳ ಆರೋಗ್ಯ ಮತ್ತು ಬೆಳವಣಿಗೆಗೆ ತಾಯಿಯ ಹಾಲಿನ ಅನಿವಾರ್ಯತೆಯನ್ನು ಒತ್ತಿ ಹೇಳುತ್ತದೆ.
Read Full Story

04:36 PM (IST) Aug 05

ಧರ್ಮಸ್ಥಳದಲ್ಲಿ ನಿನ್ನೆ ಸಿಕ್ಕಿದ್ದು ಒಂದಲ್ಲ, 3 ಜನರ ಅಸ್ತಿಪಂಜರ; ಸುಜಾತಾಭಟ್ ಪರ ವಕೀಲ ಮಂಜುನಾಥ್!

ಧರ್ಮಸ್ಥಳದಲ್ಲಿ ನಡೆಯುತ್ತಿರುವ ಸಮಾಧಿ ಶೋಧ ಕಾರ್ಯದಲ್ಲಿ ಮತ್ತೊಂದು ರೋಚಕ ತಿರುವು ಸಿಕ್ಕಿದೆ. ಅನಾಮಿಕ ವ್ಯಕ್ತಿ ತೋರಿಸಿದ ಸ್ಥಳದ ಹೊರತಾಗಿ ಮೂರು ಅಸ್ಥಿಪಂಜರಗಳು ಪತ್ತೆಯಾಗಿವೆ. ಇದರಲ್ಲಿ ಒಂದು ಮಹಿಳೆಯ ಅಸ್ಥಿಪಂಜರವಾಗಿದ್ದು, ಕೆಂಪು ಸೀರೆಯೂ ಪತ್ತೆಯಾಗಿದೆ.
Read Full Story

04:20 PM (IST) Aug 05

1ಬಿಹೆಚ್‌ಕೆ ಮನೆ ತಿಂಗಳ ಬಾಡಿಗೆ 42,000 ರೂಪಾಯಿ, ನಗರ ಜೀವನ ದುಬಾರಿ ಅಲ್ಲ ಅಸಾಧ್ಯ

ಕೇವಲ ಒಂದು ಬೆಡ್ ರೂಂ ಮನೆ, ಬಾಡಿಗೆ ಬರೋಬ್ಬರಿ 42,000 ರೂಪಾಯಿ. ಬೆಂಗಳೂರು ಸೇರಿದಂತೆ ಎಲ್ಲಾ ನಗರದ ಮನೆ ಬಾಡಿಗೆಯನ್ನು ಹಿಂದಿಕ್ಕಿದ ಭಾರತದ ಈ ನಗರ ಯಾವುದು?

Read Full Story

03:34 PM (IST) Aug 05

ಕರ್ನಾಟಕದ 11 ಬ್ಯಾಂಕ್ ಗಳಲ್ಲಿ ಸಾವಿರಾರು ಹುದ್ದೆಗಳಿಗೆ ಅರ್ಜಿ ಆಹ್ವಾನ, ಪದವೀಧರರಿಗೆ ಜಾಕ್‌ಪಾಟ್‌!

ರಾಜ್ಯದ ಪ್ರಮುಖ ಬ್ಯಾಂಕುಗಳಲ್ಲಿ 1,170 ಕಸ್ಟಮರ್ ಗುಮಾಸ್ತ ಹುದ್ದೆಗಳಿಗೆ IBPS ಅರ್ಜಿ ಆಹ್ವಾನಿಸಿದೆ. ಕೆನರಾ ಬ್ಯಾಂಕ್‌ನಲ್ಲಿ ಅತಿ ಹೆಚ್ಚು ಹುದ್ದೆಗಳಿದ್ದು, ಕನ್ನಡ ಭಾಷಾ ಜ್ಞಾನ ಕಡ್ಡಾಯ.
Read Full Story

03:30 PM (IST) Aug 05

ಮಾಡರ್ನ್ ಮುನ್ನಾ ಭಾಯ್ MBBS, 50 ಸಿಸೆರಿಯನ್ ಮಾಡಿದ ನಕಲಿ ವೈದ್ಯ ಸರ್ಜರಿ ವೇಳೆ ಅರೆಸ್ಟ್

ಸಂಜಯ್ ದತ್ ಮುನ್ನಾಭಾಯ್ ಎಂಬಿಬಿಎಸ್ ಸಿನಿಮಾ ರೀತಿಯಲ್ಲೇ ಇಲ್ಲೊಬ್ಬ ಮಾರ್ಡರ್ನ್ ಮುನ್ನಾ ಭಾಯ್ ಇದ್ದಾನೆ. ಈತ ಬರೋಬ್ಬರಿ 50 ಸಿ ಸೆಕ್ಷನ್ ಸರ್ಜರಿ ಮಾಡಿದ್ದಾನೆ. 51ನೇ ಸರ್ಜರಿ ಮಾಡುತ್ತಿರುವಾಗಲೇ ಪೊಲೀಸರು ಈತನ ಅರೆಸ್ಟ್ ಮಾಡಿದ್ದಾರೆ.

 

Read Full Story

03:10 PM (IST) Aug 05

ಸಾರಿಗೆ ನೌಕರರ ಹೋರಾಟ ಸಕ್ಸಸ್; ಬಿಎಂಟಿಸಿ ಕೈಕೊಟ್ಟರೂ, ಕೈಬಿಡದ ಕಲ್ಯಾಣ ಕರ್ನಾಟಕ ನಿಗಮ ನೌಕರರು!

ರಾಜ್ಯಾದ್ಯಂತ ಸಾರಿಗೆ ನೌಕರರ ಮುಷ್ಕರದಿಂದ ಜನಸಾಮಾನ್ಯರು ಪರದಾಡುವಂತಾಗಿದೆ. ಬಿಎಂಟಿಸಿ ಹೊರತುಪಡಿಸಿ ಉಳಿದ ನಿಗಮಗಳಲ್ಲಿ ಬಸ್ ಸಂಚಾರ ವಿರಳವಾಗಿದ್ದು, ಮೆಜೆಸ್ಟಿಕ್‌ನಲ್ಲಿ ಖಾಸಗಿ ಬಸ್‌ಗಳಿಗೆ ಅವಕಾಶ ನೀಡಲಾಗಿದೆ. ಈ ನಡುವೆ ಸರ್ಕಾರದ ವಿರುದ್ಧ ವಿಪಕ್ಷ ನಾಯಕರು ವಾಗ್ದಾಳಿ ನಡೆಸಿದ್ದಾರೆ.
Read Full Story

02:50 PM (IST) Aug 05

ಬೆಂಗಳೂರು ಸುರಂಗ ರಸ್ತೆಗೆ ಬಿಡ್‌ ಮಾಡಿದ ಅದಾನಿ, ಟಾಟಾ!

ಈ ಕಂಪನಿಗಳ ಪ್ರತಿನಿಧಿಗಳು ವಸಂತನಗರದಲ್ಲಿರುವ ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಬಿ-ಸ್ಮೈಲ್) ನ ಪ್ರಧಾನ ಕಚೇರಿಯಲ್ಲಿ ನಡೆದ ಪೂರ್ವ-ಬಿಡ್ ಸಭೆಯಲ್ಲಿ ಭಾಗವಹಿಸಿದ್ದರು.

 

Read Full Story

01:28 PM (IST) Aug 05

'ನಿಜವಾದ ಭಾರತೀಯರು ಯಾರೆಂದು ಜಡ್ಜ್‌ ತೀರ್ಮಾನ ಮಾಡೋದಲ್ಲ..' ಸುಪ್ರೀಂ ಕೋರ್ಟ್‌ಗೆ ಪ್ರಿಯಾಂಕಾ ಗಾಂಧಿ ತಿರುಗೇಟು!

ರಾಹುಲ್ ಗಾಂಧಿಯವರ ಹೇಳಿಕೆಗಳ ಕುರಿತು ಸುಪ್ರೀಂ ಕೋರ್ಟ್‌ನ ಪ್ರಶ್ನೆಗಳಿಗೆ ಪ್ರಿಯಾಂಕಾ ಗಾಂಧಿ ವಾದ್ರಾ ತಿರುಗೇಟು ನೀಡಿದ್ದಾರೆ. ಯಾರು ನಿಜವಾದ ಭಾರತೀಯರು ಎಂದು ನ್ಯಾಯಾಧೀಶರು ತೀರ್ಮಾನಿಸಬಾರದು ಎಂದು ಅವರು ಹೇಳಿದ್ದಾರೆ. 

Read Full Story

01:05 PM (IST) Aug 05

ರಮ್ಯಾಗೆ ಅಶ್ಲೀಲ ಕಾಮೆಂಟದ ಮಾಡಿದ ದಾಸನ ಅಭಿಮಾನಿಗಳಲ್ಲಿ ಚಿತ್ರದುರ್ಗದವರೇ ಹೆಚ್ಚು!

ನಟಿ ರಮ್ಯಾ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದ 48 ಜನರ ಪೈಕಿ 4 ಮಂದಿ ಬಂಧಿಸಲಾಗಿದೆ. ದರ್ಶನ್ ಪ್ರಕರಣದ ಬಗ್ಗೆ ರಮ್ಯಾ ಮಾಡಿದ್ದ ಪೋಸ್ಟ್‌ಗೆ ಆಕ್ರೋಶ ವ್ಯಕ್ತಪಡಿಸಿ ಅಭಿಮಾನಿಗಳು ಸಂದೇಶ ಕಳುಹಿಸಿದ್ದರು. ಕೆಲವರು ಕ್ಷಮೆ ಕೇಳಿದರೆ, ಇನ್ನು ಕೆಲವರು ಅಕೌಂಟ್ ಡಿಲೀಟ್ ಮಾಡಿ ಮನೆ, ಊರು ಬಿಟ್ಟು ಹೋಗಿದ್ದಾರೆ.

Read Full Story

01:00 PM (IST) Aug 05

Su From So ನೋಡಿದ್ದಾಯ್ತು.. ಬೈಂದೂರಿನ ಹೆಮ್ಮೆ ಸೋಮೇಶ್ವರ ಬೀಚ್‌ ನೋಡಿದ್ದೀರಾ?

ಕರಾವಳಿಯ ಸೋಮೇಶ್ವರ ಬೀಚ್‌ನ ವಿಶಿಷ್ಟತೆ ಮತ್ತು ಅಲ್ಲಿನ ಪ್ರವಾಸಿ ಆಕರ್ಷಣೆಗಳನ್ನು ಈ ಲೇಖನ ವಿವರಿಸುತ್ತದೆ. ಬೀಚ್‌ನ ಸ್ಥಳ, ಅಲ್ಲಿಗೆ ಹೋಗುವ ಮಾರ್ಗ, ಮತ್ತು ಪ್ರವಾಸಿಗರಿಗೆ ಲಭ್ಯವಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುತ್ತದೆ.
Read Full Story

12:59 PM (IST) Aug 05

ಡಿಸಿಎಂ ಡಿಕೆಶಿ ಹಳದಿ ಮೆಟ್ರೋ ಪರಿಶೀಲನೆ ಬಿಜೆಪಿ ಶಾಸಕರ ಜತೆ ಸವಾರಿ, ಹೆಬ್ಬಾಳ ಮೇಲ್ಸೇತುವೆಯಲ್ಲಿ ಬೈಕ್ ರೈಡ್

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬಿಜೆಪಿ ಶಾಸಕರೊಂದಿಗೆ ಹಳದಿ ಮಾರ್ಗ ಮೆಟ್ರೋದಲ್ಲಿ ಪ್ರಯಾಣಿಸಿ ಪರಿಶೀಲನೆ ನಡೆಸಿದರು. ಆಗಸ್ಟ್ 10 ರಂದು ಪ್ರಧಾನಿ ಮೋದಿ ಉದ್ಘಾಟಿಸುವ ನಿರೀಕ್ಷೆಯಿದೆ. ಈ ಮಾರ್ಗವು ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರವರೆಗೆ ಚಾಲಕ ರಹಿತ ಸೇವೆ ನೀಡಲಿದೆ.
Read Full Story

12:08 PM (IST) Aug 05

ಸಾರಿಗೆ ನೌಕರರ ಮುಷ್ಕರ - ಕೋಲಾರ, ಗದಗದಲ್ಲಿ KSRTC ಬಸ್‌ಗಳ ಮೇಲೆ ಕಲ್ಲು ತೂರಾಟ!

ರಾಜ್ಯಾದ್ಯಂತ ಸಾರಿಗೆ ನೌಕರರ ಮುಷ್ಕರದ ನಡುವೆ, ಕೋಲಾರ ಮತ್ತು ಗದಗದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಈ ಘಟನೆಗಳು ಸಾರ್ವಜನಿಕ ಸಾರಿಗೆಯ ಸುರಕ್ಷತೆ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ.
Read Full Story

11:57 AM (IST) Aug 05

ಧರ್ಮಸ್ಥಳ ಶೋಧಕಾರ್ಯ ವೇಳೆ ಗೊಂದಲ - ಎಸಿ ಸ್ಟೆಲ್ಲಾ ವರ್ಗೀಸ್ ನಡೆಗೆ ಎಸ್ಐಟಿ ಅಸಮಾಧಾನ

ಧರ್ಮಸ್ಥಳದಲ್ಲಿ ನಡೆಯುತ್ತಿರುವ ಶವಗಳ ಶೋಧ ಕಾರ್ಯ ಹೊಸ ತಿರುವು ಪಡೆದುಕೊಂಡಿದೆ. ನಿಗದಿತ ಸ್ಥಳ ಬಿಟ್ಟು ಬೇರೆಡೆ ಮಹಜರು ನಡೆಸಿದ ಎಸಿ ಸ್ಟೆಲ್ಲಾ ವರ್ಗೀಸ್ ಕ್ರಮಕ್ಕೆ ಎಸ್ಐಟಿ ಅಸಮಾಧಾನ ವ್ಯಕ್ತಪಡಿಸಿದೆ. ಒಂದೂವರೆ ವರ್ಷ ಹಿಂದಿನ ಪುರುಷನ ಅಸ್ಥಿಪಂಜರ ಪತ್ತೆಯಾಗಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.

Read Full Story

11:02 AM (IST) Aug 05

ಕೇಂದ್ರದಿಂದ ರಾಜ್ಯಕ್ಕೆ ಕೊಟ್ಟ ಯೂರಿಯಾ ಗೊಬ್ಬರ ಕೇರಳಕ್ಕೆ ಕಳಿಸಿದ ಸರ್ಕಾರಿ ಗೋದಾಮು; ರಾಜ್ಯ ರೈತರಿಗೆ ಪಂಗನಾಮ!

ನಂಜನಗೂಡಿನ ಗೋದಾಮಿನಿಂದ ಕೇರಳಕ್ಕೆ ಯೂರಿಯಾ ಗೊಬ್ಬರ ಕಳ್ಳಸಾಗಣೆ ಪ್ರಕರಣ ಬೆಳಕಿಗೆ. ಚೆಕ್ ಪೋಸ್ಟ್‌ನಲ್ಲಿ 15 ಟನ್ ಗೊಬ್ಬರ ವಶ. ಅಂತರರಾಜ್ಯ ಸಾಗಾಟ ನಿಷೇಧದ ನಡುವೆಯೂ ಅಕ್ರಮ ಸಾಗಾಟ ನಡೆದಿರುವುದು ತೀವ್ರ ಚರ್ಚೆಗೆ ಗ್ರಾಸ.
Read Full Story

10:59 AM (IST) Aug 05

ಸರಬರಾಜಿಲ್ಲದ್ದೇ ಉದ್ಯಮಕ್ಕೆ ಪ್ರೇರಣೆಯಾಯ್ತು ಗೋಧಿ ಹಿಟ್ಟು - ಇಲ್ಲಿದೆ ಧನರಾಜ್‌ ಯಶೋಗಾಥೆ

1 ಕೆಜಿ ಮತ್ತು 5 ಕೆಜಿ ಪ್ಯಾಕುಗಳಲ್ಲಿ ಮಾರಾಟವಾಗುವ ನಂದಿ ಗೋಧಿ ಹಿಟ್ಟಿಗೆ ಬೀದರ್ ಪಕ್ಕದ ಆಂಧ್ರಪ್ರದೇಶದ ಜಿಲ್ಲೆಯಾದ ಜಹೀರಾಬಾದ್​, ಮಹಾರಾಷ್ಟ್ರದ ಜಿಲ್ಲೆಗಳಲ್ಲೂ ಬೇಡಿಕೆ ಸೃಷ್ಟಿಸಿಕೊಂಡಿದೆ.

Read Full Story

10:06 AM (IST) Aug 05

ಅಸ್ಥಿಪಂಜರದ ಪಿಸುಮಾತಿಗೊಂದು ಕಿವಿ - ಜವುಗು ನೆಲದ ಫೊರೆನ್ಸಿಕ್‌ಗಾಗಿ ಗ್ರೌಂಡ್ ಪೆನಟ್ರೇಟಿಂಗ್ ರೇಡಾರ್

ಗ್ರೌಂಡ್ ಪೆನಟ್ರೇಟಿಂಗ್ ರೇಡಾರ್ (ಜಿಪಿಆರ್) ಎನ್ನುವುದು ಪುರಾತತ್ವ ಶಾಸ್ತ್ರಜ್ಞರು ಮತ್ತು ತನಿಖಾಧಿಕಾರಿಗಳು ಭೂಮಿಯನ್ನು ಅಗೆಯದೆ, ನೆಲದಾಳದಲ್ಲಿ ಇರುವುದನ್ನು ಹುಡುಕುವ ವಿಧಾನವನ್ನು ಒದಗಿಸಿದೆ.

Read Full Story

09:39 AM (IST) Aug 05

ಅರ್ಜಿ ಸಲ್ಲಿಸದಿದ್ರೂ ಸರ್ಕಾರದಿಂದಲೇ ಪೌತಿ ಖಾತೆ - ಸಚಿವ ಕೃಷ್ಣ ಬೈರೇಗೌಡ

ವಾರಸುದಾರರ ನಡುವೆ ತಕರಾರಿಲ್ಲದ ಎಲ್ಲವನ್ನೂ ಪೌತಿ ಖಾತೆ ಅಭಿಯಾನದ ಮೂಲಕ ಡಿಸೆಂಬರ್‌ ಒಳಗಾಗಿ ವಾರಸುದಾರರಿಗೆ ಬದಲಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

Read Full Story

09:06 AM (IST) Aug 05

ಇಂದು ಜೈಲು ಹಕ್ಕಿ ಪ್ರಜ್ವಲ್ ರೇವಣ್ಣ ಬರ್ತ್ ಡೇ; ಹಳೆ ವಿಡಿಯೋ ಮತ್ತೆ ವೈರಲ್

Former MP Prajwal Revanna: ಅತ್ಯಾ*ಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.  ಈ ವಿಡಿಯೋಗೆ ನೆಟ್ಟಿಗರು ತಮಾಷೆಯಾಗಿ ಪ್ರತಿಕ್ರಿಯಿಸುತ್ತಿದ್ದಾರೆ.

Read Full Story

09:04 AM (IST) Aug 05

384 ಗೆಜೆಟೆಡ್ ಹುದ್ದೆಗಳ ನೇಮಕಾತಿಗೆ ಹೈಕೋರ್ಟ್ ಷರತುಬದ್ಧ ಅನುಮತಿ

ಕಳೆದ 2024ನೇ ಸಾಲಿನ 384 ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಮುಂದುವರಿಸಲು ಕರ್ನಾಟಕ ಲೋಕಸೇವಾ ಆಯೋಗಕ್ಕೆ (ಕೆಪಿಎಸ್‌ಸಿ) ಅನುಮತಿಸಿರುವ ಹೈಕೋರ್ಟ್.

Read Full Story

08:21 AM (IST) Aug 05

ನವೆಂಬರ್ ಬಳಿಕವೇ ಬಿಬಿಎಂಪಿಗೆ ಚುನಾವಣೆ - ನ.3ಕ್ಕೆ ವಿಚಾರಣೆ

ಬಿಬಿಎಂಪಿಗೆ ಚುನಾವಣೆ ಸದ್ಯಕ್ಕೆ ನಡೆಯುವ ಸಾಧ್ಯತೆ ಇಲ್ಲ. ಮೂರು ದಿನಗಳ ಹಿಂದೆ ಸರ್ಕಾರ ಸಲ್ಲಿಸಿದ್ದ ಅಫಿಡವಿಟ್‌ ಅನ್ನು ನ್ಯಾಯಪೀಠ ಕೋರ್ಟ್‌ ಮುಂದೆ ಓದಿತು. ಬಳಿಕ ವಿಚಾರಣೆಯನ್ನು ನ.3ಕ್ಕೆ ಮುಂದೂಡಿತು.

Read Full Story

08:13 AM (IST) Aug 05

ಮತಗಳ್ಳತನದ ಬಗ್ಗೆ ಪರಮೇಶ್ವರ್ ಹಳೆ ಭಾಷಣ ಬಿಜೆಪಿಯಿಂದ ವೈರಲ್

ಕಳೆದ ಸಂಸತ್ ಚುನಾವಣೆ ವೇಳೆ ಗೃಹ ಸಚಿವ ಡಾ। ಜಿ.ಪರಮೇಶ್ವರ್ ಅವರು ಮಾತನಾಡಿದ್ದ ತುಣುಕು ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗಿದೆ.

Read Full Story

More Trending News