ವಿಜಯಪುರ: ಪಾದಯಾತ್ರೆ ಬಿಜೆಪಿಯ ನಿರ್ಧಾರವಾಗಿದೆ. ನಾಗೇಂದ್ರ ರಾಜೀನಾಮೆಗೆ ಅವರೂ ಕಾರಣವಾಗಿರಬಹುದು, ಜೊತೆಗೆ ರಾಜೀನಾಮೆ ನಮ್ಮ ಪಕ್ಷದ ನಿರ್ಧಾರವೂ ಆಗಿರುತ್ತದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಬಿಜೆಪಿಗೆ ಟಾಂಗ್ ನೀಡಿದರು.
ಸಚಿವ ನಾಗೇಂದ್ರ ರಾಜೀನಾಮೆ ಬಳಿಕವೂ ಬಿಜೆಪಿ ಪಾದಯಾತ್ರೆ ಮಾಡುತ್ತಿರುವ ವಿಚಾರವಾಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ಅಷ್ಟೇ ಅಲ್ಲ ವಾಲ್ಮೀಕಿ ಹಗರಣದ ಹಣ ಎಲ್ಲಿ ಹೋಯ್ತು ಎಂದು ಬಿಜೆಪಿ ಪ್ರಶ್ನೆ ಮಾಡಿದ್ದು, ಹಣದ ಕುರಿತು ಸದನದಲ್ಲೇ ಮಾಹಿತಿ ನೀಡಲಾಗಿದೆ. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಹಾಗೂ ಈಗ ಸಿಎಂ ಆಗಿರುವ ಡಿ.ಕೆ.ಶಿವಕುಮಾರ್ ಅವರು ಸಹ ಹೇಳಿದ್ದಾರೆ ಎಂದರು.
ಎರಡು ಸಚಿವ ಸ್ಥಾನ ಖಾಲಿ ಹಾಗೂ ಮಹಿಳೆಯರಿಗೆ ಅವಕಾಶ ನೀಡುವ ವಿಚಾರವಾಗಿ ಪ್ರತಿಕ್ರಿಯಿಸಿ, ಹೈಕಮಾಂಡ್ ಎಲ್ಲವನ್ನೂ ತೀರ್ಮಾನ ಮಾಡುತ್ತದೆ. ಯಾರಿಗೆ ಏನು ಕೊಡಬೇಕೆಂದು ತೀರ್ಮಾನಿಸಲಾಗುತ್ತದೆ ಎಂದರು. ವಿಜಯಪುರಕ್ಕೆ ಮತ್ತೊಂದು ಸಚಿವ ಸ್ಥಾನ ನೀಡಬೇಕೆಂದು ಒತ್ತಾಯದ ವಿಚಾರವಾಗಿ ಮಾತನಾಡಿ, ಹಿಂದೆ ಎರಡು ಸಚಿವ ಸ್ಥಾನ ನೀಡಲಾಗಿತ್ತು. ಈ ಬಾರಿ ಒಂದು ಸಚಿವ ಸ್ಥಾನ ಮಾತ್ರ ನೀಡಲಾಗಿದೆ. ಇನ್ನೊಂದು ಸಚಿವ ಸ್ಥಾನ ಸಿಗಬೇಕಿತ್ತು, ಕಾರಣಾಂತರಗಳಿಂದ ನೀಡಿಲ್ಲ. ಎಲ್ಲದಕ್ಕೂ ಕಾಯಬೇಕಾಗುತ್ತದೆ, ಸಮಯ ಬಂದಾಗ ಅವಕಾಶ ಸಿಗುತ್ತದೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.
11:15 PM (IST) Aug 31
ದುಲೀಪ್ ಟ್ರೋಫಿಯಲ್ಲಿ ಮಿಂಚುತ್ತಿರುವ 15 ವರ್ಷದ ವೈಭವ್ ಸೂರ್ಯವಂಶಿ ಅವರ ಬೌಲಿಂಗ್ ಶೈಲಿಯನ್ನು ಕಂಡು ದಿಗ್ಗಜ ಯುವರಾಜ್ ಸಿಂಗ್ ಫಿದಾ ಆಗಿದ್ದಾರೆ. "ನನಗಿಂತ ನಿನ್ನ ಬೌಲಿಂಗ್ ಆಕ್ಷನ್ ಬೆಟರ್" ಎಂದು ಯುವಿ ಕಾಮೆಂಟ್ ಮಾಡಿದ್ದು, ವೈಭವ್ ಬ್ಯಾಟಿಂಗ್ನಲ್ಲಿ 92 ರನ್ ಸಿಡಿಸಿ ಆಲ್ರೌಂಡ್ ಪ್ರದರ್ಶನ ನೀಡಿದ್ದಾರೆ.
10:49 PM (IST) Aug 31
10:11 PM (IST) Aug 31
ಮಾಜಿ ಸಿಎಂ ದಿ. ಗುಂಡೂರಾವ್ 1982ರಲ್ಲಿ ಉದ್ಘಾಟಿಸಿದ್ದ ಚಳ್ಳಕೆರೆಯ ಕೋನಿಗರಹಳ್ಳಿ ಸೇತುವೆ ಈಗ ಕುಸಿತ ಕಂಡಿದ್ದು 15 ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ.
09:44 PM (IST) Aug 31
09:31 PM (IST) Aug 31
ನಟಿ ಶ್ರೀಲೀಲಾ ಆಸ್ಪತ್ರೆಯಲ್ಲಿ ಬದುಕು-ಸಾವು, ರೋಗಿಗಳು ಮತ್ತು ಕುಟುಂಬಗಳ ಭಾವನಾತ್ಮಕ ಹೋರಾಟಗಳನ್ನು ಹತ್ತಿರದಿಂದ ಕಂಡ ಅನುಭವ ತಮ್ಮ ಸಂವೇದನೆ ಹಾಗೂ ಪಾತ್ರಗಳನ್ನು ಅರ್ಥಮಾಡಿಕೊಳ್ಳುವ ದೃಷ್ಟಿಕೋನವನ್ನು ಬದಲಿಸಿದೆ ಎಂದು ಶ್ರೀಲೀಲಾ ಹೇಳಿದ್ದಾರೆ.
08:42 PM (IST) Aug 31
ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಇಂದಿನಿಂದ ಸಫಾರಿ ದರ ಭಾರಿ ಏರಿಕೆಯಾಗಿದೆ. ವಯಸ್ಕರ ಟಿಕೆಟ್ 1,000 ರೂ.ಗೆ ಹಾಗೂ ಜೀಪ್ ಸಫಾರಿ ದರ 1,500 ರೂ.ಗೆ ಏರಿಕೆಯಾಗಿದ್ದು, ಪ್ರವಾಸಿಗರ ಜೇಬಿಗೆ ಕತ್ತರಿ ಬಿದ್ದಂತಾಗಿದೆ.
08:34 PM (IST) Aug 31
ಸಿವಿಲ್ ವಿವಾದದಲ್ಲಿ ಮಧ್ಯಪ್ರವೇಶಿಸಿ ಕಾಂಪೌಂಡ್ ಕೆಡವಿದ ಆರೋಪದ ಮೇಲೆ ಕರ್ನಾಟಕ ಹೈಕೋರ್ಟ್ ವೈಟ್ಫೀಲ್ಡ್ ಪೊಲೀಸ್ ಠಾಣೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಈ ಠಾಣೆಯನ್ನು 'ಡಾರ್ಕ್ ಫೀಲ್ಡ್' ಎಂದು ಹಿಂದಿನ ಪೀಠ ಕರೆದಿದ್ದನ್ನು ಕೋರ್ಟ್ ಉಲ್ಲೇಖಿಸಿದೆ.
08:29 PM (IST) Aug 31
08:06 PM (IST) Aug 31
ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದಂದು ಹೊಸ ಸಿನಿಮಾದ ಅಧಿಕೃತ ಘೋಷಣೆ ನಡೆಯಲಿದೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಹಾಗೂ ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋಸ್ ನಿರ್ಮಿಸುತ್ತಿರುವ ಈ ‘ಕಿಂಗ್-ಸೈಜ್’ ಪ್ರಾಜೆಕ್ಟ್ನಲ್ಲಿ ಸುದೀಪ್ ಕೃಷ್ಣದೇವರಾಯರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
07:21 PM (IST) Aug 31
"ಸಿನಿಮಾ ಕೊಟ್ಟೇ ತೀರಬೇಕು ಎಂಬ ಹಠಕ್ಕೆ ಬಿದ್ದು, ಕೇವಲ ಐದೂವರೆ ತಿಂಗಳಲ್ಲಿ ಚಿತ್ರೀಕರಣ ಮತ್ತು ಪೋಸ್ಟ್ ಪ್ರೊಡಕ್ಷನ್ ಮುಗಿಸಿದ್ದೇನೆ. ಕಳೆದ 120 ದಿನಗಳ ಕಾಲ 80 ಲೊಕೇಶನ್ಗಳು ಮತ್ತು 22 ಸೆಟ್ಗಳಲ್ಲಿ ಹಗಲಿರುಳು ನಿದ್ದೆಗೆಟ್ಟು ಕೆಲಸ ಮಾಡಿದ್ದೇವೆ.' ಎಂದಿದ್ದಾರೆ ಸುದೀಪ್. ಇನ್ನೇನು ಹೇಳಿದ್ದಾರೆ ನೋಡಿ..
07:08 PM (IST) Aug 31
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿಧಾನ ಸೌಧದಿಂದ ತೆರಳಲು ಹೊರಗೆ ಆಗಮಿಸಿದ್ದಾರೆ.ಕಾರಿನತ್ತ ಬಂದು ಡಿಕೆ ಶಿವಕುಮಾರ್ ಕಾರಿನ ಡ್ರೈವರ್ಗದಾಗಿ ಕಾದು ನಿಂತ ಘಟನೆ ನಡೆದಿದೆ. ಮುಂದೇನಾಯಿತು?
06:29 PM (IST) Aug 31
ಡೊಮಿನಿಕನ್ ರಿಪಬ್ಲಿಕ್ ದೇಶದ ಲಾಸ್ ಸಲಿನಾಸ್ ಅನ್ನೋ ಹಳ್ಳಿಯೊಂದು ಇಡೀ ಜಗತ್ತನ್ನೇ ಅಚ್ಚರಿಗೊಳಿಸಿದೆ. ಇಲ್ಲಿ ಹುಟ್ಟುವ ಕೆಲವು ಮಕ್ಕಳು ನೋಡೋಕೆ ಹೆಣ್ಣುಮಕ್ಕಳಂತೆ ಇರ್ತಾರೆ, ಹಾಗೇ ಬೆಳೀತಾರೆ. ಆದ್ರೆ 12 ವರ್ಷ ತುಂಬುತ್ತಿದ್ದಂತೆ ಹುಡುಗರಾಗಿ ಬದಲಾಗಿಬಿಡ್ತಾರೆ.
06:17 PM (IST) Aug 31
ಕೊಪ್ಪಳದ ಗಂಗಾವತಿಯಲ್ಲಿ ಯುವತಿಯೊಬ್ಬಳನ್ನು ಒನ್ಸೈಡ್ ಪ್ರೀತಿಸುತ್ತಿದ್ದ ರಾಜು ಎಂಬ ಯುವಕ, ಆಕೆ ಪ್ರೀತಿ ನಿರಾಕರಿಸಿದ್ದಕ್ಕೆ ಮೊಬೈಲ್ ಟವರ್ ಏರಿ ಹೈಡ್ರಾಮಾ ಸೃಷ್ಟಿಸಿದ್ದಾನೆ. ಮುಂದೆ ಆಗಿದ್ದೇನು ಗೊತ್ತಾ? ಇಲ್ಲಿದೆ ಸಂಪೂರ್ಣ ವಿವರ.
05:52 PM (IST) Aug 31
ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ 355ನೇ ಆರಾಧನಾ ಮಹೋತ್ಸವದ ಅಂಗವಾಗಿ ರಾಯರ ಮಧ್ಯಾರಾಧನೆಯನ್ನು ವೈಭವದಿಂದ ಆಚರಿಸಲಾಯಿತು. ಮಹಾ ಪಂಚಾಮೃತಾಭಿಷೇಕ, ಚಿನ್ನದ ರಥೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
05:38 PM (IST) Aug 31
ದಕ್ಷಿಣ ಭಾರತದ ಸೂಪರ್ಸ್ಟಾರ್ಗಳಾದ ಕಿಚ್ಚ ಸುದೀಪ್, ಮೋಹನ್ ಲಾಲ್, ವಿಜಯ್ ಸೇತುಪತಿ ಮತ್ತು ನಾಗಾರ್ಜುನ ಒಂದೇ ಪ್ರೋಮೋದಲ್ಲಿ ಕಾಣಿಸಿಕೊಂಡಿದ್ದಾರೆ. ಸೆಪ್ಟೆಂಬರ್ 6 ರಂದು ನಾಲ್ಕು ಭಾಷೆಗಳ ಸೀಸನ್ಗಳ ಜೊತೆಗೆ ಸಲ್ಮಾನ್ ಖಾನ್ ಅವರ ಹಿಂದಿ ಬಿಗ್ ಬಾಸ್ ಕೂಡ ಏಕಕಾಲದಲ್ಲಿ ಭರ್ಜರಿಯಾಗಿ ಲಾಂಚ್ ಆಗಲಿದೆ. ಈ ಕುರಿತ ಸ್ಟೋರಿ ಇಲ್ಲಿದೆ.
05:23 PM (IST) Aug 31
04:57 PM (IST) Aug 31
ಇಡೀ ಚಿತ್ರವು ಒಂದು ದೃಶ್ಯ ವೈಭವವಾಗಿದೆ ಮತ್ತು ನಿಸ್ಸಂದೇಹವಾಗಿ ಇದು ನಿಮಗೆ ಹಾಗೂ ಚಿತ್ರದ ನಿರ್ದೇಶಕರಿಗೆ ಒಂದು ಮಹತ್ವದ ಮೈಲಿಗಲ್ಲು. ಆದರೆ ಪ್ರತಿಯೊಂದು ಫ್ರೇಮ್ನಲ್ಲೂ ನೀವು ನಿಮ್ಮನ್ನೇ ಮೀರಿಸಿರುವುದನ್ನು ಕಂಡು ನನಗೆ ಎಷ್ಟು ಹೆಮ್ಮೆ ಎನಿಸಿತು ಎಂದು ಹೇಳಲು ಸಾಧ್ಯವಿಲ್ಲ. ಒಬ್ಬ ನಟನಾಗಿ ನೀವು ತುಂಬಾ ಬೆಳೆದಿದ್ದೀರಿ ಮತ್ತು ಪ್ರಬುದ್ಧರಾಗಿದ್ದೀರಿ…
04:49 PM (IST) Aug 31
ಬೆಂಗಳೂರಿನ ಉಪನಗರ ರೈಲು ಯೋಜನೆಗೆ ಚುರುಕು ಸಿಕ್ಕಿದ್ದು, ಅದಾನಿ ಗ್ರೂಪ್ ಬೆಂಬಲಿತ 'ಸೆಮಿಂಡಿಯಾ ಪ್ರಾಜೆಕ್ಟ್ಸ್' 665.61 ಕೋಟಿ ರೂ. ಮೌಲ್ಯದ ಕಾಮಗಾರಿಗೆ ಅತ್ಯಂತ ಕಡಿಮೆ ಬಿಡ್ ಸಲ್ಲಿಸಿದೆ.
04:34 PM (IST) Aug 31
ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ, ಸಿಐಡಿ ಅಧಿಕಾರಿಗಳು ಬಿಜೆಪಿ ಶಾಸಕನ ಆಪ್ತ ಸಹಾಯಕನನ್ನು ವಶಕ್ಕೆ ಪಡೆದಿದ್ದಾರೆ. ಈತ ಈ ಹಿಂದೆ ಬಂಧಿತರಾಗಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರಕುಮಾರ್ ಮತ್ತು ಉದ್ಯೋಗಾಕಾಂಕ್ಷಿಗಳ ನಡುವೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ್ದ ಎಂಬ ಆರೋಪವಿದೆ.
04:26 PM (IST) Aug 31
ಶಿವರಾಮ ಕಾರಂತ ಬಡಾವಣೆ ಮಾಡಲು ಜಾಗ ಕೊಟ್ಟ ರೈತರಿಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇದೀಗ ರೈತರಿಗೆ ಅತೀ ಕಡಿಮೆ ಬೆಲೆಯಲ್ಲಿ ಸೈಟ್ ನೀಡಲು ಸಿಎಂ ಸೂಚಿಸಿದ್ದಾರೆ.
04:19 PM (IST) Aug 31
ಒಂದು ಕಾಲದಲ್ಲಿ ಸೌತ್ ಚಿತ್ರರಂಗದ ಜನಪ್ರಿಯ ನಟಿಯಾಗಿದ್ದ ನಮಿತಾ ತಮ್ಮ ವೃತ್ತಿಜೀವನದ ಆರಂಭದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಯಶಸ್ಸು ಮತ್ತು ಖ್ಯಾತಿ ತಲೆಗೇರಿದ್ದರಿಂದ ಅಹಂಕಾರದಿಂದ ವರ್ತಿಸುತ್ತಿದ್ದೆ, ಯಾರನ್ನೂ ಲೆಕ್ಕಿಸುತ್ತಿರಲಿಲ್ಲ ಎಂದು ನಮಿತಾ ಹೇಳಿದ್ದಾರೆ.
04:01 PM (IST) Aug 31
ಕರ್ನಾಟಕ ತನಿಖಾಧಿಕಾರಿಗಳಿಗೆ ಬೇಕಾಗಿದ್ದ ಆರೋಪಿಯನ್ನು ಬಂಧಿಸಲು ಯಾವುದೇ ಪೂರ್ವಾನುಮತಿ ಪಡೆಯದೆ ನೇಪಾಳದ ಗಡಿ ಗ್ರಾಮಕ್ಕೆ ಪ್ರವೇಶಿಸಿದ್ದ ಕರ್ನಾಟಕದ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಲ್ಲಿನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಾದಾ ಉಡುಪಿನಲ್ಲಿದ್ದ ಈ ಅಧಿಕಾರಿಗಳು ಸ್ಥಳೀಯ ಪೊಲೀಸರೊಂದಿಗೆ ಸಮನ್ವಯ ಸಾಧಿಸದ ಕಾರಣ, ಸ್ಥಳೀಯರೇ ಇವರನ್ನು ಹಿಡಿದು ಅಲ್ಲಿನ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ ಎಂದು ವರದಿಯಾಗಿದೆ.
03:53 PM (IST) Aug 31
300ಕ್ಕೂ ಹೆಚ್ಚು ವಿಂಟೇಜ್ ಕಾರುಗಳ ಮಾಲೀಕ, ಬೆಂಗಳೂರಿನ ಉದ್ಯಮಿ ಡಾ. ರವಿಪ್ರಕಾಶ್ ಅವರನ್ನು ಆಂಧ್ರ ಪೊಲೀಸರು ಬಂಧಿಸಿದ್ದಾರೆ. ಆದರೆ, ಇದು ಜಮೀನು ವ್ಯಾಜ್ಯಕ್ಕಾಗಿ ಆಂಧ್ರ ಶಾಸಕರು ಮಾಡಿಸಿದ ಕಿಡ್ನಾಪ್ ಎಂದು ಕುಟುಂಬಸ್ಥರು ಆರೋಪಿಸಿ, ರಾಜರಾಜೇಶ್ವರಿನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
03:47 PM (IST) Aug 31
03:37 PM (IST) Aug 31
ಬ್ರೇಕ್ಅಪ್ ಬಳಿಕವೂ ಶಿವಮೊಗ್ಗದಲ್ಲಿ ಮಾಜಿ ಪ್ರಿಯತಮೆಯ ಮನೆ ಮುಂದೆ ನಿಲ್ಲಿಸಿದ್ದ ಎರಡು ಬೈಕ್ಗಳಿಗೆ ಬೆಂಕಿ ಹಚ್ಚಿದ ಆರೋಪ. ಕೃತ್ಯ ಸಿಸಿಟಿವಿಯಲ್ಲಿ ಸೆರೆ; ಜಯನಗರ ಠಾಣೆ ಪೊಲೀಸರು ಮಣಿಯನ್ನು ಬಂಧಿಸಿದ್ದಾರೆ.
12:49 PM (IST) Aug 31
12:43 PM (IST) Aug 31
ಈ ಬಾರಿಯ ಬಿಗ್ ಬಾಸ್ ಕನ್ನಡ ಎಲಿಮಿನೇಷನ್ ಪ್ರಕ್ರಿಯೆ ಹೇಗಿರಲಿದೆ? ಬರೀ ಸೆಲೆಬ್ರಿಟಿಗಳಷ್ಟೇ ಅಲ್ಲದೆ, ಸಾಮಾನ್ಯ ಜನರಿಗೂ ಈ ವೇದಿಕೆಯಲ್ಲಿ ಸಮಾನ ಅವಕಾಶ ಕಲ್ಪಿಸಿರುವುದು ಈ ಬಾರಿಯ ಮತ್ತೊಂದು ವಿಶೇಷ. ನಿಮ್ಮ ಪಕ್ಕದ ಮನೆಯವರು ಕೂಡ ಈ ಸಲ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಂಡರೂ ಅಚ್ಚರಿಯಿಲ್ಲ!
12:22 PM (IST) Aug 31
11:55 AM (IST) Aug 31
ಬಿಗ್ ಬಾಸ್ ಕನ್ನಡ 13 ಶೋ ಕ್ಷಣಗಣನೆ ಆರಂಭವಾಗಿದೆ. ಈ ಶೋ ನಡೆಸಿಕೊಡುವ ನಿರೂಪಕ ನಟ ಕಿಚ್ಚ ಸುದೀಪ್ ಪಡೆಯುವ ಸಂಭಾವನೆ ಎಷ್ಟು? ಈ ಸಂಗತಿಯನ್ನು ಸ್ವತಃ ಅವರೇ ರಿವೀಲ್ ಮಾಡಿದ್ದಾರೆ ನೋಡಿ..
11:19 AM (IST) Aug 31
11:18 AM (IST) Aug 31
ಕೇಂದ್ರ ರೈಲ್ವೆ ಸಚಿವ ವಿ. ಸೋಮಣ್ಣ ಅವರು ಚಿತ್ರದುರ್ಗ ಜಿಲ್ಲೆಯಲ್ಲಿ 33 ರೈಲ್ವೆ ಸೇತುವೆ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಮುಂದಿನ 8 ರಿಂದ 9 ತಿಂಗಳ ಅವಧಿಯಲ್ಲಿ ಸಂಪೂರ್ಣವಾಗಿ ಮುಗಿಸಿ ಸಾರ್ವಜನಿಕರ ಸೇವೆಗೆ ಸಮರ್ಪಿಸಲಾಗುವುದು
11:15 AM (IST) Aug 31
ಶಸ್ತ್ರಚಿಕಿತ್ಸೆಯ ಮೊದಲು, ಅರಿವಳಿಕೆ ತಜ್ಞರು ರೋಗಿಯ ಸಮುದಾಯದ ಬಗ್ಗೆ ಕೇಳಬಹುದು. ಇದು ಕೆಲವು ಸಮುದಾಯಗಳಲ್ಲಿ ಸಾಮಾನ್ಯವಾಗಿರುವ ಸ್ಯೂಡೋಕೋಲಿನೆಸ್ಟರೇಸ್ ಕಿಣ್ವದ ಕೊರತೆಯನ್ನು ಪತ್ತೆಹಚ್ಚಲು ಮಾಡಲಾಗುತ್ತದೆ. ಈ ಕೊರತೆಯು ಅರಿವಳಿಕೆ ನಂತರ ರೋಗಿಯು ಸ್ವತಃ ಉಸಿರಾಡಲು ಹೆಚ್ಚು ಸಮಯ ತೆಗೆದುಕೊಳ್ಳುವಂತೆ ಮಾಡುತ್ತದೆ.
11:03 AM (IST) Aug 31
10:52 AM (IST) Aug 31
09:54 AM (IST) Aug 31
09:10 AM (IST) Aug 31
09:02 AM (IST) Aug 31
08:31 AM (IST) Aug 31
Bagalkote To Kudachi: ಚರಂತಿಮಠದ ಪ್ರಭು ಸ್ವಾಮೀಜಿಗಳು ಸೂಳಿಕೇರಿ ರೈಲು ನಿಲ್ದಾಣಕ್ಕೆ ಭೇಟಿ ನೀಡಿ, ಬಾಗಲಕೋಟೆ-ಕುಡಚಿ ರೈಲು ಮಾರ್ಗದ ನಿರ್ಮಾಣದಷ್ಟೇ ಸಂರಕ್ಷಣೆಯೂ ಮುಖ್ಯ ಎಂದು ಒತ್ತಿ ಹೇಳಿದರು.
07:03 AM (IST) Aug 31
06:44 AM (IST) Aug 31