LIVE NOW
Published : Jun 30, 2026, 06:41 AM ISTUpdated : Jun 30, 2026, 12:03 PM IST

Karnataka News Live: TikTok ನಿಷೇಧಕ್ಕೆ ಇಂದಿಗೆ 6 ವರ್ಷ - 40M ಫಾಲೋವರ್ಸ್‌, ಟಾಪ್-5 ಟಿಕ್‌ಟಾಕ್ ಸ್ಟಾರ್‌ಗಳು ಈಗ ಏನು ಮಾಡುತ್ತಿದ್ದಾರೆ?

ಸಾರಾಂಶ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಅಬ್ಬರ ಮುಂದುವರಿದಿದ್ದು, ಸೋಮವಾರ ಉತ್ತರ ಕನ್ನಡ, ಧಾರವಾಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಚಿಕ್ಕಮಗಳೂರು ಸೇರಿ ವಿವಿಧೆಡೆ ಮಳೆಯಾಗಿದೆ.

ಉಡುಪಿ ಜಿಲ್ಲೆಯಲ್ಲಿ ಕಳೆದೊಂದು ತಿಂಗಳಿಂದ ತೀವ್ರ ಮಳೆ ಕೊರತೆಯಾಗಿತ್ತು. ಸೋಮವಾರ ಉತ್ತಮ ಮಳೆಯಾಗಿದೆ. ಹಿಂದಿನ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ 32.30 ಮಿ.ಮೀ. ಮಳೆ ಸುರಿದಿದೆ. 7 ದಿನಗಳ ಕಾಲ ಸಮುದ್ರ ಮೇಲೆ 45 - 55 ಕಿ.ಮಿ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲ ದಿನಗಳಿಂದ ನಿಧಾನಗತಿಯಿಂದ ಮಳೆ ಬಿರುಸು ಪಡೆಯುತ್ತಿದ್ದು, ಸೋಮವಾರ ಮಂಗಳೂರು ಸೇರಿದಂತೆ ಜಿಲ್ಲೆಯ ಸುಳ್ಯ, ಕಡಬ, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಉಳ್ಳಾಲ, ಮೂಡುಬಿದಿರೆ, ಮೂಲ್ಕಿ, ಮಂಗಳೂರು ತಾಲೂಕಿನ ವಿವಿಧೆಡೆ ಧಾರಕಾರ ಮಳೆಯಾಗಿದೆ. ಜೂ.30, ಜು.1ರಂದು ಜಿಲ್ಲೆಗ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ.

ಶೃಂಗೇರಿ ತಾಲೂಕಿನಾದ್ಯಂತ ಮಳೆ ಮುಂದುವರಿದಿದ್ದು, ತಾಲೂಕಿನ ಕೆರೆಕಟ್ಟೆ,ನೆಮ್ಮಾರು ಸುತ್ತಮುತ್ತಲ ಪ್ರದೇಶಗಳಲ್ಲಿ ಬಿಡುವು ನೀಡದೇ ನಿರಂತರವಾಗಿ ಭಾರೀ ಮಳೆ ಸುರಿಯುತ್ತಿರುವುದರಿಂದ ತುಂಗಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಿದೆ.

12:03 PM (IST) Jun 30

TikTok ನಿಷೇಧಕ್ಕೆ ಇಂದಿಗೆ 6 ವರ್ಷ - 40M ಫಾಲೋವರ್ಸ್‌, ಟಾಪ್-5 ಟಿಕ್‌ಟಾಕ್ ಸ್ಟಾರ್‌ಗಳು ಈಗ ಏನು ಮಾಡುತ್ತಿದ್ದಾರೆ?

ಜೂನ್ 30, 2020 ರಂದು, ಭಾರತ ಸರ್ಕಾರವು ರಾಷ್ಟ್ರೀಯ ಭದ್ರತೆಯ ಕಾರಣಗಳಿಗಾಗಿ ಟಿಕ್‌ಟಾಕ್ ಸೇರಿದಂತೆ 59 ಚೀನೀ ಅಪ್ಲಿಕೇಶನ್‌ಗಳನ್ನು ನಿಷೇಧಿಸಿತು. ಈ ನಿರ್ಧಾರದಿಂದ Tiktok ಟಾಪ್-5 ಸ್ಟಾರ್‌ ಗಳ ಬದುಕು ಬದಲಾಯಿತು. ಈಗ ಅವರು ಎಲ್ಲಿದ್ದಾರೆ ಏನು ಮಾಡುತ್ತಿದ್ದಾರೆ ನೋಡಿ!

Read Full Story

10:47 AM (IST) Jun 30

ಭ್ರಷ್ಟಾಚಾರ-ಲಂಚಕ್ಕೆ ಬೇಡಿಕೆ ಪ್ರಕರಣ - ಹಣ ಸಿಕ್ಕರೂ ಸರ್ಕಾರಿ ನೌಕರ ಖುಲಾಸೆ! ಹೈಕೋರ್ಟ್ ಹೇಳಿದ್ದೇನು?

ಭ್ರಷ್ಟಾಚಾರ, ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣ ಸಂಬಂಧ ಕರ್ನಾಟಕ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಆರೋಪಿ ಲಂಚಕ್ಕೆ ಬೇಡಿಕೆ ಇಟ್ಟು ಹಣ ಸ್ವೀಕರಿಸಿದ ಬಗ್ಗೆ ಸಾಕ್ಷ್ಯ ಇರುವುದು ಕಡ್ಡಾಯ ಎಂದಿದೆ. ರೈತನಿಗೆ ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣ ಸರ್ಕಾರಿ ನೌಕರ ಖುಲಾಸೆ ಪ್ರಕರಣದ ಬಗ್ಗೆ ತಿಳಿಯಿರಿ.

Read Full Story

10:08 AM (IST) Jun 30

ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೇರಳಕ್ಕೆ ತೆರಳುತ್ತಿದ್ದ ಚಿನ್ನದ ವ್ಯಾಪಾರಿಯ ಕಾರು ತಡೆದು ಪತ್ನಿ-ಮಗನ ಅಪಹರಣ, ಚಿನ್ನ ದರೋಡೆ!

ಮಂಗಳೂರಿನ ಬೈಕಂಪಾಡಿ ಬಳಿ, ಮಹಾರಾಷ್ಟ್ರದಿಂದ ಕೇರಳಕ್ಕೆ ತೆರಳುತ್ತಿದ್ದ ಚಿನ್ನದ ವ್ಯಾಪಾರಿಯ ಕುಟುಂಬವನ್ನು ಅಡ್ಡಗಟ್ಟಿದ ದರೋಡೆಕೋರರು, ವ್ಯಾಪಾರಿಯ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ, ಅವರ ಪತ್ನಿ ಮತ್ತು ಮಗನನ್ನು ಕಾರು ಸಮೇತ ಅಪಹರಿಸಿ, 180 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಈ ಘಟನೆಯ ಹಿಂದೆ ಆಪ್ತರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.
Read Full Story

09:10 AM (IST) Jun 30

ನಿವೃತ್ತಿ ಹೊಂದಿದ ಶಿಕ್ಷಕನಿಗೆ ಬೈಕ್ ನೀಡಿದ ವಿದ್ಯಾರ್ಥಿಗಳು; ಅಮ್ಮನ ಜೊತೆ ಮೊದಲ ರೈಡ್

ಕೊಪ್ಪಳ ಜಿಲ್ಲೆಯ ಮಸಬಹಂಚಿನಾಳ ಗ್ರಾಮದ ನಿವೃತ್ತ ಶಿಕ್ಷಕ ಜಿ.ಎಂ. ನದಾಫ್ ಅವರಿಗೆ, ಅವರ ಹಳೆಯ ವಿದ್ಯಾರ್ಥಿಗಳು ಗುರುವಂದನಾ ಕಾರ್ಯಕ್ರಮದಲ್ಲಿ ಬೈಕ್ ಉಡುಗೊರೆಯಾಗಿ ನೀಡಿದ್ದಾರೆ. 31 ವರ್ಷಗಳ ಸೇವೆ ಸಲ್ಲಿಸಿದ ಗುರುವಿನ ಈ ಉಡುಗೊರೆಗೆ ಭಾವುಕರಾದ ನದಾಫ್, ತಮ್ಮ 85 ವರ್ಷದ ತಾಯಿಯನ್ನು ಕೂರಿಸಿಕೊಂಡು ಮೊದಲ ಸವಾರಿ ಮಾಡಿದರು.
Read Full Story

09:06 AM (IST) Jun 30

ಮಂಗಳೂರು - ಅಲೆಗಳ ಅಬ್ಬರಕ್ಕೆ ಅರಬ್ಬಿಯ ಆಳ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆ, 6 ಮಂದಿ ಬೆಸ್ತರ ರಕ್ಷಣೆ

ಮಂಗಳೂರಿನ ಬಳಿ ಅರಬ್ಬಿ ಸಮುದ್ರದಲ್ಲಿ ಪ್ರಕ್ಷುಬ್ಧ ಹವಾಮಾನದಿಂದಾಗಿ 'ಐಎಫ್‌ಬಿ ಮಂಜುಮಾತಾ' ಎಂಬ ಮೀನುಗಾರಿಕಾ ಬೋಟ್‌ ಮುಳುಗಡೆಯಾಗಿದೆ. ಭಾರತೀಯ ಕೋಸ್ಟ್ ಗಾರ್ಡ್‌ನ 'ಐಸಿಜಿಎಸ್ ಸಚೇತ್' ಹಡಗು, ರಿಮೋಟ್ ಚಾಲಿತ ಲೈಫ್‌ಬಾಯ್‌ಗಳನ್ನು ಬಳಸಿ ಬೋಟ್‌ನಲ್ಲಿದ್ದ ಎಲ್ಲಾ ಆರು ಮೀನುಗಾರರನ್ನು ಯಶಸ್ವಿಯಾಗಿ ರಕ್ಷಿಸಿದೆ. ರಕ್ಷಿಸಲ್ಪಟ್ಟ ಮೀನುಗಾರರನ್ನು ಸುರಕ್ಷಿತವಾಗಿ ನ್ಯೂ ಮಂಗಳೂರು ಬಂದರಿಗೆ ಕರೆತರಲಾಗಿದೆ.
Read Full Story

08:51 AM (IST) Jun 30

ಭಾರಿ ಮಳೆಗೆ ತಾತ್ಕಾಲಿಕ ರಸ್ತೆಗೆ ಹಾನಿ, ಸೇತುವೆ ನಿರ್ಮಾಣ ಸ್ಥಳದಲ್ಲಿ ಸಂಕಷ್ಟ, ಸುತ್ತು ಬಳಸು ದಾರಿಯೇ ಗತಿ

ಬೆಳ್ತಂಗಡಿಯ ಅಂಬಡಬೆಟ್ಟು ಎಂಬಲ್ಲಿ ನಿರ್ಮಾಣ ಹಂತದಲ್ಲಿರುವ ಹೊಸ ಸೇತುವೆಯ ಬಳಿ ನಿರ್ಮಿಸಿದ್ದ ತಾತ್ಕಾಲಿಕ ರಸ್ತೆಯು ಭಾರಿ ಮಳೆಗೆ ಕೊಚ್ಚಿಹೋಗಿದೆ. ಇದರಿಂದಾಗಿ ಗುರಿಪಳ್ಳ, ನಡ, ಇಂದಬೆಟ್ಟು ಸೇರಿದಂತೆ ಸುತ್ತಮುತ್ತಲಿನ ಸಾವಿರಾರು ಕುಟುಂಬಗಳು ಉಜಿರೆ, ಬೆಳ್ತಂಗಡಿ ಮತ್ತು ಮುಂಡಾಜೆಗೆ ತೆರಳಲು ಕಿಲೋಮೀಟರ್‌ಗಟ್ಟಲೆ ಸುತ್ತು ಬಳಸಿ ಪ್ರಯಾಣಿಸುವ ಅನಿವಾರ್ಯತೆ ಎದುರಾಗಿದೆ.
Read Full Story

08:28 AM (IST) Jun 30

'ರಾಜಕೀಯದಲ್ಲಿ ಓಡ್ತಿರಬೇಕು, ಓಡದಿದ್ರೆ ಹಿಂದೆ ಬೀಳ್ತೀವಿ..' ಸಿದ್ದರಾಮಯ್ಯ ಕಡೆಗಣನೆ ಬಗ್ಗೆ ಸತೀಶ್ ಜಾರಕಿಹೊಳಿ ಹಿಂಗ್ಯಾಕ ಅಂದ್ರು!?

‘ರಾಜಕೀಯದಲ್ಲಿ ಓಡುತ್ತಲೇ ಇರಬೇಕು, ಇಲ್ಲದಿದ್ರೆ ಹಿಂದೆ ಬೀಳ್ತೀವಿ’ ಒಂದು ಕಾಲದಲ್ಲಿ ಸಿದ್ದರಾಮಯ್ಯರ ಅತ್ಯಂತ ಆಪ್ತರಾಗಿದ್ದ ಸಚಿವ ಸತೀಶ್ ಜಾರಕಿಹೊಳಿ ಅವರು ಕೆಂಪೇಗೌಡ ಜಯಂತಿಯಲ್ಲಿ ಸಿದ್ದರಾಮಯ್ಯರ ಕಡೆಗಣನೆ ಕುರಿತಂತೆ ಅಚ್ಚರಿ ಗೊಂದಲಮಯ ಹೇಳಿಕೆ ನೀಡಿದ್ದಾರೆ.ಅವರ ಮಾತಿನ ಹಿಂದಿನ ಅರ್ಥವೇನು?

Read Full Story

08:19 AM (IST) Jun 30

ಈ ವರ್ಷ ಮೊದಲ ಬಾರಿಗೆ ತುಂಗಾ & ಭದ್ರಾ ನದಿ ನೀರಿನ ಮಟ್ಟದಲ್ಲಿ ಏರಿಕೆ; ಮಲೆನಾಡಿನಲ್ಲಿ ಮಳೆ

ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ತುಂಗಾ ಮತ್ತು ಭದ್ರಾ ನದಿಗಳ ನೀರಿನ ಮಟ್ಟದಲ್ಲಿ ದಿಢೀರ್ ಏರಿಕೆಯಾಗಿದೆ. ಶೃಂಗೇರಿಯಲ್ಲಿ ಪ್ರವಾಹದ ಆತಂಕ ಸೃಷ್ಟಿಯಾಗಿದ್ದು, ಸೇತುವೆ ಕಾಮಗಾರಿಯ ಕ್ರೇನ್ ಒಂದು ನದಿಯಲ್ಲಿ ಮುಳುಗಡೆಯಾಗಿದೆ.

Read Full Story

07:49 AM (IST) Jun 30

Belagavi - ವಿವಾಹಿತೆ ಜೊತೆ ಪರಾರಿಯಾದ ಯುವಕನ ಮನೆ ಧ್ವಂಸಗೊಳಿಸಿದ ಮಹಿಳೆ ಕುಟುಂಬಸ್ಥರು

ವಿವಾಹಿತ ಮಹಿಳೆಯೊಂದಿಗೆ ಯುವಕನೊಬ್ಬ ಪರಾರಿಯಾದ ಘಟನೆ ನಡೆದಿದೆ. ಇದರಿಂದ ಆಕ್ರೋಶಗೊಂಡ ಮಹಿಳೆಯ ಸಂಬಂಧಿಕರು ಯುವಕನ ಮನೆ ಮೇಲೆ ದಾಳಿ ನಡೆಸಿ, ಧ್ವಂಸಗೊಳಿಸಿದ್ದಾರೆ. ಸಂತ್ರಸ್ತ ಕುಟುಂಬವು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದು, ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

Read Full Story

07:44 AM (IST) Jun 30

ಒಕ್ಕಲಿಗರ ಸಂಘದ ಹಗರಣ - ನನ್ನ ಬಳಿ ದಾಖಲೆ ಇವೆ, ಇಂಚಿಂಚು ಬಿಚ್ಚಿಡ್ತೇನೆ - ಉಮಾಪತಿ ಶ್ರೀನಿವಾಸಗೌಡ

ರಾಜ್ಯ ಒಕ್ಕಲಿಗರ ಸಂಘದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಆರೋಪ ಸಂಬಂಧ ನಿರ್ಮಾಪಕ, ಸಂಘದ ನಿರ್ದೇಶಕರೂ ಆಗಿರುವ ಉಮಾಪತಿ ಶ್ರೀನಿವಾಸಗೌಡ ಮತ್ತೆ ಗಂಭೀರ ಆರೋಪ ಮಾಡಿದ್ದು, ಎಲ್ಲ ಹಗರಣಗಳ ದಾಖಲೆ ನನ್ನ ಬಳಿ ಇವೆ. ಇಂಚಿಂಚು ಬಿಚ್ಚಿಡುತ್ತೇನೆ ಎಂದು ಎಚ್ಚರಿಸಿದ್ದಾರೆ. ಏನಿದು ಹಗರಣ? 

Read Full Story

07:30 AM (IST) Jun 30

ಬೆಂಗಳೂರು-ಮಂಗಳೂರು ಚತುಷ್ಪಥ ರೈಲ್ವೆ ಮಾರ್ಗ - ವಿಜಯಪುರಕ್ಕೆ ವಂದೇ ಭಾರತ್ ಸ್ಲೀಪರ್

ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಚನ್ನಪಟ್ಟಣದಲ್ಲಿ ಮೇಲ್ಸೇತುವೆ ಉದ್ಘಾಟಿಸಿ, ಬೆಂಗಳೂರಿನಿಂದ ಮಂಗಳೂರಿಗೆ ಚತುಷ್ಪಥ ರೈಲು ಮಾರ್ಗ ಅಭಿವೃದ್ಧಿಪಡಿಸುವ ಮಹತ್ವದ ಯೋಜನೆಯನ್ನು ಪ್ರಕಟಿಸಿದರು. ಇ

Read Full Story

07:15 AM (IST) Jun 30

Karnataka SIR - ಎಸ್‌ಐಆರ್‌ನಲ್ಲಿ ಮತಹಕ್ಕು ಕಳೆದುಕೊಂಡ್ರೆ ಗ್ಯಾರಂಟಿ ಇಲ್ಲ, ಪಿಂಚಣಿ, ಸರ್ಕಾರಿ ಮನೆ ಕೂಡ ಸಿಗೋಲ್ಲ! ಸಿಎಂ ಹೇಳಿದ್ದೇನು?

ರಾಜ್ಯದಲ್ಲಿ ಇಂದಿನಿಂದ ಎಸ್‌ಐಆರ್ ನಡೆಯಲಿರುವ ಹಿನ್ನೆಲೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಎಸ್‌ಐಆರ್ ಪ್ರಕ್ರಿಯೆಯಲ್ಲಿ ಎಲ್ಲ ಮತದಾರರು ಕಡ್ಡಾಯವಾಗಿ ಬೂತ್ ಮಟ್ಟದ ಅಧಿಕಾರಿಗಳಿಂದ ಭರ್ತಿ ಮಾಡಿ ಅಗತ್ಯ ದಾಖಲೆ ನೀಡುವಂತೆ ಮನವಿ ಮಾಡಿದ್ದಾರೆ. ಮತಹಕ್ಕು ಕಳೆದುಕೊಂಡರೆ ಏನಾಗುತ್ತೆ?

Read Full Story

07:13 AM (IST) Jun 30

ಯಲಹಂಕದಲ್ಲಿ ಕೊಯಮತ್ತೂರು-ಮುಂಬೈ ಎಕ್ಸ್‌ಪ್ರೆಸ್‌ ರೈಲು ನಿಲುಗಡೆ; ಮೆಗಾ ರೈಲ್ವೆ ಟರ್ಮಿನಲ್!

ಕೇಂದ್ರ ರೈಲ್ವೆ ಸಚಿವ ವಿ. ಸೋಮಣ್ಣ ಅವರು ಯಲಹಂಕ ರೈಲು ನಿಲ್ದಾಣದಲ್ಲಿ ಕೊಯಮತ್ತೂರು-ಮುಂಬೈ ಎಕ್ಸ್‌ಪ್ರೆಸ್‌ ರೈಲಿಗೆ ಹೊಸ ನಿಲುಗಡೆಗೆ ಚಾಲನೆ ನೀಡಿದರು. ಈ ಸೌಲಭ್ಯದಿಂದ ಸ್ಥಳೀಯ ಪ್ರಯಾಣಿಕರಿಗೆ ಅನುಕೂಲವಾಗಲಿದ್ದು, ಬೆಂಗಳೂರಿನ ಇತರ ನಿಲ್ದಾಣಗಳ ಮೇಲಿನ ಒತ್ತಡ ಕಡಿಮೆ ಮಾಡಲು ಯಲಹಂಕದಲ್ಲಿ ಹೊಸ ಮೆಗಾ ರೈಲ್ವೆ ಟರ್ಮಿನಲ್ ನಿರ್ಮಿಸಲು ಯೋಜಿಸಲಾಗಿದೆ.
Read Full Story

More Trending News